ಮೈಸೂರು,: ದೇಶದಲ್ಲಿ ಇದೀಗ ಬೇಕಿರುವುದು ಐಕ್ಯತೆ ಹಾಗೂ ನಾವೆಲ್ಲ ಒಂದು ಎಂಬ ಭಾವನೆ. ಇದಕ್ಕೆ ಪೂರಕವಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಹಿಂದು-ಮುಸ್ಲಿಮರ ನಡುವೆ ಸೌರ್ಹಾದತೆ ಮೂಡುವಂತೆ ಮಾಡಿದೆ.
ಮೈಸೂರಿನ ಪುಲಿಕೇಶಿ ರಸ್ತೆಯ ಸುನ್ನಿ ಚೌಕದಲ್ಲಿ ಶಿವಮ್ಮ( ಕುಳ್ಳಿ) ಎಂಬ ಮಹಿಳೆ ತಡರಾತ್ರಿ ನಿಧನರಾಗಿದ್ದರು. ಇವರ ಅಂತ್ಯಸಂಸ್ಕಾರಕ್ಕೆ ಯಾರೊಬ್ಬರು ಕೂಡ ಮುಂದೆ ಬರಲಿಲ್ಲ. ಶಿವಮ್ಮರ ಬಂಧು ಬಾಂಧವರು ದೂರ ಉಳಿದರು. ಕೊನೆಗೆ ಶಿವಮ್ಮಳ ಅಂತಿಮ ಸಂಸ್ಕಾರಕ್ಕೆ ಮುಸ್ಲಿಂ ಬಾಂಧವರು ಹೆಗಲು ಕೊಟ್ಟು ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.
ಯಾವಾಗ ಶಿವಮ್ಮ ಅಂತ್ಯಸಂಸ್ಕಾರಕ್ಕೆ ಯಾರು ಬರಲಿಲ್ಲವೋ ಆಗ ಬಡಾವಣೆಯ ಮುಸ್ಲಿಂ ಬಾಂಧವರು ಮಾತುಕತೆ ನಡೆಸಿದರು. ಹಿಂದು ಸಂಪ್ರದಾಯದಂತೆ ಯಾವ ರೀತಿ ಪೂಜೆ-ಪುನಸ್ಕಾರ ಮಾಡಬೇಕು ಎಂಬುದನ್ನು ಚರ್ಚೆ ಮಾಡಿ ಇತರರಿಂದ ಕೇಳಿ ತಿಳಿದುಕೊಂಡರು. ಅಂತಿಮವಾಗಿ ಹಿಂದೂ ಮಹಿಳೆ ಅಂತ್ಯ ಸಂಸ್ಕಾರವನ್ನು ಸ್ಥಳೀಯರು ಹಿಂದೂ ಸಂಪ್ರದಾಯದಂತೆ ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.
ಜೋಡಿ ತೆಂಗಿನಮರದ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಮಾಜಿ ನಗರ ಪಾಲಿಕೆ ಸದಸ್ಯ ಸೋಹೆಲ್ ಬೇಗ್ ನೇತೃತ್ವದಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಅಲ್ಲದೆ, ಕುಟುಂಬಕ್ಕೆ ಸಾಂತ್ವನ ಹೇಳಿರುವುದು ನಿಜಕ್ಕೂ ಶ್ಲಾಘನೀಯವಾಗಿತ್ತು. ಈ ಬಗ್ಗೆ ಮಾತನಾಡಿದ ಸೋಹೆಲ್ ಬೇಗ್, ನಿನ್ನೆ ರಾತ್ರಿಯಿಂದ ನಾವೇ ಮುಂದೆ ನಿಂತು ಶವಸಂಸ್ಕಾರ ಮಾಡಿದೆವು. ರಾಜ್ಯದ ಜನತೆಯಲ್ಲಿ ನಾನು ಮನವಿ ಮಾಡುವುದೆಂದರೆ ನಾವೆಲ್ಲರೂ ಒಂದೇ. ಹಿಂದು-ಮುಸ್ಲಿಂ ಎಂಬ ಬೇಧಭಾವ ಇರಬಾರದು. ಟಿಪ್ಪು ಜಯಂತಿ ದಿನ ನಾವು ಅನ್ನಸಂತರ್ಪಣೆ ಮಾಡಿದ್ದೆ. ಆ ವೇಳೆ ಎಲ್ಲಾ ಅಡುಗೆ ಕೆಲಸವನ್ನು ಅವರೇ ಮುಂದೆ ನಿಂತು ಮಾಡಿದ್ದರು ಎಂದು ಸ್ಮರಿಸಿಕೊಂಡರು.
ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…
ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…
ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…
ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…