ಎಡಿಟೋರಿಯಲ್

ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ

-ವಿ.ಎನ್. ಲಕ್ಷ್ಮೀನಾರಾಯಣ, ಮೈಸೂರು.

ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗಿನ, (ಆಸೇತು ಹಿಮಾಚಲದವರೆಗಿನ) ಈ ಹೊತ್ತಿನ ಭಾರತದಲ್ಲಿ ನಮ್ಮ ಸಹಜೀವಿಗಳಾದ ಜನಸಾಮಾನ್ಯರು, ಅತಿವೃಷ್ಟಿ, ಪ್ರವಾಹ, ಭೂಕುಸಿತ, ಹೊಲಗದ್ದೆಗಳ ಮುಳುಗಡೆ, ಗುಡ್ಡಗಳು ಜರುಗಿ ಮನೆ ಮಠಗಳ ನಾಶ, ಜಾನುವಾರುಗಳ ಸಾವು ಹೀಗೆ ಬಹುಮುಖಿಯಾದ ಅತೀವ ಕಷ್ಟಗಳಿಗೆ ಸಿಕ್ಕಿ ನರಳುತ್ತಿದ್ದಾರೆ. ಈ ಅನಾಹುತಗಳು ಈಗಲೂ, ದೇಶದಾದ್ಯಂತ ನಿರಂತರವಾಗಿ ಸಂಭವಿಸುತ್ತಲೇ ಇವೆ. ಮಕ್ಕಳಾದಿಯಾಗಿ ನೂರಾರು ಮಂದಿ ಈಗಾಗಲೇ ಪ್ರಾಣಕಳೆದುಕೊಂಡಿದ್ದಾರೆ. ಸಾವಿರಾರು ಮನೆಗಳ ಗೋಡೆ ಕುಸಿದು, ಜನಸಾಮಾನ್ಯರು ಇದ್ದಲ್ಲೇ ನಿರಾಶ್ರಿತರಾಗಿದ್ದಾರೆ. ರಸ್ತೆ, ಹೊಲ ಗದ್ದೆ ಊರು ಕೇರಿಗಳು ಜಲಮಯವಾಗಿ ವಾಸಸ್ಥಳಗಳನ್ನು ತೊರೆದು ಎಲ್ಲೆಲ್ಲೋ, ಹೋಗಿ ಕಷ್ಟಪಡುತ್ತಿದ್ದಾರೆ. ಸಾಲದ್ದಕ್ಕೆ ದೇಶದ ಕೆಲವು ಭಾಗಗಳಲ್ಲಿ ಅನಾವೃಷ್ಟಿ-ಪೈರು ಒಣಗುವಿಕೆಯೂ ರೈತರ ಪ್ರಾಣವನ್ನು ಹಿಂಡುತ್ತಿವೆ.

ಭಾರತದ ಸನಾತನ ಬಡತನ, ಸರ್ಕಾರದ ನಿಯಂತ್ರಣ ತಪ್ಪಿರುವ ಬೆಲೆಯೇರಿಕೆ, ಯುವಜನರ ನಿರುದ್ಯೋಗ ಮತ್ತು ಕೇಂದ್ರ ಸರ್ಕಾರದ ತಪ್ಪುನೀತಿಗಳ ಫಲವಾಗಿ ಈ ಮೊದಲೇ ಜನರ ಜೀವನಗಳಲ್ಲಿ ತಳವೂರಿರುವ ದೈನಂದಿನ ಕಷ್ಟ ಕಾರ್ಪಣ್ಯಗಳನ್ನು ಈಗಿನ ಅತಿವೃಷ್ಟಿ- ಅನಾವೃಷ್ಟಿಗಳು ಮತ್ತಷ್ಟುಹೆಚ್ಚಿಸಿವೆ. ಇಂಥ ಅಸಾಧಾರಣ ಸನ್ನಿವೇಶವು ಕೆಲವೇ ವರ್ಷಗಳ ಹಿಂದೆ ಎದುರಾಗಿದ್ದರೆ, ಬಹುಶಃ ಅದನ್ನು ಜನರ ಮೇಲೆ ಎರಗಿರುವ ರಾಷ್ಟ್ರೀಯ ವಿಪತ್ತೆಂದು ಪರಿಗಣಿಸಿ ಆಳುವ ಸರ್ಕಾರ ಮತ್ತು ವಿಪಕ್ಷಗಳ ನೇತಾರರು ಒಂದಿಷ್ಟಾದರೂ ಪರಿಹಾರ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಈಗ ಇವರೆಲ್ಲರೂ ಪಕ್ಷಭೇದವಿಲ್ಲದೆ ಪರಸ್ಪರ ದೂಷಣೆಗಳ ಕೆಸರಾಟದಲ್ಲಿ, ಮತ್ತು ತಮ್ಮನ್ನು, ತಮ್ಮ ಆಡಳಿತವನ್ನು ತಾವೇ ಹೊಗಳಿಕೊಂಡು ಮೈಮರೆಯುವ ಉತ್ಸವ, ಆಚರಣೆಗಳಲ್ಲಿ ಮುಳುಗಿದ್ದಾರೆ.

ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಮುಂದಿನ ೨೫ ವರ್ಷಗಳಲ್ಲಿ ಭಾರತ ಹೇಗಿರುತ್ತದೆ ಇತ್ಯಾದಿ ಚಿತ್ರಗಳನ್ನು ವರ್ಣಿಸುವ ಕೆಲಸವನ್ನು ನಮ್ಮ ಪ್ರಧಾನ ಮಂತ್ರಿಗಳು ಮಾಡುತ್ತಿದ್ದಾರೆ. ಇಂಥ ದಾರುಣ ಪರಿಸ್ಥಿತಿಯಲ್ಲಿ ಭಾರತದ ೭೫ನೇ ಸ್ವತಂತ್ರ್ಯದ ದಿನಾಚರಣೆಯನ್ನು ಅಮೃತ ಮಹೋತ್ಸವವಾಗಿ ಆಚರಿಸಬೇಕೆಂದು ಅಧಿಕೃತವಾಗಿ ತೀರ್ಮಾನಿಸಲಾಗಿದೆ. ಇದರ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳು ದೇಶದ ಜನರಿಗೆ ಕರೆಕೊಟ್ಟಿದ್ದಾರೆ. ಅಧಿಕಾರಿಗಳು ಈಗಾಗಲೇ ಈ ಬಾವುಟ ಹಾರಿಸುವ ಅಭಿಯಾನದ ತಯಾರಿಯಲ್ಲಿ ತೊಡಗಿದ್ದಾರೆ. ಸುದ್ದಿ ವಾಹಿನಿಗಳಂತೂ ಅತಿವೃಷ್ಟಿ, ಪ್ರವಾಹಗಳು ಮಾಡುತ್ತಿರುವ ಅನಾಹುತಗಳಿಗೆ ಸಿಕ್ಕಿರುವ ನತದೃಷ್ಟ ನಾಗರಿಕರ ಕಷ್ಟಗಳನ್ನು ರೋಮಾಂಚಕಾರಿಯಾದ ಮನರಂಜನೆ ಎಂಬಂತೆ ತಮ್ಮ ಜಾಹೀರಾತುಗಳ ನಡುವೆ ಪೋಣಿಸಿ ಮತ್ತೆ ಮತ್ತೆ ಪ್ರಸಾರ ಮಾಡುತ್ತಿವೆ. ಯಾವುದೇ ಪರಿಹಾರ ಕಾರ್ಯಗಳ ವರದಿ ತಮಗೇ ಸಂಬಂಧಿಸಿದ್ದಲ್ಲ ಎಂಬಂತೆ ವರ್ತಿಸುತ್ತಿವೆ.

ಈ ಹೊತ್ತಿನಲ್ಲಿ ಮಧ್ಯಮ ವರ್ಗದ ಜನರು ವಿವೇಕಶೂನ್ಯರಾಗಿ ಮಾಡುವ ಹಬ್ಬ, ಉತ್ಸವ ಸಂಭ್ರಮಾಚರಣೆಗಳು ಮಾತ್ರವಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಮಾಡುವ ಪ್ರತಿಭಟನೆ, ವಿರೋಧಗಳೂ ಅರ್ಥ ಕಳೆದುಕೊಂಡು ಶುಷ್ಕ ಆಚರಣೆಗಳಾಗಿಬಿಟ್ಟಿವೆ. ಇಷ್ಟಾದರೂ, ನಾವು ಮಾಡಬಹುದಾದದ್ದು ಏನಾದರೂ ಇದೆಯೇ? ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರವಾಗಿ ನನ್ನದೊಂದು ಸಲಹೆ. ಇದು ಸದ್ಯ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರವಲ್ಲ. ಜನರ ಅತೀವ ಕಷ್ಟಗಳ ನಡುವೆಯೇ ಸಂವೇದನಾರಹಿತವಾಗಿ ಮನೆ ಮನೆ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಆಚರಿಸಲು ಹೊರಟಿರುವ ಅಮೃತ ಮಹೋತ್ಸವದ ಅರ್ಥರಾಹಿತ್ಯವನ್ನು ಕೊಂಚಮಟ್ಟಿಗಾದರೂ ಮಾರ್ಪಡಿಸಿ ಅಮೃತಹೋತ್ಸವಕ್ಕೆ ನಿಜವಾದ ಅರ್ಥವನ್ನು ತಂದುಕೊಡುವ ಪ್ರಯತ್ನ ಆಗಬೇಕು.

ಅದೇನೆಂದರೆ, ಇಂದಿನ ಮಾನವ ನಿರ್ಮಿತ ಕಷ್ಟಗಳು ಮತ್ತು ಪ್ರಕೃತಿ ವಿಕೋಪದ ಫಲವಾಗಿ ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳ ಈ ಸಂದರ್ಭದಲ್ಲಿ ಈ ಸಲದ ಸ್ವಾತಂತ್ರ್ಯ ದಿನಾಚರಣೆಯನ್ನು, ಮನೆ ಮನೆಯಲ್ಲಿ ಬಾವುಟ ಹಾರಿಸಿ ಆಚರಿಸುವ ಬದಲು ಶಿವರಾತ್ರಿ ಹಬ್ಬದಲ್ಲಿ ಮಾಡುವಂತೆ ಉಪವಾಸ, ಜಾಗರಣೆ, ಗಾಯನ ಮುಂತಾದ ಸಾಂಸ್ಕ ೃತಿಕ ಕಾರ್ಯಕ್ರಮಗಳ ಮೂಲಕ ರಾಷ್ಟೀಯ ಜಾಗೃತಿ ಮತ್ತು ದೇಶಪ್ರೇಮದ ದಿನವನ್ನಾಗಿ ಆಚರಿಸುವುದು. ಇದು ಎಲ್ಲಾ ದೃಷ್ಟಿಯಿಂದಲೂ ಸದ್ಯದ ಸಂದರ್ಭಕ್ಕೆ ಹೊಂದಿಕೊಳ್ಳುವಂಥ, ಲಗತ್ತಾದ ಆಚರಣೆಯಾಗುತ್ತದೆ. ಇದು ಪ್ರತಿಭಟನೆಯಲ್ಲ ಅಥವಾ ಯಾವುದೇ ವ್ಯಕ್ತಿ, ಪಕ್ಷ, ಇತ್ಯಾದಿ ಯಾರ ವಿರುದ್ಧವೂ ಅಲ್ಲವಾದ್ದರಿಂದ, ಇದೊಂದು ವಿನೂತನ ಬಗೆಯ ಸ್ವಾತಂತ್ರತ್ಯೋತ್ಸವದ ವಿಶಿಷ್ಟ ಆಚರಣೆ ಆಗುತ್ತದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಜನರ ಸಂಘಟನೆಗಾಗಿ ಗಣೇಶನನ್ನು ಬಳಸಿಕೊಂಡಂತೆ, ಈಗಿರುವ ಕಷ್ಟಗಳ ನಡುವೆೆುೀಂ ದೇಶದ ನಾಗರಿಕರ ದೇಶಪ್ರೇಮವನ್ನು ಗಟ್ಟಿಗೊಳಿಸಲು ಸ್ವಾತತ್ರ್ಯದ ಅಮೃತ ಮಹೋತ್ಸವದ ಈ ವಿಶೇಷ ಕಾರ್ಯಕ್ರಮವನ್ನು, ಶಿವ ಹುಟ್ಟಿದ ದಿನವೆಂದು ಜನಸಾಮಾನ್ಯರು ನಂಬುವ ಶಿವರಾತ್ರಿಯ ಆಚರಣಾ ವಿಧಾನವನ್ನು, ಮಾದರಿಯಾಗಿಟ್ಟುಕೊಂಡು ಅಂದರೆ, ಜಾಗರಣೆ, ಉಪವಾಸಗಳನ್ನು ಮಾಡುವುದು ಅತ್ಯಂತ ಸೂಕ್ತವಾದ ಆಚರಣೆ ಆಗುತ್ತದೆ. ಹೇಗಿದ್ದರೂ ಭಾರತದ ಲಕ್ಷಾಂತರ ಕೃಷಿಕರ, ಬಡವರ, ದೀನ- ದಲಿತರ ದೇವರು ಶಿವ. ಕಾಯಕದ ಮಹತ್ವವನ್ನು ೧೨ನೇ ಶತಮಾನದಲ್ಲೇ ಜಗತ್ತಿಗೆ ಸಾರಿ ಹೇಳಿದ ಬಸವಾದಿ ಪ್ರಮಥರ ಮತ್ತು ಶಿವ ಶರಣ-ಶರಣೆಯರ ಆರಾಧ್ಯ ಶಿವನೇ ಆಗಿದ್ದಾನೆ. ಆದ್ದರಿಂದ, ಅಮೃತ ಮಹೋತ್ಸವದ ಆಚರಣೆಯ ಅರ್ಥಪೂರ್ಣತೆಗೆ ಇದರಿಂದ ಯಾವ ರೀತಿಯಲ್ಲೂ ಕುಂದು ಬರುವುದಿಲ್ಲ. ಬದಲು ಶಿವರಾತ್ರಿಯ ಆಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಳ ಅರ್ಥಪೂರ್ಣತೆಗಳು ವಿಶಿಷ್ಟ ರೀತಿಯಲ್ಲಿ ಮೇಳೈಸುತ್ತವೆ.

 

 

 

 

andolana

Recent Posts

ರಾಮನಗರದ ರೈಲ್ವೆ ಪ್ರಯಾಣಿಕರಿಗೆ ಶುಭ ಸಮಾಚಾರ: ಏನದು ಗೊತ್ತಾ.?

ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಂಚರಿಸುವ ಒಡೆಯರ್‌ ಎಕ್ಸ್‌ಪ್ರೆಸ್‌ ರೈಲಿಗೆ ಈಗ ರಾಮನಗರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ…

22 mins ago

ಟಿವಿಕೆ ಶಾಸಕಾಂಗ ಪಕ್ಷದ ನಾಯಕನಾಗಿ ನಟ ವಿಜಯ್‌ ಆಯ್ಕೆ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಟಿವಿಕೆ ಪಕ್ಷವು ಇದೀಗ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಚೆನ್ನೈನ ಪಣಿಯೂರಿನಲ್ಲಿರುವ…

37 mins ago

ತಮಿಳುನಾಡು ಫಲಿತಾಂಶ ತುಂಬಾ ಆಶ್ವರ್ಯಕರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಈ ಫಲಿತಾಂಶ ತುಂಬಾ ಆಶ್ಚರ್ಯಕರವಾಗಿದೆ ಎಂದು ಸಿಎಂ…

1 hour ago

ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್‌ ರಾಜೀನಾಮೆ

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರಿಂದು ತಮಿಳುನಾಡು ಸಿಎಂ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಭವನದಲ್ಲಿರುವ…

2 hours ago

ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಯುವಕನ ಕೊಲೆ

ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಮೈಸೂರಿನ ಉದಯಗಿರಿಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಉದಯಗಿರಿ ಪೊಲೀಸ್‌ ಠಾಣೆಯಿಂದ ಕೇವಲ…

2 hours ago

ಹನೂರು: ಪಂಪ್‌ಸೆಟ್‌ ಮೋಟಾರ್‌ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಮಾಪುರ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಇರುತ್ತಿದ್ದ ನೀರೆತ್ತುವ ಪಂಪ್ ಸೆಟ್ ಮೋಟಾರ್‌ಗಳನ್ನು…

3 hours ago