ಜಿಲ್ಲೆಗಳು

‘ನಿನ್ನ ನೋಡಿ ಸುಮ್ನೆಂಗಿರ್ಲಿ’: ಮಂಗ್ಲಿ ಗಾಯನಕ್ಕೆ ಮೈಸೂರಿಗರು ಫಿದಾ

ಯುವ ದಸರಾದಲ್ಲಿ ಮಳೆಗೂ ಸೆಡ್ಡು ಹೊಡೆದು ಯುವ ಸಮೂಹ ಕುಣಿತ

ಮೈಸೂರು: ‘ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ…ನಿನ್ನ ನೋಡಿ ಸುಮ್ನೆಂಗಿರ್ಲಿ’ ಎಂದು ಹಾಡುತ್ತಾ ಯುವ ದಸರಾ ವೇದಿಕೆಗೆ ಆಗಮಿಸಿದ ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ, ನೆರೆದಿದ್ದ ಕಲಾಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಯುವ ದಸರಾದ ಐದನೇ ದಿನದ ಕಾರ್ಯಕ್ರಮದಲ್ಲಿ ಮಳೆಗೂ ಸೆಡ್ಡು ಹೊಡೆದ ಯುವ ಸಮೂಹ ಗಾಯನ ರಸಸ್ವಾದ ಸವಿದರು. ಈ ವೇಳೆ ಮಾತನಾಡಿದ ಮಂಗ್ಲಿ ‘ನಾನು ಮೈಸೂರಲ್ಲಿ ನೀಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ನನಗೆ ಮೈಸೂರು ಎಂದರೇ ಬಹಳ ಇಷ್ಟ. ತೆಲುಗು ಒಂದು ಮನೆಯಾದರೆ, ಕನ್ನಡವೂ ನನ್ನ ಇನ್ನೊಂದು ಮನೆ’ ಎಂದು ಹೇಳಿದ್ದಕ್ಕೆ ಮೈಸೂರಿಗರು ಪಿಧಾ ಆದರು.

ಏಕ್ ಲವ್ ಯಾ ಚಿತ್ರದ ‘ಎಣ್ಣೆಗೂ…ಹೆಣ್ಣಿಗೂ…’, ‘ಯಕ್ಕಾ ಸಕ್ಕಾ’ ಹಾಡುಗಳ ಜೊತೆಗೆ ತೆಲುಗಿನ ಗೀತೆಗಳನ್ನು ಹಾಡಿದರು. ಪುನೀತ್ ರಾಜ್ ಕುಮಾರ್ ಚಿತ್ರದ ‘ಬೊಂಬೆ ಹೇಳುತೈತೆ ನೀನೆ ರಾಜಕುಮಾರ್’ ಹಾಡು ಹಾಡಿದರು. ಇವರಿಗೆ ಗಾಯಕ ಅನಿರುದ್ಧ ಸಾಥ್ ನೀಡಿದರು.

ನಟಿ ಹರ್ಷಿಕಾ ಪೂಣಚ್ಚ ಅವರು ತಮ್ಮ ನೃತ್ಯದ ಮೂಲಕ ಎಲ್ಲರ ಮನಸೂರೆಗೊಂಡರು. ‘ನೀನಾದೆನಾ, ನೀನಾದೆನಾ… ನಿನ್ನೊಂದಿಗೆ ಈ ಜೀವನ…’, ‘ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ’ ‘ಯಕ್ಕ ಸಕ್ಕಾ’ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮತ್ತು ತಂಡದವರು ಸಂಗೀತ ರಸಮಂಜರಿ ಹಿಂದೆ ಹಾಡುಗಳು ಪ್ರೇಕ್ಷಕರ ಮನ ಗೆದ್ದವು.

ಮೈಸೂರಿನವರೇ ಆದ ನಟಿ ಪಾಯಲ್ ಅವರು ‘ಜೋಕೆ… ನಾನು ಬಳ್ಳಿಯ ಮಿಂಚು’ ಮತ್ತು ‘ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು’ ಹಾಡುಗಳಿಗೆ ಹೆಜ್ಜೆ ಹಾಕಿದರು. ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಅವರು ಅಪ್ಪು ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಗಾಯಕ ಶಶಾಂಕ್ ಶೇಷಗಿರಿ, ಗಾಯಕಿ ಇಂಚರ ಹಾಡಿ ರಂಜಿಸಿದರು.

ಕಾರ್ಯಕ್ರಮದ ಆರಂಭದಲ್ಲಿಯೇ ಮಳೆ ತನ್ನ ಆಟ ಶುರು ಮಾಡಿತು. ೫ ನಿಮಿಷಗಳ ಕಾಲ ಬಿರುಸಾಗಿ ಸುರಿದ ಮಳೆ, ನಂತರ ತುಂತುರಾಗಿ ಉದುರಲಾರಂಭಿಸಿತು. ಆಸನದ ವ್ಯವಸ್ಥೆ ಇಲ್ಲದೆ, ಹಿಂದೆ ನಿಂತು ಕಾರ್ಯಕ್ರಮ ನೋಡುತ್ತಿದ್ದ ಪ್ರೇಕ್ಷಕರು ಕೊಡೆ ಹಿಡಿದು ಕಾರ್ಯಕ್ರಮ ಎಂಜಾಯ್ ಮಾಡಿದರು.

 

 

 

 

 

 

andolana

Recent Posts

ಚಿರಕನಹಳ್ಳಿ ; ಬೋನಿಗೆ ಬಿದ್ದ ಹುಲಿ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…

4 hours ago

ವೆನಿಜುವೆಲಾ ಭೂಕಂಪ ; ಮೃತರ ಸಂಖ್ಯೆ 235ಕ್ಕೆ ಏರಿಕೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ…

4 hours ago

ಡಿಕೆಶಿ ಜೊತೆಗಿನ ಬಾಂಧ್ಯವ : ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದಿಷ್ಟು

ಧರ್ಮಸ್ಥಳ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 26, ಶುಕ್ರವಾರ  

9 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಕನ್ನಡಕ್ಕೊಂದು ಒಟಿಟಿ, ʼಗರುಡ ಪುರಾಣʼ ಇತ್ಯಾದಿ

‘ವೆನ್ ಯು ವಾಂಟ್ ಟು ಡು ಸಮ್‌ತಿಂಗ್ ಡು ಇಟ್; ಆರ್ ಎಲ್ಸ್ ವಿಟ್ ನೆಸ್‌ಇಟ್’ ಇದು ಅತ್ಯಂತ ಪ್ರಚಲಿತವಿರುವ…

9 hours ago

ಹಿಟಾಚಿ ಮೇಲೆ ಬಿದ್ದ ಗೋಡೆ: ಚಾಲಕ ಪಾರು

ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…

1 day ago