ಮಹಿಳೆ ಸಬಲೆ

ಉಂಡು ಮಲಗಿದರೂ ನಿಲ್ಲದ ಮುನಿಸು

‘ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ನಾಣ್ಣುಡಿಯೇ ಇದೆ. ಆದರೆ, ಬದಲಾದ ಜೀವನಶೈಲಿಯಿಂದಾಗಿ ಗಂಡ-ಹೆಂಡತಿ ಇಬ್ಬರೂ ಹೊರಗೆ ದುಡಿಯಲು ಹೋಗಿ ಸಂಪಾದನೆ ಮಾಡುವುದರಿಂದಾಗಿ ಸಣ್ಣ ಪುಟ್ಟ ವಿಷಯಗಳಿಗೂ ನಿನಗಿಂತ ನಾನೇನು ಕಮ್ಮಿ ಎಂಬ ಇಗೋ(ಉಜಟ) ಬೆಳೆಸಿಕೊಂಡ ಪರಿಣಾಮ ಹಾಲು-ಜೇನಿನಂತಹ ಸಂಬಂಧ ಹಾಳಾಗಿ, ಕೋರ್ಟ್-ಕಚೇರಿ ಅಲೆದು ಕಡೆಗೊಂದು ದಿನ ಗಂಡ-ಹೆಂಡತಿ ಬೇರೆ ಬೇರೆಯೂ ಆಗಿ ಮಕ್ಕಳು ಪರಿತಪಿಸುವ ಸ್ಥಿತಿಗೆ ದೂಡುತ್ತಿರುವ ಸಂಗತಿಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಹೀಗಾಗದಿರಲು ದಂಪತಿಯ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ ಇರುವಂತೆ ಪ್ರತಿಯೊಬ್ಬರ ಜೀವನದಲ್ಲೂ ಒಂದಿಷ್ಟು ಜಗಳಗಳು ಇದ್ದೇ ಇರುತ್ತವೆ. ಇವೆಲ್ಲವೂ ಸಾಮಾನ್ಯ ಅಭ್ಯಾಸಗಳು. ಆದರೆ ಕೆಲವು ತಪ್ಪು ಅಭ್ಯಾಸಗಳು ನಿಧಾನವಾಗಿ ಸಂಬಂಧವನ್ನು ದುರ್ಬಲಗೊಳಿಸಬಹುದು.

ಪ್ರೀತಿ-ಪ್ರೇಮದ ಸಂಬಂಧವಾಗಿರಬಹುದು, ಅಥವಾ ದಾಂಪತ್ಯ ಜೀವನವಾಗಿರಬಹುದು, ಇವುಗಳು ನಿಂತಿರುವುದೇ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳ ಮೇಲೆ. ಹೀಗೆ ಸಂಬಂಧಗಳಲ್ಲಿ ನಂಬಿಕೆ ಮತ್ತು ಗೌರವ ಎನ್ನುವುದು ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ತಿಳಿದೋ- ತಿಳಿಯದೆಯೋ ಕೆಲವೊಂದು ತಪ್ಪುಗಳು ಘಟಿಸಿಬಿಡುತ್ತವೆ. ಆಗ ಹೆಣ್ಣಾಗಲಿ- ಗಂಡಾಗಲಿ ಹೋಗಲಿ ಬಿಡು, ನಡೆಯುವ ಕಾಲು ಎಡವದೆ ಕುಳಿತಾಗ ಎಡವುತ್ತದೆಯೇ ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡಾಗ ಇಲ್ಲವೇ ತಪ್ಪು ಮಾಡಿದವರಿಗೆ ಸಮಾಧಾನದಿಂದ ಬುದ್ಧಿ ಹೇಳಿದಾಗ ಜಗಳ ವಿಪರೀತಕ್ಕೆ ಹೋಗಿ ಸಂಬಂಧ ಹಾಳಾಗುವುದು ತಪ್ಪುತ್ತದೆ.

ಈ ರೀತಿ ಗಂಡ-ಹೆಂಡಿರ ನಡುವೆ ಪರಸ್ಪರ ಹೊಂದಾಣಿಕೆ ಮನೋಭಾವನೆ ಇಲ್ಲವಾದಲ್ಲಿ ಹಾಲು-ಜೇನಿನಂತಹ ಸಂಬಂಧವನ್ನು ಹಾಳು ಮಾಡಲು ಸಣ್ಣಪುಟ್ಟ ವಿಷಯಗಳೇ ಸಾಕು.

ಸಂಗಾತಿಯನ್ನು ಲಘುವಾಗಿ ಕಾಣಬೇಡಿ:  ಸಂಬಂಧದಲ್ಲಿ ಗಂಡ ಅಥವಾ ಹೆಂಡತಿ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪರಸ್ಪರ ಪ್ರಶಂಸೆ ವ್ಯಕ್ತಪಡಿಸುವುದು ಮುಖ್ಯ. ನೀವು ನಿಮ್ಮ ಸಂಗಾತಿಯ ಪ್ರಯತ್ನಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದಾಗ ಅಥವಾ ಯಾವಾಗಲೂ ಅವರನ್ನು ಲಘುವಾಗಿ ಕಾಣತೊಡಗಿದಾಗ ಖಂಡಿತವಾಗಿಯೂ ಸಂಬಂಧದಲ್ಲಿ ಕಂದಕವನ್ನು ಸೃಷ್ಟಿಸುತ್ತದೆ.

ಇದನ್ನು ಓದಿ: ಹೋಲಿಕೆ ಎಂಬುದು ನಿಂದನೆ ಆಗದಿರಲಿ 

ಸಮಯದ ಅಭಾವ: ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೊರಗೆ ಹೋಗುತ್ತಾರಾದರೂ ತನ್ನ ಕುಟುಂಬಕ್ಕಾಗಿ ದಿನದಲ್ಲಿ ಒಂದೆರಡು ಗಂಟೆ, ವಾರದಲ್ಲಿ ಒಂದು ದಿನ ಸಮಯಾವಕಾಶ ನೀಡಲಾರದಷ್ಟು ಒತ್ತಡಕ್ಕೆ ಸಿಲುಕಿದಾಗ ಕುಟುಂಬದಲ್ಲಿ ಪರಸ್ಪರ ಅಂತರಗಳು ಹೆಚ್ಚಾಗುತ್ತಾ ಹೋಗುತ್ತವೆ. ಇದಕ್ಕಾಗಿ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಸಂಬಂಧ ಹಳಸದೆ ಇನ್ನಷ್ಟು ಬಲಗೊಳ್ಳುತ್ತದೆ.

ಸಣ್ಣಪುಟ್ಟ ವಿಷಯಗಳಿಗೆ ಪದೇ ಪದೆ ಅನಗತ್ಯವಾಗಿ ಕಾಲುಕೆರೆದು ಜಗಳ ಆಡುವುದರಿಂದ ಸಂಬಂಧ ಖಂಡಿತಾ ಹಳಸುತ್ತದೆ. ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸದಿದ್ದರೆ, ಆ ಸಂಬಂಧ ಎಂದಿಗೂ ಬಲವಾಗಿರಲು ಸಾಧ್ಯವಿಲ್ಲ. ನೀವು ಅವರ ಆಲೋಚನೆಗಳನ್ನು ಗೌರವಿಸದಿರುವ ಅಥವಾ ಇತರರ ಮುಂದೆ ಅವರನ್ನು ಕೀಳಾಗಿ ನೋಡುವ ಅಭ್ಯಾಸಗಳು ಸಂಗಾತಿಯ ಆತ್ಮವಿಶ್ವಾಸವನ್ನು ಘಾಸಿಗೊಳಿಸುತ್ತವೆ.

ಸಂಬಂಧದಲ್ಲಿ ಪ್ರೀತಿ, ವಿಶ್ವಾಸದ ಜತೆಗೆ ನಂಬಿಕೆಯೂ ಅತ್ಯಂತ ಮುಖ್ಯ. ಹೀಗಿರುವಾಗ ನೀವು ನಿಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸಿದರೆ, ಇಲ್ಲವೇ ನಿಮ್ಮ ಇಚ್ಛೆಗಳನ್ನು ಸಂಗಾತಿಯ ಮೇಲೆ ಹೇರಲು ಪ್ರಾರಂಭಿಸಿ ಅವರನ್ನು ನಿಯಂತ್ರಿಸಲು ಬಯಸಿದರೆ ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಂಗಾತಿಯನ್ನು ಸದಾ ಟೀಕಿಸುವುದು, ಅವರ ಒಳ್ಳೆಯ ಗುಣಗಳನ್ನು ನಿರ್ಲಕ್ಷಿಸುವುದು, ಹೊರಗಿನವರ ಮುಂದೆ ಕಾಲೆಳೆಯುವ ಪ್ರವೃತ್ತಿ ಹೆಚ್ಚಾದಾಗ ಸಂಬಂಧದ ಮಾಧುರ್ಯ ಕೊನೆಗಾಣಬಹುದು ಎಚ್ಚರ.

ಮಾತುಕತೆಯ ಕೊರತೆ, ಮನೆಯಿಂದ ಹೊರಗಿದ್ದಾಗ ಕಚೇರಿ ಕೆಲಸದ ಒತ್ತಡ, ಮನೆಗೆ ಬಂದಾಗ ಮೊಬೈಲ್ ಇಲ್ಲವೇ ಟಿವಿಯಲ್ಲಿ ಮುಳುಗಿ ಹೋಗಿ ಗಂಡ-ಹೆಂಡತಿ ನಡುವೆ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಮಾತುಕತೆಗೆ ಕಡಿವಾಣ ಬಿದ್ದಾಗ, ನೀವು ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳದಿದ್ದರೆ ಅಥವಾ ನಿಮ್ಮ ಸಂಗಾತಿ ತನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದಾಗ ಇಬ್ಬರ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ.

ಜೊತೆಗೆ ಸಂಬಂಧದಲ್ಲಿ ಅಪನಂಬಿಕೆಗೂ ಇದು ಕಾರಣವಾಗಬಹುದು. ಅಲ್ಲದೇ ಹೊರಗಿನವರ ಮೇಲೆ ಆಕರ್ಷಣೆ ಹೆಚ್ಚಾಗಬಹುದು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

15 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

15 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

15 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

15 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

15 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

16 hours ago