ಜಿಲ್ಲೆಗಳು

ಅರಿಶಿನ ಸಂಸ್ಕರಣೆ ಘಟಕಕ್ಕೆ ಡಿಸೆಂಬರ್‌ನಲ್ಲಿ ಚಾಲನೆ

ಒಂದು ಬೆಳೆ-ಒಂದು ಉತ್ಪನ್ನದಡಿ ಅರಿಶಿನ ಬೆಳೆ ಆಯ್ಕೆ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಒಂದು ಜಿಲ್ಲೆ-ಒಂದು ಉತ್ಪನ್ನದಡಿ(ಒಡಿಒಪಿ) ಜಿಲ್ಲೆಯಲ್ಲಿ ಅರಿಶಿನ ಬೆಳೆ ಆಯ್ಕೆಯಾಗಿದ್ದು ಇದರ ಸಂಸ್ಕರಣಾ ಘಟಕ ನಗರ ಹೊರವಲುಂದ ಕೆವಿಕೆಯಲ್ಲಿ ಮುಂದಿನ ತಿಂಗಳು ಆರಂಭ ಆಗಲಿದೆ.
ಅರಿಶಿನ ಕೊಯ್ಲು ಮಾಡಿ ಈ ಘಟಕಕ್ಕೆ ತಂದುಹಾಕಿದರೆ ಅದು ಕ್ಲೀನ್, ಪಾಲಿಷ್ ಹಾಗೂ ತುಂಡುವಾಡಿ ಒಣಗಿಸುತ್ತದೆ. ಪೌಡರ್ ಸಹ ಮಾಡುತ್ತದೆ.
ರೈತರು ಅರಿಶಿನವನ್ನು ೧೦ರಿಂದ ೧೨ತಿಂಗಳು ಕಷ್ಟಪಟ್ಟು ಬೆಳೆಯುವುದಕ್ಕಿಂತ ಅದನ್ನು ಕ್ಲೀನ್ ಮಾಡಿ ಬೇಯಿಸಿ- ಒಣಗಿಸಿ ಮಾರಾಟ ಮಾಡುವುದು ದೊಡ್ಡ ತಾಪತ್ರಯವಾಗಿತ್ತು. ಇದಕ್ಕೆ ಸಾಕಷ್ಟು ಶ್ರಮ, ಸಮಯ ಹಿಡಿಯುತ್ತಿತ್ತು. ಹೀಗಾಗಿ ನೂತನ ಈ ಘಟಕ ಪ್ರಾರಂಭದಿಂದ ಅರಿಶಿನ ಬೆಳೆಗಾರರಿಗೆ ಅತ್ಯಂತ ಅನುಕೂಲವಾಗಲಿದೆ.
ಅರಿಶಿನ ಈ ಭಾಗದ ಮುಖ್ಯ ಬೆಳೆಗಳಲ್ಲಿ ಒಂದಾಗಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಯೋಜನೆಗೆ ಬಲ ತುಂಬಲು ಒಂದುಬೆಳೆ-ಒಂದು ಉತ್ಪನ್ನದಡಿ ಜಿಲ್ಲೆಯಿಂದ ಅರಿಶಿನ ಬೆಳೆುಂನ್ನು ಆಯ್ಕೆ ಮಾಡಿ ಸುಮಾರು ೭೫ಲಕ್ಷ ರೂ. ವೆಚ್ಚದಲ್ಲಿ ಸಂಸ್ಕರಣ ಘಟಕ ಆರಂಭಿಸಲಾಗುತ್ತಿದೆ.
ಘಟಕದ ನಿರ್ವಹಣೆಯನ್ನು ನಿಯಮಾನುಸಾರ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದ್ದು ಅವರು ಡಿಸೆಂಬರ್‌ನಲ್ಲಿ ಚಾಲನೆ ಕೊಡಲಿದ್ದಾರೆ. ಸಂಸ್ಕರಣೆಗೆ ಸಂಬಂಧಿಸಿದ  ಯಂತ್ರಗಳನ್ನು ತಂದಿರಿಸಲಾಗಿದ್ದು ಜೋಡಣೆ ಮತ್ತು ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಇದೆ. ಬೆಂಗಳೂರು ಕೃಷಿವಿಶ್ವವಿದ್ಯಾಲಯ ಇದರ ಜವಾಬ್ದಾರಿ ಹೊತ್ತಿದೆ.
ಅರಿಶಿನ ಸಂಸ್ಕರಣೆಯ ನಿಗಧಿತ ವೆಚ್ಚ ಪಾವತಿಸಿ ರೈತರು ಅಲ್ಲಿಯೇ ವ್ಯಾಪಾರಿಗಳಿಗೆ ಮಾರಾಟ ಮಾಡಲೂಬಹುದು. ಅಥವಾ ಬೇಕಾದಕಡೆ ತೆಗೆದುಕೊಂಡು ಹೋಗಬಹುದಾಗಿದೆ. ಪ್ರತಿ ಜಿಲ್ಲೆಯಿಂದ ಒಂದು ಉತ್ಪನ್ನ ಆಯ್ಕೆ  ಮಾಡುವುದು, ಬ್ಯ್ರಾಂಡ್ ಮಾಡುವುದು ಮತ್ತು ಪ್ರಚಾರ ಮಾಡುವುದು ಆತ್ಮನಿರ್ಭರ ಯೋಜನೆಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಅರಿಶಿನವನ್ನು ಕೊಂಡೊಯ್ಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಅರಿಶಿನ ಕೊಯ್ಲು ಆರಂಭವಾಗುವುದು ಡಿಸೆಂಬರ್‌ನಲ್ಲಿ. ಈ ಸಮಯಕ್ಕೆ ಸರಿಯಾಗಿ ಸಂಸ್ಕರಣ ಘಟಕ ಪ್ರಾರಂಭಿಸಲಾಗುತ್ತಿದೆ. ಮೈಸೂರು, ಬಾಗಲಕೋಟೆ, ಬೀದರ್ ಇನ್ನಿತರ ಕಡೆಯೂ ಅರಿಶಿನ ಬೆಳೆಯಲಾಗುತ್ತದೆ. ಚಾ.ನಗರ ಅರಿಶಿನದಲ್ಲಿ ಹೆಚ್ಚಿನ ಕರಿಕ್ಯುಲಮ್ ಅಂಶ ಇರುವುದರಿಂದ ಮೊದಲಿಂದಲೂ ಇಲ್ಲಿಯು ಅರಿಶಿನಕ್ಕೆ ತುಂಬಾ ಬೇಡಿಕೆ. ಇಲ್ಲಿ ಬೆಳೆದ ಬಹುಪಾಲು ಅರಿಶಿನ ತಮಿಳುನಾಡು ಇನ್ನಿತರ ಕಡೆಗೆ ಮಾರಾಟವಾಗುತ್ತದೆ.


ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ಅರಿಶಿನ ಸಂಸ್ಕರಣೆ ಘಟಕ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಆಗಲಿದ್ದು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಸಾಗಿವೆ.
-ಮೋಹನ್‌ಕುಮಾರ್ ಎ.ಬಿ.
ತೋಟಗಾರಿಕಾ ತಜ್ಞ, ಕೆವಿಕೆ.


ಸಂಸ್ಕರಣೆ ಘಟಕದಲ್ಲಿ ದಿನವೊಂದಕ್ಕೆ ಕನಿಷ್ಠ ೮ರಿಂದ ೧೦ಟನ್ ಅರಿಶಿನ ಸಂಸ್ಕರಣೆ ಮಾಡಬಹುದು. ೨೪ಗಂಟೆಯೂ ಯಂತ್ರ ಮುನ್ನಡೆಸಿದರೆ ೨೫ಟನ್ ಸಂಸ್ಕರಣೆ ಮಾಡಬಹುದು ಎಂದು ತಜ್ಞರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

7 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

9 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

9 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

23 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago