BREAKING NEWS

ಲಖನೌ ಕೋರ್ಟ್ನಲ್ಲಿ ಗ್ಯಾಂಗ್​ಸ್ಟರ್ ಮುಖ್ತಾರ್ ಅನ್ಸಾರಿ ಆಪ್ತ ಸಂಜೀವ್ ಜೀವಾಗೆ ಗುಂಡಿಕ್ಕಿ ಬರ್ಬರ ಹತ್ಯೆ

ಲಖನೌ : ಲಖನೌ ನ ಕೈಸರ್ಬಾಗ್ನಲ್ಲಿರುವ ಪಾಸ್ಕೋ ಕೋರ್ಟ್ನ ಗೇಟ್ನಲ್ಲಿ ವಕೀಲರ ಉಡುಪಿನಲ್ಲಿದ್ದ ದುಷ್ಕರ್ಮಿಯೊಬ್ಬ ಗ್ಯಾಂಗ್​ಸ್ಟರ್ ಮುಖ್ತಾರ್ ಅನ್ಸಾರಿ ಆಪ್ತ ಸಂಜೀವ್ ಜೀವಾ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಈ ವೇಳೆ ಓರ್ವ ಪೊಲೀಸ್ ಪೇದೆ ಹಾಗೂ ಒಂದು ಹೆಣ್ಣು ಮಗುವಿಗೆ ಸಹ ಗುಂಡು ತಗುಲಿದೆ.

ಸಂಜೀವ್ ಜೀವಾ, ಕೃಷ್ಣಾನಂದ ರೈ ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ಮುನ್ನಾ ಬಜರಂಗಿ ಮತ್ತು ಮುಖ್ತಾರ್ ಅನ್ಸಾರಿಗೆ ಆಪ್ತನಾಗಿದ್ದ ಎನ್ನಲಾಗಿದೆ. ನ್ಯಾಯಾಲಯದ ಆವರಣದಲ್ಲಿ ಹಗಲು ಹೊತ್ತಿನಲ್ಲಿ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಲಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಲಕ್ನೋ ಕೋರ್ಟ್ ಕ್ಯಾಂಪಸ್ ಗೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಈ ದಾಳಿಯಿಂದಾಗಿ ಮತ್ತೆ ಸಂಚಲನ ಮೂಡಿದೆ. ಪ್ರಯಾಗರಾಜ್ ಹತ್ಯಾಕಾಂಡದ ಸುಮಾರು ನಾಲ್ಕು ತಿಂಗಳ ನಂತರ, ಈ ಹತ್ಯಾಕಾಂಡವು ಸಂಚಲನವನ್ನು ಸೃಷ್ಟಿಸಿದೆ.

ವಕೀಲರ ಸೋಗಿನಲ್ಲಿ ಬಂದ ಕ್ರಿಮಿನಲ್ ಗಳು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಯನ್ನು ಹಿಡಿದು ಪೊಲೀಸರು ಕೇಸರಬಾಗ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸಂಜೀವ್ ಜೀವಾ ಮುಜಾಫರ್ನಗರ ನಿವಾಸಿಯಾಗಿದ್ದು ಮುಖ್ತಾರ್ ಅನ್ಸಾರಿ, ಮುನ್ನಾ ಬಜರಂಗಿ ಮತ್ತು ಭಾಟಿ ಗ್ಯಾಂಗ್ಗಾಗಿ ಕೆಲಸ ಮಾಡುತ್ತಿದ್ದನು. ಈತನ ವಿರುದ್ಧ ಸುಮಾರು ಮೂರು ಡಜನ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಸಂಜೀವ್ ಜೀವಾ ಅವರ ಪತ್ನಿ ಪಾಯಲ್ ಮಹೇಶ್ವರಿ ಕೆಲವು ದಿನಗಳ ಹಿಂದೆ ತನ್ನ ಪತಿಗೆ ಜೀವ ಬೆದರಿಕೆಯನ್ನು ತಿಳಿಸಿ ಭದ್ರತೆಗಾಗಿ ಮನವಿ ಮಾಡಿದ್ದರು. ಇದಾದ ಬಳಿಕ ಅವರ ಭದ್ರತೆಯನ್ನೂ ಹೆಚ್ಚಿಸಲಾಗಿತ್ತು. ಆದರೆ ನ್ಯಾಯಾಲಯದ ಒಳಗೆ ದಾಳಿ ನಡೆಸಿರುವುದು ಆತಂಕವನ್ನುಂಟು ಮಾಡಿದೆ.

ಲಖನೌ ಕೋರ್ಟ್ ಕ್ಯಾಂಪಸ್ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬರ ಹೆಸರು ಲಾಲ್ ಮೊಹಮ್ಮದ್ ಎಂದು ಹೇಳಲಾಗಿದೆ. ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲಿ ಸಂಜೀವ್ ಭಾಟಿ ಎಷ್ಟರ ಮಟ್ಟಿಗೆ ಶಾಮೀಲಾಗಿದ್ದನೆಂದರೆ ಅಂದಿನ ಶಾಸಕರ ಕಾರನ್ನು ಹತ್ತಿಸಿ ಎಕೆ 47 ನಿಂದ 27 ಗುಂಡುಗಳನ್ನು ಹಾರಿಸಿದ್ದರು ಎನ್ನಲಾಗಿದೆ. ಇದರಲ್ಲಿ ಕೃಷ್ಣಾನಂದ ರೈ ಸೇರಿದಂತೆ ಹಲವರು ಸಾವಿಗೀಡಾಗಿದ್ದರು. ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲಿ ಮುಕ್ತಾರ್ ಅನ್ಸಾರಿ ಸೇರಿದಂತೆ ಹಲವರು ಶಿಕ್ಷೆಗೆ ಗುರಿಯಾಗಿದ್ದಾರೆ.

lokesh

Recent Posts

ತಿರಸ್ಕಾರದ ವ್ಯಂಗ್ಯ ಪ್ರತಿಭಟನೆಯ ಸಂಕೇತವಾದಾಗ

ಶೇಷಾದ್ರಿ ಗಂಜೂರು ಸಂಕೇತವನ್ನೇ ಬ್ರಾಂಡ್ ಆಗಿಸಿಕೊಂಡ ದಿಢೀರ್ ಚಳವಳಿಯೊಂದು ಇದ್ದಕ್ಕಿದ್ದಂತೆ ಎದುರು ನಿಂತಾಗ ಅದರ ಬಗೆಗೆ ಒಂದು ಆರೋಗ್ಯಕರ ಸಂದೇಹದ…

2 mins ago

ಕುಕ್ಕರಿನ ಶೀಟಿ ತರಹದ ಜಿರಲೆ ಹೋರಾಟ

ಸುರೇಶ ಕಂಜರ್ಪಣೆ ಜಿರಲೆ ಪಕ್ಷದ ಹುಟ್ಟು ಮತ್ತು ಅದರ ಇತ್ತೀಚಿಗಿನ ಚಳವಳಿ ಕುರಿತು ವರ್ಣರಂಜಿತ ಊಹಾಪೋಹ, ವಿಶ್ಲೇಷಣೆಗಳು ನಡೆದಿವೆ. ಇವೆಲ್ಲಾ…

8 mins ago

ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶ

ಕೃಷ್ಣ ಸಿದ್ದಾಪುರ ಅಣಬೆ ಕೃಷಿ ಗೃಹಿಣಿಯರಿಗೆ ಆದಾಯ ತರುವ ಉದ್ಯಮ ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶಗಳಿದ್ದು,…

3 hours ago

ಮಹಾಭಾರತ: ಹೊಸ ಅರ್ಥ ಕಟ್ಟಲು ಯತ್ನಿಸಿದ ರಾಮು

ʼರಾಮು ಅವರ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿ ಬಿಡುಗಡೆ ಮಾಡಿದ ಚ.ಹ.ರಘುನಾಥ ಅಭಿಮತ ಮೈಸೂರು: ಸಾವಿರಾರು ವರ್ಷಗಳ ಹಿಂದಿನ ಮಹಾಭಾರತವನ್ನು ಸಮಕಾಲೀನ…

3 hours ago

ಹಾಡು-ಪಾಡುವಿನ ರಾಮು ರಾಜ್ಯ

ಓ.ಎಲ್.ನಾಗಭೂಷಣ ಸ್ವಾಮಿ ‘ಹಾಡು-ಪಾಡು ರಾಮು’ ಅಂತಲೇ ಪರಿಚಯವಾಗಿರುವ ರಾಮು ನೆನಪು ಮಾತ್ರವಾಗಿ ಉಳಿದು ಇವತ್ತಿಗೆ ಮೂರು ವರ್ಷ. ರಾಮು ಮಹಾ…

3 hours ago