ಅಂಕಣಗಳು

ಮಹಿಳೆಯರಿಗೆ ನೇರ ನಗದು ವರ್ಗಾವಣೆ ಸಮಾನತೆಯೆಡೆಗೆ ಹೆಜ್ಜೆ

ಸಾಮಾಜಿಕ ಸುಧಾರಣೆಗಳ ಅಂಗವಾಗಿ ಆರ್ಥಿಕ-ಸಾಮಾಜಿಕ ಹಿಂದುಳಿಯುವಿಕೆಯನ್ನು ಹೋಗಲಾಡಿಸಲು ನೋಂದಾಯಿತ ಅರ್ಹರಿಗೆ ನೇರ ನಗದು ವರ್ಗಾವಣೆಗಳು ೧೯೭೦ರ ದಶಕದಿಂದಲೇ ಆರಂಭವಾದವು. ಆಗ ಪೋಷಣೆ ಮಾಡುವವರಿಲ್ಲದ ಹಿರಿಯ ನಾಗರಿಕ ನಿರ್ಗತಿಕರಿಗೆ ಓಲ್ಡ್ ಏಜ್ ಪೆನ್ಷನ್ (Old age Pension) ನಂತಹ ಪಿಂಚಣಿ ಯೋಜನೆಗಳು ಆರಂಭವಾದವು.

ಬ್ಯಾಂಕಿಂಗ್ ಸೇವೆಗಳು ಹಳ್ಳಿಗಳವರೆಗೆ ಇನ್ನೂ ಹೋಗದೇ ಇದ್ದಾಗ ಪೋಸ್ಟ್ ಆಫೀಸ್ ಮನಿ ಆರ್ಡರ್ ಮೂಲಕ ಕಳುಹಿಸಲಾಗುತ್ತಿತ್ತು. ಬ್ಯಾಂಕಿಂಗ್ ವಿಸ್ತರಣೆಯಾದ ನಂತರ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿ ಅವುಗಳ ಮುಖಾಂತರ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಬ್ಯಾಂಕ್ ಸೇವೆಯನ್ನು ಬಳಸುವುದನ್ನು ಕಲಿಸುವ ಯೋಜನೆಯ ಭಾಗವೂ ಇದಾಗಿದೆ. ಮಹಿಳಾ ಸಬಲೀಕರಣದ ಭಾಗವಾಗಿ ಆರ್ಥಿಕ, ಸಾಮಾಜಿಕ ಹಿಂದುಳಿಯುವಿಕೆ ಅನುಭವಿಸುತ್ತಿರುವ ಅರ್ಹ ನೋಂದಾಯಿತ ಮಹಿಳೆಯರಿಗೆ ನೇರ ನಗದು ವರ್ಗಾವಣೆಗಳನ್ನು ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಂದಿಲ್ಲೊಂದು ಯೋಜನೆಯಡಿ ನೇರವಾಗಿಯೋ, ಪರೋಕ್ಷವಾಗಿಯೋ ಮಾಡುತ್ತಿವೆ.

ಅರ್ಹ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿಶೇಷ ಸಹಾಯಧನ ಕೊಡುವ ಯೋಜನೆಗಳೂ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ. ಮಹಿಳೆ ಆರ್ಥಿಕವಾಗಿ ಸಬಲಳಾದರೆ ಸಾಮಾಜಿಕ ಸಮಾನತೆಗೆ ಬಲ ತರುತ್ತದೆ ಎನ್ನುವ ತತ್ವದ ಭಾಗವೇ ಇದಾಗಿದೆ. ಅಲ್ಲದೇ ಅವರ ಆಹಾರದ ಸೇವನೆಯು ಹೆಚ್ಚುವುದಲ್ಲದೇ ಪೌಷ್ಟಿಕತೆಯೂ ಹೆಚ್ಚುತ್ತದೆ ಎಂಬ ವಿಶ್ವಾಸವೂ ಇದರಲ್ಲಿದೆ. ಆರೋಗ್ಯ ಸುಭದ್ರತೆಯ ಆಶಯವೂ ಇದರಲ್ಲಿದೆ. ಆಹಾರ ಸೇವನೆಯಲ್ಲಿ ಪುರುಷ ಮತ್ತು ಸೀಯರಲ್ಲಿ ಇರುವ ಅಸಮಾನತೆಯನ್ನು (ಸೀಯರಲ್ಲಿ ಕಡಿಮೆ ಇರುವುದನ್ನು) ಒಮ್ಮೆಲೇ ಪೂರ್ಣವಾಗಿ ಹೋಗಲಾಡಿಸ ಲಾಗದಿದ್ದರೂ ಕಡಿಮೆ ಮಾಡುತ್ತ ಹೋಗುವುದು ಸಾಧ್ಯವಾಗಬಹುದು. ಅಲ್ಲದೇ ತೀರ ಚಿಕ್ಕ ಮಕ್ಕಳ (ಕೈಗೂಸುಗಳು ಮತ್ತು ಎರಡು , ಮೂರು ವರ್ಷ ವಯಸ್ಸಿನ ಮಕ್ಕಳ) ಪೋಷಣೆಯಲ್ಲಿಯೂ ಈ ವರ್ಗಾವಣೆಗಳಿಂದ ಸುಧಾರಣೆಯಾಗುವುದೆಂದು ಆಶಿಸಲಾಗಿದೆ. ಇದು ಕೌಟುಂಬಿಕ ಹಣಕಾಸು ಸ್ಥಿತಿ ಸುಧಾರಿಸಲು ಸಹಕಾರಿಯಾಗುತ್ತದೆ.

ಇದನ್ನು ಓದಿ: ಉಂಡು ಮಲಗಿದರೂ ನಿಲ್ಲದ ಮುನಿಸು

‘ದಿ ಎಕನಾಮಿಸ್ಟ್’ ಪತ್ರಿಕೆಯ ಒಂದು ವಿಶ್ಲೇಷಣೆಯ ಪ್ರಕಾರ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಆರಂಭವಾದ ರಾಜ್ಯ ಸರ್ಕಾರಗಳ ನಗದು ವರ್ಗಾವಣೆ ಯೋಜನೆ ೨೦೧೩ರಲ್ಲಿ ಆರಂಭವಾದ ಗೋವಾ ಸರ್ಕಾರದ ‘ಗೃಹ ಆಧಾರ’ ಯೋಜನೆ (ಮಾಸಿಕ ೧,೫೦೦ ರೂ. ವರ್ಗಾವಣೆ) ಮಾತ್ರ ಇದ್ದದ್ದು ೨೦೨೪ರ ಹೊತ್ತಿಗೆ ದೇಶಾದ್ಯಂತ ವ್ಯಾಪಿಸಿ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಣ್ಣ ದೊಡ್ಡ ವರ್ಗಾವಣೆ ಯೋಜನೆಗಳೊಂದಿಗೆ ದೇಶದ ಜಿಡಿಪಿಯ ಶೇ.೦೬ರ ಮಟ್ಟಕ್ಕೆ ತಲುಪಿತ್ತು. ಪ್ರಮುಖವಾಗಿ ದೊಡ್ಡ ಮೊತ್ತದ ವರ್ಗಾವಣೆಯ ಯೋಜನೆಗಳನ್ನು ರೂಪಿಸಿರುವ ೧೬ ರಾಜ್ಯಗಳ ಯೋಜನೆಗಳ ವಿವರಗಳನ್ನು ಇಲ್ಲಿನ ಸಂಖ್ಯಾ ಪಟ್ಟಿಯಲ್ಲಿ ಕೊಡಲಾಗಿದೆ.

ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕು ನ್ಯಾಷನಲ್ ಬ್ಯೂರೋ ಆ- ಇಕನಾಮಿಕ್ ರಿಸರ್ಚ್ ಸಂಸ್ಥೆಯೂ ಸೇರಿ ದಂತೆ ಹಲವು ಅಧ್ಯಯನಗಳು ಈ ಯೋಜನೆಗಳ ಮೌಲ್ಯಮಾಪನ ಮಾಡಿರುವ ವರದಿಗಳಿವು. ಅವುಗಳಂತೆ ನೇರ ನಗದು ವರ್ಗಾವಣೆ ಯೋಜನೆಯಿಂದ ಸಾಕಷ್ಟು ಅನುಕೂಲಗಳಾಗಿವೆ. ಮಕ್ಕಳು ಮತ್ತು ಮಹಿಳೆಯರ ಆಹಾರ ಸೇವನೆಯ ಪ್ರಮಾಣ ಜಾಸ್ತಿಯಾಗಿದ್ದು, ಪುರುಷರು, ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕಾಂಶ ಸೇವನೆಯ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತವೆ .

ಒಟ್ಟಾರೆ ಈ ವರ್ಗಾವಣೆಗಳಿಂದ ಹಲವು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯ ಹೆಚ್ಚಾಗಿವೆ ಎಂದು ಅಧ್ಯಯನಗಳು ಹೇಳುತ್ತವೆ. ಈ ವರ್ಗಾವಣೆ ಯೋಜನೆಗಳು ಮುಂದುವರಿಯಬೇಕಲ್ಲದೆ ಅರ್ಹರಿಗೆ ಮತ್ತು ಅವಶ್ಯವಿರುವವರಿಗೆ ತಲುಪಬೇಕು. ಅಲ್ಲದೇ ಸಮಾಜದ ಕಟ್ಟ ಕಡೆಯ ಮಹಿಳೆಯೂ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲತೆ ಹೊಂದಿ ಸಮಾನತೆಯನ್ನು ಅನುಭವಿಸುವವರೆಗೆ ಈ ನೇರ ವರ್ಗಾವಣೆಗಳು ಅವಶ್ಯ. ಇವುಗಳನ್ನು ಸದುಪಯೋಗಪಡಿಸಿಕೊಂಡು ಸಬಲರಾಗಲು ಕುಟುಂಬದ ಎಲ್ಲ ಸದಸ್ಯರು ಮಹಿಳೆಯರಿಗೆ ಸಹಕಾರ ಮತ್ತು ಬೆಂಬಲ ಒದಗಿಸಬೇಕು. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯ ಸಮಪಾಲು ಎಂಬುದನ್ನು ಅರಿಯಬೇಕು.

” ಒಟ್ಟಾರೆ ಈ ವರ್ಗಾವಣೆಗಳಿಂದ ಹಲವು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯ ಹೆಚ್ಚಾಗಿವೆ ಎಂದು ಅಧ್ಯಯನಗಳು ಹೇಳುತ್ತವೆ. ಈ ವರ್ಗಾವಣೆ ಯೋಜನೆಗಳು ಮುಂದುವರಿಯಬೇಕಲ್ಲದೆ ಅರ್ಹರಿಗೆ ಮತ್ತು ಅವಶ್ಯವಿರುವವರಿಗೆ ತಲುಪಬೇಕು.”

-ಪ್ರೊ.ಆರ್.ಎಂ.ಚಿಂತಾಮಣಿ

ಆಂದೋಲನ ಡೆಸ್ಕ್

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

1 hour ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

4 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

4 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

8 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

13 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

13 hours ago