ಜಿಲ್ಲೆಗಳು

ರಾಹುಲ್ ಗಾಂಧಿ ಅಕ್ಕಪಕ್ಕ ಇರುವವರೆಲ್ಲಾ ಬೇಲ್ ಮೇಲೆ ಇರುವವರು; ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಭಾರತ್ ಜೋಡೋ ಯಾತ್ರೆಗೆ ಪೊಲೀಸರು ಸಂಪೂರ್ಣ ಭದ್ರತೆ ಒದಗಿಸಿದ್ದಾರೆ. ಪಾದಯಾತ್ರೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ನವರ ಭಾರತ್ ಜೋಡೋಗೆ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ಅನಾವಶ್ಯಕವಾಗಿ ಆರೋಪ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿ ಅವರ ಅಕ್ಕಪಕ್ಕ ಯಾರಿದ್ದಾರೆ? ಅವರೆಲ್ಲಾ ಬೇಲ್ ಮೇಲೆ ಇರುವವರು, ಕಾಂಗ್ರೆಸ್ ನವರು ಏನೂ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದರು.

ಆರೋಪ ಬಂದಾಕ್ಷಣ ಪೊಲೀಸ್ ಉನ್ನತ ಅಧಿಕಾರಿಗಳನ್ನೇ ಬಂಧಿಸಿದೆ. ಅದೇ ಕಾಂಗ್ರೆಸ್ ನವರು ಒಬ್ಬ ಪೇದೆಯನ್ನು ಕೂಡ ಬಂಧಿಸಲಿಲ್ಲ. 40% ಆರೋಪ ಮಾಡ್ತಾರಲ್ಲಾ ಅದರ ಒಂದೇಒಂದು ದಾಖಲೆ ಕೊಡ ಕೊಡಲಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಎಡಬಲ ಇರುವವರನ್ನೇ ಕೇಳಲಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ಪರ್ಸೆಂಟೆಜ್ ತೆಗೆದುಕೊಂಡಿದ್ದೀರಿ ಎಂದು? ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಬಾರದು ಎಂದರು.

ಬಾಲಿಷ ಹೇಳಿಕೆಗಳನ್ನು ನೀಡಬಾರದು. ರಾಹುಲ್ ಗಾಂಧಿ ಅವರು ತಮ್ಮ ಎಡಬಲದಲ್ಲಿ ಇರುವವರ ಕತೆ ಮೊದಲು ತಿಳಿದುಕೊಳ್ಳಲಿ. ಅಕ್ಕಪಕ್ಕದವರ ಮಾತು ಕೇಳಿದರೆ ಭಾರತ್ ಜೋಡೋ ಪೂರ್ಣ ಆಗಲ್ಲ. ಮಾಹಿತಿ ತೆಗೆದುಕೊಂಡು ಮಾತನಾಡಿ. ಯಾರೂ ಬ್ಯಾನರ್ ಹರಿದಿಲ್ಲ.‌ ಹೆಜ್ಜೆಹೆಜ್ಜೆಗೂ ರಕ್ಷಣೆ ನೀಡುವಂತೆ ಸೂಚಿಸಲಾಗಿದೆ ಎಂದರು.

andolanait

Recent Posts

ಟ್ರಂಪ್‌ ಗುರಿಯಾಗಿಸಿ ಗುಂಡಿನ ದಾಳಿಗೆ ಯತ್ನಿಸಿದ್ದು ಓರ್ವ ಶಿಕ್ಷಕ ! ಯಾರು ಈ ಥಾಮಸ್‌ ಅಲೆನ್‌

ವಾಷಿಂಗ್ಟನ್‌ : ವರದಿಗಾರರ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿ ಅತಿಥಿಯಾಗಿ ಹೋಟೆಲ್‌ ಪ್ರವೇಶ ಮಾಡಿದ್ದ ವಿಚಾರ ಪ್ರಾಥಮಿಕ ತನಿಖೆಯಿಂದ…

33 seconds ago

ಹನೂರು | ಬಾರದ ಮಳೆ ; ಮಳೆಗಾಗಿ ಮಕ್ಕಳ ವಿಶೇಷ ಪ್ರಾರ್ಥನೆ

ಹನೂರು : ಜನ ಜಾನುವಾರುಗಳಿಗೂ ಕುಡಿಯುವ ನೀರಿನ ತೊಂದರೆ ಉಂಟಾಗಿರುವ ಪರಿಣಾಮ ಗ್ರಾಮದಲ್ಲಿರುವ ಮಕ್ಕಳೆಲ್ಲರೂ ಸೇರಿ ಮಳೆರಾಯನಿಗೆ ಪ್ರಾರ್ಥನೆ ಮಾಡಿರುವಂತಹ…

19 mins ago

ಸ್ವಿಸ್‌ ವಿಮಾನದಲ್ಲಿ ಬೆಂಕಿ, 6 ಮಂದಿಗೆ ಗಾಯ ; ತಪ್ಪಿದ ದುರಂತ

ನವದೆಹಲಿ : ಟೇಕಾಫ್ ವೇಳೆ ಎಂಜಿನ್ ವೈಫಲ್ಯದಿಂದ ಸ್ವಿಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 6 ಮಂದಿ ಗಾಯಗೊಂಡಿರುವ ಘಟನೆ…

1 hour ago

ಅಕ್ರಮ ಭೂ ಪರಿಹಾರ ವಿತರಣೆ ಸಾಬೀತು : ವಸೂಲಿಗೆ ಕ್ರಮವಹಿಸಲು ಆದೇಶ

ಮಂಡ್ಯ : ತಾಲೂಕಿನ ಬೂದನೂರು ಗ್ರಾಪಂ ವ್ಯಾಪ್ತಿಯ ಬ್ಯಾಂಕ್ ಕಾಲೋನಿ ಪಂಚಾಯತಿ ರಸ್ತೆಗೆ 41 ಲಕ್ಷ ರೂ ಅಕ್ರಮ ಪರಿಹಾರ…

1 hour ago

ಯಾವಾಗ ಏನು ಆಗಬೇಕೋ ಆಗುತ್ತೆ, ಪಕ್ಷದ ಮೇಲೆ ವಿಶ್ವಾಸವಿದೆ : ಡಿ.ಕೆ.ಶಿವಕುಮಾರ್‌

ಬೆಂಗಳೂರು : ಯಾವಾಗ ಏನು ಆಗಬೇಕೋ ಅದು ಆಗುತ್ತದೆ. ಸಮಯ ಬಂದಾಗ ತಾನಾಗಿಯೇ ಗೊತ್ತಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್…

1 hour ago

ಸಫಾರಿ ವೇಳೆ ಮೊಬೈಲ್‌ ಬಳಕೆಗೆ ನಿಷೇಧ : ಅರಣ್ಯ ಇಲಾಖೆ ಹೊಸ ನಿಯಮ

ಬೆಂಗಳೂರು : ವನ್ಯಜೀವಿ ಸಂರಕ್ಷಣೆ ಮತ್ತು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಫಾರಿ…

2 hours ago