ಜಿಲ್ಲೆಗಳು

ಸಿದ್ದೇಶ್ವರ ಶ್ರೀಗಳ ನುಡಿಮುತ್ತುಗಳು

ಸತ್ಯದ ಶೋಧಕನಾದ ಸಾಧಕನು

ಮೊಟ್ಟಮೊದಲು ಮಾಡಬೇಕಾದ ಮಹತ್ತರ

ಕಾರ್ಯವೆಂದರೆ ತನ್ನ ಹೃದಯದಲ್ಲಿ

‘ಪ್ರೇಮದ ಜ್ಯೋತಿ’ಯನ್ನು

ಹೊತ್ತಿಸುವುದು.


ಕುದಿಯುವವರು ಕುದಿಯಲಿ,

ಉರಿಯುವವರು ಉರಿಯಲಿ,

ನಿನ್ನಪಾಡಿಗೆ ನೀನಿರು….!

ಕುದಿಯುವವರು ಆವಿಯಾಗುತ್ತಾರೆ.

ಉರಿಯುವವರು ಬೂದಿಯಾಗುತ್ತಾರೆ.


ಸೂರ್ಯನ ಕಿರಣಗಳು ಕೊಳಕು

ಇರುವ ಜಾಗಕ್ಕೂ ಹೋಗುತ್ತದೆ.

ಆದರೆ ಅದು ಕೊಳಕಾಗುವುದಿಲ್ಲ.

ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ

ಆಗಬೇಕು,ಯಾವ ಜಾಗಕ್ಕೆ ಹೋದರೂ,

ಯಾರ ಜೊತೆ ಇದ್ದರೂ ನಾವು

ನಾವಾಗಿರಬೇಕು,ಕೊಳಕಾಗಬಾರದು.


ಮನಸ್ಸು ಮಲಿನವಾದರೆ

ಮಾತು ಕಲ್ಮಶವಾಗಿ ಹೊರಡುತ್ತದೆ.

ಹೃದಯ ಪರಿಮಳ, ಮಾತು ಮಕರಂದ


ಲಾಯರ್ ಇಲ್ಲದಿದ್ದರೆ ನ್ಯಾಯವಿಲ್ಲ.

ಡಾಕ್ಟರ್ ಇಲ್ಲದಿದ್ದರೆ ಆರೋಗ್ಯವಿಲ್ಲ.

ಪೊಲೀಸ್ ಇಲ್ಲದಿದ್ದರೆ ಭದ್ರತೆ ಇಲ್ಲ.

ಇಂಜಿನಿಯರ್ ಇಲ್ಲದಿದ್ದರೆ ಟೆಕ್ನಾಲಜಿ ಇಲ್ಲ.

ಆದರೆ ಶಿಕ್ಷಕರು ಇಲ್ಲದಿದ್ದರೆ, ಮೇಲಿನ ಯಾರೂ ಇಲ್ಲ.

ಆದುದರಿಂದ ಶಿಕ್ಷಕರನ್ನು ಗೌರವಿಸೋಣ.


ಗೆದ್ದವರಷ್ಟೇ

ಬದುಕಿನ ಪಾಠ ಹೇಳಬೇಕಂತಿಲ್ಲ.

ಸೋತವರು ಅದಕ್ಕಿಂತಲೂ ಚಂದದ

ಪಾಠವನ್ನು ಕಲಿತಿರುತ್ತಾರೆ.


ನೆರೆ ಹೊರೆಯವರನ್ನು

ಕಂಡು ನಾನು ಉರಿದೇಳುತ್ತಿದ್ದರೆ

ನನ್ನ ಪೂಜೆ,ಪುನಸ್ಕಾರಗಳಿಗೇನು ಬೆಲೆ?



ಈ ಪ್ರಪಂಚದಲ್ಲಿ

ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ

ಉಳಿದಿರುವುದು

ಆಚರಣೆ ಮಾತ್ರ.

andolanait

Recent Posts

ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಬಹುದು : ಸಿಎಂ ಸಿದ್ದರಾಮಯ್ಯ

ಮೈಸೂರು : ಪ್ರಾಥಮಿಕ ತರಗತಿಯಿಂದ 12 ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು. ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ…

3 mins ago

ಚೀನಾವನ್ನು ಹಾಡಿ ಹೊಗಳಿದ ಟ್ರಂಪ್‌ : ಜಿನ್‌ಪಿಂಗ್‌ ಪ್ರತಿಕ್ರಿಯೆ ಹೇಗಿತ್ತು?

ಬೀಚಿಂಗ್ : ಚೀನಾದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಚೀನಾವನ್ನು ಹಾಡಿ ಹೊಗಳಿದ್ದಾರೆ.…

1 hour ago

ದೆಹಲಿ | ಸ್ಲೀಪರ್‌ ಬಸ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ನವದೆಹಲಿ : ಸ್ಲೀಪರ್‌ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯ ನಂಗ್ಲೋಯಿಯಲ್ಲಿ ನಡೆದಿದೆ. ಬಸ್ಸಿನಲ್ಲಿ…

2 hours ago

ಮಂಡಿ ಮಾರುಕಟ್ಟೆ : ಹೊರಗೆ ಥಳುಕು-ಒಳಗೆ ಹುಳುಕು

ಶಿಥಿಲಗೊಂಡಿರುವ ಸುಮಾರು 130 ವರ್ಷ ಇತಿಹಾಸ ಹೊಂದಿರುವ ಕಟ್ಟಡ ಕೆ.ಪಿ.ಮದನ್ ಮೈಸೂರು : ಪುಟ್ಟದಾದರೂ ವಿಶಿಷ್ಟ ವಾಸ್ತು ಶೈಲಿಯಿಂದ ಗಮನಸೆಳೆಯುವ…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ 14 ಗುರುವಾರ

6 hours ago

ಮಣ್ಣಲ್ಲಿ ಮಣ್ಣಾದ ನಟ ದಿಲೀಪ್‌ ರಾಜ್‌

ರಾಮನಗರ: ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದ ನಟ ದಿಲೀಪ್‌ ರಾಜ್‌ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ರಾಮನಗರ ತಾಲ್ಲೂಕಿನ…

19 hours ago