ಜಿಲ್ಲೆಗಳು

ಸಿದ್ದೇಶ್ವರ ಶ್ರೀಗಳ ನುಡಿಮುತ್ತುಗಳು

ಸತ್ಯದ ಶೋಧಕನಾದ ಸಾಧಕನು

ಮೊಟ್ಟಮೊದಲು ಮಾಡಬೇಕಾದ ಮಹತ್ತರ

ಕಾರ್ಯವೆಂದರೆ ತನ್ನ ಹೃದಯದಲ್ಲಿ

‘ಪ್ರೇಮದ ಜ್ಯೋತಿ’ಯನ್ನು

ಹೊತ್ತಿಸುವುದು.


ಕುದಿಯುವವರು ಕುದಿಯಲಿ,

ಉರಿಯುವವರು ಉರಿಯಲಿ,

ನಿನ್ನಪಾಡಿಗೆ ನೀನಿರು….!

ಕುದಿಯುವವರು ಆವಿಯಾಗುತ್ತಾರೆ.

ಉರಿಯುವವರು ಬೂದಿಯಾಗುತ್ತಾರೆ.


ಸೂರ್ಯನ ಕಿರಣಗಳು ಕೊಳಕು

ಇರುವ ಜಾಗಕ್ಕೂ ಹೋಗುತ್ತದೆ.

ಆದರೆ ಅದು ಕೊಳಕಾಗುವುದಿಲ್ಲ.

ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ

ಆಗಬೇಕು,ಯಾವ ಜಾಗಕ್ಕೆ ಹೋದರೂ,

ಯಾರ ಜೊತೆ ಇದ್ದರೂ ನಾವು

ನಾವಾಗಿರಬೇಕು,ಕೊಳಕಾಗಬಾರದು.


ಮನಸ್ಸು ಮಲಿನವಾದರೆ

ಮಾತು ಕಲ್ಮಶವಾಗಿ ಹೊರಡುತ್ತದೆ.

ಹೃದಯ ಪರಿಮಳ, ಮಾತು ಮಕರಂದ


ಲಾಯರ್ ಇಲ್ಲದಿದ್ದರೆ ನ್ಯಾಯವಿಲ್ಲ.

ಡಾಕ್ಟರ್ ಇಲ್ಲದಿದ್ದರೆ ಆರೋಗ್ಯವಿಲ್ಲ.

ಪೊಲೀಸ್ ಇಲ್ಲದಿದ್ದರೆ ಭದ್ರತೆ ಇಲ್ಲ.

ಇಂಜಿನಿಯರ್ ಇಲ್ಲದಿದ್ದರೆ ಟೆಕ್ನಾಲಜಿ ಇಲ್ಲ.

ಆದರೆ ಶಿಕ್ಷಕರು ಇಲ್ಲದಿದ್ದರೆ, ಮೇಲಿನ ಯಾರೂ ಇಲ್ಲ.

ಆದುದರಿಂದ ಶಿಕ್ಷಕರನ್ನು ಗೌರವಿಸೋಣ.


ಗೆದ್ದವರಷ್ಟೇ

ಬದುಕಿನ ಪಾಠ ಹೇಳಬೇಕಂತಿಲ್ಲ.

ಸೋತವರು ಅದಕ್ಕಿಂತಲೂ ಚಂದದ

ಪಾಠವನ್ನು ಕಲಿತಿರುತ್ತಾರೆ.


ನೆರೆ ಹೊರೆಯವರನ್ನು

ಕಂಡು ನಾನು ಉರಿದೇಳುತ್ತಿದ್ದರೆ

ನನ್ನ ಪೂಜೆ,ಪುನಸ್ಕಾರಗಳಿಗೇನು ಬೆಲೆ?



ಈ ಪ್ರಪಂಚದಲ್ಲಿ

ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ

ಉಳಿದಿರುವುದು

ಆಚರಣೆ ಮಾತ್ರ.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

6 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

37 mins ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

2 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

17 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

20 hours ago