ಎಡಿಟೋರಿಯಲ್

ಒಳಮೀಸಲಾತಿ: ಕರ್ನಾಟಕ ಮಾಡೆಲ್

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯ ಸೂತ್ರವನ್ನು ಹೆಣೆಯುವಲ್ಲಿ ಕರ್ನಾಟಕ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಬಲಗೈ, ಎಡಗೈಗೆ ತಲಾ ಶೇ.೫.೨೫ ಹಾಗೂ ಸ್ಪೃಶ್ಯ ಸಮುದಾಯಗಳಿಗೆ ಶೇ.೪.೫೦ ಮೀಸಲು ನಿಗದಿಪಡಿಸಿ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಈ ಒಳಮೀಸಲಾತಿ ಜಾರಿಗೆ ಬರಲಿದೆ. ಒಳಮೀಸ ಲಾತಿಯ ವಿಚಾರದಲ್ಲಿ ಇದೊಂದು ಸಮಾಧಾನಕರ ಸೂತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇದೊಂದು ಐತಿಹಾಸಿಕ ನಿರ್ಣಯ ಎಂಬ ಬಣ್ಣನೆ.

ಪರಿಶಿಷ್ಟ ಜಾತಿಯಲ್ಲೇ ಒಳ ಮೀಸಲಾತಿ ಹೋರಾಟಕ್ಕೆ ಸುಮಾರು ೪೦ ವರ್ಷಗಳ ಇತಿಹಾಸವಿದೆ. ಒಳಮೀಸಲಾತಿ ನೀಡಲೇಬೇಕೆಂದು ಹೋರಾಟ ನಡೆಸಿಕೊಂಡು ಬಂದವರು ಪರಿಶಿಷ್ಟ ಜಾತಿಯಲ್ಲೇ ಎಡಗೈ ಸಮುದಾಯದವರು. ಅಂದರೆ ಮಾದಿಗ ಸಮುದಾಯದವರು. ಪರಿಶಿಷ್ಟ ಜಾತಿಯಲ್ಲಿ ಬಲಗೈ, ಎಡಗೈ ಸಮುದಾಯಗಳು, ಸ್ಪೃಶ್ಯ ಜಾತಿಗಳು, ಅಲೆಮಾರಿಗಳು ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಒಳಮೀಸಲಾತಿ ಜಾರಿ ಕುರಿತು ಕಾಂಗ್ರೆಸ್ ವಾಗ್ದಾನ ನೀಡಿತ್ತು.

ಒಳಮೀಸಲಾತಿ ಸಂಬಂಧ ಮೊದಲು ನ್ಯಾ.ಎ.ಜೆ.ಸದಾಶಿವ ಆಯೋಗ ತನ್ನವರದಿ ನೀಡಿತು. ಈ ವರದಿ ಜಾರಿಗೆ ಬರಲಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರ ವಿದ್ದಾಗ ಅಂದಿನ ಸಚಿವ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರ ಎಸ್‌ಸಿ ಮೀಸಲು ಪ್ರಮಾಣವನ್ನು ಶೇ.೧೫ ರಿಂದ ೧೭ಕ್ಕೆ, ಎಸ್‌ಟಿ ಮೀಸಲನ್ನು ಶೇ.೩ರಿಂದ ೭ಕ್ಕೆ ಹೆಚ್ಚಿಸುವ ಮಹತ್ವದ ತೀರ್ಮಾನ ಕೈಗೊಂಡಿತ್ತು. ಇದು ಪರಿಶಿಷ್ಟ ಜಾತಿ, ಪಂಗಡದವರ ಒಟ್ಟಾರೆ ಮೀಸಲು ಪ್ರಮಾಣವನ್ನು ಶೇ.೧೮ರಿಂದ ೨೪ಕ್ಕೆ ಹೆಚ್ಚಿಸಿತ್ತು. ಎಸ್‌ಸಿಯಲ್ಲಿ ಬಲಗೈಗೆ ಶೇ.೫.೫, ಎಡಗೈಗೆ ಶೇ.೬, ಸ್ಪೃಶ್ಯ ಜಾತಿಗಳಿಗೆ ಶೇ.೪.೫, ಇತರರಿಗೆ ಶೇ.೧ರಷ್ಟನ್ನು ಮೀಸಲುಗೊಳಿಸಿತ್ತು. ಇದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರವಾಗಿತ್ತು. ನಂತರ ಸಿದ್ದರಾಮಯ್ಯ ಸರ್ಕಾರ ನ್ಯಾ.ನಾಗಮೋಹನ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ಪಡೆಯಿತು. ಆದರೆ, ವರದಿ ಜಾರಿಯಾಗ ಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಶೇ.೧೫ರ ಅಡಿ ಒಳಮೀಸಲಾತಿಯನ್ನು ಹಂಚಿದೆ. ಒಳ ಮೀಸಲಾತಿಯಂತಹ ಮಹತ್ವದ ನಿರ್ಧಾರ ವನ್ನು ಸರ್ಕಾರ ಕೈಗೊಳ್ಳುವುದರ ಹಿಂದೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಒಳಮೀಸಲಾತಿಯ ಈ ನಿರ್ಧಾರಕ್ಕೆ ವಿರೋಧ ಇಲ್ಲವೆಂದೇನೂ ಇಲ್ಲ. ನ್ಯಾ.ಎ.ಜೆ. ಸದಾಶಿವ ಹಾಗೂ ನ್ಯಾ.ನಾಗಮೋಹನದಾಸ್ ಆಯೋಗಗಳ ವರದಿಗಳಿಗೆ ಒಂದು ಆಧಾರ ಇತ್ತು. ಆದರೆ, ಈಗ ಒಳಮೀಸಲಾತಿ ಹಂಚಿಕೆಗೆ ಆಧಾರ ಏನು ಎಂಬ ಪ್ರಶ್ನೆಯೂ ಇದೆ. ನ್ಯಾ.ಸದಾಶಿವ ಆಯೋಗ, ನ್ಯಾ.ನಾಗಮೋಹನದಾಸ್ ಆಯೋಗ ಹಾಗೂ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಅಲೆಮಾರಿ ಸಮುದಾಯಕ್ಕೆ ಶೇ.೧ ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು. ಆದರೆ, ಈಗಿನ ಹಂಚಿಕೆಯಲ್ಲಿ ಈ ಪ್ರಸ್ತಾಪವೇ ಇಲ್ಲ. ಈಗ ಸ್ಪೃಶ್ಯ ಸಮುದಾಯಗಳಿಗೆ ಮೀಸಲಾದ ಶೇ.೪.೫೦ ವರ್ಗದಲ್ಲೇ ಅಲೆ ಮಾರಿಗಳು ಮೀಸಲು ಪಡೆಯಬೇಕಾಗಿದೆ.

ಇದು ಅಲೆಮಾರಿಗಳಿಗೆ ಅನ್ಯಾಯ ಮಾಡಿದಂತೆ ಎಂಬ ಕೂಗು ಮುಂದು ವರಿದಿದೆ. ಅಲೆಮಾರಿಗಳಿಗೆ ಶೇ.೧ ಮೀಸಲಾತಿ ಕೊಡಲು ಸಾಧ್ಯವಾಗುತ್ತಿಲ್ಲ ಏಕೆ? ಅಲೆ ಮಾರಿಗಳು ಅಸಂಘಟಿತರು, ಅಸಹಾಯಕರು ಎಂಬ ನಿರ್ಲಕ್ಷ್ಯವೇ? ಸಿ ಶ್ರೇಣಿಯ ಹುದ್ದೆಗಳಲ್ಲಿ ಶೇ.೨೦ರಷ್ಟು ಹುದ್ದೆಗಳನ್ನು ಸಿ ವರ್ಗದ ಪಟ್ಟಿಯಲ್ಲಿರುವ ೫೯ ಅಲೆಮಾರಿ ಜಾತಿಗಳಿಗೆ ಮೀಸಲಾಗಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಸಮಾಧಾನದ ಸಂಗತಿ.

ಈ ಒಳಮೀಸಲಾತಿ ಕರ್ನಾಟಕದ ಮಾಡೆಲ್ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಒಳ ಮೀಸಲು ಜಾರಿ ಐತಿಹಾಸಿಕ ಹೆಜ್ಜೆ ಎಂದು ಸಚಿವ ಸತೀಶ್ ಜಾರಕಿಹೊಳಿ ಬಣ್ಣಿಸಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸಿದೆ. ಹೋರಾಟದ ಎಚ್ಚರಿಕೆಯನ್ನು ನೀಡಿದೆ. ರಾಜ್ಯದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಒಳಮೀಸಲಾತಿ ಹಂಚಿಕೆ ಅಂತ್ಯವಲ್ಲ, ಇದು ಆರಂಭ. ಸಮಾನತೆ, ಗೌರವ, ಹಕ್ಕುಗಳಿಗಾಗಿ ಹೋರಾಟ ಮಂದುವರಿಯಲಿದೆ ಎಂದು ಹೇಳಿರುವ ಮಾತು ಅರ್ಥಗರ್ಭಿತ. ಒಳಮೀಸಲಾತಿ ವಿಚಾರ ತೀರ್ಮಾನ ವಾಗಿರುವುದರಿಂದ ರಾಜ್ಯ ಸರ್ಕಾರ ಉದ್ಯೋಗ ನೇಮಕವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಈಗಾಗಲೇ ಉದ್ಯೋಗಕ್ಕಾಗಿ ಯುವಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇದು ಮತ್ತಷ್ಟು ತೀವ್ರವಾಗದಂತೆ ಎಚ್ಚರಿಕೆ ವಹಿಸಿ ನೇಮಕಾತಿ ನಡೆಯಬೇಕಿದೆ.

” ಸಿದ್ದರಾಮಯ್ಯ ಸರ್ಕಾರದ ಒಳ ಮೀಸಲಾತಿಯ ಈ ನಿರ್ಧಾರಕ್ಕೆ ವಿರೋಧ ಇಲ್ಲವೆಂದೇನೂ ಇಲ್ಲ. ನ್ಯಾ.ಎ.ಜೆ.ಸದಾಶಿವ ಹಾಗೂ ನ್ಯಾ.ನಾಗಮೋಹನದಾಸ್ ಆಯೋಗಗಳ ವರದಿಗಳಿಗೆ ಒಂದು ಆಧಾರ ಇತ್ತು. ಆದರೆ, ಈಗ ಒಳ ಮೀಸಲಾತಿ ಹಂಚಿಕೆಗೆ ಆಧಾರ ಏನು ಎಂಬ ಪ್ರಶ್ನೆಯೂ ಇದೆ. ನ್ಯಾ.ಸದಾಶಿವ ಆಯೋಗ, ನ್ಯಾ.ನಾಗಮೋಹನದಾಸ್ ಆಯೋಗ ಹಾಗೂ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಅಲೆಮಾರಿ ಸಮುದಾಯಕ್ಕೆ ಶೇ.೧ ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು. ಆದರೆ, ಈಗಿನ ಹಂಚಿಕೆಯಲ್ಲಿ ಈ ಪ್ರಸ್ತಾಪವೇ ಇಲ್ಲ. ಈಗ ಸ್ಪೃಶ್ಯ ಸಮುದಾಯಗಳಿಗೆ ಮೀಸಲಾದ ಶೇ.೪.೫೦ ವರ್ಗದಲ್ಲೇ ಅಲೆಮಾರಿಗಳು ಮೀಸಲು ಪಡೆಯಬೇಕಾಗಿದೆ. ಇದು ಅಲೆಮಾರಿಗಳಿಗೆ ಅನ್ಯಾಯ ಮಾಡಿದಂತೆ ಎಂಬ ಕೂಗು ಮುಂದುವರಿದಿದೆ”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

IPL 2026 | ಕಂಗೆಟ್ಟ ಕ್ಯಾಪಿಟಲ್ಸ್‌ ; ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಸುಲಭ ಜಯ

ನವದೆಹಲಿ : ಹ್ಯಾಜಲ್‌ವುಡ್‌, ಭುವನೇಶ್ವರ್ ಬೌಲಿಂಗ್‌ ಅಬ್ಬರ, ಸಂಘಟಿತ ಫೀಲ್ಡಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು…

6 hours ago

ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಮೈಸೂರು : ಕೆ-ಸೆಟ್‌ ಮತ್ತು ಯುಜಿಸಿ-ನೆಟ್‌, ಜೆಆರ್‌ಎಫ್‌ ಅರ್ಹತಾ ಪರೀಕ್ಷೆ ಬರೆಯುವವರಿಗೆ 45 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ…

7 hours ago

ಹಾಸನ | ಮೆದುಳಿನಲ್ಲಿ ತೀವ್ರ ರಕ್ತಸ್ರಾವ ; 25 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಯುವತಿ ಸಾವು

ಹಾಸನ : ಹಠಾತ್ ಕುಸಿದು ಬಿದ್ದು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿ ಚಿಕಿತ್ಸೆ ಫಲಿಸದೆ…

7 hours ago

ಚೆಲುವಾಂಬ ಆಸ್ಪತ್ರೆ | 15 ತಿಂಗಳಲ್ಲಿ 421 ಶಿಶು ಮರಣ ; ದಾಖಲೆ ಬಿಡುಗಡೆ ಮಾಡಿದ ಮಾಜಿ ಶಾಸಕ ನಾಗೇಂದ್ರ

ಮೈಸೂರು : ಮೈಸೂರು ಪ್ರಾಂತ್ಯದಲ್ಲೇ ಪ್ರಸೂತಿ, ಸ್ತ್ರೀರೋಗ ಮತ್ತು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ…

8 hours ago

ಪಶ್ಚಿಮ ಬಂಗಾಳ ಎರಡನೇ ಹಂತದ ಚುನಾವಣೆ : ಏ.29ರಂದು ಮತದಾನ ; ಭಾರೀ ಬಿಗಿ ಭದ್ರತೆ

ಕೊಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಬಹಿರಂಗ ಚುನಾವಣೆ ಸೋಮವಾರ ಅಂತ್ಯವಾಗಿದೆ. ಏ.29ರಂದು ಮತದಾನ ನಡೆಯಲಿದ್ದು,…

9 hours ago

ಅರಳುಮರಳು ಮಾತು, ಕ್ಷಮಿಸಿಬಿಡೋಣ : ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಶಿವಮೊಗ್ಗ : ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ‘ಕಾಪಿ ಹೊಡೆಸಿ ಶೇ.94.1 ಫಲಿತಾಂಶ ತಂದಿದ್ದಾರೆ’ ಎಂಬ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಅವರ ಹೇಳಿಕೆಗೆ…

9 hours ago