ಜಿಲ್ಲೆಗಳು

‘ಗೋಪಾಲಸ್ವಾಮಿ ನಮ್ಮ ಕುಟುಂಬ ಸದಸ್ಯನಂತಿತ್ತು’ : ಕಾವಾಡಿ ಮಂಜು

ಮೃತಪಟ್ಟ ಮೆಚ್ಚಿನ ಆನೆಯ ನೆನೆದು ಕಣ್ಣೀರಾದ ಕಾವಾಡಿ ಮಂಜು

 


ದಾ.ರಾ.ಮಹೇಶ್ 

ವೀರನಹೊಸಹಳ್ಳಿ: ‘ಗೋಪಾಲಸ್ವಾಮಿ ಒಂದು ಆನೆ ಮಾತ್ರವಲ್ಲ, ಆಟದ ಸಂಗಾತಿ, ನಮ್ಮ ಮನೆಯ ಸದಸ್ಯನಂತೆ ಕೂಡ ಇತ್ತು. ಅದನ್ನು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬ ಸದಸ್ಯರೊಬ್ಬರನ್ನೇ ಕಳೆದುಕೊಂಡಂತಹ ನೋವು ಉಂಟಾಗಿದೆ’.

ಈಚೆಗೆ ಕಾಡಾನೆ ಜತೆ ಕಾದಾಟದಲ್ಲಿ ಮೃತಪಟ್ಟ ಗೋಪಾಲಸ್ವಾಮಿ ಆನೆಯ ಕಾವಾಡಿ ಮಂಜು ಅವರು ತಮ್ಮ ಮತ್ತು ಗೋಪಾಲಸ್ವಾಮಿ ನಡುವೆ ಇದ್ದ ಆತ್ಮೀಯತೆಯನ್ನು ವರ್ಣಿಸಿದ್ದು ಹೀಗೆ.
ಅಗಲಿದ ಗಜರಾಜನ ನೆನೆದು ಪತ್ರಿಕೆಯೊಡನೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಾವಾಡಿ ಮಂಜು, ಬೃಹತ್ ಕಾಯ್ದೆ ಆನೆಯಿರಲಿ, ಪುಟ್ಟ ಗಾತ್ರದ ಅಳಿಲೇ ಇರಲಿ, ಮನುಷ್ಯ ಕೊಂಚ ಅಕ್ಕರೆ ತೋರಿದರೂ ಸಾಕು, ಬದಲಿಗೆ ಆತನಿಗೆ ನಿಷ್ಕಲ್ಮಶ ಪ್ರೀತಿಯ ಖಜಾನೆಯನ್ನೇ ಮರಳಿಸುತ್ತವೆ. ಪ್ರಾಣಿ ಮತ್ತು ಮನುಷ್ಯನ ಗಾಢ ಸ್ನೇಹ ಎಂತಹ ಕಟುಕರ ಮನಸ್ಸನ್ನೂ ಭಾವುಕವಾಗಿಸಬಲ್ಲದು. ಅಂತಹ ಅಪರೂಪದ ನಡುವಿನ ಸ್ನೇಹ ನಮ್ಮದು ಎಂದು ತಮ್ಮ ಅಚ್ಚುಮೆಚ್ಚಿನ ಆನೆಯ ಬಗ್ಗೆ ಹೇಳುತ್ತಾ ಭಾವುಕರಾದರು.

ಹಲವು ವರ್ಷಗಳ ಕಾಲ ಅಕ್ಕರೆಯಿಂದ ನೋಡಿಕೊಂಡ ಗಜರಾಜನಿಗೆ ವಿದಾಯ ಹೇಳುವ ಸಮಯ ಬಂದಾಗ, ನನ್ನ ಕಣ್ಣಾಲಿಗಳು ತುಂಬಿ ಬಂದವು ಎಂದು ಸುಮಾರು ಹತ್ತು ವರ್ಷ ಕಾಲ ಆನೆಗಳನ್ನು ನೋಡಿಕೊಳ್ಳುತ್ತಿದ್ದ ಮಂಜು ಹೇಳಿದರು.

ಅದು ಎಷ್ಟು ವಿಧೇಯ ಆನೆೆಯೇ ಆಗಿತ್ತು ಎಂದರೆ, ಅದಕ್ಕೆ ಯಾವತ್ತೂ ಏಟು ಹೊಡೆದಿಲ್ಲ. ಗದರಿದ ಪ್ರಸಂಗವು ಕೂಡ ಇಲ್ಲ. ರಾಜ್ಯದಲ್ಲೇ ಅಲ್ಲದೆ ಅಂತರ ರಾಜ್ಯದಲ್ಲೂ ಆನೆ ಮತ್ತು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ನನ್ನ ಆನೆ ಎಂದಿಗೂ ಮುಂದೆ ಇತ್ತು ಎಂದು ತಿಳಿಸಿದರು.

ನಾವು ಹೇಳುವ ಭಾಷೆಯನ್ನು ಬರೀ ಸನ್ನೆಯ ಮೂಲಕ ಅರ್ಥ ಮಾಡಿಕೊಂಡು ಇತರೆ ಆನೆಗಳನ್ನು ಜೊತೆಯಲ್ಲಿ ಕರೆದುಕೊಂಡು ಕ್ಯಾಪ್ಟನ್ ಶಿಪ್ ವಹಿಸುತ್ತಿತ್ತು. ಅಲ್ಲದೆ ೨೦೨೧ ಸಾಲಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಅಲ್ಲಿನ ದೇವರ ವಿಗ್ರಹವನ್ನು ಹೊತ್ತು ಸಾಗಿತ್ತು. ಅದನ್ನು ಕಳೆದುಕೊಂಡ ನೋವು ಸದಾ ಇರುತ್ತದೆ ಎಂದು ದುಃಖ ತೋಡಿಕೊಂಡರು.

ಬೆಳಿಗ್ಗೆ ಮುದ್ದಾಡಿಸಿದ ಆನೆ ರಾತ್ರಿ ಸಾವಿಗೀಡಾಗಿದ್ದನ್ನು ನಂಬಲಾಗುತ್ತಿಲ್ಲ. ಅದು ನಮ್ಮ ಜತೆ ಆಡಿದ್ದ ಕಣ್ಣಾಮುಚ್ಚಾಲೆ ಆಟ, ವಾಲಿಬಾಲ್, ಮಕ್ಕಳೊಂದಿಗೆ ನಡೆಸಿದ ತುಂಟಾಟವನ್ನು ಎಂದಿಗೂ ಮರೆಯುವುದಿಲ್ಲ.

andolanait

Recent Posts

ಓದುಗರ ಪತ್ರ: ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ

ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್…

1 hour ago

ಶಂಕರ್ ಎಂಬ ನೆಲದ ಹೂ

ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…

1 hour ago

ಊರೊಳಗೆ ಬೆರೆತು ಜನರ ಬಣ್ಣವೇ ಆದ ಕೆ.ಟಿ.ಶಿವಪ್ರಸಾದ್

ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…

2 hours ago

ಅಮೆರಿಕ ಎಂಬ ಪ್ರಯೋಗಕ್ಕೆ ಇನ್ನೂರೈವತ್ತು ವಸಂತಗಳು

ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…

2 hours ago

ಓದುಗರ ಪತ್ರ: ಎಸ್‌ಐಆರ್: ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ

ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್‌ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ…

5 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳ ಬೇಕೇ?

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಾಡಹಬ್ಬ ದಸರಾ ೧೬೧೦ ರಲ್ಲಿ ಪ್ರಾರಂಭವಾಗಿ, ಇಲ್ಲಿನ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಇತ್ತೀಚಿನ…

5 hours ago