BREAKING NEWS

ಬಿಎಸ್ಎನ್‌ಎಲ್ ಪುನಶ್ಚೇತನಕ್ಕೆ 89,047 ಕೋಟಿ ರೂ. ಪ್ಯಾಕೇಜ್

ಹೊಸದಿಲ್ಲಿ : ಖಾಸಗಿ ದೂರ ಸಂಪರ್ಕ ಸಂಸ್ಥೆಗಳ ಪೈಪೋಟಿಯಲ್ಲಿ ಮುಚ್ಚುವ ಭೀತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ ಎನ್ ಎಲ್ ಪುನಶ್ಚೇತನಕ್ಕೆ ಕೇಂದ್ರ ಸರಕಾರ 89,047 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಇದರಲ್ಲಿ ಬಿಎಸ್ ಎನ್ ಎಲ್ ಗೆ 4ಜಿ/5ಜಿ ಸ್ಪೆಕ್ಟ್ರಂ ಹಂಚಿಕೆ ಕೂಡ ಸೇರಿದೆ. ಈ ಮೊತ್ತವು ಭಾರತ್ ಸಂಚಾರ್ ನಿಗಮ ಲಿ.( ಬಿಎಸ್ ಎನ್ ಎಲ್) ಪುನಶ್ಚೇತನಕ್ಕೆ ಕಳೆದ ವರ್ಷ ಘೋಷಣೆಯಾದ 1.64 ಲಕ್ಷ ಕೋಟಿ ರೂ. ಪ್ಯಾಕೇಜ್ ಭಾಗವಾಗಿದೆ. ಇದೀಗ ಬಿಎಸ್ ಎನ್ ಎಲ್ ಅಧಿಕೃತ ಬಂಡವಾಳ 1,50,000ಕೋಟಿ ರೂ.ನಿಂದ 2,10,000 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಪುನಶ್ಚೇತನ ಪ್ಯಾಕೇಜ್ ನಿಂದ ಬಿಎಸ್ ಎನ್ ಎಲ್ ಸುಭದ್ರವಾದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿ ರೂಪುಗೊಳ್ಳಲಿದ್ದು, ಭಾರತದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಗಮನ ಕೇಂದ್ರೀಕರಿಸಲಿದೆ ಎಂದು ಸರ್ಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. 

2023-24ನೇ ಹಣಕಾಸು ಸಾಲಿನಲ್ಲಿ ಸರ್ಕಾರ 52,937 ಕೋಟಿ ರೂ. ಬಂಡವಾಳ ನೆರವನ್ನು ಘೋಷಿಸಿತ್ತು. ಇದಕ್ಕಿಂತ ಹಿಂದಿನ ಸಾಲಿನಲ್ಲಿ 44,720 ಕೋಟಿ ರೂ. ಬಂಡವಾಳ ನೆರವು ಘೋಷಿಸಲಾಗಿತ್ತು. ಇತ್ತೀಚಿನ ಸ್ಪೆಕ್ಟ್ರಂ ಹಂಚಿಕೆಯಿಂದ ಬಿಎಸ್ ಎನ್ ಎಲ್ ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 4ಜಿ ಹಾಗೂ 5ಜಿ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ. ವಿವಿಧ ಸಂಪರ್ಕ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಹಾಗೂ ಸಂಪರ್ಕ ಹೊಂದಿರದ ಹಳ್ಳಿಗಳಿಗೆ 4ಜಿ ಕವರೇಜ್ ಅನ್ನು ಬಿಎಸ್ ಎನ್ ಎಲ್ ನೀಡಬಹುದು. 

ಬಿಎಸ್ಎನ್ಎಲ್ / ಎಂಟಿಎನ್ ಎಲ್ ಗೆ 2019ರಲ್ಲಿ ಮೊದಲ ಪುನಶ್ಚೇತನ ಪ್ಯಾಕೇಜ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದು 69,000 ಕೋಟಿ ರೂ. ಪ್ಯಾಕೇಜ್ ಆಗಿದ್ದು, ಬಿಎಸ್ ಎನ್ ಎಲ್ /ಎಂಟಿಎನ್ ಎಲ್ ನಲ್ಲಿ ಸ್ಥಿರತೆ ತಂದಿತ್ತು. 2022ರಲ್ಲಿ ಸರ್ಕಾರ ಬಿಎಸ್ ಎನ್ ಎಲ್/ ಎಂಟಿಎನ್ ಎಲ್ ಗೆ 1.64 ಲಕ್ಷ ಕೋಟಿ ರೂ. ಮೊತ್ತದ ಎರಡನೇ ಪುನಶ್ಚೇತನ ಪ್ಯಾಕೇಜ್ ಗೆ ಅನುಮೋದನೆ ನೀಡಿತ್ತು. ಈ ಎರಡು ಪ್ಯಾಕೇಜ್ ಗಳ ಕಾರಣದಿಂದ 2021-22ನೇ ಹಣಕಾಸು ಸಾಲಿನಿಂದ ಬಿಎಸ್ ಎನ್ ಎಲ್ ಲಾಭ ಗಳಿಸಲು ಪ್ರಾರಂಭಿಸಿತ್ತು. ಬಿಎಸ್ ಎನ್ ಎಲ್ ಮೇಲಿನ ಒಟ್ಟು ಸಾಲದ ಹೊರೆ 32,944 ಕೋಟಿ ರೂ.ನಿಂದ 22,289 ಕೋಟಿ ರೂ.ಗೆ ತಗ್ಗಿತ್ತು. ಹೋಮ್ ಫೈಬರ್ ವಲಯದಲ್ಲಿ ಬಿಎಸ್ ಎನ್ ಎಲ್ ಉತ್ತಮ ಬೆಳವಣಿಗೆ ದಾಖಲಿಸಿದೆ. 

ಬಿಎಸ್ ಎನ್ ಎಲ್ ಈ ಹಿಂದೆ ನಿರಂತರ ನಷ್ಟಕ್ಕೆ ತುತ್ತಾಗಿತ್ತು. 2019-20ನೇ ಸಾಲಿನಲ್ಲಿ ಬಿಎಸ್ ಎನ್ ಎಲ್ ಗೆ 15,500 ಕೋಟಿ ರೂ. ನಷ್ಟವಾಗಿತ್ತು. 2019ರಲ್ಲಿ ಪುನಶ್ಚೇತನ ಪ್ಯಾಕೇಜ್ ನೀಡಿದ ಬಳಿಕ 2020-21 ನೇ ಸಾಲಿನಲ್ಲಿ 7,441 ಕೋಟಿ ರೂ.ಗೆ ಇಳಿಕೆಯಾಗಿತ್ತು.

lokesh

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

28 mins ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

36 mins ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

40 mins ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

42 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

53 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

1 hour ago