ಜಿಲ್ಲೆಗಳು

ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ ಶವವಾಗಿ ಪತ್ತೆ

ವೀರಾಜಪೇಟೆ :ಅರಣ್ಯ ವೀಕ್ಷಕರು ಅರಣ್ಯದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತಿದ್ದ ವೇಳೆ ಕಾಣೆಯಾಗಿದ್ದರು ಇಂದು ನದಿಯ ತಳಭಾಗದಲ್ಲಿ ಅರಣ್ಯ ವೀಕ್ಷಕನ ಮೃತ್ತ ದೇಹ ಪತ್ತೆಯಾಗಿರುವ ಘಟನೆ ವೀರಾಜಪೇಟೆ ಗ್ರಾಮಾಂತರ. ವಿ.ಬಾಡಗ ಗ್ರಾಮ ಉಗ್ಗಿಹೊಳೆ, ಕೊಕ್ಕ ಭಾಗದಲ್ಲಿ ನಡೆದಿದೆ.
ವೀರಾಜಪೇಟೆ ಮಾಕೂಟ್ಟ ಬ್ರಹ್ಮಗಿರಿ ವನ್ಯಜೀವಿ ವಲಯದಲ್ಲಿ ಕೊಕ್ಕ ಕಳ್ಳಬೇಟೆ ತಡೆ ಶಿಬಿರದ ದಿನಗೂಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತಿದ್ದ ಬೆಂಗಳೂರು ದೊಮ್ಮಲೂರು ನಿವಾಸಿ ಹಾಲಿ ವಾಸ ಬಾಳಲೆ ಗಂಧದಗುಡಿ ನಿವಾಸಿಯಾಗಿದ್ದ ಮುನಿಯಪ್ಪ ಬಿ. ಎಂಬುವವರ ಪುತ್ರ ತರುಣ್ ಕುಮಾರ್ ಎಂ. ಪ್ರಾಯ ೨೩ ವರ್ಷ ಕರ್ತವ್ಯದ ವೇಳೆ ಮೃತರಾಗಿರುವ ವ್ಯಕ್ತಿ.
ಘಟನೆಯ ವಿವರ:

ತರುಣ್ ಕರ್ತವ್ಯಕ್ಕೆ ಸೇರಿ ಎರಡು ವರ್ಷಗಳಾಗಿವೆ. ಬಾಳಲೆಯ ಗ್ರಾಮದ ಗಂಧದಗುಡಿ ಎಂಬಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ತಂಗಿ ಸೇವೆಗೆ ಬರುತಿದ್ದರು ಎನ್ನಲಾಗಿದೆ. ಬ್ರಹ್ಮಗಿರಿ ವನ್ಯಜೀವಿ ಮಾಕೂಟ್ಟ ವಲಯಕ್ಕೆ ಹೊಂದಿಕೊಂಡಿರುವ ವಿ.ಭಾಡಗ ಗ್ರಾಮದ ಕೊಕ್ಕ ಎಂಬಲ್ಲಿ ಅರಣ್ಯ ಶಿಭಿರದ ವ್ಯಾಪ್ತಿಯಲ್ಲಿ ಕಾಡುಬೇಟೆ ತಡೆ ಶಿಭಿರದಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತಿದ್ದರು. ದಿನಾಂಕ ೨೩-೦೯-೨೦೨೨ ರಂದು ವಲಯ ಅರಣ್ಯಧೀಕಾರಿಗಳ ಆದೇಶದ ಮೇರೆಗೆ ಗಸ್ತು ನಿರ್ವಹಿಸಲು ಅರಣ್ಯ ರಕ್ಷಕರಾದ ಮಂಜುನಾಥ, ಮತ್ತು ದಿನಗೂಲಿ ಅರಣ್ಯ ವೀಕ್ಷಕರುಗಳಾದ ದರ್ಶನ್, ಮೋನಪ್ಪ, ಚೇತನ್ ಮತ್ತು ತರುಣ್ ಅವರೋಂದಿಗೆ ಬೆಳಿಗ್ಗೆ ೧೦-೦೦ ರ ಸಮಯದಲ್ಲಿ ಕೊಕ್ಕ ಶಿಭಿರದಿಂದ ಹೊರಡುತ್ತಾರೆ. ಕೊಕ್ಕ ಭಾಗದಲ್ಲಿ ಗಸ್ತು ನಿರ್ವಹಿಸುತಿದ್ದ ವೇಳೆ ತರುಣ್ ಅರಣ್ಯದ ಅಂಚಿನಲ್ಲಿ ಹರಿಯುತ್ತಿರುವ ಉಗ್ಗಿ ಹೊಳೆಗೆ ಕಾಲು ಜಾರಿ ಬಿದ್ದು ಕಾಣೆಯಾಗುತ್ತಾರೆ. ಈ ಸಂದರ್ಭದಲ್ಲಿ ಗಸ್ತುನಿರ್ವಹಿಸುತಿದ್ದ ಇತರರು ಹುಡುಕಾಟ ಆರಂಭಿಸುತ್ತಾರೆ. ತರುಣ್ ಅವರು ದೊರಕದಿದ್ದಾಗ ಸಂಜೆ ೦೬ ಗಂಟೆಯ ವೇಳೆಗೆ ಅರಣ್ಯಾಧೀಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಲಾಗುತ್ತದೆ. ಅರಣ್ಯಧೀಕಾರಿಗಳು ಸ್ಥಳಕ್ಕೆ ಆಗಮಿಸುತ್ತಾರೆ. ಅಧಿಕಾರಿಗಳ ಮನವಿ ಮೇರೆಗೆ ಎನ್.ಡಿ.ಆರ್.ಎಫ್ ತಂಡವು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಮುಂದುವೆರೆಸುತ್ತಾರೆ. ಉಗ್ಗಿ ಹೊಳೆಯು ಕಿರಿದಾಗಿದ್ದರು. ಹೊಳೆಯಲ್ಲಿ ಕಿರಿದಾದ ಜಲಪಾತವಿದೆ ಮೃತರಾದ ತರುಣ್ ಅವರ ತಂದೆ ಮುನಿಯಪ್ಪ ಅವರು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ ೨೪-೦೯-೨೦೨೨ ರಂದು ಮಗ ಕಾಣೆಯಾಗಿರುವ ಬಗ್ಗೆ ದೂರು ದಾಖಲು ಮಾಡುತ್ತಾರೆ. ಉಗ್ಗಿ ಹೊಳೆಯು ಕಿರಿದಾಗಿದ್ದರು. ಹೊಳೆಯಲ್ಲಿ ಕಿರಿದಾದ ಜಲಪಾತವಿದೆ, ಹೊಳೆಯಲ್ಲಿ ನೀರಿನ ಹರಿವು ಮೆಲ್ಬಾಗದಲ್ಲಿ ಕಡಿಮೆವಿದ್ದರು ತಳಮಟ್ಟದಲ್ಲಿ ಅತಿವೇಗವಾಗಿರುವುದರಿಂದ ಶೋಧ ಕಾರ್ಯದಲ್ಲಿ ವಿಳಂಬವಾಗುತ್ತದೆ. ಎನ್.ಡಿ.ಆರ್.ಎಫ್ ತಂಡದೊಂದಿಗೆ, ಮಂಗಳೂರಿನ ಮುಳುಗು ತಜ್ಞರ ಸಹಕಾರ ಪಡೆಯಲಾಗುತ್ತದೆ. ಸತತ ಮೂರು ದಿನಗಳ ಶೋಧ ಕಾರ್ಯಾಚರಣೆಯ ಮೂಲಕ ಇಂದು ಬೆಳಿಗ್ಗೆ ಸುಮಾರು ೮-೩೦ ಗಂಟೆಗೆ ಉಗ್ಗಿ ಹೊಳೆಯ ತಳಭಾಗದಲ್ಲಿದ್ದ ತರುಣ್ ಮೃತದೇಹವು ಪತ್ತೆಯಾಗಿದೆ. ಮೃತರ ತಂದೆ ಮುನಿಯಪ್ಪ ಅವರು ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದ್ದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿರುತ್ತದೆ. ತದನಂತರದಲ್ಲಿ ಮೃತ ಶರೀರವನ್ನು ಸಂಭದಿಕರಿಗೆ ಹಸ್ತಾಂತರ ಮಾಡಲಾಗಿ ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ.

ಶೋಧ ಕಾರ್ಯದ ವೇಳೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯ ಸಿಬ್ಬಂದಿಗಳು, ಎನ್.ಡಿ.ಅರ್.ಎಫ್ ತಂಡದ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

andolanait

Recent Posts

ಶಿವಸ್ವಾಮಿಯವರೊಳಗಿನ ಕನ್ನಡದ ಮೇಷ್ಟ್ರು ನಿವೃತ್ತರಾಗುವುದಿಲ್ಲ

ಸಿ.ಎಂ.ನರಸಿಂಹಮೂರ್ತಿ ಪಾಠ ಪ್ರವಚನಗಳ ಜೊತೆ ವಿದ್ಯಾರ್ಥಿಗಳ ನೋವು ನಲಿವುಗಳಿಗೂ ಸ್ಪಂದಿಸುತ್ತಿದ್ದ ಈ ಗುರುಗಳ ಗುಣ ದೊಡ್ಡದು ಶಿವಸ್ವಾಮಿ ಎಂಬ ಕನ್ನಡದ…

1 hour ago

ಸಸ್ಯಾಹಾರಿಗಳ ದುಃಸ್ವಪ್ನ ಮಕಾವ್ ಮತ್ತು ಹಾಂಗ್‌ಕಾಂಗ್…

ಸಿರಿ ಮೈಸೂರು ಮಾಂಸಾಹಾರಿಗಳಿಗೆ ಮಾತ್ರ ಇಲ್ಲಿ ಸಿಗುವಷ್ಟು ವೈವಿಧ್ಯದ ಆಹಾರಗಳು ಇನ್ನೆಲ್ಲೂ ಸಿಗಲಾರವು. ನೀವೂ ಮಾಂಸಾಹಾರಿ ಆಗಿದ್ದರೆ ಹಾಂಗ್‌ಕಾಂಗ್‌ಗೆ ಬಂದಾಗ…

1 hour ago

ವಿಶ್ವ ಸಂಗೀತ ದಿನದಂದು ರಮ್ಮನಹಳ್ಳಿಯ ಜನಪದ ಗಾಯಕ ಅಂಕಪ್ಪನವರ ಕುರಿತು…

ಡಾ.ಮೈಸೂರು ಉಮೇಶ್ ಹತ್ತಾರು ಜನಪದ ಕಾವ್ಯ, ನೂರಾರು ತತ್ವಪದ ಮತ್ತು ಭಜನೆ ಪದಗಳನ್ನು ಹಾಡುವ ಅಂಕಪ್ಪ ಈ ನೆಲದ ಸಂಪತ್ತು …

1 hour ago

ಕರ್ತೋಜಿಯಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಾಣ

ನವೀನ್ ಡಿಸೋಜ ಮಡಿಕೇರಿ-ಮಂಗಳೂರು ಹೆದ್ದಾರಿಯ ಈ ಪ್ರದೇಶ ಈಗ ಸುರಕ್ಷಿತ ೧೧ ಸೂಕ್ಷ್ಮ ಪ್ರದೇಶಗಳಲ್ಲಿ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿ  ಮಡಿಕೇರಿ:…

1 hour ago

ಸಂಪುಟ ವಿಸ್ತರಣೆ: ಮೈಸೂರು ಭಾಗದ ‘ಕೈ’ಶಾಸಕರ ಕಸರತ್ತು

ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯಸಭೆ, ರಾಜ್ಯ ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಚುರುಕುಗೊಂಡಿದ್ದು, ಮೈಸೂರು ಭಾಗದ…

1 hour ago

‘ಪ್ರಾಮಾಣಿಕ ಸೇವೆ; ಪಾರದರ್ಶಕ ಆಡಳಿತಕ್ಕೆ ಬದ್ಧʼ

ಸಂದರ್ಶನ: ಶ್ರೀಧರ್ ಆರ್ ಭಟ್ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ  ಮೈಸೂರು: ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವಾರು ಸವಾಲುಗಳಿವೆ. ಸಚಿವನಾಗಿ…

2 hours ago