ಮೃತಪಟ್ಟ ಮೆಚ್ಚಿನ ಆನೆಯ ನೆನೆದು ಕಣ್ಣೀರಾದ ಕಾವಾಡಿ ಮಂಜು
ದಾ.ರಾ.ಮಹೇಶ್
ವೀರನಹೊಸಹಳ್ಳಿ: ‘ಗೋಪಾಲಸ್ವಾಮಿ ಒಂದು ಆನೆ ಮಾತ್ರವಲ್ಲ, ಆಟದ ಸಂಗಾತಿ, ನಮ್ಮ ಮನೆಯ ಸದಸ್ಯನಂತೆ ಕೂಡ ಇತ್ತು. ಅದನ್ನು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬ ಸದಸ್ಯರೊಬ್ಬರನ್ನೇ ಕಳೆದುಕೊಂಡಂತಹ ನೋವು ಉಂಟಾಗಿದೆ’.
ಈಚೆಗೆ ಕಾಡಾನೆ ಜತೆ ಕಾದಾಟದಲ್ಲಿ ಮೃತಪಟ್ಟ ಗೋಪಾಲಸ್ವಾಮಿ ಆನೆಯ ಕಾವಾಡಿ ಮಂಜು ಅವರು ತಮ್ಮ ಮತ್ತು ಗೋಪಾಲಸ್ವಾಮಿ ನಡುವೆ ಇದ್ದ ಆತ್ಮೀಯತೆಯನ್ನು ವರ್ಣಿಸಿದ್ದು ಹೀಗೆ.
ಅಗಲಿದ ಗಜರಾಜನ ನೆನೆದು ಪತ್ರಿಕೆಯೊಡನೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಾವಾಡಿ ಮಂಜು, ಬೃಹತ್ ಕಾಯ್ದೆ ಆನೆಯಿರಲಿ, ಪುಟ್ಟ ಗಾತ್ರದ ಅಳಿಲೇ ಇರಲಿ, ಮನುಷ್ಯ ಕೊಂಚ ಅಕ್ಕರೆ ತೋರಿದರೂ ಸಾಕು, ಬದಲಿಗೆ ಆತನಿಗೆ ನಿಷ್ಕಲ್ಮಶ ಪ್ರೀತಿಯ ಖಜಾನೆಯನ್ನೇ ಮರಳಿಸುತ್ತವೆ. ಪ್ರಾಣಿ ಮತ್ತು ಮನುಷ್ಯನ ಗಾಢ ಸ್ನೇಹ ಎಂತಹ ಕಟುಕರ ಮನಸ್ಸನ್ನೂ ಭಾವುಕವಾಗಿಸಬಲ್ಲದು. ಅಂತಹ ಅಪರೂಪದ ನಡುವಿನ ಸ್ನೇಹ ನಮ್ಮದು ಎಂದು ತಮ್ಮ ಅಚ್ಚುಮೆಚ್ಚಿನ ಆನೆಯ ಬಗ್ಗೆ ಹೇಳುತ್ತಾ ಭಾವುಕರಾದರು.
ಹಲವು ವರ್ಷಗಳ ಕಾಲ ಅಕ್ಕರೆಯಿಂದ ನೋಡಿಕೊಂಡ ಗಜರಾಜನಿಗೆ ವಿದಾಯ ಹೇಳುವ ಸಮಯ ಬಂದಾಗ, ನನ್ನ ಕಣ್ಣಾಲಿಗಳು ತುಂಬಿ ಬಂದವು ಎಂದು ಸುಮಾರು ಹತ್ತು ವರ್ಷ ಕಾಲ ಆನೆಗಳನ್ನು ನೋಡಿಕೊಳ್ಳುತ್ತಿದ್ದ ಮಂಜು ಹೇಳಿದರು.
ಅದು ಎಷ್ಟು ವಿಧೇಯ ಆನೆೆಯೇ ಆಗಿತ್ತು ಎಂದರೆ, ಅದಕ್ಕೆ ಯಾವತ್ತೂ ಏಟು ಹೊಡೆದಿಲ್ಲ. ಗದರಿದ ಪ್ರಸಂಗವು ಕೂಡ ಇಲ್ಲ. ರಾಜ್ಯದಲ್ಲೇ ಅಲ್ಲದೆ ಅಂತರ ರಾಜ್ಯದಲ್ಲೂ ಆನೆ ಮತ್ತು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ನನ್ನ ಆನೆ ಎಂದಿಗೂ ಮುಂದೆ ಇತ್ತು ಎಂದು ತಿಳಿಸಿದರು.
ನಾವು ಹೇಳುವ ಭಾಷೆಯನ್ನು ಬರೀ ಸನ್ನೆಯ ಮೂಲಕ ಅರ್ಥ ಮಾಡಿಕೊಂಡು ಇತರೆ ಆನೆಗಳನ್ನು ಜೊತೆಯಲ್ಲಿ ಕರೆದುಕೊಂಡು ಕ್ಯಾಪ್ಟನ್ ಶಿಪ್ ವಹಿಸುತ್ತಿತ್ತು. ಅಲ್ಲದೆ ೨೦೨೧ ಸಾಲಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಅಲ್ಲಿನ ದೇವರ ವಿಗ್ರಹವನ್ನು ಹೊತ್ತು ಸಾಗಿತ್ತು. ಅದನ್ನು ಕಳೆದುಕೊಂಡ ನೋವು ಸದಾ ಇರುತ್ತದೆ ಎಂದು ದುಃಖ ತೋಡಿಕೊಂಡರು.
ಬೆಳಿಗ್ಗೆ ಮುದ್ದಾಡಿಸಿದ ಆನೆ ರಾತ್ರಿ ಸಾವಿಗೀಡಾಗಿದ್ದನ್ನು ನಂಬಲಾಗುತ್ತಿಲ್ಲ. ಅದು ನಮ್ಮ ಜತೆ ಆಡಿದ್ದ ಕಣ್ಣಾಮುಚ್ಚಾಲೆ ಆಟ, ವಾಲಿಬಾಲ್, ಮಕ್ಕಳೊಂದಿಗೆ ನಡೆಸಿದ ತುಂಟಾಟವನ್ನು ಎಂದಿಗೂ ಮರೆಯುವುದಿಲ್ಲ.
ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…
ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…
ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…
ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…