ಕ್ರೀಡೆ

ಭಾರತ-ಪಾಕ್ ಆಟಗಾರರ ಸೌಹಾರ್ದ ಮಾತುಕತೆಗೆ ಗಂಭೀರ್ ಅಸಮಾಧಾನ

ಪಲ್ಲೆಕೆಲೆ : ಭಾರತ ಹಾಗೂ ಪಾಕಿಸ್ತಾನ ನಡುವಿನ ಏಶ್ಯಕಪ್ ನ ಪಂದ್ಯವು ಮಳೆಗಾಹುತಿಯಾದ ಕಾರಣ ಫಲಿತಾಂಶ ದಾಖಲಾಗಲಿಲ್ಲ, ಎರಡು ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ.

ಶನಿವಾರ ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರೀ ಮಳೆ ಸುರಿಯುತ್ತಿದ್ದಾಗ ಭಾರತ ಹಾಗೂ ಪಾಕಿಸ್ತಾನಿ ಆಟಗಾರರು ಪರಸ್ಪರ ಸೌಹಾರ್ದಯುತ ಮಾತುಕತೆಯಲ್ಲಿ ತೊಡಗಿರುವುದು ಕಂಡುಬಂತು. ವಿವಿಧ ತಂಡಗಳ ಆಟಗಾರರ ನಡುವೆ ಸ್ನೇಹ ಸಹಜವಾಗಿದ್ದರೂ, ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಆಟಗಾರರ ನಡುವೆ ಅಂತಹ ಸೌಹಾರ್ದತೆಯನ್ನು ಪ್ರದರ್ಶಿಸುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಿಡ್-ಗೇಮ್ ಶೋನಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾಟ್ ನಲ್ಲಿ ಮಾತನಾಡಿದ ಗಂಭೀರ್, ಭಾರತ ಕ್ರಿಕೆಟ್ ತಂಡವು 140 ಕೋಟಿ ಜನರನ್ನು ಪ್ರತಿನಿಧಿಸುತ್ತಿದೆ ಹಾಗೂ ಕ್ರೀಡಾಂಗಣದೊಳಗೆ ಸ್ನೇಹವನ್ನು ಪ್ರದರ್ಶಿಸಬಾರದು. ಅಂತಹ ಸ್ನೇಹ ಯಾವಾಗಲೂ ಮೈದಾನದಿಂದ ಹೊರಗೆ ಉಳಿಯಬೇಕು ಎಂದರು.

“ನೀವು ನಿಮ್ಮ ರಾಷ್ಟ್ರೀಯ ತಂಡಕ್ಕಾಗಿ ಮೈದಾನದಲ್ಲಿ ಆಡುವಾಗ, ನೀವು ಬೌಂಡರಿ ಗೆರೆಯ ಹೊರಗೆ ನಿಮ್ಮ ಸ್ನೇಹವನ್ನು ಬಿಡಬೇಕು. ಆಟ ಅತ್ಯಂತ ಮುಖ್ಯ. ದೋಸ್ತಿ ಮೈದಾನದಿಂದ ಹೊರಗಿರಬೇಕು.. ಎರಡೂ ತಂಡಗಳ ಆಟಗಾರರ ಕಣ್ಣಿನಲ್ಲಿ ಆಕ್ರಮಣಶೀಲತೆ ಇರಬೇಕು. ಆ ಆರು ಅಥವಾ ಏಳು ಗಂಟೆಗಳ ಕ್ರಿಕೆಟ್ ನ ನಂತರ ನಿಮಗೆ ಬೇಕಾದಷ್ಟು ಸ್ನೇಹಪರರಾಗಿರಿ. ಆ ಸಮಯ ಬಹಳ ಮುಖ್ಯ, ಏಕೆಂದರೆ ನೀವು ನಿಮ್ಮನ್ನು ಪ್ರತಿನಿಧಿಸುತ್ತಿಲ್ಲ, ನೀವು ಒಂದು ಶತಕೋಟಿಗೂ ಹೆಚ್ಚು ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೀರಿ” ಎಂದು ಗಂಭೀರ್ ಹೇಳಿದರು.

ಈ ದಿನಗಳಲ್ಲಿ ಪ್ರತಿಸ್ಪರ್ಧಿ ತಂಡಗಳ ಆಟಗಾರರು ಪಂದ್ಯದ ಸಮಯದಲ್ಲಿ ಪರಸ್ಪರ ಬೆನ್ನು ತಟ್ಟುವುದನ್ನು ಹಾಗೂ ಹಸ್ತಲಾಘವ ಮಾಡಿಕೊಳ್ಳುವುದನ್ನು ನೀವು ನೋಡುತ್ತೀರಿ. ಕೆಲವು ವರ್ಷಗಳ ಹಿಂದೆ ನೀವು ಅದನ್ನು ಎಂದಿಗೂ ನೋಡಲು ಸಾಧ್ಯವಿರಲಿಲ್ಲ’’ ಎಂದು ಗಂಭೀರ್ ಹೇಳಿದರು.

ಕ್ರಿಕೆಟಿಗ ಹಾಗೂ ರಾಜಕಾರಣಿಯಾಗಿರುವ ಗಂಭೀರ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರೊಂದಿಗಿನ ತನ್ನ ಸ್ನೇಹವನ್ನು ಉಲ್ಲೇಖಿಸಿದ್ದಾರೆ.

“ನಾವು ತುಂಬಾ ಒಳ್ಳೆಯ ಸ್ನೇಹಿತರು. ವಾಸ್ತವವಾಗಿ, ನಾನು ಅವರಿಗೆ ಬ್ಯಾಟ್ ನೀಡಿದ್ದೇನೆ ಮತ್ತು ಅವರು ನನಗೆ ಬ್ಯಾಟ್ ಕೊಟ್ಟಿದ್ದಾರೆ. ಕಮ್ರಾನ್ ನನಗೆ ನೀಡಿದ ಬ್ಯಾಟ್ ನೊಂದಿಗೆ ನಾನು ಇಡೀ ಸೀಸನ್ ಅನ್ನು ಆಡಿದ್ದೇನೆ. ನಾವು ಇತ್ತೀಚೆಗೆ ಒಂದು ಗಂಟೆ ಮಾತನಾಡಿದ್ದೇವೆ” ಎಂದು ಗಂಭೀರ್ ಹೇಳಿದರು.

andolanait

Recent Posts

ಪರಿಷತ್‌ ಚುನಾವಣೆಯಲ್ಲಿ ಕ್ರಾಸ್‌ ವೋಟ್‌ ಮಾಡಿದ ಶಾಸಕರು ಗೊತ್ತಿದೆ ; ಎಚ್‌.ಡಿ.ಕುಮಾರಸ್ವಾಮಿ

ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…

6 hours ago

ಮಂಡ್ಯ | ಐವರು ಅಂತರ್‌ ಜಿಲ್ಲಾ ಕಳ್ಳರ ಬಂಧನ

ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ…

7 hours ago

ಜೂನ್‌ 21ರಂದು ನೀಟ್‌ ಮರುಪರೀಕ್ಷೆ ; ಮೈಸೂರು ಜಿಲ್ಲೆಯಲ್ಲಿ 7886 ಪರೀಕ್ಷಾರ್ಥಿಗಳ ನೋಂದಣಿ

ಮೈಸೂರು : ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ…

7 hours ago

ನೀಟ್‌ಗಾಗಿ ಟೆಲಿಗ್ರಾಂ ನಿಷೇಧ ; ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಕೋರ್ಟ್‌

ಹೊಸದಿಲ್ಲಿ : ನೀಟ್‌-ಯುಜಿ 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.…

8 hours ago

ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ ; ಡಾ.ಎಚ್.ಸಿ.ಮಹದೇವಪ್ಪ

ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ.…

9 hours ago

ಮೈಸೂರು | ಠಾಣಾ ಮಟ್ಟದಲ್ಲಿ ರೌಡಿ ಪ್ರತಿಬಂಧಕ ದಳ ಸ್ಥಾಪನೆ

ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…

17 hours ago