ಜಿಲ್ಲೆಗಳು

KSOU 2013-14, 2014-15 ಸಾಲಿನ ವಿದ್ಯಾರ್ಥಿಗಳಿಗೆ ಕೊನೆಗೂ ನೆಮ್ಮದಿ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ೨೦೧೩-೧೪, ೨೦೧೪-೨೦೧೫ ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ ಇನ್‌ಹೌಸ್ ಅಡ್ಮಿಟೆಡ್ ನಾನ್ ಟೆಕ್ನಿಕಲ್ ಕೋರ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಗುರುವಾರ ಸಿಹಿ ಸುದ್ಧಿ ನೀಡಿದೆ.

ಕರಾಮುವಿ ೨ ತಿಂಗಳ ಅವಧಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಉಚ್ಚ ನ್ಯಾಯಾಲಯ  ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಹಿನ್ನೆಲೆ ಇಂತಿದೆ.

೨೦೧೩ ನೇ ಸಾಲಿಗಿಂತ ಹಿಂದಿನ ಮಾನ್ಯತೆ ಇದ್ದ ಅವದಿಯ ವಿವಿ ಪದವಿಗಳನ್ನೂ ತಿರಸ್ಕರಿಸುತ್ತಿದ್ದ ಕಾರಣ ರಾಜ್ಯ ಸರ್ಕಾರ ಹಾಗೂ ಕೆಪಿಎಸ್‌ಸಿ ವಿರುದ್ದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ( ಡಬ್ಲ್ಯುಪಿ ೩೪೨೫೫/೨೦೧೬ರ ೨೭.೬.೨೦೧೭). ಪ್ರಕರಣದಲ್ಲಿ ವಿವಿ ಪರ ತೀರ್ಪಿನಂತೆ ವಿವಿ ಪದವೀದರನ್ನು ಪರಿಗಣಿಸಲು ಅನುಕೂಲ ಮಾಡಿಕೊಡಲಾಗಿತ್ತು.

ಕರಾಮುವಿ ಶಿಕ್ಷಕೇತರ ನೌಕರರ ಸಂಘ(ರಿ) ಸಲ್ಲಿಸಿರುವ ಡಬ್ಲ್ಯುಪಿ ೪೮೩೭೯/೨೦೧೭ ಪ್ರಕರಣದಲ್ಲಿನ ೦೧.೦೨.೨೦೧೮ರ ಮಧ್ಯಂತರ ಆದೇಶ  ಅನ್ವಯ ರಾಜ್ಯ ಸರ್ಕಾರ ೦೩.೦೫.೨೦೧೮ ರಂದು ಆದೇಶ ಹೊರಡಿಸಿ ಕರಾಮುವಿಯ ೨೦೧೩-೧೪, ೨೦೧೪-೨೦೧೫ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ ಇನ್‌ಹೌಸ್ ಅಡ್ಮಿಟೆಡ್ ನಾನ್ ಟೆಕ್ನಿಕಲ್ ಕೋರ್ಸ್ ವಿದ್ಯಾರ್ಥಿಗಳ ಪದವಿಗಳನ್ನು ನೇಮಕಾತಿ/ಬಡ್ತಿ ಹಾಗೂ ಉನ್ನತ ವ್ಯಾಸಂಗಕ್ಕೆ ಪರಿಗಣಿಸಲು ಆದೇಶಿಸಿತ್ತು. ಈ ಅವಧಿಯಲ್ಲಿ ಕುಲಪತಿಯಾಗಿದ್ದ ಪ್ರೊ.ಶಿವಲಿಂಗಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆ ಮೂಲಕ ಅವರ ಹಿಂದಿನ  ಶ್ರಮವೂ ನ್ಯಾಯಾಲಯದ ಈ ಆದೇಶಕ್ಕೆ ಕಾರಣವಾಗಿದೆ.

ಮೇಲಿನ ತೀರ್ಪಿಗೊಳಪಟ್ಟಿರುವ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ಆಧಾರದಲ್ಲಿ ವಿವಿಯು ೨೦೧೯ ರಿಂದಲೂ ಅಂಕಪಟ್ಟಿ ಹಾಗೂ ಪ್ರಾವಿಷನಲ್ ಪಾಸ್ ಸರ್ಟಿಫಿಕೇಟ್ ನೀಡುತ್ತಾ ಬರುತ್ತಿದೆ.

ಪ್ರಸ್ತುತ ೦೩.೦೮.೨೦೨೨ರ ಸಾಮಾನ್ಯ ಆದೇಶಕ್ಕೆ ಒಳಪಟ್ಟಿರುವ  ಒಳಪಟ್ಟಿರುವ ೨೦೧೩-೧೪ ಮತ್ತು ೨೦೧೪-೧೫ ಇನ್ ಹೌಸ್ ವಿದ್ಯಾರ್ಥಿಗಳ ಈ ಪ್ರಕರಣಗಳಲ್ಲಿ ಯುಜಿಸಿ ವಿರುದ್ಧ ಮುಖ್ಯ ಮನವಿ  ಇದ್ದು, ಅವರ ಶಿಕ್ಷಣ ಕ್ರಮ ಮತ್ತು ಪದವಿಗಳು ತಾಂತ್ರಿಕವಾಗಿ ನಿಯಮಾನುಸಾರ ವಿದ್ದುದರಿಂದ ಹಾಗೂ ಯುಜಿಸಿ ತಜ್ಞರ ಸಮಿತಿ ವಿವಿಯಿಂದ ನೇರವಾಗಿ ನಿರ್ವಹಿಸಲ್ಪಡುವ ಈ ಪ್ರವೇಶಾತಿ/ ಪದವಿಗಳ ಬಗ್ಗೆ ಯಾವುದೇ ತಕರಾರು ವ್ಯಕ್ತಪಡಿಸದಿದ್ದುದರಿಂದ ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿಯೇ ವಿವಿ ಪರವಾದ ಹಾಗೂ ದಾಖಲೆಗಳನ್ನು ಮಂಡಿಸಲಾಗಿದ್ದು ಈ ದಿವಸ ಈ ಮಹತ್ವದ ತೀರ್ಪಿಗೆ ದಾರಿಯಾಗಿದೆ.

ತೀರ್ಪಿನಲ್ಲಿ, ಕರಾಮುವಿಯು ೨ ತಿಂಗಳ ಅವಧಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆ ಸೂಚಿಸಿದೆ.

ಯುಜಿಸಿ, ೬ ವಾರಗಳ ಅವದಿಯೊಳಗೆ ವಿಚಾರಣೆಯನ್ನು ನಡೆಸಿ ಕರಾಮುವಿಯ ಒಡಿಎಲ್  ಮತ್ತು ಇನ್ ಹೌಸ್ ವ್ಯವಸ್ಥೆಯ ಮೂಲಕ ರಿಟ್ ಅರ್ಜಿದಾರರ ವ್ಯಾಸಂಗವಾಗಿದೆಯೇ, ಈ ಸಂದರ್ಭದಲ್ಲಿ ವಿವಿಯಿಂದ ಯುಜಿಸಿಯ ನಿಯಮಗಳು, ಶೈಕ್ಷಣಿಕ ಮಾನದಂಡಗಳೇನಾದರೂ ಉಲ್ಲಂಘನೆಯಾಗಿವೆಯೇ ಎಂಬುದನ್ನು ಪರಿಶೀಲಿಸಿ ಮಾನ್ಯತೆ ನೀಡಲು ಪರಿಗಣಿಸತಕ್ಕದ್ದು ಹಾಗೂ ಈ ಪ್ರಕ್ರಿಯೆಗೆ ಕರಾಮುವಿಯು ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದೆಂದು ಆದೇಶಿಸಿದೆ.

andolanait

Recent Posts

ಪರ್ಯಾಯ ವ್ಯವಸ್ಥೆ ಕಲ್ಪಿಸಿ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಆಡಳಿತ ಇದೀಗ…

25 mins ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂವಹನ ಕೊರತೆಯಿಂದ ಪಟ್ಟಕ್ಕೆ ಕುತ್ತು

ರಾಮಕೃಷ್ಣ ಹೆಗಡೆ, ದೇವೇಗೌಡರನ್ನು ನಿರ್ಲಕ್ಷಿಸಿ ಅಧಿಕಾರ ಕಳೆದುಕೊಂಡ ಎಸ್.ಆರ್.ಬೊಮ್ಮಾಯಿ ರಾಜಕಾರಣದಲ್ಲಿ ಸಂವಹನ ಬಹಳ ಮುಖ್ಯ.ಅದರಲ್ಲೂ ಮುಖ್ಯಮಂತ್ರಿ ಹುದ್ದೆಗೇರುವ ನಾಯಕರಿಗೆ ಸಂವಹನ…

28 mins ago

ಚಾಮರಾಜೇಶ್ವರ ರಥೋತ್ಸವಕ್ಕೆ ದ್ವಿಶತಮಾನದ ನವೋತ್ಸಾಹ

ಸಿ.ಎಂ.ನರಸಿಂಹಮೂರ್ತಿ  ಚಾಮರಾಜನಗರ ವನಸಿರಿ ಪ್ರಕೃತಿ ಮಾತೆಯ ತವರೂರು. ವನ್ಯ ಸಂಪತ್ತಿನ ತಾಣ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕ…

33 mins ago

ಕೆ.ಆರ್.ಪೇಟೆ: ಶೇ.19ರಷ್ಟು ಮಳೆ ಕೊರತೆ

ಆರ್.ಶ್ರೀನಿವಾಸ್ ತಾಲ್ಲೂಕಿನಲ್ಲಿ ೩೭,೬೭೧ ಹೆಕ್ಟೇರ್ ಪೈಕಿ ೬,೨೯೦ ಹೆ.ನಲ್ಲಿ ಮಾತ್ರ ಬಿತ್ತನೆ ಕಾರ್ಯ ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನ ಜ.೧ರಿಂದ…

38 mins ago

ಯುಜಿ, ಎಬಿ ಕೇಬಲ್ ಅಳವಡಿಕೆಯೊಂದೇ ಪರಿಹಾರ

ನವೀನ್ ಡಿಸೋಜ ಕೊಡಗಿನಲ್ಲಿ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಬೇಕಿದೆ ಬಹುದೊಡ್ಡ ಮೊತ್ತ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…

43 mins ago

ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಹಣ ವಸೂಲಿ ದಂಧೆ?

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಬಂಡೀಪುರ ಸಮೀಪದ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಸರಕು ಸಾಗಣೆ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ…

48 mins ago