ಮೈಸೂರು ನಗರ

ಕರ್ನಾಟಕ ನೀರಾವರಿ(ತಿದ್ದುಪಡಿ) ಅಧಿನಿಯಮ ೨೦೨೪ರ ಕುರಿತ ಕಾರ್ಯಗಾರ

ಕೆ.ಬಿ.ರಮೇಶ್‌ ನಾಯಕ 

ಮೈಸೂರು: ನಾಲೆ, ನದಿ, ಜಲಾಶಯಗಳ ಮಾರ್ಗದಲ್ಲಿ ಕಾನೂನು ಬಾಹಿರವಾಗಿ ನೀರಿನ ಕೊಳವೆಗಳನ್ನು ಹಾಕುವುದನ್ನು ತಡೆಯಲು ಜಲಸಂಪನ್ಮೂಲ ಇಲಾಖೆ ರೂಪಿಸಿರುವ ನಿಯಮಗಳು ಇನ್ನೆರಡು ವಾರದಲ್ಲಿ ಜಾರಿಯಾಗಲಿದ್ದು, ಅಧಿಕಾರಿಗಳು ತಮಗಿರುವ ಅಧಿಕಾರವನ್ನು ಬಳಸಿಕೊಂಡು ಅಕ್ರಮವನ್ನು ತಡೆಗಟ್ಟಬೇಕು ಎಂದು ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ವಿಶ್ವನಾಥ್ ರೆಡ್ಡಿ ಹೇಳಿದರು.

ಮೈಸೂರು ಬಿಲ್ಡರ್ಸ್‌ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ ೨೦೨೪ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ವಾತನಾಡಿದ ಅವರು, ಕರ್ನಾಟಕ ನೀರಾವರಿ ಅಧಿನಿಯಮ ೧೯೬೫ಕ್ಕೆ ತಿದ್ದುಪಡಿ ತಂದು ರಾಜ್ಯಪಾಲರಿಂದ ಅನುಮೋದನೆಗೊಂಡಿದೆ. ಇನ್ನೆರಡು ವಾರದಲ್ಲಿ ನೂತನ ನಿಯಮಗಳು ಜಾರಿಗೆ ಬರಲಿವೆ. ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವುದರಿಂದ ಹಲವು ತಪ್ಪುಗಳನ್ನು ತಡೆಯಬಹುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಕರ್ನಾಟಕ ನೀರಾವರಿ ಅಧಿನಿಯಮ ೧೯೬೫ರ ಕಾಯಿದೆಗೆ ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಅಧಿಕಾರಿಗಳಿಗೆ ಅಧಿನಿಯಮದ ತಿದ್ದುಪಡಿ ಆಗಿದೆ ಮತ್ತು ಆಗಿಲ್ಲ. ಎಷ್ಟು ಅಂಶಗಳು ಎಷ್ಟು ಗೊತ್ತಿದೆ ಎನ್ನುವುದು ಮುಖ್ಯವಾಗಿರುವ ಕಾರಣ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಯಾವುದೇ ಇಲಾಖೆಯಲ್ಲಿ ಕೆಲಸ ಮಾಡುವಾಗ ಕಾಯಿದೆ ಮತ್ತು ನಿಯಮಗಳು ಮುಖ್ಯ. ಸಾಮಾಜಿಕ ವ್ಯವಸ್ಥೆಯು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಿರ್ದಿಷ್ಟ ಪದ್ದತಿ ಅನುಸರಿಸಬೇಕು ಎಂದರು.

ನೀರಾವರಿ ಕಾಯಿದೆ ಮೊದಲಿನಿಂದಲೂ ಇದೆ. ಆದರೆ, ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಉತ್ತರ ಕರ್ನಾಟಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪೈಪ್ ಒಡೆದರೆ ಕೊನೆಯ ಭಾಗಕ್ಕೆ ನೀರು ತಲುಪಲ್ಲ ಎನ್ನುವುದು ಕಂಡುಬಂದಿತು. ಈ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದಾಗ ಇಂತಹ ತಪ್ಪುಗಳು ನಡೆದರೆ ಕ್ರಮಕೈಗೊಳ್ಳುವ ಅಧಿಕಾರ ಇಲ್ಲದಿರುವುದು ಗೊತ್ತಾಯಿತು. ಹಾಗಾಗಿ, ನಿಯಮಕ್ಕೆ ತಿದ್ದುಪಡಿ ತಂದು ಅಧಿಕಾರ ನೀಡಬೇಕೆಂದು ಕರಡು ರಚನೆ ಮಾಡುವ ಹೊತ್ತಿಗೆ ಸರ್ಕಾರದ ಅವಧಿ ಮುಗಿದು ಹೋಗಿತ್ತು. ನಂತರ, ಡಿ.ಕೆ.ಶಿವಕುಮಾರ್ ಅವರೇ ಉಪಮುಖ್ಯಮಂತ್ರಿಯ ಜತೆಗೆ ಮತ್ತೊಮ್ಮೆ ಜಲ ಸಂಪನ್ಮೂಲ ಸಚಿವರಾಗಿದ್ದರಿಂದ ಮತ್ತೆ ಕೈಗೆತ್ತಿಕೊಂಡು ತಿದ್ದುಪಡಿಮಾಡಲು ನಿರ್ಧರಿಸಲಾಯಿತು. ಅಧಿಕಾರ ಕೊಡದಿದ್ದರೆ ಪರಿಣಾಮಕಾರಿ ಕೆಲಸ ವಾಡಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು ಉಪ ಮುಖ್ಯಮಂತ್ರಿಗಳು ಕಾನೂನು ಇಲಾಖೆಯ ಅಭಿಪ್ರಾಯದಂತೆ ಹದಿನಾಲ್ಕು ಇಲಾಖೆಗಳ ಸಮ್ಮತಿ ಪಡೆದು ಕರಡು ರಚಿಸಲಾಯಿತು. ಈಗ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಅಂಗೀಕಾರಗೊಂಡು ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದೆ. ಈಗ ಅಧಿಕಾರವನ್ನು ಚಲಾಯಿಸಲು ಅವಕಾಶ ಹೊಂದಿರುವ ಕಾರಣ ಇನ್ನೆರಡು ವಾರದಲ್ಲಿ ನಿಯಮಗಳು ಜಾರಿಗೆ ಬರಲಿದ್ದು, ತಪ್ಪು ಎಸಗದಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಹುದಾಗಿದೆ ಎಂದರು.

ನಂತರ ಕರ್ನಾಟಕ ನೀರಾವರಿ ಅಧಿನಿಯಮ-೨೦೨೪ ಮುನ್ನುಡಿ ಮತ್ತು ಅವಲೋಕನ ಕುರಿತು ಉಪಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ ಕೆ.ಜೈ.ಪ್ರಕಾಶ್, ಅಧಿನಿಯಮದ ಪ್ರಮುಖಾಂಶಗಳು ಕುರಿತು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಂಪನಿ ಕಾರ್ಯದರ್ಶಿ ಎಂ.ಎಸ್.ಗಿರೀಶ್, ಅರೆ ನ್ಯಾಯಾಂಗ ಕಾರ್ಯ ವಿಧಾನ ಕುರಿತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸುನಿಲ್ ಹೆಗಡೆ ವಿಷಯ ಮಂಡಿಸಿದರು.

ಉಪ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ ಕೆ.ಜೈ.ಪ್ರಕಾಶ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿುಂರ್ ಆರ್.ಎಲ್.ವೆಂಕಟೇಶ್, ನೀರಾವರಿ ಇಲಾಖೆ ಮುಖ್ಯ ಇಂಜಿನಿುಂರ್ ಬಿ.ಎನ್.ಫಣಿರಾಜ್, ಜಲಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ ಸುಜಾತ ಎಲ್. ಜಾಧವ್, ಕರ್ನಾಟಕ ಇಂಜಿನಿುಂರ್ ಸಂಶೋಧನಾ ಸಂಸ್ಥೆ ನಿರ್ದೇಶಕ ಕೆ.ಜಿ.ಮಹೇಶ್, ಹೇವಾವತಿ ವಲುಂ, ಮುಖ್ಯ ಇಂಜಿನಿಯರ್ ಜಿ.ಸಿ.ಮಂಜುನಾಥ್, ಸಣ್ಣ ನೀರಾವರಿ ಮತ್ತು ಅಂತರ್ಜಲ ವೃತ್ತ ಅಧೀಕ್ಷಕ ಇಂಜಿನಿುಂರ್ ಪ್ರಶಾಂತ್ ಬಿ ಗಡದಾನಪ್ಪ ಗೋಳ್, ಕಾಡಾ ಆಡಳಿತಾಧಿಕಾರಿ ಶಿವಮಹದೇವಯ್ಯ ಹಾಜರಿದ್ದರು.

” ನೀರಾವರಿ ಇಲಾಖೆಯಅಧಿಕಾರಿಗಳನ್ನು ಬಲಪಡಿಸಲು ಮತ್ತು ಪರಿಣಾಮಕಾರಿಾಂಗಿ ಕೆಲಸ ವಾಡಲು ರಾಜ್ಯಸರ್ಕಾರ ಹೊಸ ಕಾಯಿದೆುಂನ್ನು ತಂದಿದ್ದು, ಮುಂದಿನ ದಿನಗಳಲ್ಲಿ ನೂತನ ಕಾಯಿದೆುಂಡಿ ಕೆಲಸ ವಾಡಬೇಕಿದೆ. ಮೊದಲ ಹಂತದಲ್ಲಿ ಕಾರ್ಯಪಾಲಕ ಅಭಿಯಂತರರು,ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಏರ್ಪಡಿಸಿದ್ದೇವೆ. ಮುಂದೆ ಕಿರಿಯ,ಹಿರಿಯ ಅಭಿಯಂತರರು,ಸಿಬ್ಬಂದಿಗೂ ಮನವರಿಕೆ ಮಾಡಿಕೊಡಲಾಗುವುದು.”

ಆರ್.ಎಲ್. ವೆಂಕಟೇಶ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್.

ಹೊಸ ಕಾನೂನಿನ ಪ್ರಕಾರ ನೀರಾವರಿ ಬಳಕೆದಾರರನ್ನು ನಾಲೆಯ ಮಧ್ಯಭಾಗದಿಂದ ಐದು ನೂರು ಮೀಟರ್‌ವರೆಗೆ ನಾಲೆಯ ಎರಡೂ ಬದಿಗಳಲ್ಲಿ ಬಾವಿಯನ್ನು ಕೊರೆಯಲು ಅಥವಾ ತೆಗೆಯಲು, ಕೃತಕ ಕೊಳವನ್ನು, ಯಾವುದೇ ರೀತಿಯ ನೀರಿನ ಸಂಗ್ರಹವನ್ನು ರಚಿಸಲು ಅನುಮತಿ ಪಡೆಯಬೇಕಿದೆ. ಅನುಮತಿಗಾಗಿ ನೀರಾವರಿ ಇಲಾಖೆಗೆ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆಯಬೇಕಿದೆ. ನಾಲೆ ಮತ್ತು ಕೊಳವೆಯನ್ನು ಚುಚ್ಚುವುದು ಅಥವಾ ಕತ್ತರಿಸುವುದು, ನಾಲೆಯನ್ನು ಚುಚ್ಚಲು ಪ್ರಯತ್ನಿಸುವುದು, ನಾಲೆಯ ಗೋಡೆಯನ್ನು ಹಾನಿಗೊಳಿಸುವ ಮೂಲಕ ಯಂತ್ರ, ಇತರೆ ಉಪಕರಣಗಳನ್ನು ಇಡುವುದು ಮಾಡಿದರೆ ಎರಡು ಲಕ್ಷದೊಳಗೆ ದಂಡ ವಿಧಿಸುವುದು.

ಮೈಸೂರು ಬಿಲ್ಡರ್ಸ್‌ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ ೨೦೨೪ ಕುರಿತ ಕಾರ್ಯಗಾರವನ್ನು ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ವಿಶ್ವನಾಥ್ ರೆಡ್ಡಿ ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ ಕೆ.ಜೈಪ್ರಕಾಶ್, ನೀರಾವರಿ ನಿಗಮದ ಮುಖ್ಯ ಇಂಜಿನಿುಂರ್ ಆರ್.ಎಲ್.ವೆಂಕಟೇಶ್, ನೀರಾವರಿ ಇಲಾಖೆ ಮುಖ್ಯ ಇಂಜಿನಿುಂರ್ ಬಿ.ಎನ್.ಫಣಿರಾಜ್, ಜಲಸಂಪನ್ಮೂಲ ಇಲಾಖೆ ಜಂಟಿ ಕಾಂರ್ಯದರ್ಶಿ ಸುಜಾತ ಎಲ್. ಜಾಧವ್, ಕರ್ನಾಟಕ ಇಂಜಿನಿುಂರ್ ಸಂಶೋಧನಾ ಸಂಸ್ಥೆ ನಿರ್ದೇಶಕ ಕೆ.ಜಿ.ಮಹೇಶ್ ಮತ್ತಿತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

41 mins ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

14 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

14 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

14 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

15 hours ago