ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’ ಏರ್ಪಡಿಸಲಾಗಿದೆ. ಅದರ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ.
ಎರಡನೇ ದಿನದ ಸಂಗೀತ ಸಂಜೆಯಲ್ಲಿ ಸಂಜೆ 5 ರಿಂದ 5;30 ಭಾರತೀಯ ವಿದ್ಯಾಭವನದ ಮೈಸೂರು ಕಲಾ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ನಾಟಕ ಪ್ರದರ್ಶಿಸಲಾಯಿತು. ನೃತ್ಯ ನಾಟಕಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸಂಜೆ 5.45 ರಿಂದ 6.30ರವರೆಗೆ ಋತ್ವಿಕ್ ಸಿ.ರಾಜ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಜಾನಪದ ಗೀತೆ, ಭಕ್ತಿಗೀತೆ, ಜನಪ್ರಿಯ ಚಲನಚಿತ್ರಗೀತೆಗಳ ಗಾಯನದಿಂದ ನೆರೆದಿದ್ದವರನ್ನು ಸಂಗೀತ ಕಾರ್ಯಕ್ರಮ ತಲೆದೂಗುವಂತೆ ಮಾಡಿತು.
ಸಂಜೆ 6.45 ರಿಂದ 8 ಗಂಟೆವರೆಗೆ ಮನೋ ಮ್ಯೂಸಿಕ್ ಲೈನ್ಸ್ ಮತ್ತು ತಂಡದಿಂದ ಕವಿ, ಕಾವ್ಯ, ಸಂಗೀತ ಸಂಗಮ ಪ್ರಸ್ತುತಿಪಡಿಸಿದರು. ಭಾವಗೀತೆಗಳು, ಸುಮಧುರ ಗೀತೆಗಳ ಗಾಯನ ಕೇಳುಗರನ್ನು ಇಂಪಾಗಿಸಿತು. ರಾತ್ರಿ 8.15 ರಿಂದ 9.30 ರವರೆಗೆ ಎಚ್.ಎಲ್.ಶಿವಶಂಕರ್ ಸ್ವಾಮಿ ಮತ್ತು ತಂಡದವರಿಂದ ರಾಗ ರಿದಂ ಫ್ಯೂಷನ್ನ ಸಂಗೀತಕ್ಕೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.
ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…
ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…
ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…
ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್ಎನ್ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್ಎನ್ಎಲ್ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…