ಅಂಕಣಗಳು

ಸೊಪ್ಪಿನ ಮಡಿಯ ಆರ್ಥಿಕತೆ

• ಎನ್.ಕೇಶವಮೂರ್ತಿ

ಮಂಡ್ಯ ಜಿಲ್ಲೆಯ ರೈತರ ಮನೆಗಳಿಗೆ ನೀವು ಅದೆಷ್ಟು ಜನ ಭೇಟಿ ನೀಡಿದ್ದೀರೋ ಗೊತ್ತಿಲ್ಲ. ಹಾಗೆ ಹೋಗುವ ಸಂದರ್ಭ ಬಂದ್ರೆ ಮನೆಯ ಹಿತ್ತಲಿನಲ್ಲಿ ಒಮ್ಮೆ ಕಣ್ಣು ಹಾಯಿಸಿ. ಅಲ್ಲಿ ಒಂದು ಕೀರೆ ಸೊಪ್ಪಿನ ಮಡಿ ಇರುತ್ತೆ. ಕೆಲವು ಮನೆಗಳಲ್ಲಿ ಎರಡರಿಂದ ಮೂರಿರಬಹುದು. ಆದರೆ ಕೀರೇ ಸೊಪ್ಪಿನ ಮಡಿ ಇರುವುದಂತೂ ಕಡ್ಡಾಯ. ನಾವೂ ಸೊಪ್ಪು ಬೆಳೀತೀವಿ, ಇದರಲ್ಲಿ ಏನಿದೆ ವಿಶೇಷ ಅಂತೀರಾ? ಅದೇ ನಿಜವಾದ ಸ್ವಾರಸ್ಯಕರ ಸಂಗತಿ. ನೋಡಿ, ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ನಂತರ ಕೀರೆ ಸೊಪ್ಪಿನ ಸಸಿ ಮಡಿ ತಯಾರಾಗುತ್ತೆ. ಇದು ಹೆಚ್ಚು ಕಡಿಮೆ ದೀಪಾವಳಿ ಹಬ್ಬದವರೆಗೂ ಹಸಿರಾಗಿರುತ್ತೆ ಹಾಗೂ ನಿರಂತರವಾಗಿ ಸೊಪ್ಪು ನೀಡುತ್ತೆ. ವರುಷದಲ್ಲಿ ಹತ್ತು ತಿಂಗಳು ಸೊಪ್ಪಿಗೆ ಬರವಿಲ್ಲ. ಆಯ್ತು ಇದರಲ್ಲಿ ಏನಿದೆ ಆರ್ಥಿಕತೆ ಅಂತಾ ತಾನೇ ನಿಮ್ಮ ಪ್ರಶ್ನೆ? ಬನ್ನಿ ಅದರ ಬಗ್ಗೆ ತಿಳಿಯುವ ಮೊದಲು ಸೊಪ್ಪಿನ ಮಡಿ ತಯಾರಿಕೆ ಬಗ್ಗೆ ಅರಿಯೋಣ.

ಕೀರೆ ಸೊಪ್ಪಿನ ವಿಶೇಷ ಏನು ಗೊತ್ತಾ? ಇದನ್ನು ನೀವು ಬೇರು ಸಮೇತ ಕೇಳುವ ಹಾಗಿಲ್ಲ. ಬೇರು ಬಿಟ್ಟು, ನೆಲದ ಮೇಲಿನ ಚೂರು ಕಾಂಡ ಬಿಟ್ಟು, ಮೇಲಿನ ಸೊಪ್ಪು ಚಿವುಟಬೇಕು. ಒಂದು ಕಡೆಯಿಂದ ಮನೆಗೆ ಬೇಕಾದಷ್ಟು ಸೊಪ್ಪು ಕುಯ್ದ ಮೇಲೆ, ಮಾರನೆಯ ದಿನ ಉಳಿದ ಭಾಗದಲ್ಲಿ ಸೊಪ್ಪು ಕತ್ತರಿಸಬೇಕು. ಒಂದು ಕಡೆಯಿಂದ ಸೊಪ್ಪು ಕತ್ತರಿಸುತ್ತಾ ಬಂದು, ಇಡೀ ಮಡಿ ಖಾಲಿ ಆಗುವಷ್ಟರಲ್ಲಿ ಮೊದಲ ದಿನ ಸೊಪ್ಪು ಕತ್ತರಿಸಿದ ಕಡೆ ಮತ್ತೆ ಸೊಪ್ಪು ಹುಲುಸಾಗಿ ಬೆಳೆದಿರುತ್ತೆ. ಅಲ್ಲಿಗೆ ಒಂದು ಕೀರೆ ಸೊಪ್ಪಿನ ಮಡಿ, ಅಕ್ಷಯ ಪಾತ್ರೆಯಂತೆ ಕೆಲಸ ಮಾಡುತ್ತೆ. ಮಂಡ್ಯ ಜಿಲ್ಲೆಯ ಪ್ರತಿ ರೈತರ ಮನೆಯಲ್ಲಿ, ಸೊಪ್ಪಿನ ಸಾರು, ರಾಗಿ ಮುದ್ದೆ ಪ್ರತಿ ದಿನ ಇರಲೇಬೇಕು. ಮನೆ ತುಂಬಾ ಜನ ಇದ್ರೆ, ಒಂದು ಸಸಿ ಮಡಿ ಸಾಕಾಗುವುದಿಲ್ಲ. ಆಗ ಜನರ ಸಂಖ್ಯೆಗೆ ಸರಿಯಾಗಿ ಸಸಿ ಮಡಿಗಳ ಸಂಖ್ಯೆ ನಿರ್ಧಾರ ಆಗುತ್ತೆ. ಸಸಿ ಮಡಿ ತಯಾರಿಕೆ ಗಂಡಸರ ಕೆಲಸ ಆದ್ರೆ, ಅದನ್ನು ವರ್ಷಪೂರ್ತಿ ನಿರ್ವಹಣೆ ಮಾಡುವುದು ಮಹಿಳೆಯರು. ಹಾಗಾಗಿ ಸೊಪ್ಪಿನ ಮಡಿ ಮಹಿಳೆಯರ ಪ್ರಪಂಚ. ಎಷ್ಟಾದರೂ ಮನೆ ಸದಸ್ಯರ ಹೊಟ್ಟೆ ಅಗತ್ಯ ಪೂರೈಸುವುದು ಜನನಿ ತಾನೆ.

ಈಗ ಆರ್ಥಿಕತೆ ಬಗ್ಗೆ ಬರೋಣ. ಒಂದು ಸಣ್ಣ ಲೆಕ್ಕಾಚಾರ ಹಾಕಿ. ಪ್ರತಿನಿತ್ಯ ಕೀರೇ ಸೊಪ್ಪನ್ನು ದುಡ್ಡು ಕೊಟ್ಟು ಖರೀದಿ ಮಾಡಿದ್ರೆ ದಿನಕ್ಕೆ ಇಪ್ಪತ್ತು ರೂಪಾಯಿ ಬೇಕು. ಅಲ್ಲಿಗೆ ವರ್ಷಕ್ಕೆ ಏಳು ಸಾವಿರದ ಇನ್ನೂರು ರೂಪಾಯಿಗಳು. ಮನೇಲೇ ಬೆಳೆದಿದ್ರಿಂದ ಅಷ್ಟು ಹಣ ಉಳಿತಾಯ ಆದಂತೆ, ಉಳಿಸಿದ ಒಂದು ರೂಪಾಯಿ ಗಳಿಸಿದ ಎರಡು ರೂಪಾಯಿಗೆ ಸಮ. ಮನೆ ಸದಸ್ಯರು ಸೊಪ್ಪು ತಿನ್ನೋದ್ರಿಂದ ಮಡಿಗೆ ಯಾರೂ ರಾಸಾಯನಿಕ ಗೊಬ್ಬರ ಹಾಕೋಲ್ಲ, ವಿಷ ಹೊಡೆಯೋಲ್ಲ. ಅಲ್ಲಿಗೆ ವಿಷರಹಿತ ಸೊಪ್ಪು ಪ್ರತಿ ನಿತ್ಯ ಸಿಗುತ್ತೆ. ಸೊಪ್ಪಿನ ವಾರದ ಸಾರು ರುಚಿಯಾಗೋದು ತಾಜಾ ಸೊಪ್ಪಿನಿಂದ ಮಾತ್ರ. ಕೃಷಿ ಅಂಕಣ ಅಡುಗೆ ಮನೇಲಿ ಖಾರ ಅರೆದು, ತಾಜಾ ಸೊಪ್ಪು ಕಿತ್ತು, ಸೋಸಿ ರುಚಿಯಾದ ಬಸ್ಸಾರು ತಯಾರಿಸಬಹುದು. ಇನ್ನು ಬಗೆಬಗೆಯ ವಿಷ ರಾಸಾಯನಿಕ ಬಳಸಿ ಬೆಳೆದ ಸೊಪ್ಪು ತಿಂದು ಆರೋಗ್ಯ ಹಾಳಾದ್ರೆ ವೈದ್ಯರಿಗೆ ಖರ್ಚು.

ಇನ್ನು ಒಂದು ಸೊಪ್ಪಿನ ಮಡಿ ಮನೆಯ ಅನೇಕರಿಗೆ ಪ್ರತಿ ದಿನ ಕೆಲಸ ನೀಡುತ್ತೆ. ಇದರ ಜತೆ ಬದನೆ, ಟೊಮ್ಯಾಟೊ, ನುಗ್ಗೆ, ಗೋರೀಕಾಯಿ ಹೀಗೇ ಒಂದಷ್ಟು ತರಕಾರಿ ಹಾಕಿದ್ರೆ, ಆಹಾರದ ಅಗತ್ಯ ನೀಗುತ್ತೆ, ನಿಮ್ಮ ಕೃಷಿ ಕುಟುಂಬದ ಆರೋಗ್ಯಕ್ಕೆ ಸಮತೋಲಿತ ಆಹಾರ ದೊರೆಯುತ್ತೆ. ಒಂದು ಸಣ್ಣ ಸಸಿಮಡಿಯಿಂದ ಆಗುವ ಅನುಕೂಲಗಳು ಇವು. ಈಗ ನಿಮಗೂ ಕೀರೇ ಸಸಿ ಮಡಿ ನಿಮ್ಮ ಮನೆಯ ಹಿತ್ತಲಿನಲ್ಲಿ ಮಾಡುವ ಆಸೆ ಆಗ್ತಿದೆ ಅಲ್ವಾ. ಮತ್ತೇಕೆ ತಡ, ಶುಭಸ್ಯ ಶೀಘ್ರಂ.
keshavamurthy.n@gamil.com

 

andolanait

Recent Posts

ಪರ್ಯಾಯ ವ್ಯವಸ್ಥೆ ಕಲ್ಪಿಸಿ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಆಡಳಿತ ಇದೀಗ…

2 hours ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂವಹನ ಕೊರತೆಯಿಂದ ಪಟ್ಟಕ್ಕೆ ಕುತ್ತು

ರಾಮಕೃಷ್ಣ ಹೆಗಡೆ, ದೇವೇಗೌಡರನ್ನು ನಿರ್ಲಕ್ಷಿಸಿ ಅಧಿಕಾರ ಕಳೆದುಕೊಂಡ ಎಸ್.ಆರ್.ಬೊಮ್ಮಾಯಿ ರಾಜಕಾರಣದಲ್ಲಿ ಸಂವಹನ ಬಹಳ ಮುಖ್ಯ.ಅದರಲ್ಲೂ ಮುಖ್ಯಮಂತ್ರಿ ಹುದ್ದೆಗೇರುವ ನಾಯಕರಿಗೆ ಸಂವಹನ…

2 hours ago

ಚಾಮರಾಜೇಶ್ವರ ರಥೋತ್ಸವಕ್ಕೆ ದ್ವಿಶತಮಾನದ ನವೋತ್ಸಾಹ

ಸಿ.ಎಂ.ನರಸಿಂಹಮೂರ್ತಿ  ಚಾಮರಾಜನಗರ ವನಸಿರಿ ಪ್ರಕೃತಿ ಮಾತೆಯ ತವರೂರು. ವನ್ಯ ಸಂಪತ್ತಿನ ತಾಣ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕ…

2 hours ago

ಕೆ.ಆರ್.ಪೇಟೆ: ಶೇ.19ರಷ್ಟು ಮಳೆ ಕೊರತೆ

ಆರ್.ಶ್ರೀನಿವಾಸ್ ತಾಲ್ಲೂಕಿನಲ್ಲಿ ೩೭,೬೭೧ ಹೆಕ್ಟೇರ್ ಪೈಕಿ ೬,೨೯೦ ಹೆ.ನಲ್ಲಿ ಮಾತ್ರ ಬಿತ್ತನೆ ಕಾರ್ಯ ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನ ಜ.೧ರಿಂದ…

2 hours ago

ಯುಜಿ, ಎಬಿ ಕೇಬಲ್ ಅಳವಡಿಕೆಯೊಂದೇ ಪರಿಹಾರ

ನವೀನ್ ಡಿಸೋಜ ಕೊಡಗಿನಲ್ಲಿ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಬೇಕಿದೆ ಬಹುದೊಡ್ಡ ಮೊತ್ತ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…

2 hours ago

ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಹಣ ವಸೂಲಿ ದಂಧೆ?

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಬಂಡೀಪುರ ಸಮೀಪದ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಸರಕು ಸಾಗಣೆ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ…

2 hours ago