ಜಿಲ್ಲೆಗಳು

ಬಹುರೂಪಿಗೆ ವಿಶೇಷ ಕಳೆ ತಂದ ಜನಪದ ಗಾಯನ

ಮಳವಳ್ಳಿ ಮಹದೇವಸ್ವಾಮಿ ಅವರ ಕಂಠ ಸಿರಿಗೆ ತಲೆದೂಗಿದ ಪ್ರೇಕ್ಷಕರು

ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರಂಗಾಯಣದ ವನರಂಗದಲ್ಲಿ ಮಂಗಳವಾರ ಸಂಜೆ ನಡೆದ ಜನಪದೋತ್ಸವದಲ್ಲಿ ಖ್ಯಾತ ಗಾಯಕ ಡಾ.ಮಳವಳ್ಳಿ ಮಹಾದೇವಸ್ವಾಮಿ ಅವರು ಹರಿಸಿದ ಜನಪದ ಕಥನದ ಮೋಡಿ ಬಹುರೂಪಿಗೆ ಕಳೆ ತಂದಿತು.

ಮಳವಳ್ಳಿ ಮಹಾದೇವಸ್ವಾಮಿ ಅವರು ಕಂಚಿನ ಕಂಠದ ಮೂಲಕ ಮಂಟೇಸ್ವಾಮಿ ಕಾವ್ಯದ ಕಲ್ಯಾಣ ಪಟ್ಟಣದ ಸಾಲನ್ನು ಹಾಡುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಕಲಾರಸಿಕರು ತಲೆದೂಗಿದರು. ದಮ್ಮಡಿ, ಕರ್ಮಚಿ ಮತ್ತು ತಾಳದಲ್ಲಿ ಮಂಟೇಸ್ವಾಮಿ ಅವರು ಕಲ್ಯಾಣ ಪಟ್ಟಣದಲ್ಲಿ ಬಸವಣ್ಣ ಮತ್ತು ನೀಲಾಂಬಿಕೆಗೆ ದರ್ಶನ ನೀಡಿ ಕೂಡಲ ಸಂಗಮದಲ್ಲಿ ಐಕ್ಯವಾಗುವ ಹಿನ್ನೆಲೆ ಮತ್ತು ಮುಂದಿನ ಕಲಿಯ ಬಗ್ಗೆ ಎಚ್ಚರಿಸಿದ್ದ ಕಥೆಯನ್ನು ತಮ್ಮ ಕಂಚಿನ ಕಂಠದ ಮೂಲಕ ಪ್ರಸ್ತುತಪಡಿಸಿದರು.
ಕಲ್ಯಾಣದಲ್ಲಿ ಬಸವಣ್ಣನವರನ್ನು ಭೇಟಿ ಮಾಡಲು ಆಗಮಿಸುವ ಮಂಟೇಸ್ವಾಮಿ ಸೇವಕನಿಂದ ಅಪಮಾನಕ್ಕೆ ಒಳಗಾಗುತ್ತಾರೆ. ಕೋಪಗೊಂಡು ಶಿವಭಕ್ತ ಹರಳಯ್ಯನ ಮನೆ ಮುಂದೆ ಕೂರುವ ಮಂಟೇಸ್ವಾಮಿ ಅವರನ್ನು ಬಸವಣ್ಣ ಸಮಾಧಾನಪಡಿಸುವ ಪ್ರಸಂಗವನ್ನು ಮನಮುಟ್ಟುವಂತೆ ಹಾಡಿದರು.

ಕಲಿಗಾಲದ ಬಗ್ಗೆ ಮಂಟೇಸ್ವಾಮಿ ನುಡಿಯನ್ನು ಹಾಡುವಾಗ ಸಭಿಕರು ಹೌದೆಂದು ತಲೆಯಾಡಿಸಿದರು. ಒಂದು ಗಂಟೆಗಳ ಕಾಲ ಮಂಟೇಸ್ವಾಮಿ ಮಹತ್ವವನ್ನು ಕೇಳುಗರ ಎದೆಗೆ ಮುಟ್ಟಿಸಿದರು. ಮಂಗಳವಾರ ಮಳೆ ಬಿಡುವು ನೀಡಿದ್ದರಿಂದ ಜನರು ಕಿಕ್ಕಿರಿದು ನೆರೆದು ಗಾಯನ ಆಲಿಸಿದರು.
ದಮ್ಮಡಿಯಲ್ಲಿ ಮಹೇಶ್ ಮತ್ತು ಮಂಜು, ಕರ್ಮಚಿಯನ್ನು ಕೊಳತ್ತೂರು ನಂಜುಂಡಸ್ವಾಮಿ, ತಗ್ಗಳ್ಳಿ ಮಹಾದೇವ್, ತಾಳದಲ್ಲಿ ಮಹದೇವಸ್ವಾಮಿ ಅವರು ಸಹಕಾರ ನೀಡಿದರು.ಇದಕ್ಕೂ ಮುನ್ನ ದಕ್ಷಿಣ ಕನ್ನಡದ ಮಂಜುನಾಥ ಮತ್ತು ತಂಡ ಪ್ರಸ್ತುತಪಡಿಸಿದ ಜನಪದೋತ್ಸವದ ಕಂಗೀಲು ನೃತ್ಯ ಹೊಸ ರಂಗು ಮೂಡಿಸಿತು. ಕಂಗೀಲು ಪಾತ್ರಧಾರಿಗಳು ತೆಂಗಿನ ತಿಲಂಗ ಧರಿಸಿ ಕುಣಿುುಂತ್ತಿದ್ದುದ್ದು ನೋಡುಗರನ್ನು ಒಂದುಕ್ಷಣ ಅವಕ್ಕಾಗಿಸಿತು. ಕಂಗೀಲು ಒಂದು ಜಾನಪದ ಕುಣಿತವೂ ಹೌದು. ಆಚರಣೆುೂಂ ಹೌದು. ಈ ಜನಪದ ಕುಣಿತ ತುಳುನಾಡಿನ ಪ್ರಮುಖ ಪ್ರದರ್ಶನ ಕಲೆ ಆಗಿದ್ದು, ಸಾಂಸ್ಕೃತಿಕ ನಗರಿುಂ ರಂಗಾಸಕ್ತರು ಈ ಕಲೆುಂ ಸವಿ ಸವಿದರು.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

4 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

4 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

5 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

5 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

5 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

5 hours ago