ಅನಿಲ್ ಅಂತರಸಂತೆ
ಕಲಿಕೆಗೆ ವಯಸ್ಸಿನ ಅಂತರವಿಲ್ಲ. ಯಾವ ವಯಸ್ಸಿನಲ್ಲಾದರೂ ಯಾವ ವಿದ್ಯೆಯನ್ನು ಬೇಕಿದ್ದರೂ ಕಲಿಯಬಹುದು. ಹೀಗೆ ಕಿರಿಯ ವಯಸ್ಸಿನಲ್ಲಿ ಉನ್ನತ ವ್ಯಾಸಂಗ ಮಾಡಿದ, ವಯಸ್ಸಾದ ಮೇಲೆ ಇತರೆ ವಿದ್ಯೆಗಳನ್ನು ಕಲಿತರುವ ಅನೇಕ ಮಂದಿಯನ್ನು ಕಾಣಬಹುದು. ಅಂತಹವರಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಮಾಳ ಗ್ರಾಮದ ಎನ್.ಪ್ರಕಾಶ್ ಕೂಡ ಒಬ್ಬರು. ನಿಸರ್ಗತಜ್ಞರಾಗಿ (ನ್ಯಾಚುರಲಿಸ್ಟ್) ಕಳೆದ ೧೨-೧೩ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಪ್ರಾಣಿ-ಪಕ್ಷಿಗಳ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಪ್ರಕಾಶ್ ಓದಿದ್ದು ಕೇವಲ ೧೦ನೇ ತರಗತಿವರೆಗೆ ಮಾತ್ರ. ತಂದೆ ನಾಗಪ್ಪಚಾರ್ ನಾಟಕದ ಮಾಸ್ಟರ್ ಆಗಿದ್ದರು. ಇದರಿಂದಲೇ ಏನೋ ಪ್ರಕಾಶ್ ರಿಗೂ ಇತರೆ ನಟರ ಧ್ವನಿ ಅನುಕರಣೆ ಮಾಡುವುದು, ಪ್ರಾಣಿ-ಪಕ್ಷಿಗಳ ಶಬ್ದವನ್ನು ಅನುಕರಣೆ ಮಾಡುವ ವಿದ್ಯೆ ಕರಗತವಾಗಿತ್ತು. ೧೦ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದ ಪ್ರಕಾಶ್, ಟೈಲರಿಂಗ್ ಮಾಡುತ್ತಾ, ಕೆಲ ಕಾರ್ಯಕ್ರಮಗಳಲ್ಲಿ ಮಿಮಿಕ್ರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕ್ರಮೇಣ ಖಾಸಗಿ ರೆಸಾರ್ಟ್ ಒಂದಕ್ಕೆ ಸೆಕ್ಯೂರಿಟಿಯಾಗಿ ಸೇರಿಕೊಂಡ ಇವರು ಅಲ್ಲಿಯೇ ನ್ಯಾಚುರಲಿಸ್ಟ್ ತರಬೇತಿ ಪಡೆದು, ಪ್ರಸ್ತುತ ಎಚ್.ಡಿ.ಕೋಟೆ ತಾಲ್ಲೂಕಿನ ರೆಡ್ ಅರ್ಥ್ ರೆಸಾರ್ಟ್ನಲ್ಲಿ ಪ್ರವಾಸಿಗರ ನೆಚ್ಚಿನ ಹಿರಿಯ ನ್ಯಾಚುರಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರಕಾಶ್ ಓದಿದ್ದು ೧೦ನೇ ತರಗತಿಯಾಗಿದ್ದರೂ ಈಗ ವಿದೇಶಿ ಪ್ರವಾಸಿಗರೊಂದಿಗೆ ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಾ, ಕಬಿನಿ ಹಿನ್ನೀರಿಗೆ ಬರುವ ವಿವಿಧ ಜಾತಿಯ ಪಕ್ಷಿಗಳು, ಸಫಾರಿಯ ವೇಳೆ ಕಾಣಸಿಗುವ ಕಾಡುಪ್ರಾಣಿಗಳ ಹಾವ-ಭಾವ, ಜೀವನ ಶೈಲಿ ಬಗ್ಗೆ ಮಾಹಿತಿ ನೀಡುತ್ತಾರೆ. ಪಕ್ಷಿಗಳ ಮೇಲಿನ ಅಪಾರ ಜ್ಞಾನ ಹಾಗೂ ಪ್ರವಾಸಿಗರೊಂದಿಗೆ ಇವರು ವರ್ತಿಸುವ ಶೈಲಿಯಿಂದಾಗಿ ಇಂದು ಪ್ರವಾಸಿಗರ ನೆಚ್ಚಿನ ನ್ಯಾಚುರಲಿಸ್ಟ್ ಆಗಿದ್ದಾರೆ.
ನಾನು ಚಿಕ್ಕವನಿದ್ದಾಗ, ನಮ್ಮ ಮನೆಯಲ್ಲಿ ಶೌಚಾಲಯವಿರಲಿಲ್ಲ. ಆದ್ದರಿಂದ ನಮ್ಮ ಸ್ನೇಹಿತ ರೊಂದಿಗೆ ಬಯಲು ಶೌಚಕ್ಕೆ ಹೋಗುತ್ತಿದ್ದಾಗ ಅಲ್ಲಿ ಬಣ್ಣ ಬಣ್ಣದ ಹಕ್ಕಿಗಳನ್ನು ಕಂಡು ಪುಳಕಿತನಾಗುತ್ತಿದ್ದೆ. ಕಬಿನಿ ಹಿನ್ನೀರಿನಲ್ಲಿ ಆಗ ರಣಹದ್ದುಗಳ ಸಂಖ್ಯೆ ಹೆಚ್ಚಾಗಿತ್ತು. ಅವುಗಳನ್ನು ನೋಡುತ್ತಿದ್ದ ನಾನು ಪಕ್ಷಿಗಳ ಧ್ವನಿ ಅನುಕರಣೆ ಮಾಡುತ್ತಿದ್ದೆ. ಇದೇ ಹವ್ಯಾಸವನ್ನು ರೂಢಿಸಿಕೊಂಡು ಸಾಧನೆ ಮಾಡಬೇಕೆಂಬ ಹಂಬಲವಿತ್ತು. ಆದರೆ ಮನೆಯ ಪರಿಸ್ಥಿತಿ ಹಾಗೂ ಆ ಸಂದರ್ಭದಲ್ಲಿ ಎಚ್.ಡಿ.ಕೋಟೆಯಲ್ಲಿ ಅಂತಹ ಅವಕಾಶಗಳಿಲ್ಲದಿರುವುದರಿಂದ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಳ್ಳಬೇಕಾಯಿತು ಎನ್ನುತ್ತಾರೆ ಪ್ರಕಾಶ್.
ಗಿಡಮರ, ಪ್ರಾಣಿ ಪಕ್ಷಿಗಳೊಂದಿಗೆ ಬೆಳೆದ ಅವರಿಗೆಅವುಗಳೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು, ಅವುಗಳ ನಡುವೆಯೇ ಬೆಳೆಯಬೇಕು ಎಂಬುದು ಕನಸ್ಸಾಗಿತ್ತು. ಆಗಿನ ಕಾಲಕ್ಕೆ ಎಚ್.ಡಿ.ಕೋಟೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ, ರೆಸಾಟ್ ಗಳಾಗಲಿ ತಲೆ ಎತ್ತದ ಪರಿಣಾಮ ಪ್ರಕಾಶ್ ತಮ್ಮ ಜೀವನದ ಅರ್ಧ ಭಾಗವನ್ನು ಈ ಆಸೆಯಲ್ಲಿಯೇ ಕಳೆಯಬೇಕಾಯಿತು.
ಪ್ರಕಾಶ್ರವರ ಬಯಕೆ ಈಡೇರಿದ್ದು, ೨೦೧೨ರಲ್ಲಿ. ಅದಾಗಲೇ ಅರ್ಧ ಜೀವನ ಸಾಗಿಸಿದ್ದ ಪ್ರಕಾಶ್ ತಮ್ಮ ಊರಿನಲ್ಲೇ ಆರಂಭವಾದ ರೆಡ್ ಅರ್ಥ್ ರೆಸಾಟ್ ನಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಅದೇ ರೆಸಾರ್ಟ್ನಲ್ಲಿ ತರಬೇತಿ ಪಡೆದು, ಜತೆಗೆ ಕಬಿನಿಯ ಜಂಗಲ್ ಲಾಡ್ಜ್, ಮಹಾರಾಷ್ಟ್ರ, ಗೋಕರ್ಣ, ದಾಂಡೇಲಿ, ಶೃಂಗೇರಿಗಳಲ್ಲಿ ವಿವಿಧ ರೀತಿಯ ತರಬೇತಿಗಳನ್ನು ಪಡೆದು ಈಗ ಅದೇ ರೆಡ್ ಅರ್ಥ್ ರೆಸಾರ್ಟ್ನಲ್ಲಿ ಹಿರಿಯ ಪ್ರಕೃತಿ ತಜ್ಞ ರಾಗಿ (ನ್ಯಾಚುರಲಿಸ್ಟ್) ಕೆಲಸ ಮಾಡುತ್ತಿದ್ದಾರೆ. ಪ್ರಕಾಶ್ ೨೦೦೪ರಲ್ಲಿ ಅಂತರಸಂತೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿಯೂ ಚುನಾಯಿತರಾಗಿ ಸೇವೆ ಸಲ್ಲಿಸಿದ್ದೂ ಉಂಟು.
ಅಂದುಕೊಂಡಂತೆ ಪ್ರಕೃತಿಯೊಂದಿಗೆ ಕೆಲಸ ಮಾಡುವ, ಪ್ರಾಣಿ-ಪಕ್ಷಿಗಳೊಂದಿಗೆ ಒಡನಾಟವಿಟ್ಟು ಕೊಳ್ಳುವ ಕೆಲಸ ಸಿಗುತ್ತಿದ್ದಂತೆಯೇ ಪ್ರಕಾಶ್ ಉತ್ಸಾಹಿ ಯುವಕರಂತಾಗಿದ್ದಾರೆ. ಸದಾ ಲವಲವಿಕೆಯಿಂದ ರೆಸಾರ್ಟ್ನ ಚಟುವಟಿಕೆಗಳಲ್ಲಿ ಭಾಗಿಯಾಗುವ ಇವರು, ಪ್ರವಾಸಿಗರಿಗೆ ನೆಚ್ಚಿನ ವ್ಯಕ್ತಿಯಾಗಿದ್ದಾರೆ. ಓದಿದ್ದು ೧೦ನೇ ತರಗತಿಯಾದರೂ ವಿದೇಶಿ ಪ್ರವಾಸಿಗರೊಂದಿಗೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾ, ಅವರಿಗೆ ಸ್ಥಳೀಯ ಪ್ರಾಣಿ-ಪಕ್ಷಿಗಳ ವಿವರಣೆಗಳ ಜತೆಗೆ ಗಿಡಮರಗಳ ವಿವರಣೆಯನ್ನೂ ನೀಡುತ್ತಾ, ಹಿರಿಯ ಸೂಪರ್ ನ್ಯಾಚುರಲಿಸ್ಟ್ ಅನಿಸಿಕೊಂಡಿರುವುದು ಹೆಮ್ಮೆಯ ವಿಚಾರ.
” ಪ್ರಕೃತಿಯೊಂದಿಗೆ ಕೆಲಸ ಮಾಡಬೇಕು ಎಂಬುದು ನನ್ನ ದೊಡ್ಡ ಬಯಕೆಯಾಗಿತ್ತು. ನನ್ನ ಬಯಕೆಗೆ ನೀರೆರುದು ಪೋಷಿಸಿದ, ಬೆಳೆಸಿದ ಕೀತಿ ರೆಡ್ ಅರ್ಥ್ ರೆಸಾರ್ಟ್ ನವರಿಗೆ ಸಲ್ಲಬೇಕು. ನಾನು ಕಳೆದ ೧೨ ವರ್ಷಗಳಿಂದಲೂ ಪ್ರಕೃತಿತಜ್ಞನಾಗಿ ಇಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ. ತೃಪ್ತಿಯೂ ಇದೆ.”
-ಎನ್.ಪ್ರಕಾಶ್ ಹಿರಿಯ ನ್ಯಾಚುರಲಿಸ್ಟ್, ಹೊಸಮಾಳ, ಎಚ್.ಡಿ.ಕೋಟೆ ತಾ
ಹೊಸದಿಲ್ಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೇಶದ…
ಚೆನ್ನೆ : ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಂದಿ ಮಹಿಳಾ…
ಆಧಾರ್ ಕಾರ್ಡ್ ಪರಿಶೀಲನೆ ನಂತರ ಶಂಕೆ ನಿವಾರಣೆ ಮೈಸೂರು : ಪಶ್ಚಿಮ ಬಂಗಾಳದಿಂದ ಬಂದವರನ್ನು ಬಾಂಗ್ಲಾ ದೇಶದ ನಿವಾಸಿಗಳೆಂದು ತಿಳಿದ…
ರೈತರು, ದನಗಾಹಿಗಳಲ್ಲಿ ಆತಂಕ ಬೇಗ ಹುಲಿ ಸೆರೆ ಹಿಡಿಯಲು ಆಗ್ರಹ ಚಾಮರಾಜನಗರ : ತಾಲ್ಲೂಕಿನ ಸಿದ್ದಲಿಂಗಪುರದ ಸಮೀಪ ಭಾನುವಾರ ಮಧ್ಯಾಹ್ನ…
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ವಿಳಂಬವಾಗಿದ್ದು, ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಗುರಿಯ ಶೇಕಡಾ…
ರಾಮನಗರ: ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಕೈಗೊಂಡಿರುವ ಕೈಗೊಂಡಿರುವ ಬೃಹತ್ ಪಾದಯಾತ್ರೆಯಲ್ಲಿ ಮಾತನಾಡಿದ ಯುವನಾಯಕ ನಿಖಿಲ್ ಕುಮಾರಸ್ವಾಮಿ ಇದು ಕೇವಲ…