ಕ್ರೀಡೆ

ಮತ್ತೆ ಮೆಂಟರ್‌ ಆಗಿ ಕೆಕೆಆರ್‌ಗೆ ಮರಳಿದ ಗಂಭೀರ್‌ ಬಗ್ಗೆ ಕಿಂಗ್‌ ಖಾನ್‌ ಹೇಳಿದ್ದೇನು ಗೊತ್ತಾ?

೨೦೨೨ರ ಐಪಿಎಲ್‌ನ ಲಕ್ನೋ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌ ೨೦೨೪ರ ಐಪಿಎಲ್‌ನಲ್ಲಿ ಕೆಕೆಆರ್‌ ಪ್ರಾಂಚೈಸಿಗೆ ಮತ್ತೆ ಮರಳಿದ್ದಾರೆ. ೨೦೧೨ ಮತ್ತು ೨೦೧೪ ರಲ್ಲಿ ಕೊಲ್ಕತ್ತಾ ತಂಡ ಚಾಂಪಿಯನ್‌ ಆಗಿದ್ದಾಗ ಆ ತಂಡದ ನಾಯಕರಾಗಿದ್ದ ಗೌತಮ್‌ ಗಂಭೀರ್‌ ಮತ್ತೆ ತಂಡಕ್ಕೆ ಮರಳಿದ್ದಾರೆ.

ಈ ಬಗ್ಗೆ ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಅವರು ಮಾತನಾಡಿದ್ದು, ಗಂಭೀರ್‌ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. “ಗೌತಮ್ ಯಾವಾಗಲೂ ನಮ್ಮ ಕುಟುಂಬದ ಭಾಗವಾಗಿದ್ದಾರೆ ಮತ್ತು ಇದು ನಮ್ಮ ಕ್ಯಾಪ್ಟನ್ ಬೇರೆ ಅವತಾರದಲ್ಲಿ ‘ಮೆಂಟರ್’ ಆಗಿ ಮನೆಗೆ ಮರಳುತ್ತಿದ್ದಾರೆ. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು ಮತ್ತು ಈಗ ನಾವೆಲ್ಲರೂ ಚಂದು (ಚಂದ್ರಕಾಂತ್ ಪಂಡಿತ್) ಸರ್ ಮತ್ತು ಗೌತಮ್ ಅವರು ಕೆಕೆಆರ್ ತಂಡದೊಂದಿಗೆ ಮ್ಯಾಜಿಕ್ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ಅವರಿಂದಾಗಿ ತಂಡದಲ್ಲಿ ಎಂದೂ ಬತ್ತದ ಉತ್ಸಾಹ ಮತ್ತು ಕ್ರೀಡಾ ಮನೋಭಾವ ಹುಟ್ಟುಹಾಕಲು ನಿರೀಕ್ಷಿಸುತ್ತಿದ್ದೇವೆ’ ಎಂದು ತಂಡದ ಸಹ-ಮಾಲೀಕ ಶಾರುಖ್ ಖಾನ್ ತಿಳಿಸಿದ್ದಾರೆ.

ನೈಟ್ ರೈಡರ್ಸ್ ಸಹಾಯಕ ಸಿಬ್ಬಂದಿಯನ್ನು ಮುನ್ನಡೆಸುವ ಕಾರ್ಯಕ್ಕೆ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ನೇತೃತ್ವ ವಹಿಸಿದ್ದಾರೆ. ಅಭಿಷೇಕ್ ನಾಯರ್ (ಸಹಾಯಕ ಕೋಚ್), ಜೇಮ್ಸ್ ಫೋಸ್ಟರ್ (ಸಹಾಯಕ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್) ಮತ್ತು ರಿಯಾನ್ ಟೆನ್ ಡೋಸ್ಚೇಟ್ (ಫೀಲ್ಡಿಂಗ್ ಕೋಚ್) ತಂಡವನ್ನು ಮುನ್ನಡೆಸಲ್ಲಿದ್ದಾರೆ.

೨೦೧೨ ಮತ್ತು ೨೦೧೪ರಲ್ಲಿ ತಂಡ ಗೆದ್ದಾಗ ಗಂಭೀರ್‌ ನಾಯಕರಾಗಿದ್ದರು. ೨೦೨೧ರಲ್ಲಿ ರನ್ನರ್‌ ಅಪ್‌ ಆಗಿ ಸ್ಥಾನ ಪಡೆದಿತ್ತು. ಒಟ್ಟಾರೆ ಗೌತಮ್‌ ಗಂಭಿರ್‌ ಕೆಕೆಆರ್‌ ಪರ ಆಡಿರುವ ೨೦೧೧ ರಿಂದ ೨೦೧೭ ವರೆಗೆ ಕಪ್‌ ಗೆದ್ದಿರುವುದನ್ನು ಸೇರಿ ಐದು ಬಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿತ್ತು. ಸಂಸದರಾಗಿರುವ ಗೌತಮ್‌ ಗಂಭಿರ್‌ ಫ್ರಾಂಚೈಸಿ ಮೆಂಟರ್‌ ಆಗಿದ್ದ ಇವರು ಗ್ಲೋಬಲ್‌ ಮೆಂಟರ್‌ ಹುದ್ದೆಗೆ ಏರಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ SA20 ಲೀಗ್‌ನಲ್ಲಿ ಡರ್ಬನ್‌ ಸೂಪರ್‌ ಜೈಂಟ್ಸ್‌ನ ಭಾಗವಾಗಿದ್ದರು.

ಗಂಭೀರ್‌ ಹೇಳಿದ್ದೇನು? : “ನಾನು ಭಾವನಾತ್ಮಕ ವ್ಯಕ್ತಿಯಲ್ಲ ಮತ್ತು ಹೆಚ್ಚಿನ ವಿಷಯಗಳು ನನ್ನನ್ನು ವಿಚಲಿತವಾಗುವಂತೆ ಮಾಡುವುದಿಲ್ಲ. ಆದರೆ, ಇದು ವಿಭಿನ್ನವಾಗಿದೆ. ಎಲ್ಲಿಂದ ಆರಂಭವಾಯಿತೋ, ಅಲ್ಲಿಗೆ ಹಿಂತಿರುಗುತ್ತಿದ್ದೇನೆ. ಇಂದು, ನನ್ನ ಮಾತಿನಲ್ಲಿ ಉತ್ಸಾಹ ಮತ್ತು ನನ್ನ ಹೃದಯದಲ್ಲಿ ಬೆಂಕಿಯಿದೆ. ನಾನು ಮತ್ತೊಮ್ಮೆ ಆ ನೇರಳೆ ಮತ್ತು ಚಿನ್ನದ ಜರ್ಸಿಗೆ ಜಾರಿಕೊಳ್ಳುತ್ತಿದ್ದೇನೆ'”ಎಂದು ಗಂಭೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

https://x.com/GautamGambhir/status/1727207189063077902?s=20

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

17 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

18 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

19 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

19 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

1 day ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

1 day ago