ಮನರಂಜನೆ

ಕನ್ನಡ ಚಿತ್ರದಲ್ಲಿ ಹಾಲಿವುಡ್ ನಟನ ನಟನೆ; ಆ. 30ಕ್ಕೆ ‘ಮೈ ಹೀರೋ’ ಬಿಡುಗಡೆ

ಅವಿನಾಶ್‍ ವಿಜಯ್‍ಕುಮಾರ್ ನಿರ್ಮಿಸಿ-ನಿರ್ದೇಶಿಸಿರುವ ‘ಮೈ ಹೀರೋ’ ಎಂಬ ಚಿತ್ರವು ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಯಾಗುತ್ತಿದೆ. ದತ್ತಣ್ಣ, ಅಂಕಿತಾ ಅಮರ್‍, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿರುವ ಈ ಚಿತ್ರದಲ್ಲಿ ಹಾಲಿವುಡ್‍ನ ಜನಪ್ರಿಯ ನಟ ಎರಿಕ್ ರಾಬರ್ಟ್ಸ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

ಹೌದು, ಹಾಲಿವುಡ್‍ನ ಜನಪ್ರಿಯ ನಟಿ ಜ್ಯೂಲಿಯಾ ರಾಬರ್ಟ್ಸ್ ಅವರ ಸಹೋದರ ಎರಿಕ್‍ ರಾಬರ್ಟ್ಸ್, ‘ಮೈ ಹೀರೋ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರನ್‍ಅವೇ ಟ್ರೈನ್‍’, ‘ದಿ ಸ್ಪೆಷಲಿಸ್ಟ್’ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಅವರು, ‘ಮೈ ಹೀರೋ’ ಚಿತ್ರದಲ್ಲಿ ಮತ್ತೊಬ್ಬ ಹಾಲಿವುಡ್‍ ನಟ ಜಿಲಾಲಿ ರಜ್ ಕಲ್ಲಹ್ ಜೊತೆಗೆ ನಟಿಸಿದ್ದಾರೆ.

ಅಮೇರಿಕದಿಂದ ಭಾರತಕ್ಕೆ ಬರುವ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆವ ಒಂದು ಘಟನೆಯೇ ಈ ಚಿತ್ರದ ಕಥಾವಸ್ತು. ಭಾರತಕ್ಕೆ ಬರುವ ಆತನಿಗೆ ಒಬ್ಬ ಹುಡುಗ ಸಿಗುತ್ತಾನೆ. ಅವನ ಮೂಲ ಕರ್ನಾಟಕದಲ್ಲಿರುತ್ತದೆ. ಅವನನ್ನು ಕರೆದುಕೊಂಡು ಆ ವ್ಯಕ್ತಿ ಮಧ್ಯಪ್ರದೇಶದಿಂದ ಕರ್ನಾಕದವರೆಗೂ ಬರುತ್ತಾರೆ. ಇಷ್ಟಕ್ಕೂ ಆ ಹುಡುಗ ಯಾರು ಮತ್ತು ಆತ ಮಧ್ಯಪ್ರದೇಶದಲ್‍ಲೇಕೆ ಇರುತ್ತಾನೆ ಎನ್ನುವುದೇ ಚಿತ್ರದ ಕಥೆ.

ಎರಿಕ್‍ ರಾಬರ್ಟ್ಸ್ ಅವರಿಗೆ ಸಂಭಾವನೆ ಕೊಡುವುದಕ್ಕೆ ತಮ್ಮಿಂದ ಸಾಧ್ಯವಿರಲಿಲ್ಲ ಎಂದ ಅವಿನಾಶ್‍, ‘ಹಾಲಿವುಡ್‍ನಲ್ಲಿ ದೊಡ್ಡ ನಟ ಅವರು. ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಸ್ಕ್ರಿಪ್ಟ್ ಕಳಿಸಿದ್ದೆ. ಅವರಿಗೆ ಇಷ್ಟವಾಗಿತ್ತು. ಅವರ ಸಂಭಾವನೆ ಕೊಡುವುದಕ್ಕೆ ನಮ್ಮಿಂದ ಸಾಧ್ಯವಿರಲಿಲ್ಲ. ಈ ವಿಷಯ ಹೇಳುವುದಕ್ಕೆ ಬಹಳ ಮುಜುಗರವಾಗಿತ್ತು. ಆದರೂ ನಾವು ನೇರವಾಗಿಯೇ ಹೇಳಿದೆವು. ತಮಗೆ ಕಥೆ ಮತ್ತು ಪಾತ್ರ ಇಷ್ಟವಾಯ್ತು ಎಂದು ಚಿತ್ರದಲ್ಲಿ ನಟಿಸಿವುದಕ್ಕೆ ಒಪ್ಪಿಕೊಂಡರು’ ಎಂದರು ಅವಿನಾಶ್‍.

ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರವಂತೆ. ಈ ಕುರಿತು ಮಾತನಾಡುವ ಅವಿನಾಶ್ ವಿಜಯಕುಮಾರ್, ‘ವರ್ಣಭೇದ ಮತ್ತು ಹಿಂದಿಳಿದ ಸಮುದಾಯಗಳ ಶೋಷಣೆ ಬಗ್ಗೆ ಆಗಾಗ ಓದುತ್ತಲೇ ಇರುತ್ತೇವೆ. ಕೆಲವು ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದು ಈ ಚಿತ್ರಕ್ಕೆ ಮೂಲ ಪ್ರೇರಣೆ. ದಲಿತ ಹುಡುಗನೊಬ್ಬ ದೇವರು ಮುಟ್ಟಿದ್ದಕ್ಕೆ ಜನ ಅವನನ್ನು ಊರು ಬಿಟ್ಟು ಓಡಿಸಿದ್ದರು. ಅದಕ್ಕೂ ಮುನ್ನ, ಹಾಲಿವುಡ್‍ ನಟ ಸಿಲಿವೆಸ್ಟರ್ ಸ್ಟಲೋನ್ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ತಮ್ಮ ಮೃತ ಮಗನ ಶ್ರಾದ್ಧ ಮಾಡಿದ್ದರು. ಇವೆರಡೂ ವಿಷಯಗಳನ್ನು ಸೇರಿಸಿ ಒಂದು ಕಥೆ ಮಾಡಿದ್ದೇನೆ. ವಿದೇಶದಿಂದ ಬರುವ ವ್ಯಕ್ತಿಯಾಗಿ ಜಿಲಾಲಿ ರಜ್ ಕಲ್ಲಹ್ ಕಾಣಿಸಿಕೊಂಡರೆ, ಕರ್ನಾಟಕದಿಂದ ಮಧ್ಯಪ್ರದೇಶಕ್ಕೆ ಹೋಗುವ ಹುಡುಗನಾಗಿ ಬಾಲನಟ ವೇದಿಕ್‍ ಅಭಿನಯಿಸಿದ್ದಾರೆ’ ಎಂದರು.

ಇದು ಎಲ್ಲಾ ಕಡೆ ಸಲ್ಲುವಂತಹ ಒಂದು ಕಥೆ ಎನ್ನುವ ಅವಿನಾಶ್‍, ‘ಅಮೇರಿಕಾದಂತಹ ದೇಶಗಳಲ್ಲಿ ಈಗಲೂ ವರ್ಣಭೇದವಿದೆ. ಪ್ರಪಂಚದಾದ್ಯಂತ ಶ್ರೀಮಂತ-ಬಡವ ಎಂಬ ತಾರತಮ್ಯವಿದ್ದೇ ಇದೆ. ಅದೆಲ್ಲವನ್ನೂ ಇಲ್ಲಿ ಸೂಚ್ಯವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದೊಂದು ಮನರಂಜನಾತ್ಮಕ ಚಿತ್ರವಾಗಿರುತ್ತದೆ. ಚಿಕ್ಕಮಗಳೂರು, ಮಧ್ಯಪ್ರದೇಶ, ಅಮೇರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಶೇ. 60ರಷ್ಟು ಭಾಗದಲ್ಲಿ ಇಂಗ್ಲೀಷ್‍ ಇರುತ್ತದೆ. ಪಿವಿಆರ್‍-ಐನಾಕ್ಸ್ ಈ ಚಿತ್ರವನ್ನು ಎಲ್ಲೆಡೆ ಬಿಡುಗಡೆ ಮಾಡುತ್ತಿದೆ’ ಎಂದರು.

ಭೂಮಿಕಾ

Recent Posts

ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಟ್ಯಾಂಕರ್ ಮೇಲೆ ದಾಳಿ

ನವದೆಹಲಿ : ಇರಾನ್-ಅಮೆರಿಕ ಉದ್ವಿಗ್ನತೆಯ ನಡುವೆ ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಸೂಪರ್ ಟ್ಯಾಂಕರ್ ಮೇಲೆ ಇರಾನಿಯನ್ ಗನ್‌ಬೋಟ್‌ಗಳಿಂದ…

4 hours ago

ಮತ್ತೆ ಹೊರ್ಮುಜ್‌ ಬಂದ್‌ ಮಾಡಿದ ಇರಾನ್‌

ಟೆಹ್ರಾನ್ : ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್‌, ತನ್ನ ನಿರ್ಧಾರವನ್ನು…

4 hours ago

ಚಿರತೆಯಿಂದ ಅತ್ತೆ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ : ಸಚಿವೆ ಹೆಬ್ಬಾಳ್ಕರ್‌ ಭರವಸೆ

ಬೆಂಗಳೂರು : ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆ ಮಂಚದಡಿ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ…

5 hours ago

ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಬಂದ ನಾಲ್ಕು ಚೀತಾ

ಬೆಂಗಳೂರು : ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ…

6 hours ago

ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು- ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. ಕೇಂದ್ರ ಸರ್ಕಾರ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದನ್ನು ಮಹಿಳಾ ಮೀಸಲಾತಿಯೊಂದಿಗೆ…

8 hours ago

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ರಾಬರ್ಟ್‌ ವಾದ್ರಾ

ಉಡುಪಿ: ಶ್ರೀಕೃಷ್ಣ ಮಂದಿರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಭೇಟಿ ನೀಡಿದರು. ಅವರ ಜನ್ಮದಿನದ ಪ್ರಯುಕ್ತ ಕೆಲವು…

10 hours ago