ಕ್ರೀಡೆ

ಮತ್ತೆ ಮೆಂಟರ್‌ ಆಗಿ ಕೆಕೆಆರ್‌ಗೆ ಮರಳಿದ ಗಂಭೀರ್‌ ಬಗ್ಗೆ ಕಿಂಗ್‌ ಖಾನ್‌ ಹೇಳಿದ್ದೇನು ಗೊತ್ತಾ?

೨೦೨೨ರ ಐಪಿಎಲ್‌ನ ಲಕ್ನೋ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌ ೨೦೨೪ರ ಐಪಿಎಲ್‌ನಲ್ಲಿ ಕೆಕೆಆರ್‌ ಪ್ರಾಂಚೈಸಿಗೆ ಮತ್ತೆ ಮರಳಿದ್ದಾರೆ. ೨೦೧೨ ಮತ್ತು ೨೦೧೪ ರಲ್ಲಿ ಕೊಲ್ಕತ್ತಾ ತಂಡ ಚಾಂಪಿಯನ್‌ ಆಗಿದ್ದಾಗ ಆ ತಂಡದ ನಾಯಕರಾಗಿದ್ದ ಗೌತಮ್‌ ಗಂಭೀರ್‌ ಮತ್ತೆ ತಂಡಕ್ಕೆ ಮರಳಿದ್ದಾರೆ.

ಈ ಬಗ್ಗೆ ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಅವರು ಮಾತನಾಡಿದ್ದು, ಗಂಭೀರ್‌ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. “ಗೌತಮ್ ಯಾವಾಗಲೂ ನಮ್ಮ ಕುಟುಂಬದ ಭಾಗವಾಗಿದ್ದಾರೆ ಮತ್ತು ಇದು ನಮ್ಮ ಕ್ಯಾಪ್ಟನ್ ಬೇರೆ ಅವತಾರದಲ್ಲಿ ‘ಮೆಂಟರ್’ ಆಗಿ ಮನೆಗೆ ಮರಳುತ್ತಿದ್ದಾರೆ. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು ಮತ್ತು ಈಗ ನಾವೆಲ್ಲರೂ ಚಂದು (ಚಂದ್ರಕಾಂತ್ ಪಂಡಿತ್) ಸರ್ ಮತ್ತು ಗೌತಮ್ ಅವರು ಕೆಕೆಆರ್ ತಂಡದೊಂದಿಗೆ ಮ್ಯಾಜಿಕ್ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ಅವರಿಂದಾಗಿ ತಂಡದಲ್ಲಿ ಎಂದೂ ಬತ್ತದ ಉತ್ಸಾಹ ಮತ್ತು ಕ್ರೀಡಾ ಮನೋಭಾವ ಹುಟ್ಟುಹಾಕಲು ನಿರೀಕ್ಷಿಸುತ್ತಿದ್ದೇವೆ’ ಎಂದು ತಂಡದ ಸಹ-ಮಾಲೀಕ ಶಾರುಖ್ ಖಾನ್ ತಿಳಿಸಿದ್ದಾರೆ.

ನೈಟ್ ರೈಡರ್ಸ್ ಸಹಾಯಕ ಸಿಬ್ಬಂದಿಯನ್ನು ಮುನ್ನಡೆಸುವ ಕಾರ್ಯಕ್ಕೆ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ನೇತೃತ್ವ ವಹಿಸಿದ್ದಾರೆ. ಅಭಿಷೇಕ್ ನಾಯರ್ (ಸಹಾಯಕ ಕೋಚ್), ಜೇಮ್ಸ್ ಫೋಸ್ಟರ್ (ಸಹಾಯಕ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್) ಮತ್ತು ರಿಯಾನ್ ಟೆನ್ ಡೋಸ್ಚೇಟ್ (ಫೀಲ್ಡಿಂಗ್ ಕೋಚ್) ತಂಡವನ್ನು ಮುನ್ನಡೆಸಲ್ಲಿದ್ದಾರೆ.

೨೦೧೨ ಮತ್ತು ೨೦೧೪ರಲ್ಲಿ ತಂಡ ಗೆದ್ದಾಗ ಗಂಭೀರ್‌ ನಾಯಕರಾಗಿದ್ದರು. ೨೦೨೧ರಲ್ಲಿ ರನ್ನರ್‌ ಅಪ್‌ ಆಗಿ ಸ್ಥಾನ ಪಡೆದಿತ್ತು. ಒಟ್ಟಾರೆ ಗೌತಮ್‌ ಗಂಭಿರ್‌ ಕೆಕೆಆರ್‌ ಪರ ಆಡಿರುವ ೨೦೧೧ ರಿಂದ ೨೦೧೭ ವರೆಗೆ ಕಪ್‌ ಗೆದ್ದಿರುವುದನ್ನು ಸೇರಿ ಐದು ಬಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿತ್ತು. ಸಂಸದರಾಗಿರುವ ಗೌತಮ್‌ ಗಂಭಿರ್‌ ಫ್ರಾಂಚೈಸಿ ಮೆಂಟರ್‌ ಆಗಿದ್ದ ಇವರು ಗ್ಲೋಬಲ್‌ ಮೆಂಟರ್‌ ಹುದ್ದೆಗೆ ಏರಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ SA20 ಲೀಗ್‌ನಲ್ಲಿ ಡರ್ಬನ್‌ ಸೂಪರ್‌ ಜೈಂಟ್ಸ್‌ನ ಭಾಗವಾಗಿದ್ದರು.

ಗಂಭೀರ್‌ ಹೇಳಿದ್ದೇನು? : “ನಾನು ಭಾವನಾತ್ಮಕ ವ್ಯಕ್ತಿಯಲ್ಲ ಮತ್ತು ಹೆಚ್ಚಿನ ವಿಷಯಗಳು ನನ್ನನ್ನು ವಿಚಲಿತವಾಗುವಂತೆ ಮಾಡುವುದಿಲ್ಲ. ಆದರೆ, ಇದು ವಿಭಿನ್ನವಾಗಿದೆ. ಎಲ್ಲಿಂದ ಆರಂಭವಾಯಿತೋ, ಅಲ್ಲಿಗೆ ಹಿಂತಿರುಗುತ್ತಿದ್ದೇನೆ. ಇಂದು, ನನ್ನ ಮಾತಿನಲ್ಲಿ ಉತ್ಸಾಹ ಮತ್ತು ನನ್ನ ಹೃದಯದಲ್ಲಿ ಬೆಂಕಿಯಿದೆ. ನಾನು ಮತ್ತೊಮ್ಮೆ ಆ ನೇರಳೆ ಮತ್ತು ಚಿನ್ನದ ಜರ್ಸಿಗೆ ಜಾರಿಕೊಳ್ಳುತ್ತಿದ್ದೇನೆ'”ಎಂದು ಗಂಭೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

https://x.com/GautamGambhir/status/1727207189063077902?s=20

andolanait

Recent Posts

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

10 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

10 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

10 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

10 hours ago

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

22 hours ago