ಜಿಲ್ಲೆಗಳು

ಬಹುರೂಪಿಗೆ ವಿಶೇಷ ಕಳೆ ತಂದ ಜನಪದ ಗಾಯನ

ಮಳವಳ್ಳಿ ಮಹದೇವಸ್ವಾಮಿ ಅವರ ಕಂಠ ಸಿರಿಗೆ ತಲೆದೂಗಿದ ಪ್ರೇಕ್ಷಕರು

ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರಂಗಾಯಣದ ವನರಂಗದಲ್ಲಿ ಮಂಗಳವಾರ ಸಂಜೆ ನಡೆದ ಜನಪದೋತ್ಸವದಲ್ಲಿ ಖ್ಯಾತ ಗಾಯಕ ಡಾ.ಮಳವಳ್ಳಿ ಮಹಾದೇವಸ್ವಾಮಿ ಅವರು ಹರಿಸಿದ ಜನಪದ ಕಥನದ ಮೋಡಿ ಬಹುರೂಪಿಗೆ ಕಳೆ ತಂದಿತು.

ಮಳವಳ್ಳಿ ಮಹಾದೇವಸ್ವಾಮಿ ಅವರು ಕಂಚಿನ ಕಂಠದ ಮೂಲಕ ಮಂಟೇಸ್ವಾಮಿ ಕಾವ್ಯದ ಕಲ್ಯಾಣ ಪಟ್ಟಣದ ಸಾಲನ್ನು ಹಾಡುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಕಲಾರಸಿಕರು ತಲೆದೂಗಿದರು. ದಮ್ಮಡಿ, ಕರ್ಮಚಿ ಮತ್ತು ತಾಳದಲ್ಲಿ ಮಂಟೇಸ್ವಾಮಿ ಅವರು ಕಲ್ಯಾಣ ಪಟ್ಟಣದಲ್ಲಿ ಬಸವಣ್ಣ ಮತ್ತು ನೀಲಾಂಬಿಕೆಗೆ ದರ್ಶನ ನೀಡಿ ಕೂಡಲ ಸಂಗಮದಲ್ಲಿ ಐಕ್ಯವಾಗುವ ಹಿನ್ನೆಲೆ ಮತ್ತು ಮುಂದಿನ ಕಲಿಯ ಬಗ್ಗೆ ಎಚ್ಚರಿಸಿದ್ದ ಕಥೆಯನ್ನು ತಮ್ಮ ಕಂಚಿನ ಕಂಠದ ಮೂಲಕ ಪ್ರಸ್ತುತಪಡಿಸಿದರು.
ಕಲ್ಯಾಣದಲ್ಲಿ ಬಸವಣ್ಣನವರನ್ನು ಭೇಟಿ ಮಾಡಲು ಆಗಮಿಸುವ ಮಂಟೇಸ್ವಾಮಿ ಸೇವಕನಿಂದ ಅಪಮಾನಕ್ಕೆ ಒಳಗಾಗುತ್ತಾರೆ. ಕೋಪಗೊಂಡು ಶಿವಭಕ್ತ ಹರಳಯ್ಯನ ಮನೆ ಮುಂದೆ ಕೂರುವ ಮಂಟೇಸ್ವಾಮಿ ಅವರನ್ನು ಬಸವಣ್ಣ ಸಮಾಧಾನಪಡಿಸುವ ಪ್ರಸಂಗವನ್ನು ಮನಮುಟ್ಟುವಂತೆ ಹಾಡಿದರು.

ಕಲಿಗಾಲದ ಬಗ್ಗೆ ಮಂಟೇಸ್ವಾಮಿ ನುಡಿಯನ್ನು ಹಾಡುವಾಗ ಸಭಿಕರು ಹೌದೆಂದು ತಲೆಯಾಡಿಸಿದರು. ಒಂದು ಗಂಟೆಗಳ ಕಾಲ ಮಂಟೇಸ್ವಾಮಿ ಮಹತ್ವವನ್ನು ಕೇಳುಗರ ಎದೆಗೆ ಮುಟ್ಟಿಸಿದರು. ಮಂಗಳವಾರ ಮಳೆ ಬಿಡುವು ನೀಡಿದ್ದರಿಂದ ಜನರು ಕಿಕ್ಕಿರಿದು ನೆರೆದು ಗಾಯನ ಆಲಿಸಿದರು.
ದಮ್ಮಡಿಯಲ್ಲಿ ಮಹೇಶ್ ಮತ್ತು ಮಂಜು, ಕರ್ಮಚಿಯನ್ನು ಕೊಳತ್ತೂರು ನಂಜುಂಡಸ್ವಾಮಿ, ತಗ್ಗಳ್ಳಿ ಮಹಾದೇವ್, ತಾಳದಲ್ಲಿ ಮಹದೇವಸ್ವಾಮಿ ಅವರು ಸಹಕಾರ ನೀಡಿದರು.ಇದಕ್ಕೂ ಮುನ್ನ ದಕ್ಷಿಣ ಕನ್ನಡದ ಮಂಜುನಾಥ ಮತ್ತು ತಂಡ ಪ್ರಸ್ತುತಪಡಿಸಿದ ಜನಪದೋತ್ಸವದ ಕಂಗೀಲು ನೃತ್ಯ ಹೊಸ ರಂಗು ಮೂಡಿಸಿತು. ಕಂಗೀಲು ಪಾತ್ರಧಾರಿಗಳು ತೆಂಗಿನ ತಿಲಂಗ ಧರಿಸಿ ಕುಣಿುುಂತ್ತಿದ್ದುದ್ದು ನೋಡುಗರನ್ನು ಒಂದುಕ್ಷಣ ಅವಕ್ಕಾಗಿಸಿತು. ಕಂಗೀಲು ಒಂದು ಜಾನಪದ ಕುಣಿತವೂ ಹೌದು. ಆಚರಣೆುೂಂ ಹೌದು. ಈ ಜನಪದ ಕುಣಿತ ತುಳುನಾಡಿನ ಪ್ರಮುಖ ಪ್ರದರ್ಶನ ಕಲೆ ಆಗಿದ್ದು, ಸಾಂಸ್ಕೃತಿಕ ನಗರಿುಂ ರಂಗಾಸಕ್ತರು ಈ ಕಲೆುಂ ಸವಿ ಸವಿದರು.

andolanait

Recent Posts

ಓದುಗರ ಪತ್ರ: ಭ್ರಷ್ಟಾಚಾರ ಬಗ್ಗು ಬಡಿಯಲು ಸಿಎಂ ಮುಂದಾಗುವರೇ?

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…

54 mins ago

ಓದುಗರ ಪತ್ರ: ಸದ್ದು ಮಾಡದ ತುಪ್ಪ, ಬೆಣ್ಣೆ ಬೆಲೆ ಏರಿಕೆ!

ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…

1 hour ago

ಓದುಗರ ಪತ್ರ: ಬರ…ಅಬ್ಬರ !

ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…

1 hour ago

ಓದುಗರ ಪತ್ರ: ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆ ಅತ್ಯಗತ್ಯ

ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…

1 hour ago

ಆರ್‌ಟಿಇ; ಮಕ್ಕಳು ಅವಕಾಶ ವಂಚಿತರಾಗಬಾರದು

ಶಾಂತರಾಜು ಬಸ್ತೀಪುರ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ…

1 hour ago

ಕೋವಿಡ್: ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಕಟ್ಟೆಚ್ಚರ

ನವೀನ್ ಡಿಸೋಜ ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ…

1 hour ago