ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟದ ಕಾರ್ಯದರ್ಶಿ ಚಂದನ್ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಎನ್ನುವುದು ಸಂವಿಧಾನಕ್ಕೆ ವಿರದ್ಧವಾಗಿದ್ದು, ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರು ಮಾಂಸಾಹಾರವು ತಂಬಾಕು, ಮಧ್ಯದಂತೆಯೇ ದುಶ್ಚಟಗಳು ಎಂದು ಪರಿಬಿಂಭಿಸುವ ಪ್ರಯತ್ನ ನಡೆಸಿದ್ದು, ಮಾಂಸಾಹಾರ ನಿಕೃಷ್ಠವಲ್ಲ ಎಂದು ಪ್ರತಿರೋಧ ಒಡ್ಡುವ ಅವಶ್ಯಕತೆಯಿದೆ ಎಂದರು.
ಎಲ್ಲರ ಆಹಾರ ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸಬೇಕು. ಆಹಾರ ಸಮಾನತೆ ಎಲ್ಲರೂ ಮನಗಾಣಬೇಕು. ಜಿಲ್ಲಾಡಳಿತ ಮಾಂಸಾಹಾರದ ಆಯೋಜನೆ ಮಾಡಬೇಕು. ಇಲ್ಲವಾದಲ್ಲಿ ಪ್ರಗತಿಪರ ಸಂಘಟನೆಗಳು ಸಂಘಟಿತವಾಗಿ ಮಾಂಸಾಹಾರ ಒದಗಿಸುವ ಕಾರ್ಯಕ್ಕೆ ಅಖಿಲ ಭಾರತ ವಕೀಲರ ಒಕ್ಕೂಟ ಕೈಜೋಡಿಸಲಿದೆ ಎಂಬ ಸಂದೇಶ ರವಾನಿಸಿದರು.
ಅಧ್ಯಕ್ಷ ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ, ಸಸ್ಯಹಾರ ಶ್ರೇಷ್ಟ, ಮಾಂಸಾಹಾರ ನಿಕೃಷ್ಠ ಎಂಬ ಸಣ್ಣನೆಯ ಪ್ರವಾಹ ಸೃಷ್ಠಿಯಾಗುತ್ತಿದೆ. ಕೋಮುವಾದ ದಳ್ಳೂರಿಯ ನಡುವೆ ಆಹಾರ ಕುರಿತಂತೆ ಬೀದಿ ದಾಳಿಗಳು ನಡೆಯುತ್ತಿವೆ. ಎಲ್ಲಿಯೂ ಮಾಸಹಾರ ನಿಶಿದ್ಧ ಎಂದು ಸಂವಿಧಾನದಲ್ಲಿ ಒಂದು ಪದವೂ ಇಲ್ಲ. ಈ ರೀತಿಯ ಬೇದಭಾವ ಸಲ್ಲದು ಎಂದು ಹೇಳಿದರು.
ಬಹುಸಂಖ್ಯಾತ ಮಾಂಸಹಾರಿಗಳಿಗೆ ಬೇದಭಾವ ತೋರಲಾಗುತ್ತಿದೆ. ಸಸ್ಯಹಾರ, ಮಾಂಸಹಾರ ಎರಡಕ್ಕೂ ಅವಕಾಶ ನೀಡಬೇಕು. ಮಾಂಸಾಹಾರದ ಪರವಾಗಿ ನಡೆಯುತ್ತಿರುವ ಚಳುವಳಿಯ ಮಾತುಗಳಿಗೆ ಪ್ರಭುತ್ವ ಸ್ಪಂಧಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದ ಉಸ್ತುವಾರಿ ವಹಿಸಿರುವವರು ಹಾಗೂ ಪ್ರಭುತ್ವ ಆಹಾರ ಸಂಬಂಧ ಮನವಿಯನ್ನು ಗಮನಿಸಿ, ಧನಾತ್ಮಕ ನಿರ್ಧಾರವನ್ನು ಕೂಡಲೇ ಕೈಗೊಳ್ಳಬೇಕು. ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ಸದರಿ ಮನವಿಯನ್ನು ಮುಂದಿಟ್ಟು ಕಾರ್ಯಗತಗೊಳಿಸಲಾಗದಷ್ಟು ಅಶಕ್ತರೇ ಎಂಬ ಪ್ರಶ್ನೆ ಮೂಡದಂತೆ ಕ್ರಿಯಾಶೀಲತೆಯನ್ನು ತೋರಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿ ಜೆ.ರಾಮಯ್ಯ, ಒಕ್ಕೂಟದ ವಿದ್ಯಾರ್ಥಿ ನಾಯಕರುಗಳಾದ ಆಕಾಶ್, ಸುಚೀಂದ್ರ, ವಕೀಲರಾದ ಚೇತನ್, ಕಿಶೋರ್ ಇದ್ದರು.
ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…
ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…
ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…
ನವದೆಹಲಿ: ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…
ಕೋಯಿಕ್ಕೋಡ್: ವಯನಾಡು, ಕೋಯಿಕ್ಕೋಡ್ನಲ್ಲಿ ಶಿಗೆಲ್ಲಾ ವೈರಸ್ ಸೋಂಕು ಹರಡಿರುವ ನಡುವೆ ನಿಫಾ ವೈರಸ್ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…
ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.…