ಜಿಲ್ಲೆಗಳು

ಹಾಲು : ಸಿಗದ ಪ್ರೋತ್ಸಾಹಧನ

ಮೈಸೂರು ಭಾಗದ ನಾಲ್ಕು ಒಕ್ಕೂಟಗಳಿಂದ ಮಾಹಿತಿ ರವಾನೆ:ಸರ್ಕಾರದಿಂದಲೇ ೧೦೦ ಕೋಟಿ. ರೂ.ವರೆಗೂ ಬಾಕಿ

ಮೈಸೂರು: ರಾಜ್ಯದಲ್ಲಿ ಹಾಲು ಮಾರಾಟದ ದರ ಏರಿಕೆಯಾಗಿ ರೈತರ ಪಾಲು ಹೆಚ್ಚಳದ ಖುಷಿ ಒಂದು ಕಡೆಯಾದರೂ ರೈತರಿಗೆ ಬರಬೇಕಾಗಿರುವ ೫ ರೂ. ಪ್ರೋತ್ಸಾಹಧನದ ಹಾಲಿನ ಬಾಕಿ ಇನ್ನೂ ಬಿಡುಗಡೆಯಾಗಬೇಕಿದೆ. ಏಕೆಂದರೆ ರೈತರಿಗೆ ಸೆಪ್ಟಂಬರ್ ತಿಂಗಳಿನಿಂದಲೇ ಸರ್ಕಾರದ ಪಾಲು ಬಿಡುಗಡೆಯಾಗದೇ ಇರುವುದರಿಂದ ಅತ್ತ ಕಡೆಯೇ ಒಕ್ಕೂಟಗಳು ಮುಖ ಮಾಡಿ ಕುಳಿತಿವೆ.

ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಹಾಲು ಉತ್ಪಾದಕರಿಗೆ ಮೈಮುಲ್‌ನಿಂದ ಕೊಡುತ್ತಿರುವ ೩೨ ರೂ. ಸಾಕಾಗದಿರುವ ಕಾರಣ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವ ೫ ರೂ. ಪ್ರೋತ್ಸಾಹಧನಕ್ಕಾಗಿ ಕಾದು ಕುಳಿತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ನಂತರ ಅತೀ ಹೆಚ್ಚು ಹೈನುಗಾರಿಕೆಯನ್ನೇ ನಂಬಿರುವ ಹಾಲು ಉತ್ಪಾದಕರು ಬ್ಯಾಂಕ್, ಕೈ ಸಾಲ-ಸೋಲ ಮಾಡಿ ಹಸುಗಳನ್ನು ಖರೀದಿಸಿ ಸಾಕುವ ಮೂಲಕ ಡೇರಿಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದಿಷ್ಟು ಆರ್ಥಿಕ ಚೇತರಿಕೆ ಕಂಡು ನೆಮ್ಮದಿಯಿಂದ ಕುಟುಂಬದ ನಿರ್ವಹಣೆ ನಡೆಯುತ್ತಿದೆ. ಹೀಗಿದ್ದರೂ, ಸರ್ಕಾರ ಪ್ರೋತ್ಸಾಹಧನವನ್ನು ಸಕಾಲಕ್ಕೆ ಬಿಡುಗಡೆ ಮಾಡದಿರುವುದರಿಂದ ಹೈನುಗಾರರಿಗೆ ದೊಡ್ಡ ಹೊಡೆತ ಬಿದ್ದಿದೆ.

ಕರ್ನಾಟಕದಲ್ಲಿ ೧೬ ಹಾಲು ಒಕ್ಕೂಟಗಳಿದ್ದು, ೨೫ ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ನಿತ್ಯ ೮೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದಿನದ ಹಾಲಿನ ವಹಿವಾಟಿನ ಪ್ರಮಾಣವೇ ೩೦ ಕೋಟಿ ರೂ.ವರೆಗೂ ಆಗುತ್ತದೆ. ಇದರಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ ೫ ರೂ. ನೀಡುತ್ತಾ ಬರುತ್ತಿದೆ. ಇದು ಆರೇಳು ವರ್ಷದಿಂದ ಏರಿಕೆಯಾಗಿಲ್ಲ. ಈಗಾಗಲೇ ಸೆಪ್ಟಂಬರ್ ಹಾಗೂ ಅಕ್ಟೋಬರ್ ಮಾಹಿತಿ ಸರ್ಕಾರಕ್ಕೆ ಹೋಗಿದ್ದು, ನವೆಂಬರ್ ಮಾಹಿತಿಯನ್ನೂ ಕಳುಹಿಸಲಾಗುತ್ತಿದೆ. ಈ ಮೂರು ತಿಂಗಳ ಬಾಕಿ ಬಿಡುಗಡೆಯಾಗಬೇಕಾಗಿದೆ.

ಮೈಸೂರು ಭಾಗದಲ್ಲಿಯೇ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಒಳಗೊಂಡಂತೆ ಹಾಸನ ಹಾಲು ಒಕ್ಕೂಟಗಳೂ ಹಾಲು ಸಂಗ್ರಹದಲ್ಲಿ ಅತ್ಯುತ್ತಮ ಸಾಧನೆ ಮಾಡಿವೆ. ಕೋವಿಡ್ ನಂತರ ಹಾಲು ಉತ್ಪಾದನೆ ಪ್ರಮಾಣ ಸಹಜ ಸ್ಥಿತಿ ಬಂದಿದೆ. ಆದರೆ ಪ್ರೋತ್ಸಾಹ ಧನ ವಿತರಣೆಯಲ್ಲಿ ಮಾತ್ರ ಸರ್ಕಾರವನ್ನೇ ಕಾಯಬೇಕಾಗಿರುವುದರಿಂದ ಕನಿಷ್ಠ ಮೂರು ತಿಂಗಳಾದರೂ ವಿಳಂಬವಾಗುತ್ತಿದೆ. ಮೈಸೂರು ಭಾಗದಲ್ಲಿಯೇ ಅಂದಾಜು ೯೦ರಿಂದ ೧೦೦ ಕೋಟಿ ರೂ.ಗಳಷ್ಟು ಎನ್ನುವುದು ಒಕ್ಕೂಟಗಳ ವಿವರಣೆ.

ಮೈಸೂರು

ಸಂಘಗಳು- ೧೧೫೬

ನಿತ್ಯ ಹಾಲು ಪ್ರಮಾಣ- ೬.೫೦ ಲಕ್ಷ ಲೀ

ಸದಸ್ಯರು- ೯೬ ಸಾವಿರ

ದರ- ೩೨ ರೂ.

ಬಾಕಿ- ೩೦ ಕೋಟಿ ರೂ.


ಮಂಡ್ಯ 

ಸಂಘಗಳು-೧೨೭೪

ಹಾಲು ಪ್ರಮಾಣ- ೯ ಲಕ್ಷ ಲೀ

ಸದಸ್ಯರು- ೧,೦೨,೦೦೦

ದರ- ೩೨ ರೂ.

ಬಾಕಿ- ೩೫ ಕೋಟಿ ರೂ.


 

ಚಾಮರಾಜನಗರ

ಸಂಘಗಳು-೪೬೫

ಹಾಲು ಪ್ರಮಾಣ- ೨.೧೦ ಲಕ್ಷ ಲೀ.

ಸದಸ್ಯರು-೩೨ ಸಾವಿರ

ದರ- ೩೨ ರೂ.

ಬಾಕಿ- ೨.೮ ಕೋಟಿ ರೂ.


 

ಕೊಡಗು

ಸಂಘಗಳು- ೩೮

ಹಾಲು ಪ್ರಮಾಣ-

ಸದಸ್ಯರು-೨೭೦೦

ದರ- ೩೨ ರೂ.

ಬಾಕಿ-

 

 

andolanait

Recent Posts

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

9 hours ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

22 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

22 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

23 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

23 hours ago