ಸಿ.ಎಂ.ನರಸಿಂಹಮೂರ್ತಿ
ಚಾಮರಾಜನಗರ ವನಸಿರಿ ಪ್ರಕೃತಿ ಮಾತೆಯ ತವರೂರು. ವನ್ಯ ಸಂಪತ್ತಿನ ತಾಣ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕ ತಿಕ ಪರಂಪರೆ ಬೆನ್ನಿಗಿರುವ ಜೀವಂತ ಸಂಸ್ಕೃತಿಯ ಜಾನಪದ ಕಲೆಗಳ ಕಣಜ.
ಮೂಲತಃ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರದ ಪುರಾತನ ಹೆಸರು ಅರಿಕೊಠಾರ. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಚಾಮರಾಜ ಒಡೆಯರ್ ಅವರ ಜನ್ಮ ಸ್ಥಳವಿದು. ಕ್ರಿ.ಶ.೧೭೭೪ರಲ್ಲಿ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ್ದರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ಸ್ಮರಣಾರ್ಥ ಈ ನಗರಕ್ಕೆ ಚಾಮರಾಜನಗರ ಎಂದು ನಾಮಕರಣ ಮಾಡಿದರು.
ಈ ಪ್ರದೇಶವು ತನ್ನದೇ ಆದ ಐತಿಹಾಸಿಕ ವಿಚಾರವನ್ನು ಒಳಗೊಂಡಿದೆ. ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು ಯದುವಂಶದ ರಾಜರು ಈ ರಾಜ್ಯವನ್ನಾಳಿರುವ ಬಗ್ಗೆ ಅನೇಕ ಶಾಸನಗಳಲ್ಲಿ ನಾವು ಇಂದಿಗೂ ಕಾಣಬಹುದಾಗಿರುತ್ತದೆ. ಚಾಮರಾಜನಗರ ಹೃದಯ ಭಾಗವಾದ ಚಾಮರಾಜೇಶ್ವರನೇ ಈ ಜಿಲ್ಲೆಯ ಅಧಿದೇವತೆ. ಶತಮಾನಗಳ ಇತಿಹಾಸವಿರುವ ಅರಿಕೊಠಾರ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ನಗರದ ನೈಋತ್ಯ ದಿಗ್ಭಾಗದಲ್ಲಿ ಕರಿವರದ ವೆಂಕಟನಾರಾಯಣ ಸ್ವಾಮಿಗೆ ಅಂದಿನ ಅರಿಕೊಠಾರದ ಪ್ರಭುವಾಗಿ ಹಿರಿ ಚೆನ್ನರಾಜ ರಾಜ್ಯಭಾರ ನಡೆಸುತ್ತಿದ್ದ. ಶಾಲಿವಾಹನ ಶಕ ೧೬೮೮ರಲ್ಲಿ ಅಲ್ಲಿನ ಪಾಕಶಾಲೆಯ ಶಾಸನ ಒಂದರಲ್ಲಿ ಅರಿಕೊಠಾರ ಎಂಬ ಸ್ಥಳದ ಬಗ್ಗೆ ಉಲ್ಲೇಖವಿದೆ. ಇಲ್ಲಿನ ವೀರಭದ್ರಸ್ವಾಮಿ ದೇವಾಲಯದಲ್ಲಿರುವ ಕ್ರಿ.ಶ.೧೫೨೭ರ ಶಾಸನವೊಂದರಲ್ಲಿ ವೀರ ವೆಂಕಟಪತಿ ಮಹದೇವರಾಯರು ಈ ಅರಿಕೊಠಾರದ ರಾಜರಾಗಿದ್ದು, ಈ ದೇವಾಲಯಕ್ಕೆ ದತ್ತಿ ನೀಡಿದ ವಿಚಾರವಿರುವ ಶಾಸನದಲ್ಲಿ ಅರಿಕೊಠಾರ ಎಂಬ ಶಬ್ದ ಉಲ್ಲೇಖವಿರುವುದನ್ನು ಗಮನಿಸಬಹುದು. ಅರಿ ಎಂದರೆ ಧಾನ್ಯಗಳೆಂದೂ, ಕೊಠಾರ ಎಂದರೆ ರಾಶಿ ಎಂದೂ ಅರ್ಥ ಇರುವುದರಿಂದ ಅರಿಕೊಠಾರ ಎಂದರೆ ಧಾನ್ಯಗಳನ್ನು ಒಕ್ಕಣೆ ಮಾಡುವ ಜಾಗ ಎಂಬ ಅರ್ಥ ಇದೆ.
ಯದುವಂಶದ ಮಹಾರಾಜರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ೧೭೯೯ರಿಂದ ೧೮೬೮ರವರೆಗಿನ ಆಡಳಿತಾವಧಿಯಲ್ಲಿ, ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯವನ್ನು ಜನನ ಮಂಟಪದ ಪೂರ್ವ ಭಾಗದಲ್ಲಿ ೫ ಎಕರೆಗೂ ಹೆಚ್ಚು ವಿಶಾಲವಾದ ಪ್ರದೇಶದಲ್ಲಿ ಶೈವಾಗಮಾನುಸಾರ ದ್ರಾವಿಡ ಶೈಲಿಯನ್ನನುಸರಿಸಿ ನವ ಬೇರಯುಕ್ತವಾದ ಶಿವ ದೇವಾಲಯವನ್ನು ನಿರ್ಮಿಸಿದರು. ಕ್ರಿ.ಶ.೧೮೨೬ರಲ್ಲಿ ಶೃಂಗೇರಿ ಮಠದಲ್ಲಿದ್ದ ಒಂದು ರಕ್ತವರ್ಣದ ಲಿಂಗವನ್ನು ತರಿಸಿ, ಚಾಮರಾಜೇಶ್ವರ ಹೆಸರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಹೆಸರನ್ನೇ ಪ್ರಧಾನವಾಗಿ ಪರಿಗಣಿಸಿ ಅರಿಕೊಠಾರವನ್ನು ಚಾಮರಾಜನಗರ’ ಎಂದು ಪರಿವರ್ತಿಸಲಾಯಿತು.
ಸುಂದರ ವಿಶಾಲ ಪ್ರಾಂಗಣ, ನಯನ ಮನೋಹರ ೭೫ ಅಡಿಗಳ ಪಂಚ ಸ್ಪರ್ಶಾಯುಕ್ತ, ರಾಜಗೋಪುರ ವೈವಿಧ್ಯಮಯ ಕಲಾಕುಸುರಿಗಳು ಆಂತರಿಕ ಗರ್ಭಗುಡಿಗಳು ಈ ದೇವಾಲಯದ ವೈಶಿಷ್ಟ್ಯಗಳು. ಈ ದೇವಾಲಯದಲ್ಲಿ ಪ್ರತಿವರ್ಷ ಜ್ಯೇಷ್ಠ ಆಷಾಢ ಮಾಸದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವು ೫-೬ ದಿವಸಗಳು ವಿಶೇಷವಾಗಿ ಆಚರಿಸಲ್ಪಡುತ್ತದೆ. ಅಲ್ಲದೆ, ಹಲವಾರು ಧಾರ್ಮಿಕ ಉತ್ಸವಗಳು, ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಎಡೆಬಿಡದೆ ನಡೆದುಕೊಂಡು ಬರುತ್ತಿವೆ.
ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವವು ಪ್ರತಿ ವರ್ಷವೂ ಆಷಾಢ ಮಾಸದ ಪೂರ್ವಾಷಾಢ ನಕ್ಷತ್ರದಂದು ನಡೆಯುತ್ತದೆ. ನಾಡಿನಲ್ಲಿಯೇ ಆಷಾಢಮಾಸದಲ್ಲಿ ನಡೆಯುವ ಏಕೈಕ ಜಾತ್ರಾ ಮಹೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಚಾಮರಾಜೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ, ಹೊಸದಾಗಿ ಮದುವೆಯಾದ ದಂಪತಿ ಸಹಸ್ರಾರು ಸಂಖ್ಯೆಯಲ್ಲಿ ಈ ರಥೋತ್ಸವದಲ್ಲಿ ಪಾಲ್ಗೊಡು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು ಜವನವನ್ನು ರಥಕ್ಕೆ ಎಸೆದು ಪ್ರಾರ್ಥನೆ ಮಾಡುವುದು ಸಂಪ್ರದಾಯವಾಗಿದೆ. ಒಟ್ಟಿನಲ್ಲಿ ರಥೋತ್ಸವ ಸಾರ್ವತ್ರಿಕ ಜಾನಪದ ಸಾಂಸ್ಕ ತಿಕ ವಿಶಿಷ್ಟವಾದ ಸಂಪ್ರದಾಯವಾಗಿದೆ.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಒಳಗೆ ಇರುವ ಶಿಲಾಶಾಸನದಲ್ಲಿ ಇದರ ಉಲ್ಲೇಖವಿದೆ. ನಮ್ಮ ನಾಡಿನಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹೊರತಾಗಿ ಇಷ್ಟು ಬೃಹದಾಕಾರವುಳ್ಳ ದ್ರಾವಿಡ ಶೈಲಿಯಲ್ಲಿ ಇರುವ ಎರಡನೆಯದು ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯ ಎನ್ನಲಾಗಿದೆ.
” ಚಾಮರಾಜನಗರದಲ್ಲಿ ೨೦೨೬ ಜುಲೈ ೨೮ ರಂದು ೨೦೦ನೇ ವರ್ಷದ ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ. ನವ ದಂಪತಿ ಸೇರಿದಂತೆ ಬಹುತೇಕ ಎಲ್ಲ ವಯೋಮಾನದವರೂ ರಥೋತ್ಸವದಲ್ಲಿ ಪಾಲ್ಗೊಳ್ಳಲು ಸಂಭ್ರಮದಿಂದ ಸಿದ್ಧತೆ ನಡೆಸಿದ್ದಾರೆ.”
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಆಡಳಿತ ಇದೀಗ…
ರಾಮಕೃಷ್ಣ ಹೆಗಡೆ, ದೇವೇಗೌಡರನ್ನು ನಿರ್ಲಕ್ಷಿಸಿ ಅಧಿಕಾರ ಕಳೆದುಕೊಂಡ ಎಸ್.ಆರ್.ಬೊಮ್ಮಾಯಿ ರಾಜಕಾರಣದಲ್ಲಿ ಸಂವಹನ ಬಹಳ ಮುಖ್ಯ.ಅದರಲ್ಲೂ ಮುಖ್ಯಮಂತ್ರಿ ಹುದ್ದೆಗೇರುವ ನಾಯಕರಿಗೆ ಸಂವಹನ…
ಆರ್.ಶ್ರೀನಿವಾಸ್ ತಾಲ್ಲೂಕಿನಲ್ಲಿ ೩೭,೬೭೧ ಹೆಕ್ಟೇರ್ ಪೈಕಿ ೬,೨೯೦ ಹೆ.ನಲ್ಲಿ ಮಾತ್ರ ಬಿತ್ತನೆ ಕಾರ್ಯ ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನ ಜ.೧ರಿಂದ…
ನವೀನ್ ಡಿಸೋಜ ಕೊಡಗಿನಲ್ಲಿ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಬೇಕಿದೆ ಬಹುದೊಡ್ಡ ಮೊತ್ತ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಬಂಡೀಪುರ ಸಮೀಪದ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಸರಕು ಸಾಗಣೆ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ…
ಮಂಜು ಕೋಟೆ ಕೋಟೆ: ಜು.೨೬ರಂದು ಚುನಾವಣೆ; ನಾಮಪತ್ರ ಸಲ್ಲಿಕೆ ಶುರು; ಮುಖಂಡರಿಂದ ಕಾರ್ಯತಂತ್ರ ಎಚ್.ಡಿ.ಕೋಟೆ: ತಾಲ್ಲೂಕಿನ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ…