ಮೈಸೂರು ನಗರ

ಕೂಡಲೇ ನಾಗಮೋಹನ್ ದಾಸ್ ವರದಿ ಬಿಡುಗಡೆಯಾಗಲಿ: ವಕೀಲ ಅರುಣ್‌ ಕುಮಾರ್‌ ಆಗ್ರಹ

ಮೈಸೂರು: ಕೂಡಲೇ ನಾಗಮೋಹನ್‌ ದಾಸ್‌ ವರದಿ ಬಿಡುಗಡೆಯಾಗಬೇಕು ಎಂದು ಸಾಮಾಜಿಕ ನ್ಯಾಯ ಪರ ವಕೀಲರ ಸಂಘದಿಂದ ಆಗ್ರಹಿಸಿದೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲ ಅರುಣ್‌ ಕುಮಾರ್‌ ಅವರು, ಈ ರಾಜ್ಯದಲ್ಲಿ ಮಾದಿಗರೇ ಜನಸಂಖ್ಯೆಯಲ್ಲಿ ನಂಬರ್ ಒನ್. ಎಲ್ಲಾ ವರದಿಗಳಲ್ಲೂ ನಾವೇ ನಂಬರ್ ಒನ್ ಆಗಿದ್ದೇವೆ. ಜಸ್ಟಿಸ್ ನಾಗಮೋಹನ್ ದಾಸ್ ವರದಿ ಯಥಾವತ್ತಾಗಿ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.

ಇನ್ನು ನಾಗಮೋಹನ್ ದಾಸ್ ಸಮಿತಿ 6,60,583 ಪುಟಗಳ ವರದಿ ಸಲ್ಲಿಸಿದೆ. ಆದರೆ ಅದರಲ್ಲಿ ಕೇವಲ 1667 ಪುಟಗಳ ವರದಿ ಸಲ್ಲಿಸಿದ್ದಾರೆ. ಅದರಲ್ಲೂ 332 ಪುಟಗಳನ್ನು ಮಾತ್ರ ಹೊರಗಡೆ ಬಿಟ್ಟಿದ್ದಾರೆ. ಒಬ್ಬ ಹೊಲಯನು ನಮಗೆ ಬೇಡ. ಸತ್ಯವನ್ನು ಗಟ್ಟಿಯಾಗಿ ನೇರವಾಗಿ ಹೇಳಿದ್ದೇವೆ. ಹೊಲೆಯರಿಗೆ ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಯಾವುದೇ ವಿರೋಧವಿರಲಿಲ್ಲ.

ನಾಗಮೋಹನ್ ದಾಸ್ ಕಮಿಷನ್ ಆಗಬೇಕು ಎಂದವರು ಹೊಲೆಯ ಸಮುದಾಯವರು. ಪ್ರತಿಭಟನೆ ಮಾಡುವ ಸ್ವಾಮೀಜಿ ಕೂಡ ಸದಾಶಿವ ಅವರನ್ನೇ ನೇಮಕ ಮಾಡಿ ಎಂದಿದ್ದರು. ಮಾದಿಗರು ಹೊಲೆಯರು ಅಣ್ಣ ತಮ್ಮಂದಿರು ಎಂದು ಹೇಳುತ್ತೀರಾ. ಇದೇನಾ ಅಣ್ಣ ತಮ್ಮ ನಡೆದುಕೊಳ್ಳುವ ರೀತಿ. ಒಬ್ಬ ಹೊಳೆಯನು ಮಾದಿಗ ಗುಂಪಿಗೆ ಬೇಡ. ಮೀಸಲಾತಿ ವರ್ಗಿಕರಣದ ಊಟದಲ್ಲಿ ಮಾದಿಗರಿಗೆ ಕಸ ಕಡ್ಡಿಯೂ ಸಿಕ್ಕಿಲ್ಲ. ಹೊಲೆಯರನ್ನ ನಮ್ಮ ಗುಂಪಿಗೆ ಸೇರಿಸಿ ಅನುಕೂಲ ಪಡೆದುಕೊಳ್ಳುತ್ತಿವಾ? ಪರಿಶಿಷ್ಟ ವರ್ಗದ ವರ್ಗೀಕರಣ ಸರಿಯಾಗಿ ಹಂಚಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಕೂಡಲೇ ನಾಗಮೋಹನ್ ದಾಸ್ ವರದಿ ಯಥಾವತ್ತಾಗಿ ಬಿಡುಗಡೆಯಾಗಲಿ ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಹೊಣೆ? ಇಲ್ಲಿದೆ ಮಾಹಿತಿ

ಬೆಂಗಳೂರು : ಹಲವು ಸುತ್ತಿನ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ…

2 hours ago

ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ ಸಾಗಾಟ : ಇಬ್ಬರ ಬಂಧನ

ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್‌ಪೋಸ್ಟ್‌ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…

4 hours ago

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

13 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

13 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

13 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

13 hours ago