ಅಂಕಣಗಳು

ಬೀಜ ಬಿತ್ತಿ ಬಂಗಾರ ಬೆಳೆದವರು

ಜಿ.ಕೃಷ್ಣ ಪ್ರಸಾದ್

‘ವ್ಯವಸಾಯದಿಂದ ಲಾಭ ಇಲ್ಲ. ಬೆಂಗಳೂರಿಗೆ ಕೆಲಸಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದೆ. ಈಗ ಊರಲ್ಲೇ ಇದ್ದು ದೇಸಿ ಬೀಜೋ ತ್ಪಾದನೆ ಮಾಡಿ, ಬೆಂಗಳೂರಿಗೆ ಹೋದವರಿಗಿಂತ ಹೆಚ್ಚು ಸಂಪಾದಿಸುತ್ತಿದ್ದೇನೆ. ನನ್ನ ನೋಡಿ ನಗಾಡಿದ್ದವರೇ, ನಾವೂ ಬೀಜ ಮಾಡಿಕೊಡ್ತೀವಿ, ಆರ್ಡರ್ ಕೊಡಿಸು ಎಂದು ಅಂಗಲಾಚು ತ್ತಿದ್ದಾರೆ’ ಎಂದು ಲೋಕೇಶ್ ತುಂಟ ನಗೆ ಬೀರುತ್ತಾರೆ. ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯ ಗ್ರಾಮದ 32 ವರ್ಷದ ಲೋಕೇಶ್ ಯುವ ಕೃಷಿಕ. ಎಲ್ಲರಂತೆ ರಾಸಾಯನಿಕ ಕೃಷಿ ಮಾಡಲು ಹೋಗಿ ಸೋತು ಸುಣ್ಣವಾಗಿ, ಸಾವಯವ ಬೀಜೋತ್ಪಾದನೆಗೆ ತೊಡಗಿ ಯಶಸ್ಸು ಕಂಡವರು.

ಬದಲಾವಣೆ ಗಾಳಿ ಬೀಸಿದ್ದು ಹೀಗೆ…
2015ರಲ್ಲಿ ಕೃಷಿ ಇಲಾಖೆಯ ಸಾವಯವ ಗ್ರಾಮ ಯೋಜನೆ ತಮ್ಮ ಗ್ರಾಮಕ್ಕೆ ಬಂದಾಗ, ಅರೆಮನಸ್ಸಿನಿಂದಲೇ ಲೋಕೇಶ್‌ ಸಾವಯವ ಕೃಷಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದರು. ಸಾವಯವ ಕೃಷಿಕರಾದರು.

2018ರಲ್ಲಿ ಸಹಜ ಸಮೃದ್ಧ, ದೇಸಿ ಬೀಜ ಉತ್ಪಾದಕರ ಕಂಪೆನಿಯನ್ನು ಆರಂಭಿಸಿ, ಸಹಜ ಸೀಡ್ಸ್ ಹೆಸರಲ್ಲಿ ದೇಸಿ ಬೀಜಗಳನ್ನು ಮಾರುಕಟ್ಟೆಗೆ ತಂದಿತು. ಆ ಕಾಲಕ್ಕೆ ಮೈಸೂರು ಸುತ್ತಮುತ್ತ ತರಕಾರಿ ಬೀಜ ಉತ್ಪಾದನೆ ಮಾಡುವ ರೈತರೇ ಇರಲಿಲ್ಲ. ಸಹಜ ಸೀಡ್ಸ್, ಲೋಕೇಶರನ್ನು ಬೀಜೋತ್ಪಾದನೆ ಮಾಡಲು ಕೇಳಿಕೊಂಡಿತು. ಬೀಜೋತ್ಪಾದನೆಯಿಂದ ಹಣ ಬರುತ್ತದೆ ಎಂಬ ನಂಬಿಕೆ ಲೋಕೇಶರಿಗಿರಲಿಲ್ಲ. ‘ನನ್ನನ್ನು ಹುಡುಕಿಕೊಂಡು ಮೈಸೂನಿರಿಂದ ಬಂದಿದ್ದಾರೆ. ನೋಡೇ ಬಿಡುವ’ ಎಂದು ಹತ್ತು ಗುಂಟೆಯಲ್ಲಿ ‘ಕುಂಕುಮ ಕೇಸರಿ’ ಎಂಬ ಟೊಮೊಟೋ ಬೆಳೆದರು. ತಿಳಿವಳಿಕೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಬೇವಿನ ಎಣ್ಣೆ ಬಳಸಿದ ಪರಿಣಾಮ ಗಿಡಗಳೆಲ್ಲಾ ಸುಟ್ಟುಹೋಗಿ, ನೆಲಕಚ್ಚಿದವು.

ಸೋಲಿನಿಂದ ನಿರಾಶರಾಗದೆ ಮತ್ತೆ ಮುಂದಿನ ಹಂಗಾಮಿಗೆ 10 ಗುಂಟೆ ಪ್ರದೇಶದಲ್ಲಿ ಕುಂಕುಮ ಕೇಸರಿ ಟೊಮೊಟೋ ಬೆಳೆದರು. ಉತ್ತಮ ಬೆಳೆ ಬಂದು 20 ಕೆಜಿ ಟೊಮೊಟೋ ಬೀಜ ಉತ್ಪಾದನೆಯಾಯಿತು. ‘ಆ ವರ್ಷ ಟೊಮೊಟೋ ಬೆಲೆ ನೆಲಕಚ್ಚಿ, ಸುಮಾರು ರೈತರು ಮೈಮೇಲೆ ಸಾಲ ಎಳೆದು ಕೊಂಡರು. ನಾನು ಸಹಜ ಸೀಡ್ಸ್ ಜೊತೆ ಒಪ್ಪಂದ ಮಾಡಿಕೊಂಡಿ ದ್ದರಿಂದ 70 ಸಾವಿರ ಹಣ ಗಳಿಸಿದೆ’ ಎಂದು ಲೋಕೇಶ್, ಬೀಜೋತ್ಪಾದನೆಯ ಆರಂಭದ ದಿನಗಳನ್ನು ನೆನೆಯುತ್ತಾರೆ.

ಈ ಯಶಸ್ಸಿನಿಂದ ಉತ್ತೇಜಿತರಾದ ಲೋಕೇಶ್ ತಮ್ಮ ಇಡೀ ನಾಲ್ಕು ಎಕರೆ ಜಮೀನನ್ನು ದೇಸಿ ಬೀಜೋತ್ಪಾದನೆಗೆ ಮುಡಿಪಾಗಿಟ್ಟರು. ಗುಣಮಟ್ಟದ ದೇಸಿ ತರಕಾರಿ ಬೀಜಗ ಳನ್ನು ಉತ್ಪಾದಿಸುವ ಕಲೆಯನ್ನು ಕರಗತಮಾಡಿ ಕೊಂಡರು. ಬಣ್ಣದ ಮುಸುಕಿನ ಜೋಳ, ಕೊಂಬು ಸೋರೆ, ಹಸಿರು ಬೆಂಡೆ, ಮದನಪಲ್ಲಿ ಟೊಮೊಟೋ, ಕಪ್ಪು ಬದನೆ, ಹಾಗಲ, ಹೀರೆ…ಹೀಗೆ ಹಲವಾರು ಅಪರೂಪದ ತಳಿಗಳನ್ನು ಅಪ್ಪಟ ಸಾವಯವದ ಪದ್ಧತಿಯಲ್ಲಿ ಬೆಳೆದು, ಬೀಜೋತ್ಪಾದನೆ ಮಾಡುತ್ತಿದ್ದಾರೆ.

ಬೀಜೋತ್ಪಾದನೆ ವಿಶೇಷ ಕೌಶಲ ಮತ್ತು ಪರಿಣತಿಯನ್ನು ಬೇಡುತ್ತದೆ. ಬೀಜ ಬಿತ್ತಿ, ಸಸಿ ಮಾಡಿ, ಹೊಲದಲ್ಲಿ ಬೆಳೆಸಿ, ಬೀಜ ಸಂಗ್ರಹಿಸಿ, ಒಣಗಿಸಿ ಪ್ಯಾಕ್ ಮಾಡಲು ಸಾಕಷ್ಟು ತಾಳ್ಮೆ ಬೇಕು. ವಿವಿಧ ತಳಿಗಳು ಮಿಶ್ರವಾಗದಂತೆ ಎಚ್ಚರ ವಹಿಸಬೇಕು. ರೋಗ ಬಂದ ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಬಿಸಾಕಬೇಕು. ಆರೋಗ್ಯಪೂರ್ಣ ಹಣ್ಣನ್ನು ಮಾತ್ರ ಬೀಜಕ್ಕೆ ಬಳಸುವ ಪ್ರಾಮಾಣಿಕತೆ ಬೇಕು. ಇದಕ್ಕಾಗಿ ದೂರದ ಅಸ್ಸಾಂಗೆ ಹೋಗಿ ತರಬೇತಿ ಪಡೆದು ಬಂದಿದ್ದಾರೆ. ಅತಿ ಹೆಚ್ಚು ಮೌಲ್ಯದ ಲೆಟ್ಯೂಸ್, ಕಪ್ಪು ಕ್ಯಾರೆಟ್, ಬೇಬಿ ಕಾರ್ನ ತಳಿಗಳನ್ನು ತಮ್ಮ ಹೊಲಕ್ಕೆ ಒಗ್ಗಿಸಿ, ಬೀಜ ಮಾಡಿ ಗೆದ್ದಿದ್ದಾರೆ.

ಕಳೆದ ಐದು ವರ್ಷಗಳಿಂದ ಸಕ್ರಿಯವಾಗಿ ಬೀಜೋತ್ಪಾ ದನೆ ಮಾಡುತ್ತಿರುವ ಲೋಕೇಶ್ ಪ್ರತಿ ವರ್ಷ 2 ರಿಂದ 3 ಲಕ್ಷ ರೂಪಾಯಿ ಮೌಲ್ಯದ ದೇಸಿ ಬೀಜಗಳನ್ನು ಉತ್ಪಾದಿಸುತ್ತಾರೆ. ಶಾಸ್ತ್ರೀಯವಾಗಿ ಬೀಜೋತ್ಪಾದನೆ ಮಾಡುವ ಪರಿಣಿತಿ ಹೊಂದಿರುವ ಇವರು ‘ಸೀಡ್ ಡ್ರರ್ಯ‌’ ಇಟ್ಟಿದ್ದಾರೆ. ಲೋಕೇಶರ ಯಶಸ್ಸು ಗ್ರಾಮದ ಯುವಕರು ಇವರತ್ತ ನೋಡುವಂತೆ ಮಾಡಿದೆ. ಅರೇಪಾಳ್ಯದ ಪ್ರಕಾಶ್, ಕುಮಾರ, ನಾಗರಾಜು, ಕೃಷ್ಣಪ್ಪ, ಚಂದ್ರಮೋಹನ್ ಮೊದಲಾದವರು ಬೀಜೋತ್ಪಾದನೆಯಲ್ಲಿ ತೊಡಗಿದ್ದಾರೆ.

ಕತ್ತಿಕಾಯಿ, ಸೌತೆಕಾಯಿ, ಬಿಳಿಬದನೆಕಾಯಿ, ಡಬಲ್ ಕಲರ್ ಬೆಂಡೆ, ಬಿಂದಿಗೆ ಸೋರೆ, ಮೀಟರ್ ಅಲಸಂದೆ ಹಾಗೂ ತೊಗರಿ ಬೀಜ, ಪಲಾವ್ ಬೀನ್ಸ್, ಶ್ರೀ ಬೆಂಡೆ, ವಿಂಗಡ್ ಬೀನ್ಸ್, ಗ್ರೇಪ್ ಟೊಮೊಟೋ ಮೊದಲಾದ ತಳಿಯ ಬೀಜಗಳನ್ನು 10 ಎಕರೆಯ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಬೀಜೋತ್ಪಾದನೆಯನ್ನು ಉಪಕಸು ಬಾಗಿ ಆಯ್ಕೆ ಮಾಡಿಕೊಂಡಿರುವ ಯುವ ಕೃಷಿಕರು 6 ಲಕ್ಷ ರೂಪಾಯಿ ಮೌಲ್ಯದ ದೇಸಿ ಬೀಜಗಳನ್ನು ಪ್ರತಿ ವರ್ಷ ಉತ್ಪಾದನೆ ಮಾಡುತ್ತಿದ್ದಾರೆ.

ಇವರು ಉತ್ಪಾದಿಸಿದ ದೇಸಿ ಬೀಜಗಳಿಗೆ ಸಹಜ ಸೀಡ್ಸ್ ಮಾರುಕಟ್ಟೆ ಒದಗಿಸಿರುವುದರಿಂದ ಬೆಲೆ ಸಿಗದೆ ಬೀದಿಗೆ ಬೀಳುವ ಆತಂಕವಿಲ್ಲ. ದೇಸಿ ಬೀಜ ಉತ್ಪಾದಕರ ಕಂಪೆನಿಯ ಷೇರುದಾರರಾಗಿರುವುದರಿಂದ, ತಾವು ಪೂರೈಸಿದ ಬೀಜದ ಮೊತ್ತದ ಮೇಲೆ ಶೇ.10ರಷ್ಟು ಹಣವನ್ನು ಬೋನಸ್ ರೂಪದಲ್ಲಿ ಪಡೆಯುತ್ತಿದ್ದಾರೆ.

ತಮ್ಮ ತಂದೆ ವಿಷಕಂಠೇಗೌಡರ ಪ್ರೋತ್ಸಾಹ ಮತ್ತು ಸಹಜ ಸೀಡ್ಸ್‌ನ ಕೆ.ಎಸ್.ಮಂಜುರವರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಲೋಕೇಶ್ ನೆನೆಯುತ್ತಾರೆ.
(prasadgk12@gmail.com)

andolanait

Recent Posts

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ನೇಮಕ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮೊದಲು ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಕರ್ನಾಟಕ ರಾಜ್ಯ ಮಾನವ…

9 hours ago

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ

ಬೆಂಗಳೂರು : ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಆಗಿದ್ದಾರೆ. ಡಿಕೆಶಿ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

12 hours ago

ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದೆ ದಲಿತರ ಸ್ಥಿತಿ : ಮಾಜಿ ಸಚಿವ ಎನ್.ಮಹೇಶ್‌

ಕೊಳ್ಳೇಗಾಲ : ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದೆ ದಲಿತರ ಸ್ಥಿತಿ ಎಂದು ಮಾಜಿ ಸಚಿವ ಎನ್‌.ಮಹೇಶ್‌ ಮಾರ್ಮಿಕವಾಗಿ…

12 hours ago

ಲೋಕಭವನದ ಗ್ಲಾಸ್‌ಹೌಸ್‌ನಲ್ಲೇ ಡಿಕೆಶಿ ಪ್ರಮಾಣವಚನ ಸ್ವೀಕಾರ ; ಸಾರ್ವಜನಿಕರಿಗಿಲ್ಲ ಪ್ರವೇಶ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲಿಯೇ ನೂತನ ಮುಖ್ಯಮಂತ್ರಿ ಆಯ್ಕೆ ಮತ್ತು ಪ್ರಮಾಣವಚನ ಸ್ವೀಕಾರಕ್ಕೆ…

12 hours ago

ಪೊನ್ನಾಚಿ | ಚಿರತೆ ದಾಳಿಗೆ ಕುರಿ ಬಲಿ

ಹನೂರು : ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಧನಗಾಹಿ ಮೇಲೆ ಚಿರತೆ ದಾಳಿ ನಡೆಸಿದ ವೇಳೆ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.…

13 hours ago

ಮಣಿಪುರದಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಐವರು ಉಗ್ರರ ಬಂಧನ

ಇಂಫಾಲ: ಮಣಿಪುರದ ಇಂಫಾಲ ಪಶ್ಚಿಮ ಮತ್ತು ಪೂರ್ವ ಜಿಲ್ಲೆಗಳಲ್ಲಿ ಎರಡು ನಿಷೇಧಿತ ಸಂಘಟನೆಗಳಿಗೆ ಸೇರಿದ ಐದು ಉಗ್ರರನ್ನು ಭದ್ರತಾ ಪಡೆಗಳು…

15 hours ago