ಸಾಲಿಗ್ರಾಮ : ಪಟ್ಟಣದ ಹೊರವಲಯದಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವಿಗೀಡಾಗಿ, ಮೂವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಪಟ್ಟಣದಿಂದ ಕೇರಳಾಪುರಕ್ಕೆ ಹೋಗುವ ಮಾರ್ಗದಲ್ಲಿ ದಡದಹಳ್ಳಿ ಗೇಟ್ ಸಮೀಪ ಇರುವ ಅಶ್ವಿನಿ ಡೈರಿ ಫಾರಂ ಬಳಿ ಮಂಗಳವಾರ ಈ ದುರ್ಘಟನೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಅಬ್ಬನಕುಪ್ಪೆ ಗ್ರಾಮದ ಗೋವರ್ಧನ್ ಅಲಿಯಾಸ್ ಗಣೇಶ್ (36) ಮತ್ತು ಅರಕಲಗೂಡು ತಾಲೂಕಿನ ಕಟ್ಟೆಪುರ ಗ್ರಾಮದ ನವೀನ್ ಕುಮಾರ್ (29) ಎಂಬುವವರೇ ಮೃತಪಟ್ಟವರಾಗಿದ್ದಾರೆ.
ಸಂತೋಷ್, ಮನು ಮತ್ತು ಪೃಥ್ವಿರಾಜ್ ಅವರುಗಳಿಗೆ ಗಾಯಗಳಾಗಿದ್ದು ಇವರೆಲ್ಲರೂ ಅರಕಲಗೂಡು ತಾಲೂಕಿನ ಕಟ್ಟೆಪುರ ಗ್ರಾಮದವರಾಗಿದ್ದಾರೆ.
ಘಟನೆಯ ವಿವರ
ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಗೆ ಸೇರಿದ ಕಟ್ಟೆಪುರ ಗ್ರಾಮದ ನವೀನ್ ಕುಮಾರ್ ಎಂಬುವರು ಮದುವೆಯ ಫೋಟೋ ಮತ್ತು ವಿಡಿಯೋ ತೆಗೆಯುವ ಆರ್ಡರ್ ಇದ್ದ ಕಾರಣ ಕನಕಪುರಕ್ಕೆ ತೆರಳಲು ಕಟ್ಟೆಪುರ ಗ್ರಾಮದ ಸಂತೋಷ, ಪೃಥ್ವಿರಾಜ್ ಹಾಗೂ ಮನು ಅವರುಗಳೊಂದಿಗೆ ನವೀನ್ ಕುಮಾರ್ ಕಾರಿನಲ್ಲಿ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ತಾಲೂಕಿನ ದಡದಹಳ್ಳಿ ಗೇಟ್ ಸಮೀಪವಿರುವ ಅಶ್ವಿನಿ ಡೈರಿ ಫಾರಂ ಬಳಿ ಎದುರಿನಿಂದ ಪಿರಿಯಾಪಟ್ಟಣ ತಾಲೂಕಿನ ಅಬ್ಬನಕುಪ್ಪೆ ಗ್ರಾಮದ ಗೋವರ್ಧನ್ ಅಲಿಯಾಸ್ ಗಣೇಶ್ ಎಂಬುವರು ಸಾಲಿಗ್ರಾಮ ತಾಲೂಕಿನ ಹೆಬ್ಸೂರು ಗ್ರಾಮದಲ್ಲಿದ್ದ ತನ್ನ ತಂಗಿಯ ಮನೆಯಿಂದ ಸಾಲಿಗ್ರಾಮಕ್ಕೆ ಹೋಗಿ ಒಬ್ಬರೇ ಮರಳಿ ಹೆಬ್ಸೂರು ಗ್ರಾಮಕ್ಕೆ ಕಾರಿನಲ್ಲಿ ಬರುವಾಗ ಏಕಾಏಕಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮವಾಗಿ ಈ ಅವಘಡ ನಡೆದಿದೆ.
ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶು ಇರುವೆ ಕಚ್ಚಿ ಸಾವನ್ನಪ್ಪಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್…
ಸಮರ್ಪಕ ರಸ್ತೆ ಇಲ್ಲ, ವಾಹನ ಸೌಲಭ್ಯವಿಲ್ಲ, ಶುದ್ಧ ನೀರಿಗೂ ತತ್ವಾರ; ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ ಮಹಾದೇಶ್ ಎಂ.ಗೌಡ ಹನೂರು:…
ಮೈಸೂರು: ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಮಗು ಇರುವೆ ಕಚ್ಚಿ ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಏಪ್ರಿಲ್.15ರಂದು ಅವಧಿ ಪೂರ್ವ…
ಮೈಸೂರು : ಜಿಲ್ಲೆಯ ವಿಜಯ ವಿಠ್ಠಲ ಶಾಲೆಯ ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624ಅಂಕಗಳನ್ನು ಗಳಿಸಿ…
ಚೆನ್ನೈ : ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತ್ತು ನಾಗರಿಕರು ತಮ್ಮ…
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶಿಕ್ಷಣ…