ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 29 ಶುಕ್ರವಾರ 2022

ಕಾರ್ಯಕರ್ತರೇ ನಿಮ್ಮ ಜೀವ ಕಾಪಾಡಿಕೊಳ್ಳಿ!

ಯಾವ ಧರ್ಮ ಆದರೇನು? ಯಾವ ಜಾತಿ ಆದರೇನು ಎಲ್ಲರೂ ಭಾರತೀಯರಾಗಬೇಕಲ್ಲವೆ? ಜಾತಿ ಜಾತಿ ಅಂತ ಬೆಂಕಿ ಹಚ್ಚಿ ಕುಟುಂಬಗಳ ಆಧಾರಸ್ತಂಭಗಳ ಕೊಲೆಗಳಿಗೆ ಕಾರಣ ಆಗುತ್ತಿರುವುದು ಪಕ್ಷಗಳ ನಾಯಕರೇ ಹೊರತು ಕಾರ್ಯಕರ್ತರಲ್ಲ. ನಾಯಕರು ಧರ್ಮಗಳ ನಡುವೆ ವೈಷಮ್ಯದ ಭಾಷಣ ಬಿಡಿ. ಇನ್ನಾದರು ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂಬುದರಲ್ಲಿ ನಂಬಿಕೆ ಇಡಿ. ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದೇಕೆ? ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಎಷ್ಟು ಕೊಲೆಗಳು ಆಯಿತು, ಬಿಜೆಪಿ ಸರ್ಕಾರ ಬಂದಾಗಲು ಸಹ ಕೊಲೆಗಳು ನಿಂತಿಲ್ಲ. ಇದಕ್ಕೆ ಯಾರು ಹೊಣೆ? ಅಂದು ಏನ್ ಹೋರಾಟ? ನಾವು ಅಧಿಕಾರಕ್ಕೆ ಬಂದ್ರೆ ನಾವು ಹಂಗೆ ಮಾಡ್ತೀವಿ, ಇಂಗ್ ಮಾಡ್ತೀವಿ, ಅಂತೆಲ್ಲ ಭರವಸೆ ಕೊಟ್ಟು, ಈಗ ಸ್ವಾರ್ಥ ರಾಜಕೀಯ ಮಾಡುತ್ತಿರುವ ನಿಮಗೆ ಏನನ್ನಬೇಕು ನಾಯಕರುಗಳೇ? ಈ ದೇಶದಲ್ಲಿ ಕಾನೂನು ಎತ್ತ ಸಾಗುತ್ತಿದೆ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ, ಅಧಿಕಾರದ ಹುಚ್ಚು ಬಿಟ್ಟು ದೇಶದ ಜನರ ಚಿಂತನೆ ಮಾಡುವಿರಾ? ಈ ದೇಶದಲ್ಲಿ ಜಾತಿಗಳು ಮುಖ್ಯ ಅಲ್ಲ ಮಾನವೀಯತೆ ಮುಖ್ಯ! -ನಂಜುಂಡಸ್ವಾಮಿ, ಮೈಸೂರು.


‘ಘರ್ ವಾಪ್ಸಿ’ಯ ಮೂಲಭೂತ ಪ್ರಶ್ನೆಗಳು!

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸಾಧ್ಯವೇ? ಕಾರಣಾಂತರಗಳಿಂದ ಹಿಂದೂಧರ್ಮವನ್ನು ಬಿಟ್ಟು ಅನ್ಯಧರ್ಮಕ್ಕೆ ಹೋದವರನ್ನು ‘ ಘರ್ ವಾಪ್ಸಿ’ – ಮತ್ತೆ ಹಿಂತಿರಬಹುದೇ? ಹಿಂದೂಗಳು ಚತುರ್ವರ್ಣ ಪದ್ಧತಿಯಲ್ಲಿ ವಿಶ್ವಾಸವುಳ್ಳವರು. ಹೊರಗಿನಿಂದ ಈ ಧರ್ಮ/ಮತಕ್ಕೆ ಬರಲು ವ್ಯಕ್ತಿಯೊಬ್ಬ(ಳು) ಬಯಸಿದಲ್ಲಿ, ಅಂತಹವರು ಯಾವ ಜಾತಿಗೆ ಸೇರುತ್ತಾರೆ? ಮತಾಂತರಗೊಂಡು ಬರುವವರಿಗೆ ಆಯ್ಕೆಯ ಅವಕಾಶವಿರಬೇಕು. ವರ್ಣಗಳಾದ : ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ…ಇವುಗಳಲ್ಲಿ ತನಗೆ ಇಚ್ಛೆ ಬಂದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿರಬೇಕು. ಬರಿದೆ ಶಾಸ್ತ್ರೋಕ್ತವಾಗಿ (್ಟಜಿಠ್ಠಿಚ್ಝ) ಪರಿವರ್ತನೆ ಆದರೆ ಸಾಲದು. ಸಾಮಾಜಿಕವಾಗಿಯೂ ಆಗುವುದುಚಿತ. ಅಂದರೆ, ಉದಾಹರಣೆಗೆ, ಒಬ್ಬರು ವೈಶ್ಯರಾಗಲು ಆಯ್ಕೆ ಮಾಡಿಕೊಂಡಲ್ಲಿ, ಆತನೊಂದಿಗೆ (ಆಕೆಯೊಂದಿಗೆ) ವೈಶ್ಯಪಂಗಡದವರು ರಕ್ತದ ಸಂಬಂಧ ಬೆಳೆಸಲು ಅವಕಾಶವಿರಬೇಕು. ಅತನು ಇನ್ನೂ ಅವಿವಾಹಿತನಿದ್ದರೆ ಅವನಿಗೆ ವೈಶ್ಯಜಾತಿಯ ಕನ್ಯೆಯನ್ನು ನೀಡಲು ಸಮಾಜ ಸಿದ್ಧವಿರಬೇಕು. ಅಥವಾ ಆತನಿಗೆ ಮಕ್ಕಳಿದ್ದರೆ, ಆ ಮಕ್ಕಳಿಗೆ ವೈಶ್ಯಪಂಗಡದ ವಧು/ವರರು ದೊರಕುವಂತಿರಬೇಕು. ಬರಿಯ ರಿಚುಯಲ್ ಮಾಡಿ ಘರ್-ವಾಪ್ಸಿ ಆಗಿದೆ ಎಂದು ಹೇಳುವುದಲ್ಲಾ; ಸಾಮಾಜಿಕ ವಾಗಿಯೂ ಪರಿವರ್ತನಾಕ್ರಿಯೆಗೆ ಅರ್ಥವಿರಬೇಕು. (ಇಲ್ಲಿ ‘ವೈಶ್ಯ’ವರ್ಣವನ್ನು ಉದಾಹರಣಾರ್ಥವಾಗಿ ಮಾತ್ರ ತೆಗೆದುಕೊಂಡಿರುವುದು) -ಡಿ. ವಿ. ಮೋಹನ ಪ್ರಕಾಶ್, ಗೋಕುಲಂ ರಸ್ತೆ, ಮೈಸೂರು.


ಕೊಲೆಯನ್ನು ಧರ್ಮದಿಂದ ಬಿಂಬಿಸುವುದು ತಪ್ಪಬೇಕು!

ಮನುಷ್ಯನೊಬ್ಬ ಕೊಲೆಯಾದರೆ ಅದರಲ್ಲಿ ಜಾತಿ ಧರ್ಮ ಹುಡುಕುವ ನೀಚತನ ಯಾರಿಗೂ ಇರಬಾರದು. ಏಕೆಂದರೆ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಕೊಲೆಗಳು ಆಗುತ್ತಿವೆಂದು ಬಿಂಬಿಸಿದರೆ ಸಮಾಜದ ಸಾಮರಸ್ಯ ಹದಗೆಡುವುದರ ಜೊತೆಗೆ ಮತೀಯ ಗಲಭೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಇಂತಹ ಜಾತಿ ಹಾಗೂ ಧರ್ಮದವನು ಕೊಲೆಯಾಗಿದ್ದಾನೆ ಅಂತ ಬಿಂಬಿಸಿದರೆ, ಯಾವ ಜಾತಿಯವನು ಕೊಲೆ ಆಗೋಕೆ ಅರ್ಹ ಅಂತ ಬಿಂಬಿಸಿದವರೇ ಹೇಳಬೇಕು!? ದಲಿತ ವ್ಯಕ್ತಿಯೊಬ್ಬ ಕೊಲೆಯಾದರೆ ನಮ್ಮ ಸಮಾಜ ನೋಡುವುದೇ ಬೇರೆ. ಕೊಲೆಯಾದವನು ಹಿಂದೂ ಆದರೆ ಅದಕ್ಕೆ ಮತ್ತೊಂದು ಪ್ರತಿಕ್ರಿಯೆ. ಮುಸ್ಲಿಮನೊಬ್ಬ ಹಿಂದೂವಿನಿಂದ ಕೊಲೆಯಾದರೆ ಒಂದು ಥರದ ಪ್ರತಿಕ್ರಿಯೆ. ಅದೇ ಹಿಂದೂವೊಬ್ಬ ಮುಸ್ಲಿಮನಿಂದ ಕೊಲೆಯಾದರೆ ಜಾಣಮೌನ!? ದಲಿತನಿಂದ ಬ್ರಾಹ್ಮಣ ಕೊಲೆಯಾದರೆ ಅದಕ್ಕೊಂದು ಬಣ್ಣ. ದಲಿತರಿಬ್ಬರೇ ತಮ್ಮಷ್ಟಕ್ಕೆ ತಾವೇ ಹೊಡೆದುಕೊಂಡು ಸತ್ತೋದರೆ ಅದಕ್ಕೊಂದು ವ್ಯಾಖ್ಯಾನ. ಹೀಗೆ ಪ್ರತಿ ಸಾವಿಗೂ ಜಾತಿಧರ್ಮದ ಅನ್ವಯ, ವ್ಯಾಖ್ಯಾನ ಕೊಡುತ್ತಾ ಹೋದರೆ ಸಮಾಜದ ಸಾಮರಸ್ಯ ಹದಗೇಡದೆ ಇನ್ನೇನಾದೀತು? ಸಮಾಜದ ಯಾವುದೇ ವ್ಯಕ್ತಿ ಕೊಲೆಯಾದರೂ, ಆ ವ್ಯಕ್ತಿಯ ಕೊಲೆಗೆ ಕಾರಣ ತಿಳಿಸಬೇಕೆ ವಿನಹ, ಕೊಲೆಯಾದ ವ್ಯಕ್ತಿ ಯಾವ ಜಾತಿ ಹಾಗೂ ಧರ್ಮದವನು ಅಂತ ಬಿಂಬಿಸಬಾರದು. ಇದರಿಂದ ಸಮಾಜದ ನೆಮ್ಮದಿಯೂ ಹಾಳು. ಜೊತೆಗೆ ಕೋಮು ಸಂಘರ್ಷಕ್ಕೆ ನಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ. ಇದು ತಪ್ಪಬೇಕು. -ಹರಳಹಳ್ಳಿಪುಟ್ಟರಾಜು, ಪಾಂಡವಪುರ.

andolana

Recent Posts

ಎಸ್‌ಐಆರ್‌ | ಬಿಜೆಪಿಯಿಂದ ಅನಗತ್ಯ ಆರೋಪ ; ಎಂ.ಲಕ್ಷ್ಮಣ್‌ ಕಿಡಿ

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…

6 hours ago

ಆರು ತಿಂಗಳ ಬಳಿಕ ಕೆಆರ್‌ಎಸ್‌ ಡ್ಯಾಂಗೆ 1000 ಕ್ಯೂಸೆಕ್ಸ್‌ ನೀರು ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ…

9 hours ago

ಓದುಗರ ಪತ್ರ: ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ

ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್…

12 hours ago

ಶಂಕರ್ ಎಂಬ ನೆಲದ ಹೂ

ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…

12 hours ago

ಊರೊಳಗೆ ಬೆರೆತು ಜನರ ಬಣ್ಣವೇ ಆದ ಕೆ.ಟಿ.ಶಿವಪ್ರಸಾದ್

ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…

12 hours ago

ಅಮೆರಿಕ ಎಂಬ ಪ್ರಯೋಗಕ್ಕೆ ಇನ್ನೂರೈವತ್ತು ವಸಂತಗಳು

ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…

12 hours ago