ಕ್ರೀಡೆ

ದೇವಧರ್‌ ಟ್ರೋಫಿ| ಸಾಯ್ ಸುದರ್ಶನ್‌ ಶತಕ: ಫೈನಲ್‌ ತಲುಪಿದ ದಕ್ಷಿಣ ವಲಯ

ಪುದುಚರಿ: ಸೋಲಿಲ್ಲದ ಸರದಾರನಂತೆ ಮೆರೆದಿರುವ ದಕ್ಷಿಣ ವಲಯ ತಂಡ 2023ರ ಸಾಲಿನ ಪ್ರತಿಷ್ಠಿತ ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ಗೆ ದಾಪುಗಾಲಿಟ್ಟಿದೆ. ಆಗಸ್ಟ್‌ 1 (ಮಂಗಳವಾರ)ರಂದು ನಡೆದ ಪಂದ್ಯದಲ್ಲಿ ಯುವ ಬ್ಯಾಟರ್‌ ಸಾಯ್‌ ಸುದರ್ಶನ್‌ (132*) ಬಾರಿಸಿದ ಅಜೇಯ ಶತಕದ ಬಲದಿಂದ ಮಿಂಚಿದ ದಕ್ಷಿಣ ವಲಯ ತಂಡ 7 ವಿಕೆಟ್‌ಗಳಿಂದ ಕೇಂದ್ರ ವಲಯ ತಂಡವನ್ನು ಬಗ್ಗುಬಡಿಯುವ ಮೂಲಕ ಟೂರ್ನಿಯ ಫೈನಲ್‌ ಪ್ರವೇಶಿಸಿದೆ.

ಆಗಸ್ಟ್‌ 3ರಂದು ಇಲ್ಲಿನ ಸೈಚೆಮ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡ ಸೌರಭ್ ತಿವಾರಿ ಸಾರಥ್ಯದ ಪೂರ್ವ ವಲಯ ಎದುರು ಪೈಪೋಟಿ ನಡೆಸಲಿದೆ.

ರೌಂಡ್‌ ರಾಬಿನ್‌ ಹಂತದಲ್ಲಿ ದಕ್ಷಿಣ ವಲಯ ತಾನು ಆಡಿದ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದು ಒಟ್ಟಾರೆ 20 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನ ಪಡೆದುಕೊಂಡಿತು. ಫೈನಲ್‌ ತಲುಪಿರುವ ಈಸ್ಟ್‌ ಝೋನ್‌ ಎದುರು ನಡೆದಿದ್ದ ಪಂದ್ಯದಲ್ಲಿ 12 ರನ್‌ಗಳ ರೋಚಕ ಜಯ ದಕ್ಕಿಸಿಕೊಂಡಿತ್ತು. ಹೀಗಾಗಿ ಫೈನಲ್‌ನಲ್ಲಿ ದಕ್ಷಿಣ ಮತ್ತು ಪೂರ್ವ ವಲಯಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಈಸ್ಟ್‌ ಝೋನ್‌ ತನ್ನ ಕೊನೆ ಪಂದ್ಯದಲ್ಲಿ ವೆಸ್ಟ್‌ ಝೋನ್‌ ಎದುರು 157 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ್ದ ಕೇಂದ್ರ ವಲಯ
ಮಂಗಳವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಕೇಂದ್ರ ವಲಯ (ಸೆಂಟ್ರಲ್‌ ಝೋನ್‌) ತಂಡ ತನ್ನ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 261 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಶಿವಂ ಚೌಧುರಿ (37), ಯಶ್‌ ದುಬೇ (77) ಮತ್ತು ಶಿವಂ ಮಾವಿ (38) ಬ್ಯಾಟಿಂಗ್‌ ನೆರವಿನಿಂದ ಕೇಂದ್ರ ವಲಯ 260ರ ಗಡಿ ದಾಟಿತು. ದಕ್ಷಿಣ ವಲಯ ಪರ ಮಿಂಚಿದ ಮೋಹಿತ್ ರೆದ್ಕಾಡ್‌ (51ಕ್ಕೆ 3), ವೈಶಾಕ್ ಕೌಶಿಕ್ (15ಕ್ಕೆ 2) ಮತ್ತು ಅರ್ಜುನ್‌ ತೆಂಡೂಲ್ಕರ್‌ (65ಕ್ಕೆ 2) ವಿಕೆಟ್‌ ಪಡೆದರು.

ಯಶಸ್ವಿ ರನ್‌ ಚೇಸ್‌ ಮಾಡಿದ ಸೌತ್ ಝೋನ್
ರನ್‌ ಚೇಸ್‌ ಆರಂಭಿಸಿದ ದಕ್ಷಿಣ ವಲಯಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಇನಿಂಗ್ಸ್‌ ಆರಂಭಿಸಿದ ನಾಯಕ ಮಯಾಂಕ ಅಗರ್ವಾಲ್‌ ಒಂದು ಎಸೆತವನ್ನೂ ಎದುರಿಸಿದರೆ, ಗಾಯದ ಸಮಸ್ಯೆಗೆ ತುತ್ತಾಗಿ ರಿಟೈರ್ಡ್‌ ಹರ್ಟ್‌ ಆದರು. ಮತ್ತೊಬ್ಬ ಓಪನರ್‌ ರೋಹನ್ ಕುನ್ನುಮಾಲ್‌ (24) ಸಿಕ್ಕ ಆರಂಭದ ಲಾಭ ತೆಗೆದುಕೊಳ್ಳಲಿಲ್ಲ.

3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಇನ್‌ ಫಾರ್ಮ್‌ ಬ್ಯಾಟರ್‌ ಸಾಯ್ ಸುದರ್ಶನ್‌, 136 ಎಸೆತಗಳಲ್ಲಿ 11 ಫೋರ್‌ ಮತ್ತೊಂದು ಸಿಕ್ಸರ್‌ ಒಳಗೊಂಡಂತೆ ಅಜೇಯ 132 ರನ್‌ ಬಾರಿಸಿದರು. ಅವರಿಗೆ ಇನಿಂಗ್ಸ್‌ ಮಧ್ಯದಲ್ಲಿ ರೋಹಿತ್‌ ರಾಯುಡು (37) ಮತ್ತು ವಾಷಿಂಗ್ಟನ್‌ ಸುಂದರ್‌ (47*) ಉತ್ತಮ ಸಾಥ್‌ ನೀಡಿದರು. 48.2 ಓವರ್‌ಗಳಲ್ಲಿ 262 ರನ್‌ ಕಲೆಹಾಕಿದ ಸೌತ್‌ಝೋನ್‌ 7 ವಿಕೆಟ್‌ಗಳ ಜಯ ತನ್ನದಾಗಿಸಿಕೊಂಡಿತು.

andolanait

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

8 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

8 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

8 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

8 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

8 hours ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

8 hours ago