ಜಿಲ್ಲೆಗಳು

ಸಿದ್ದೇಶ್ವರ ಶ್ರೀಗಳ ನುಡಿಮುತ್ತುಗಳು

ಸತ್ಯದ ಶೋಧಕನಾದ ಸಾಧಕನು

ಮೊಟ್ಟಮೊದಲು ಮಾಡಬೇಕಾದ ಮಹತ್ತರ

ಕಾರ್ಯವೆಂದರೆ ತನ್ನ ಹೃದಯದಲ್ಲಿ

‘ಪ್ರೇಮದ ಜ್ಯೋತಿ’ಯನ್ನು

ಹೊತ್ತಿಸುವುದು.


ಕುದಿಯುವವರು ಕುದಿಯಲಿ,

ಉರಿಯುವವರು ಉರಿಯಲಿ,

ನಿನ್ನಪಾಡಿಗೆ ನೀನಿರು….!

ಕುದಿಯುವವರು ಆವಿಯಾಗುತ್ತಾರೆ.

ಉರಿಯುವವರು ಬೂದಿಯಾಗುತ್ತಾರೆ.


ಸೂರ್ಯನ ಕಿರಣಗಳು ಕೊಳಕು

ಇರುವ ಜಾಗಕ್ಕೂ ಹೋಗುತ್ತದೆ.

ಆದರೆ ಅದು ಕೊಳಕಾಗುವುದಿಲ್ಲ.

ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ

ಆಗಬೇಕು,ಯಾವ ಜಾಗಕ್ಕೆ ಹೋದರೂ,

ಯಾರ ಜೊತೆ ಇದ್ದರೂ ನಾವು

ನಾವಾಗಿರಬೇಕು,ಕೊಳಕಾಗಬಾರದು.


ಮನಸ್ಸು ಮಲಿನವಾದರೆ

ಮಾತು ಕಲ್ಮಶವಾಗಿ ಹೊರಡುತ್ತದೆ.

ಹೃದಯ ಪರಿಮಳ, ಮಾತು ಮಕರಂದ


ಲಾಯರ್ ಇಲ್ಲದಿದ್ದರೆ ನ್ಯಾಯವಿಲ್ಲ.

ಡಾಕ್ಟರ್ ಇಲ್ಲದಿದ್ದರೆ ಆರೋಗ್ಯವಿಲ್ಲ.

ಪೊಲೀಸ್ ಇಲ್ಲದಿದ್ದರೆ ಭದ್ರತೆ ಇಲ್ಲ.

ಇಂಜಿನಿಯರ್ ಇಲ್ಲದಿದ್ದರೆ ಟೆಕ್ನಾಲಜಿ ಇಲ್ಲ.

ಆದರೆ ಶಿಕ್ಷಕರು ಇಲ್ಲದಿದ್ದರೆ, ಮೇಲಿನ ಯಾರೂ ಇಲ್ಲ.

ಆದುದರಿಂದ ಶಿಕ್ಷಕರನ್ನು ಗೌರವಿಸೋಣ.


ಗೆದ್ದವರಷ್ಟೇ

ಬದುಕಿನ ಪಾಠ ಹೇಳಬೇಕಂತಿಲ್ಲ.

ಸೋತವರು ಅದಕ್ಕಿಂತಲೂ ಚಂದದ

ಪಾಠವನ್ನು ಕಲಿತಿರುತ್ತಾರೆ.


ನೆರೆ ಹೊರೆಯವರನ್ನು

ಕಂಡು ನಾನು ಉರಿದೇಳುತ್ತಿದ್ದರೆ

ನನ್ನ ಪೂಜೆ,ಪುನಸ್ಕಾರಗಳಿಗೇನು ಬೆಲೆ?



ಈ ಪ್ರಪಂಚದಲ್ಲಿ

ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ

ಉಳಿದಿರುವುದು

ಆಚರಣೆ ಮಾತ್ರ.

andolanait

Recent Posts

ಎಸ್‌ಐಆರ್‌ | ಬಿಜೆಪಿಯಿಂದ ಅನಗತ್ಯ ಆರೋಪ ; ಎಂ.ಲಕ್ಷ್ಮಣ್‌ ಕಿಡಿ

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…

14 hours ago

ಆರು ತಿಂಗಳ ಬಳಿಕ ಕೆಆರ್‌ಎಸ್‌ ಡ್ಯಾಂಗೆ 1000 ಕ್ಯೂಸೆಕ್ಸ್‌ ನೀರು ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ…

16 hours ago

ಓದುಗರ ಪತ್ರ: ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ

ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್…

19 hours ago

ಶಂಕರ್ ಎಂಬ ನೆಲದ ಹೂ

ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…

19 hours ago

ಊರೊಳಗೆ ಬೆರೆತು ಜನರ ಬಣ್ಣವೇ ಆದ ಕೆ.ಟಿ.ಶಿವಪ್ರಸಾದ್

ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…

20 hours ago

ಅಮೆರಿಕ ಎಂಬ ಪ್ರಯೋಗಕ್ಕೆ ಇನ್ನೂರೈವತ್ತು ವಸಂತಗಳು

ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…

20 hours ago