ಜಿಲ್ಲೆಗಳು

ದಸರಾ ಅಂಗವಾಗಿ ʼಗ್ರ್ಯಾಂಡ್ ಸಿತಾರ್ ಸಿಂಫೋನಿʼ ಕಾರ್ಯಕ್ರಮ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅರಮನೆ ವೇದಿಕೆಯಲ್ಲಿ ಅ.1ರಂದು ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಸಿತಾರ್ ಸಿಂಫೋನಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಂಗಳೂರಿನ ಮನೋ ಮ್ಯೂಸಿಕ್ ಲೈನ್ಸ್ ತಂಡ ಈ ವಿಶಿಷ್ಟ ಕಾರ್ಯಕ್ರಮವನ್ನು ಒಂದೂವರೆ ಗಂಟೆಯವರೆಗೆ ಪ್ರಸ್ತುತಪಡಿಸಲಿದೆ. ಸುಮಾರಾಣಿ, ಶ್ರುತಿ ಕಾಮತ್, ಜ್ಯೋತಿ ಶ್ಯಾಮ್, ಸಿ.ಎಸ್. ಸರ್ವಮಂಗಳಾ, ಹಂಸಿಣಿ ಭಾರದ್ವಾಜ್, ಎಚ್.ಪಿ. ಶ್ರೀನಿವಾಸನ್, ವಿಜಯ್ ಗೋನಾಳ ಹಾಗೂ ಋತ್ವಿಕ್‌ ರಾವ್ ಅವರು ಸಿತಾರ್ ನುಡಿಸುವರು. ಇವರಿಗೆ ಕೊಳಲಿನಲ್ಲಿ ಗಣೇಶ್, ತಬಲಾದಲ್ಲಿ ಪ್ರದ್ಯುಮ್ನ ಸೊರಬ ಹಾಗೂ ಕಾರ್ತೀಕ್ ಭಟ್ ಸಾಥ್ ನೀಡುವರು.
ಪ್ರವೀಣ್ ಷಣ್ಮುಗಂ ಅವರು ಡ್ರಮ್, ಕೀಬೋರ್ಡ್ ನಲ್ಲಿ ವೇಣುಗೋಪಾಲ್ ಸಹಕರಿಸುವರು. ಸುಮುಖ್ ರವಿಶಂಕರ್ ಅವರು ಇತರ ಲಯವಾದ್ಯಗಳನ್ನು ನುಡಿಸುವರು.
ಸಿತಾರ್ ಜೊತೆಗೆ ತಬಲಾ, ಕೊಳಲು, ಡ್ರಮ್ ಹಾಗೂ ಕೀ ಬೋರ್ಡ್ ವಾದ್ಯಗಳ‌ ಮೂಲಕ
ಶಾಸ್ತ್ರೀಯವಾಗಿ ರಾಗಗಳನ್ನು ಸಂಯೋಜಿಸಿ ಭಿನ್ನವಾದ ಸಂಗೀತ ನೀಡುವ ಮೂಲಕ ಎಲ್ಲ ವರ್ಗದ ಅದರಲ್ಲೂ ಯುವ ತಲೆಮಾರು ತಲುಪುವ ಉದ್ದೇಶ ತಂಡಕ್ಕಿದೆ.
ಈಗಾಗಲೇ ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಈ ತಂಡದ್ದು.
ಸಿತಾರ್ ಸಿಂಫೋನಿಯ ರೂವಾರಿ ಸಂದೀಪ್ ವಸಿಷ್ಠ. ಅವರು ಕೊಳಲು ಹಾಗೂ ಸ್ಯಾಕ್ಸ್ ಫೋನ್ ನುಡಿಸುವ ಕಲಾವಿದರು.
ಕನ್ನಡಿಗರೇ ಇರುವ, ಎಲ್ಲ ವಯೋಮಾನದವರು ಇರುವ ಈ ತಂಡದಲ್ಲಿ ಸಿತಾರ್ ಸಂಗೀತವನ್ನು ಹೆಚ್ಚು ಜನರ ಬಳಿಗೆ ಕೊಂಡೊಯ್ಯಲು ಹಾಗೂ ಆಕರ್ಷಿಸಲು ಈ ತಂಡ ಸಜ್ಜಾಗಿದೆ.

andolanait

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

7 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

7 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

7 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

7 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

7 hours ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

7 hours ago