ಓ.ಎಲ್.ನಾಗಭೂಷಣ ಸ್ವಾಮಿ
‘ಹಾಡು-ಪಾಡು ರಾಮು’ ಅಂತಲೇ ಪರಿಚಯವಾಗಿರುವ ರಾಮು ನೆನಪು ಮಾತ್ರವಾಗಿ ಉಳಿದು ಇವತ್ತಿಗೆ ಮೂರು ವರ್ಷ. ರಾಮು ಮಹಾ ಭಾರತದ ಆಯ್ದ ಪ್ರಸಂಗಗಳನ್ನು ಕನ್ನಡಗೊಳಿಸಿ, ಗೆಳೆಯ ದೇವನೂರ ಮಹಾದೇವ ಸಂಪಾದಿಸಿದ “ಮಹಾಭಾರತ ದೊಳಗಿಂದ ಒಂದಷ್ಟು” ಪುಸ್ತಕವನ್ನು ಅಭಿರುಚಿ ಪ್ರಕಾಶನ ಹೊರತಂದು, ಅದರ ಬಿಡುಗಡೆ ೧೩-೬-೨೦೨೬ ರಂದು ರಂಗಾಯಣದಲ್ಲಿ ಆಯಿತು. ಆ ವರದಿ ಒಳಪುಟಗಳಲ್ಲಿದೆ.
ಮಳೆ ತುಂತುರು ಇದ್ದರೂ ಸುಮಾರು ಇನ್ನೂರು ಜನ ಸಮಾ ರಂಭಕ್ಕೆ ಬಂದಿದ್ದರು. ಅಧಿಕಾರವಿರದೆ ಬದುಕಿದ, ಶ್ರೀಮಂತಿಕೆಯ ಸೋಂಕೂ ಇರದ, ಜಾತಿಯ ಮೈಲಿಗೆಯನ್ನು ಒಂದಿಷ್ಟೂ ಅಂಟಿಸಿಕೊಳ್ಳದೆ ಬದುಕಿದ, ಎಲ್ಲರನ್ನೂ ಪ್ರೀತಿ, ಮರುಕದ ನೋಟದಲ್ಲಿ ನೋಡುತ್ತಿದ್ದ ರಾಮುವಿನ ಪುಸ್ತಕವೆಂದು ಅಭಿಮಾನ, ಪ್ರೀತಿಯಿಂದ ಬಂದವರಲ್ಲಿ ನನಗಿಂತ ಹಿರಿಯರು, ನನ್ನ ಸಮಕಾಲೀನರು, ಕಿರಿಯರು ಮತ್ತು ಈಗಿನ್ನು ಹದಿವಯಸ್ಸು ದಾಟು ತಿರುವವರೂ ಸೇರಿದ್ದರು. ಒಳ್ಳೆಯತನ, ಪ್ರೀತಿ, ಮನುಷ್ಯತ್ವ ಇನ್ನೂ ಜೀವಂತ ಅನ್ನುವುದಕ್ಕೆ ಸಾಕ್ಷಿಯ ಹಾಗಿತ್ತು. ವಿವೇಕವಿದ್ದರೂ ಸ್ಪರ್ಧೆ ಇರದ, ಅಸೂಯೆಯ ನೆರಳೂ ಬೀಳದ, ಬಹಳಷ್ಟು ನೊಂದರೂ ಸಂಕಟಪಟ್ಟರೂ ಮುಗ್ಧತೆಯನ್ನು ಕಳಕೊಳ್ಳದೆ ರಾಮು ಅವನ ಸಂಪರ್ಕಕ್ಕೆ ಬಂದವರ ಬಾಳದಾರಿಯ ದೀಪದ ಹಾಗೆ ಬದುಕಿದ. ಮನುಷ್ಯರು ಸ್ವಭಾವದ ಅತ್ಯುತ್ತಮ ನ್ಯಾಯಾಧೀಶರಾದ ಪುಟ್ಟ ಮಕ್ಕಳು ಯಾವತ್ತೂ ರಾಮುವನ್ನು ಒಲ್ಲೆವೆಂದು ದೂರತಳ್ಳಿದ್ದು ನೋಡಿಲ್ಲ. ವಯಸ್ಸಾದರೂ ಅವನೊಳಗಿನ ಮಗು ಜೀವಂತವಾಗಿತ್ತು. ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ.
ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ. ಅವನು ಮಾಡಿದ ಅನು ವಾದವನ್ನು ಮಹದೇವ ಓರಣಗೊಳಿಸಿ ಸಿದ್ಧಪಡಿಸಿದ್ದಾರೆ. ರಾಮು ತನ್ನ ಓದಿನಿಂದ ಪಡೆದ ಬೆಳಕನ್ನು ನಮಗೆ ದಾಟಿಸಿದ್ದಾನೆ. ಅವನ ವ್ಯಕ್ತಿತ್ವ, ಅವನ ಬರಹ ಎರಡೂ ಬೆಳಕನ್ನು ದಾಟಿಸುವ ಕೆಲಸಗಳೇ. ರಾಮುವಿನ ಸಂಪರ್ಕಕ್ಕೆ ಬಂದವರೆಲ್ಲ ರಾಮ ರಾಜ್ಯದ ಪ್ರಜೆಗಳಾಗುತ್ತಿದ್ದರು. ಈಗ ಮೂರು ವರುಷವಾದರೂ ಆ ಪ್ರೀತಿ ಕರಗಿಲ್ಲ. ಅವನ ನೆನಪು ಬೆಳಕಾಗಿ ಉಳಿದಿರಲಿ ಅನ್ನುವುದು ಹಾರೈಕೆ. ಆಂದೋಲನದಲ್ಲಿ ಸುಮಾರು ಇಪ್ಪತ್ತು ವರ್ಷಗಳಷ್ಟು ಕಾಲ ಅವನು ಬೇರೆ ಬೇರೆ ಹೆಸರುಗಳಲ್ಲಿ ಬರೆದ ಬಗೆ ಬಗೆಯ ಬರಹಗಳುಪ್ರಕಟವಾದರೆ ಅವನ ಓದಿನ ವಿಸ್ತಾರ, ನಿರೂಪಣೆಯಲ್ಲಿ ಕೈಗೊಂಡ ಪ್ರಯೋಗಗಳು ಅರಿವಾಗುತ್ತವೆ. ನಮ್ಮ ತಲೆಮಾರು ಕಂಡ ದೊಡ್ಡ ಜೀವ ಹಾಡು-ಪಾಡು ರಾಮು ಅವನನ್ನು ಬಲ್ಲವರ ಎಲ್ಲರ ಮನಸಿನಲ್ಲಿ ಹೊತ್ತಿಸಿದ ಉತ್ಸಾಹ, ಪ್ರೀತಿಯ ಬೆಳಕು ನಂದದೆ ಇರಲಿ ಅನ್ನುವ ಹಾರೈಕೆ ಇಂದಿನ ಸಮಾರಂಭದ ಹೈಲೈಟ್ ಅನ್ನಿಸಿತು.
ಬಾಕ್ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ. ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ.
ಅಧಿಕಾರದ ಭಾಷೆಯಲ್ಲಿ ಮಾತ್ರ ಮಹಾಕಾವ್ಯಗಳು ಹುಟ್ಟಬೇಕು ಎಂಬ ಕಲ್ಪನೆಯನ್ನು ಪಂಪನು ಮುರಿದಂತೆ, ಈ ನೆಲದ ವಿವೇಕ, ಅನುಭವ ಮತ್ತು ಜನರ ಬದುಕಿನ ಸಂಕಟಗಳನ್ನು ಮಹಾಭಾರತದೊಂದಿಗೆ ಬೆಸೆಯುವ ಮತ್ತೊಂದು ಮಹತ್ವದ ಪ್ರಯತ್ನವನ್ನು ಹಾಡುಪಾಡು ರಾಮು ಅವರು ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯ ಮೂಲಕ ಮಾಡಿದ್ದಾರೆ.
– ಚ.ಹ.ರಘುನಾಥ
” ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ. ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ.”
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…
ಮನುಷ್ಯನಿಗೆ ಅತ್ಯಗತ್ಯವಾಗಿರುವುದು ಆಹಾರ. ಇದಕ್ಕೆ ಕೃಷಿಯೇ ಮೂಲ. ರೈತನ ಪರಿಶ್ರಮದಿಂದ ಜನರು ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗಿದೆ. ಆಧುನಿಕ ಆವಿಷ್ಕಾರಗಳಿಂದ…
ಟಿ.ಕೆ.ಹರೀಶ್ ತಂತ್ರಜ್ಞಾನ ಬಳಕೆ ಅತಿಯಾದರೆ ಮಕ್ಕಳಲ್ಲಿ ಸಹಾನುಭೂತಿ ಕ್ಷೀಣ ಮಾನವೀಯತೆಯ ಮೂಲ ಮಂತ್ರವೇ ಸೌಹಾರ್ದತೆ. ಇದು ಕೇವಲ ಸಹಬಾಳ್ವೆಯಲ್ಲ, ಬದಲಿಗೆ…
ರಾಜಕಾರಣವೀಗ ಅಧಿಕಾರದಾಹಿಗಳ ಅಡ್ಡ ಆಗಿಹೋಗಿದೆ. ಅಧಿಕಾರವಿಲ್ಲದೆ ಯಾರಿಗೂ ಯಾವ ಸೈದ್ಧಾಂತಿಕ ರಾಜಕಾರಣವೂ ಬೇಡವಾಗಿದೆ. ಕಾಲ ಸರಿಯುತ್ತಿದ್ದಂತೆ ನಿತ್ಯದ ರಾಜಕಾರಣದ ಬದಲಾವಣೆಯೂ…
ರೇಣುಕಾ ನಿಡುಗುಂದಿ ಯಾವುದೇ ಒಬ್ಬ ಸರ್ವಾಧಿಕಾರಿ ಅಥವಾ ಭ್ರಷ್ಟ ರಾಜಕಾರಣಿ ಜನರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಿ ಆಡಳಿತ ನಡೆಸುತ್ತಾನೆ.…