Andolana originals

ಹಾಡು-ಪಾಡುವಿನ ರಾಮು ರಾಜ್ಯ

ಓ.ಎಲ್.ನಾಗಭೂಷಣ ಸ್ವಾಮಿ

‘ಹಾಡು-ಪಾಡು ರಾಮು’ ಅಂತಲೇ ಪರಿಚಯವಾಗಿರುವ ರಾಮು ನೆನಪು ಮಾತ್ರವಾಗಿ ಉಳಿದು ಇವತ್ತಿಗೆ ಮೂರು ವರ್ಷ. ರಾಮು ಮಹಾ ಭಾರತದ ಆಯ್ದ ಪ್ರಸಂಗಗಳನ್ನು ಕನ್ನಡಗೊಳಿಸಿ, ಗೆಳೆಯ ದೇವನೂರ ಮಹಾದೇವ ಸಂಪಾದಿಸಿದ “ಮಹಾಭಾರತ ದೊಳಗಿಂದ ಒಂದಷ್ಟು” ಪುಸ್ತಕವನ್ನು ಅಭಿರುಚಿ ಪ್ರಕಾಶನ ಹೊರತಂದು, ಅದರ ಬಿಡುಗಡೆ ೧೩-೬-೨೦೨೬ ರಂದು ರಂಗಾಯಣದಲ್ಲಿ ಆಯಿತು. ಆ ವರದಿ ಒಳಪುಟಗಳಲ್ಲಿದೆ.

ಮಳೆ ತುಂತುರು ಇದ್ದರೂ ಸುಮಾರು ಇನ್ನೂರು ಜನ ಸಮಾ ರಂಭಕ್ಕೆ ಬಂದಿದ್ದರು. ಅಧಿಕಾರವಿರದೆ ಬದುಕಿದ, ಶ್ರೀಮಂತಿಕೆಯ ಸೋಂಕೂ ಇರದ, ಜಾತಿಯ ಮೈಲಿಗೆಯನ್ನು ಒಂದಿಷ್ಟೂ ಅಂಟಿಸಿಕೊಳ್ಳದೆ ಬದುಕಿದ, ಎಲ್ಲರನ್ನೂ ಪ್ರೀತಿ, ಮರುಕದ ನೋಟದಲ್ಲಿ ನೋಡುತ್ತಿದ್ದ ರಾಮುವಿನ ಪುಸ್ತಕವೆಂದು ಅಭಿಮಾನ, ಪ್ರೀತಿಯಿಂದ ಬಂದವರಲ್ಲಿ ನನಗಿಂತ ಹಿರಿಯರು, ನನ್ನ ಸಮಕಾಲೀನರು, ಕಿರಿಯರು ಮತ್ತು ಈಗಿನ್ನು ಹದಿವಯಸ್ಸು ದಾಟು ತಿರುವವರೂ ಸೇರಿದ್ದರು. ಒಳ್ಳೆಯತನ, ಪ್ರೀತಿ, ಮನುಷ್ಯತ್ವ ಇನ್ನೂ ಜೀವಂತ ಅನ್ನುವುದಕ್ಕೆ ಸಾಕ್ಷಿಯ ಹಾಗಿತ್ತು. ವಿವೇಕವಿದ್ದರೂ ಸ್ಪರ್ಧೆ ಇರದ, ಅಸೂಯೆಯ ನೆರಳೂ ಬೀಳದ, ಬಹಳಷ್ಟು ನೊಂದರೂ ಸಂಕಟಪಟ್ಟರೂ ಮುಗ್ಧತೆಯನ್ನು ಕಳಕೊಳ್ಳದೆ ರಾಮು ಅವನ ಸಂಪರ್ಕಕ್ಕೆ ಬಂದವರ ಬಾಳದಾರಿಯ ದೀಪದ ಹಾಗೆ ಬದುಕಿದ. ಮನುಷ್ಯರು ಸ್ವಭಾವದ ಅತ್ಯುತ್ತಮ ನ್ಯಾಯಾಧೀಶರಾದ ಪುಟ್ಟ ಮಕ್ಕಳು ಯಾವತ್ತೂ ರಾಮುವನ್ನು ಒಲ್ಲೆವೆಂದು ದೂರತಳ್ಳಿದ್ದು ನೋಡಿಲ್ಲ. ವಯಸ್ಸಾದರೂ ಅವನೊಳಗಿನ ಮಗು ಜೀವಂತವಾಗಿತ್ತು. ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ.

ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ. ಅವನು ಮಾಡಿದ ಅನು ವಾದವನ್ನು ಮಹದೇವ ಓರಣಗೊಳಿಸಿ ಸಿದ್ಧಪಡಿಸಿದ್ದಾರೆ. ರಾಮು ತನ್ನ ಓದಿನಿಂದ ಪಡೆದ ಬೆಳಕನ್ನು ನಮಗೆ ದಾಟಿಸಿದ್ದಾನೆ. ಅವನ ವ್ಯಕ್ತಿತ್ವ, ಅವನ ಬರಹ ಎರಡೂ ಬೆಳಕನ್ನು ದಾಟಿಸುವ ಕೆಲಸಗಳೇ. ರಾಮುವಿನ ಸಂಪರ್ಕಕ್ಕೆ ಬಂದವರೆಲ್ಲ ರಾಮ ರಾಜ್ಯದ ಪ್ರಜೆಗಳಾಗುತ್ತಿದ್ದರು. ಈಗ ಮೂರು ವರುಷವಾದರೂ ಆ ಪ್ರೀತಿ ಕರಗಿಲ್ಲ. ಅವನ ನೆನಪು ಬೆಳಕಾಗಿ ಉಳಿದಿರಲಿ ಅನ್ನುವುದು ಹಾರೈಕೆ. ಆಂದೋಲನದಲ್ಲಿ ಸುಮಾರು ಇಪ್ಪತ್ತು ವರ್ಷಗಳಷ್ಟು ಕಾಲ ಅವನು ಬೇರೆ ಬೇರೆ ಹೆಸರುಗಳಲ್ಲಿ ಬರೆದ ಬಗೆ ಬಗೆಯ ಬರಹಗಳುಪ್ರಕಟವಾದರೆ ಅವನ ಓದಿನ ವಿಸ್ತಾರ, ನಿರೂಪಣೆಯಲ್ಲಿ ಕೈಗೊಂಡ ಪ್ರಯೋಗಗಳು ಅರಿವಾಗುತ್ತವೆ. ನಮ್ಮ ತಲೆಮಾರು ಕಂಡ ದೊಡ್ಡ ಜೀವ ಹಾಡು-ಪಾಡು ರಾಮು ಅವನನ್ನು ಬಲ್ಲವರ ಎಲ್ಲರ ಮನಸಿನಲ್ಲಿ ಹೊತ್ತಿಸಿದ ಉತ್ಸಾಹ, ಪ್ರೀತಿಯ ಬೆಳಕು ನಂದದೆ ಇರಲಿ ಅನ್ನುವ ಹಾರೈಕೆ ಇಂದಿನ ಸಮಾರಂಭದ ಹೈಲೈಟ್ ಅನ್ನಿಸಿತು.

ಬಾಕ್‌ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ. ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ.

ಅಧಿಕಾರದ ಭಾಷೆಯಲ್ಲಿ ಮಾತ್ರ ಮಹಾಕಾವ್ಯಗಳು ಹುಟ್ಟಬೇಕು ಎಂಬ ಕಲ್ಪನೆಯನ್ನು ಪಂಪನು ಮುರಿದಂತೆ, ಈ ನೆಲದ ವಿವೇಕ, ಅನುಭವ ಮತ್ತು ಜನರ ಬದುಕಿನ ಸಂಕಟಗಳನ್ನು ಮಹಾಭಾರತದೊಂದಿಗೆ ಬೆಸೆಯುವ ಮತ್ತೊಂದು ಮಹತ್ವದ ಪ್ರಯತ್ನವನ್ನು ಹಾಡುಪಾಡು ರಾಮು ಅವರು ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯ ಮೂಲಕ ಮಾಡಿದ್ದಾರೆ.

– ಚ.ಹ.ರಘುನಾಥ 

” ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ. ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ.”

 

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

19 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

19 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

19 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

20 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

20 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

20 hours ago