ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟದ ಕಾರ್ಯದರ್ಶಿ ಚಂದನ್ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಎನ್ನುವುದು ಸಂವಿಧಾನಕ್ಕೆ ವಿರದ್ಧವಾಗಿದ್ದು, ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರು ಮಾಂಸಾಹಾರವು ತಂಬಾಕು, ಮಧ್ಯದಂತೆಯೇ ದುಶ್ಚಟಗಳು ಎಂದು ಪರಿಬಿಂಭಿಸುವ ಪ್ರಯತ್ನ ನಡೆಸಿದ್ದು, ಮಾಂಸಾಹಾರ ನಿಕೃಷ್ಠವಲ್ಲ ಎಂದು ಪ್ರತಿರೋಧ ಒಡ್ಡುವ ಅವಶ್ಯಕತೆಯಿದೆ ಎಂದರು.
ಎಲ್ಲರ ಆಹಾರ ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸಬೇಕು. ಆಹಾರ ಸಮಾನತೆ ಎಲ್ಲರೂ ಮನಗಾಣಬೇಕು. ಜಿಲ್ಲಾಡಳಿತ ಮಾಂಸಾಹಾರದ ಆಯೋಜನೆ ಮಾಡಬೇಕು. ಇಲ್ಲವಾದಲ್ಲಿ ಪ್ರಗತಿಪರ ಸಂಘಟನೆಗಳು ಸಂಘಟಿತವಾಗಿ ಮಾಂಸಾಹಾರ ಒದಗಿಸುವ ಕಾರ್ಯಕ್ಕೆ ಅಖಿಲ ಭಾರತ ವಕೀಲರ ಒಕ್ಕೂಟ ಕೈಜೋಡಿಸಲಿದೆ ಎಂಬ ಸಂದೇಶ ರವಾನಿಸಿದರು.
ಅಧ್ಯಕ್ಷ ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ, ಸಸ್ಯಹಾರ ಶ್ರೇಷ್ಟ, ಮಾಂಸಾಹಾರ ನಿಕೃಷ್ಠ ಎಂಬ ಸಣ್ಣನೆಯ ಪ್ರವಾಹ ಸೃಷ್ಠಿಯಾಗುತ್ತಿದೆ. ಕೋಮುವಾದ ದಳ್ಳೂರಿಯ ನಡುವೆ ಆಹಾರ ಕುರಿತಂತೆ ಬೀದಿ ದಾಳಿಗಳು ನಡೆಯುತ್ತಿವೆ. ಎಲ್ಲಿಯೂ ಮಾಸಹಾರ ನಿಶಿದ್ಧ ಎಂದು ಸಂವಿಧಾನದಲ್ಲಿ ಒಂದು ಪದವೂ ಇಲ್ಲ. ಈ ರೀತಿಯ ಬೇದಭಾವ ಸಲ್ಲದು ಎಂದು ಹೇಳಿದರು.
ಬಹುಸಂಖ್ಯಾತ ಮಾಂಸಹಾರಿಗಳಿಗೆ ಬೇದಭಾವ ತೋರಲಾಗುತ್ತಿದೆ. ಸಸ್ಯಹಾರ, ಮಾಂಸಹಾರ ಎರಡಕ್ಕೂ ಅವಕಾಶ ನೀಡಬೇಕು. ಮಾಂಸಾಹಾರದ ಪರವಾಗಿ ನಡೆಯುತ್ತಿರುವ ಚಳುವಳಿಯ ಮಾತುಗಳಿಗೆ ಪ್ರಭುತ್ವ ಸ್ಪಂಧಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದ ಉಸ್ತುವಾರಿ ವಹಿಸಿರುವವರು ಹಾಗೂ ಪ್ರಭುತ್ವ ಆಹಾರ ಸಂಬಂಧ ಮನವಿಯನ್ನು ಗಮನಿಸಿ, ಧನಾತ್ಮಕ ನಿರ್ಧಾರವನ್ನು ಕೂಡಲೇ ಕೈಗೊಳ್ಳಬೇಕು. ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ಸದರಿ ಮನವಿಯನ್ನು ಮುಂದಿಟ್ಟು ಕಾರ್ಯಗತಗೊಳಿಸಲಾಗದಷ್ಟು ಅಶಕ್ತರೇ ಎಂಬ ಪ್ರಶ್ನೆ ಮೂಡದಂತೆ ಕ್ರಿಯಾಶೀಲತೆಯನ್ನು ತೋರಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿ ಜೆ.ರಾಮಯ್ಯ, ಒಕ್ಕೂಟದ ವಿದ್ಯಾರ್ಥಿ ನಾಯಕರುಗಳಾದ ಆಕಾಶ್, ಸುಚೀಂದ್ರ, ವಕೀಲರಾದ ಚೇತನ್, ಕಿಶೋರ್ ಇದ್ದರು.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…