ಅಂಕಣಗಳು

ಸೊಪ್ಪಿನ ಮಡಿಯ ಆರ್ಥಿಕತೆ

• ಎನ್.ಕೇಶವಮೂರ್ತಿ

ಮಂಡ್ಯ ಜಿಲ್ಲೆಯ ರೈತರ ಮನೆಗಳಿಗೆ ನೀವು ಅದೆಷ್ಟು ಜನ ಭೇಟಿ ನೀಡಿದ್ದೀರೋ ಗೊತ್ತಿಲ್ಲ. ಹಾಗೆ ಹೋಗುವ ಸಂದರ್ಭ ಬಂದ್ರೆ ಮನೆಯ ಹಿತ್ತಲಿನಲ್ಲಿ ಒಮ್ಮೆ ಕಣ್ಣು ಹಾಯಿಸಿ. ಅಲ್ಲಿ ಒಂದು ಕೀರೆ ಸೊಪ್ಪಿನ ಮಡಿ ಇರುತ್ತೆ. ಕೆಲವು ಮನೆಗಳಲ್ಲಿ ಎರಡರಿಂದ ಮೂರಿರಬಹುದು. ಆದರೆ ಕೀರೇ ಸೊಪ್ಪಿನ ಮಡಿ ಇರುವುದಂತೂ ಕಡ್ಡಾಯ. ನಾವೂ ಸೊಪ್ಪು ಬೆಳೀತೀವಿ, ಇದರಲ್ಲಿ ಏನಿದೆ ವಿಶೇಷ ಅಂತೀರಾ? ಅದೇ ನಿಜವಾದ ಸ್ವಾರಸ್ಯಕರ ಸಂಗತಿ. ನೋಡಿ, ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ನಂತರ ಕೀರೆ ಸೊಪ್ಪಿನ ಸಸಿ ಮಡಿ ತಯಾರಾಗುತ್ತೆ. ಇದು ಹೆಚ್ಚು ಕಡಿಮೆ ದೀಪಾವಳಿ ಹಬ್ಬದವರೆಗೂ ಹಸಿರಾಗಿರುತ್ತೆ ಹಾಗೂ ನಿರಂತರವಾಗಿ ಸೊಪ್ಪು ನೀಡುತ್ತೆ. ವರುಷದಲ್ಲಿ ಹತ್ತು ತಿಂಗಳು ಸೊಪ್ಪಿಗೆ ಬರವಿಲ್ಲ. ಆಯ್ತು ಇದರಲ್ಲಿ ಏನಿದೆ ಆರ್ಥಿಕತೆ ಅಂತಾ ತಾನೇ ನಿಮ್ಮ ಪ್ರಶ್ನೆ? ಬನ್ನಿ ಅದರ ಬಗ್ಗೆ ತಿಳಿಯುವ ಮೊದಲು ಸೊಪ್ಪಿನ ಮಡಿ ತಯಾರಿಕೆ ಬಗ್ಗೆ ಅರಿಯೋಣ.

ಕೀರೆ ಸೊಪ್ಪಿನ ವಿಶೇಷ ಏನು ಗೊತ್ತಾ? ಇದನ್ನು ನೀವು ಬೇರು ಸಮೇತ ಕೇಳುವ ಹಾಗಿಲ್ಲ. ಬೇರು ಬಿಟ್ಟು, ನೆಲದ ಮೇಲಿನ ಚೂರು ಕಾಂಡ ಬಿಟ್ಟು, ಮೇಲಿನ ಸೊಪ್ಪು ಚಿವುಟಬೇಕು. ಒಂದು ಕಡೆಯಿಂದ ಮನೆಗೆ ಬೇಕಾದಷ್ಟು ಸೊಪ್ಪು ಕುಯ್ದ ಮೇಲೆ, ಮಾರನೆಯ ದಿನ ಉಳಿದ ಭಾಗದಲ್ಲಿ ಸೊಪ್ಪು ಕತ್ತರಿಸಬೇಕು. ಒಂದು ಕಡೆಯಿಂದ ಸೊಪ್ಪು ಕತ್ತರಿಸುತ್ತಾ ಬಂದು, ಇಡೀ ಮಡಿ ಖಾಲಿ ಆಗುವಷ್ಟರಲ್ಲಿ ಮೊದಲ ದಿನ ಸೊಪ್ಪು ಕತ್ತರಿಸಿದ ಕಡೆ ಮತ್ತೆ ಸೊಪ್ಪು ಹುಲುಸಾಗಿ ಬೆಳೆದಿರುತ್ತೆ. ಅಲ್ಲಿಗೆ ಒಂದು ಕೀರೆ ಸೊಪ್ಪಿನ ಮಡಿ, ಅಕ್ಷಯ ಪಾತ್ರೆಯಂತೆ ಕೆಲಸ ಮಾಡುತ್ತೆ. ಮಂಡ್ಯ ಜಿಲ್ಲೆಯ ಪ್ರತಿ ರೈತರ ಮನೆಯಲ್ಲಿ, ಸೊಪ್ಪಿನ ಸಾರು, ರಾಗಿ ಮುದ್ದೆ ಪ್ರತಿ ದಿನ ಇರಲೇಬೇಕು. ಮನೆ ತುಂಬಾ ಜನ ಇದ್ರೆ, ಒಂದು ಸಸಿ ಮಡಿ ಸಾಕಾಗುವುದಿಲ್ಲ. ಆಗ ಜನರ ಸಂಖ್ಯೆಗೆ ಸರಿಯಾಗಿ ಸಸಿ ಮಡಿಗಳ ಸಂಖ್ಯೆ ನಿರ್ಧಾರ ಆಗುತ್ತೆ. ಸಸಿ ಮಡಿ ತಯಾರಿಕೆ ಗಂಡಸರ ಕೆಲಸ ಆದ್ರೆ, ಅದನ್ನು ವರ್ಷಪೂರ್ತಿ ನಿರ್ವಹಣೆ ಮಾಡುವುದು ಮಹಿಳೆಯರು. ಹಾಗಾಗಿ ಸೊಪ್ಪಿನ ಮಡಿ ಮಹಿಳೆಯರ ಪ್ರಪಂಚ. ಎಷ್ಟಾದರೂ ಮನೆ ಸದಸ್ಯರ ಹೊಟ್ಟೆ ಅಗತ್ಯ ಪೂರೈಸುವುದು ಜನನಿ ತಾನೆ.

ಈಗ ಆರ್ಥಿಕತೆ ಬಗ್ಗೆ ಬರೋಣ. ಒಂದು ಸಣ್ಣ ಲೆಕ್ಕಾಚಾರ ಹಾಕಿ. ಪ್ರತಿನಿತ್ಯ ಕೀರೇ ಸೊಪ್ಪನ್ನು ದುಡ್ಡು ಕೊಟ್ಟು ಖರೀದಿ ಮಾಡಿದ್ರೆ ದಿನಕ್ಕೆ ಇಪ್ಪತ್ತು ರೂಪಾಯಿ ಬೇಕು. ಅಲ್ಲಿಗೆ ವರ್ಷಕ್ಕೆ ಏಳು ಸಾವಿರದ ಇನ್ನೂರು ರೂಪಾಯಿಗಳು. ಮನೇಲೇ ಬೆಳೆದಿದ್ರಿಂದ ಅಷ್ಟು ಹಣ ಉಳಿತಾಯ ಆದಂತೆ, ಉಳಿಸಿದ ಒಂದು ರೂಪಾಯಿ ಗಳಿಸಿದ ಎರಡು ರೂಪಾಯಿಗೆ ಸಮ. ಮನೆ ಸದಸ್ಯರು ಸೊಪ್ಪು ತಿನ್ನೋದ್ರಿಂದ ಮಡಿಗೆ ಯಾರೂ ರಾಸಾಯನಿಕ ಗೊಬ್ಬರ ಹಾಕೋಲ್ಲ, ವಿಷ ಹೊಡೆಯೋಲ್ಲ. ಅಲ್ಲಿಗೆ ವಿಷರಹಿತ ಸೊಪ್ಪು ಪ್ರತಿ ನಿತ್ಯ ಸಿಗುತ್ತೆ. ಸೊಪ್ಪಿನ ವಾರದ ಸಾರು ರುಚಿಯಾಗೋದು ತಾಜಾ ಸೊಪ್ಪಿನಿಂದ ಮಾತ್ರ. ಕೃಷಿ ಅಂಕಣ ಅಡುಗೆ ಮನೇಲಿ ಖಾರ ಅರೆದು, ತಾಜಾ ಸೊಪ್ಪು ಕಿತ್ತು, ಸೋಸಿ ರುಚಿಯಾದ ಬಸ್ಸಾರು ತಯಾರಿಸಬಹುದು. ಇನ್ನು ಬಗೆಬಗೆಯ ವಿಷ ರಾಸಾಯನಿಕ ಬಳಸಿ ಬೆಳೆದ ಸೊಪ್ಪು ತಿಂದು ಆರೋಗ್ಯ ಹಾಳಾದ್ರೆ ವೈದ್ಯರಿಗೆ ಖರ್ಚು.

ಇನ್ನು ಒಂದು ಸೊಪ್ಪಿನ ಮಡಿ ಮನೆಯ ಅನೇಕರಿಗೆ ಪ್ರತಿ ದಿನ ಕೆಲಸ ನೀಡುತ್ತೆ. ಇದರ ಜತೆ ಬದನೆ, ಟೊಮ್ಯಾಟೊ, ನುಗ್ಗೆ, ಗೋರೀಕಾಯಿ ಹೀಗೇ ಒಂದಷ್ಟು ತರಕಾರಿ ಹಾಕಿದ್ರೆ, ಆಹಾರದ ಅಗತ್ಯ ನೀಗುತ್ತೆ, ನಿಮ್ಮ ಕೃಷಿ ಕುಟುಂಬದ ಆರೋಗ್ಯಕ್ಕೆ ಸಮತೋಲಿತ ಆಹಾರ ದೊರೆಯುತ್ತೆ. ಒಂದು ಸಣ್ಣ ಸಸಿಮಡಿಯಿಂದ ಆಗುವ ಅನುಕೂಲಗಳು ಇವು. ಈಗ ನಿಮಗೂ ಕೀರೇ ಸಸಿ ಮಡಿ ನಿಮ್ಮ ಮನೆಯ ಹಿತ್ತಲಿನಲ್ಲಿ ಮಾಡುವ ಆಸೆ ಆಗ್ತಿದೆ ಅಲ್ವಾ. ಮತ್ತೇಕೆ ತಡ, ಶುಭಸ್ಯ ಶೀಘ್ರಂ.
keshavamurthy.n@gamil.com

 

andolanait

Recent Posts

ಹನೂರು| ಮೇಕೆ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಮತ್ತಷ್ಟು ಆತಂಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರಬೆಟ್ಟ ಕಾಡಂಚಿನ ಇಂಡಿಗನತ್ತ–ನಾಗಮಲೆ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕ…

7 hours ago

ಮಲೆ ಮಹದೇಶ್ವರನ ಹುಂಡಿಯಲ್ಲಿ 2.16 ಕೋಟಿ ರೂ. ಸಂಗ್ರಹ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ…

7 hours ago

ನೀಟ್‌ ಪರೀಕ್ಷೆ ನಡೆಸುವ ಅಧಿಕಾರ ಆಯಾಯ ರಾಜ್ಯಗಳಿಗೆ ನೀಡಲಿ: ಸಿಎಂ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ವೈದ್ಯಕೀಯ ಕಾಲೇಜುಗಳಿಗೆ ಪರೀಕ್ಷೆ ನಡೆಸುವ ಸಿಇಟಿ ವ್ಯವಸ್ಥೆಯನ್ನು ನಡೆಸಲು ರಾಜ್ಯಗಳಿಗೇ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.…

7 hours ago

ಎಬೋಲಾಗೆ 136 ಮಂದಿ ಬಲಿ: WHO ಕಳವಳ

ಕಾಂಗೋ: ಆಫ್ರಿಕಾದ ಕಾಂಗೋದಲ್ಲಿ ಎಬೋಲಾ ಮಾರಣಾಂತಿಕ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆ 136ಕ್ಕೆ ಏರಿದೆ. ಈ ಬಗ್ಗೆ ವಿಶ್ವ ಆರೋಗ್ಯ…

8 hours ago

ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೇ.25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ…

8 hours ago

ಶೃಂಗೇರಿ ಅಂಚೆ ಮತ ಮರು ಎಣಿಕೆ ಪ್ರಕರಣ: ಯಥಾಸ್ಥಿತಿ ಮುಂದುವರಿಸಲು ಸುಪ್ರೀಂ ಸೂಚನೆ

ನವದೆಹಲಿ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಸಂಬಂಧ ಸುಪ್ರಿಂಕೋರ್ಟ್ ಮುಂದಿನ ಅರ್ಜಿ ವಿಚಾರಣೆಯನ್ನು…

8 hours ago