ಮೈಸೂರು

ಕುಕ್ಕರಹಳ್ಳಿ ಕೆರೆಗೆ ಸೇರುತ್ತಿರುವ ತ್ಯಾಜ್ಯ ಮಲಿನ ನೀರು ತಡೆಗಟ್ಟುವಂತೆ ಒತ್ತಾಯ

ಮೈಸೂರು : ಕುಕ್ಕರಹಳ್ಳಿ ಕೆರೆಗೆ ತ್ಯಾಜ್ಯ ಮಲಿನ ನೀರು ಸೇರುತ್ತಿರುವುದನ್ನು ತಡೆಗಟ್ಟುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಘಟಕ, ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದೆ.

ಮೈಸೂರಿನ ಗ್ರಾಹಕ ಪರಿಷತ್ ಮನವಿ ಮೇರೆಗೆ ೨೦೨೫ರ ಏ.೧೯ರಂದು ಕುಕ್ಕರಹಳ್ಳಿ ಕೆರೆಗೆ ತೆರಳಿ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಮೈಸೂರು-ಹುಣಸೂರು ರಸ್ತೆಯ ಪಡುವಾರಹಳ್ಳಿ ಕಡೆಯಿಂದ ಕೆರೆಗೆ ಸೇರುವ ಮಲಿನ ನೀರು, ರಂಗಾಯಣ ಕಡೆಯ ಕೆರೆ ನೀರು, ಯುಜಿಸಿ ಅಕಾಡೆಮಿ ತರಬೇತಿ ಸಂಸ್ಥೆ ಭಾಗದಲ್ಲಿ ಪ್ರತ್ಯೇಕವಾಗಿ ಕೆರೆ ನೀರು ಸಂಗ್ರಹಿಸಿ ಪರೀಕ್ಷಿಸಿದಾಗ ‘ಡಿ‌ʼ ವರ್ಗಿಕರಣ ಎಂದು ನಮೂದಾಗಿದೆ. ಬೋಟಿಂಗ್ ಪಾಯಿಂಟ್ ಹಾಗೂ ಪೂರ್ಣಯ್ಯ ನಾಲೆ ಸೇರುವ ಜಾಗದಲ್ಲಿ(ಪಂಪ್‌ಹೌಸ್ ಬಳಿ) ಕೆರೆ ನೀರು ಸಂಗ್ರಹಿಸಿ ಪರೀಕ್ಷಿಸಿದಾಗ ‘ಸಿʼ ವರ್ಗಿಕರಣ ಎಂದು ನಮೂದಾಗಿದೆ ಎಂದು ಮಾಲಿನ್ಯ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಿಸರ್ಗದಲ್ಲಿ ದೊರೆಯುವ ನೀರನ್ನು ಸಂಗ್ರಹಿಸಿ ಬಳಕೆಗೆ ಯೋಗ್ಯವೇ ಎಂದು ವರ್ಗೀಕರಿಸಿದಾಗ, ಸಾಂಪ್ರದಾಯಿಕವಾಗಿ ಸಂಸ್ಕರಿಸದೆ ಸೋಂಕು ನಿವಾರಿಸಿದ ನಂತರ ಕುಡಿಯುವ ನೀರಿನ ಮೂಲವನ್ನಾಗಿ (‘ಎʼ ವರ್ಗಿಕರಣ) ಬಳಸವುದು. ‘ಬಿʼ ವರ್ಗೀಕರಣ ಎಂದಿದ್ದರೆ ನೀರನ್ನು ವ್ಯವಸ್ಥಿತವಾಗಿ ಸ್ನಾನಕ್ಕೆ ಉಪಯೋಗಿಸುವುದು(‘ಬಿ ವರ್ಗಿಕರಣ). ನೀರನ್ನು ಸಂಸ್ಕರಿಸಿ ಹಾಗೂ ಸೋಂಕು ನಿವಾರಿಸಿದ ನಂತರ(ಸಿ ವರ್ಗಿಕರಣ) ಕುಡಿಯುವ ನೀರಿನ ಮೂಲವನ್ನಾಗಿ ಬಳಸಬಹುದು. ನೀರನ್ನು ವರ್ಗೀಕರಿಸಿದಾಗ ‘ಡಿʼ ವರ್ಗಿಕರಣ ಎಂದು ನಮೂದಾದರೆ ಮೀನುಗಾರಿಕೆ ಮತ್ತು ವನ್ಯಜೀವಿಗಳ ಬಳಕೆಗೆ ಯೋಗ್ಯ. ನೀರನ್ನು ವರ್ಗೀಕಸಿದಾಗ ‘ಇ ವರ್ಗೀಕರಣ ಎಂದು ನಮೂದಾದರೆ ನಿಯಂತ್ರಿತ ವಿಲೇವಾರಿ, ಕೈಗಾರಿಕಾ ಶೀತಲೀಕರಣ ಹಾಗೂ ವ್ಯವಸ್ಥಾಯಕ್ಕೆ ಉಪಯೋಗಸುವ ನೀರಿನ ಮೂಲವನ್ನಾಗಿ ಬಳಕೆ ಮಾಡಬಹುದು.

ಈ ವಿಶ್ಲೇಷಣಾ ವರದಿ ಅನ್ವಯ, ವಿವಿಧೆಡೆಯಿಂದ ತಾಜ್ಯ ಮಲಿನ ನೀರು ಕೆರೆಗೆ ಸೇರುತ್ತಿರುವುದರಿಂದ ಕುಕ್ಕರಹಳ್ಳಿ ಕೆರೆಯ ನೀರಿನ ಗುಣಮಟ್ಟದ ಮಾದರಿಯನ್ನು ವಿಶ್ಲೇಷಣೆ ಮಾಡಿದಾಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನೀರಿನ ವರ್ಗೀಕರಣದನ್ವಯ ಕೆಲವೊಮ್ಮೆ ‘ಡಿ ಮತ್ತು ‘ಸಿ ನಲ್ಲಿ ವರ್ಗೀಕರಿಸಲಾಗಿದೆ. ಕಲುಷಿತ ನೀರು ಕೆರೆಗೆ ಸೇರುವುದರಿಂದ ಕೆರೆ ನೀರಿನ ಗುಣಮಟ್ಟವು ದಿನೇದಿನೆ ಕುಂದುತ್ತಿರುವುದರಿಂದ ತ್ಯಾಜ್ಯ ಮಲಿನ ನೀರು ಕೆರೆಗೆ ಸೇರದಂತೆ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

ಕುಕ್ಕರಹಳ್ಳಿ ಕೆರೆಗೆ ತ್ಯಾಜ್ಯ ನೀರು ಸೇರಿ ಮಲಿನವಾಗುವ ಕುರಿತು ಪರೀಕ್ಷೆಗೆ ಎಂಜಿಪಿ ೨೦೨೫ರ ಏ.೧೫ರಂದು ಒತ್ತಾಯಿಸಿತ್ತು. ಕ್ರಮೇಣ ಏ.೧೬ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆರೆ ನೀರಿ ಮಾದರಿ ಸಂಗ್ರಹ. ಏ.೧೯ರಂದು ಕುಕ್ಕರಹಳ್ಳಿ ಕೆರೆ ಮಲಿನ ನೀರು ತಡೆಗಟ್ಟುವಂತೆ ವಿಶ್ಲೇಷಣಾ ವರದಿಯನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಗಿತ್ತು.

ಆಂದೋಲನ ಡೆಸ್ಕ್

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

6 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

7 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

7 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

7 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

7 hours ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

7 hours ago