ಡಾ.ನೀ.ಗೂ.ರಮೇಶ್

ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರುತ್ತದೆ. ಹೀಗಿರುವಾಗ ಯಾರ ಮಾತುಗಳೂ ಸಂಪೂರ್ಣ ವ್ಯರ್ಥವಲ್ಲ ಎಂಬ ಮಾತೊಂದು ಮಾರ್ಮಿಕವಾಗಿದೆ. ನಮ್ಮಲ್ಲಿ ಹೆಚ್ಚು ಜನರು ಮಾಡುವ ತಪ್ಪೆಂದರೆ, ನಮ್ಮೆದುರು ಮಾತನಾಡುತ್ತಿರುವ ವ್ಯಕ್ತಿ ಯಾರು? ಅವರ ಸ್ಥಾನಮಾನ ಏನು? ಎಂಬುದನ್ನು ಆಧರಿಸಿ ಅವರ ಮಾತುಗಳನ್ನು ಕೇಳಿಸಿಕೊಳ್ಳಕೋಬೇ, ಬೇಡವೋ ಎಂಬುದನ್ನು ನಿರ್ಧಾರ ಮಾಡಿಬಿಡುತ್ತಾರೆ. ಅಲ್ಲಿಂದಲೇ ನಮ್ಮ ಕೇಳಿಸಿಕೊಳ್ಳುವ ಸಾಮರ್ಥ್ಯದ ಕುಸಿತ ಪ್ರಾರಂಭವಾಗುತ್ತದೆ.

ವಾಸ್ತವವಾಗಿ ವೇದಿಕೆಯಲ್ಲಿ ಉಪನ್ಯಾಸ ಕೊಡಬೇಕೆಂದರೆ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಒಂದು ಉತ್ತಮ ಉಪನ್ಯಾಸ ಹಲವು ಪುಸ್ತಕಗಳ ಓದಿಗೆ ಸಮ. ಆಲಿಸುವುದು, ಜೀವಿಯ ಶೈವಾವಸ್ಥೆಯಿಂದಲೂ ಅತ್ಯಂತ ಪ್ರಧಾನ ಪಾತ್ರವಹಿಸುವ ಸಾಮರ್ಥ್ಯವಾಗಿದೆ. ಮಗು ಮಾತು ಕಲಿಯುವುದೇ ಕೇಳಿಸಿಕೊಳ್ಳುವುದರಿಂದ. ಇದು ಭಾಷಾ ಕಲಿಕೆಯ ಮೊದಲ ಹಂತ. ಸರಿ ತಪ್ಪುಗಳ ವಿವೇಚನಾ ಶಕ್ತಿ ಬರುವುದೇ ಬೇರೆಯವರ ಮಾತುಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದರಿಂದ. ಹಾಗಾಗಿಯೇ, ಶ್ರವಣಶಕ್ತಿ ಇಲ್ಲದ ಮಕ್ಕಳು ಮೂಕರೂ, ಬುದ್ಧಿಮಾಂದ್ಯರೂ ಆಗಿಬಿಡುವ ಅಪಾಯವಿರುತ್ತದೆ. ಅದಕ್ಕಾಗಿಯೇ ಶಾಲಾ-ಕಾಲೇಜುಗಳಲ್ಲಿ, ಮನೆಗಳಲ್ಲಿ ‘ಸರಿಯಾಗಿ ಕೇಳಿಸಿಕೊಳ್ಳಿ’ ‘ಗಮನವಿಟ್ಟು ಕೇಳಿಸಿಕೊಳ್ಳಿ’ ಎಂಬ ಮಾತುಗಳನ್ನು ಒತ್ತಿ ಒತ್ತಿ ಹೇಳಲಾಗುತ್ತದೆ.

ಇಂದಿನ ಯುವಜನರಲ್ಲಿ, ವಿದ್ಯಾರ್ಥಿಗಳಲ್ಲಿ ಆಲಿಸುವ ಸಾಮರ್ಥ್ಯ ದಿನೇ ದಿನೇ ಕುಸಿಯುತ್ತಿದೆ. ದೇಹವೊಂದೆಡೆ ಮನಸ್ಸು ಮತ್ತೊಂದೆಡೆಯಾಗಿ ಕೇಳಿಸಿಕೊಂಡಿದ್ದರಲ್ಲಿ ಬಹುಪಾಲು ಮನಸ್ಸಿನಲ್ಲಿ ದಾಖಲಾಗದೆ ಹೋಗುತ್ತಿವೆ. ಇದು ಇಂದಿನ ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಇರುವ ಅತ್ಯಂತ ದೊಡ್ಡ ತೊಡಕಾಗಿದೆ. ಹತ್ತು ನಿಮಿಷಗಳ ಹಿಂದೆ ಹೇಳಿದ ವಿಷಯದ ಕುರಿತು ಕೇಳಿದ ಅಂಶಗಳನ್ನೂ ಹೇಳಲಾಗದಷ್ಟು ಅನ್ಯಮನಸ್ಕತೆ ಇಂದಿನ ಪೀಳಿಗೆಯ ಹೆಚ್ಚು ಜನರನ್ನು ಕಾಡುತ್ತಿದೆ ಎಂಬುದು ಆತಂಕದ ಸಂಗತಿ. ಒಬ್ಬರ ಮಾತುಗಳನ್ನು ಕೇಳಿಸಿಕೊಳ್ಳಲು ಬೇಕಾದ ಸಹನೆ ಯುವಕರಲ್ಲಿ ಕಡಿಮೆಯಾಗುತ್ತಿದೆ. ಎದುರಿಗಿರುವವರು ಪೂರ್ಣ ವಾಕ್ಯ ಮುಗಿಸುವ ಮೊದಲೇ ಪ್ರತ್ಯುತ್ತರ ನೀಡುವುದು, ವಾದ, ವೈಮನಸ್ಯಗಳನ್ನು ಸೃಷ್ಟಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಇಂದಿನ ಈ ಏಕಾಗ್ರತೆಯ ಕೊರತೆ ಹಾಗೂ ಅನ್ಯಮನಸ್ಕತೆಗೆ ಹಲವು ಕಾರಣಗಳಿವೆ

೧.ಮನರಂಜನೆಯ ವಿಷಯಗಳನ್ನೇ ಮನಸ್ಸಿನ ತುಂಬ ತುಂಬಿಕೊಂಡಿರುವುದು.

೨.ಅತಿಯಾಗಿ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಪರದೆಗಳನ್ನು ವೀಕ್ಷಿಸುವುದು.

೩.ಮುಂದಿನ ಗುರಿಯನ್ನು ಗುರುತಿಸಿಕೊಳ್ಳದೆ ಅಸ್ಪಷ್ಟತೆಯಲ್ಲೇ ಕಾಲ ದೂಡುತ್ತಿರುವುದು.

೪.ಅತಿಯಾದ ರಾಸಾಯನಿಕಯುಕ್ತ ಆಹಾರಗಳ ಸೇವನೆ ಮಾಡುತ್ತಿರುವುದು.

೫.ಚಿಕ್ಕ ವಯಸ್ಸಿನಲ್ಲೇ ಹಣ, ವಾಹನದಂತಹ ಚಂಚಲತೆ ಸೃಷ್ಟಿಸುವ ವಸ್ತುಗಳು ಬಳಕೆಗೆ ದೊರಕಿರುವುದು.

ಇವು ಯುವ ಪೀಳಿಗೆಯಲ್ಲಿ ಕೇಳಿಸಿಕೊಳ್ಳುವ ಮತ್ತು ಏಕಾಗ್ರತೆಯ ಸಾಮರ್ಥ್ಯ ಕುಸಿಯಲು ಕಾರಣವಾಗಿದೆ.

ಅತ್ಯಂತ ಎಚ್ಚರಿಕೆಯಿಂದ ಈ ಸಮಸ್ಯೆಯಿಂದ ಹೊರಬರುವ ಬಗ್ಗೆ ಯುವಜನತೆ ಆಲೋಚಿಸಬೇಕಾಗಿದೆ. ನಿರ್ಲಕ್ಷಿಸಿದರೆ, ಮುಂದೆ ಇದೇ ಸಮಸ್ಯೆ ಎಂತಹ ಪ್ರತಿಭಾವಂತರನ್ನೂ ಮೂಲೆಗುಂಪು ಮಾಡಬಹುದಾಗಿದೆ.

‘ಕೇಳಿಸಿಕೊಳ್ಳುವುದು’ ಒಂದು ಹಿತವಾದ, ಸುಖವಾದ ಅನುಭವ. ಈ ಮನಸ್ಥಿತಿಯನ್ನು ಸಾಧಿಸಿದರೆ ನಮ್ಮ ಬೆಳವಣಿಗೆಯನ್ನು, ಆತ್ಮವಿಶ್ವಾಸವನ್ನು ಯಾರಿಂದಲೂ ಕುಗ್ಗಿಸಲಾಗದು. ಅಷ್ಟೇ ಅಲ್ಲ, ಇದರಿಂದ ನಮ್ಮ ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಸರಿಯಾದ ಕ್ರಮದಲ್ಲಿ ಕೇಳಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಮೆದುಳೂ ಕಾರ್ಯಪ್ರವೃತ್ತವಾಗುತ್ತದೆ.

ಸುಧಾರಣೆ ಕ್ರಮಗಳು

೧) ನಿಮಗೆ ಇಷ್ಟವಾದ ಹಾಡು, ವಿಷಯಗಳನ್ನು ಆಡಿಯೋ ರೂಪದಲ್ಲಿ ಕೇಳಿಸಿಕೊಳ್ಳುವುದನ್ನು ಅಭ್ಯಸಿಸುವುದು

೨) ತರಗತಿಯಲ್ಲಿ ಅಥವಾ ಹೊರಗೆ ಉಪನ್ಯಾಸಗಳನ್ನು ಕೇಳುವಾಗ ಪ್ರಜ್ಞಾಪೂರ್ವಕವಾಗಿ ಕೇಳಿಸಿಕೊಂಡು ಅಲ್ಲಿನ ಮುಖ್ಯಾಂಶಗಳನ್ನು ಪಟ್ಟಿ ಮಾಡುವುದು. ಆ ಮೂಲಕ ಪ್ರಶ್ನೆ ಕೇಳಲು ಅಥವಾ ಪ್ರತಿಕ್ರಿಯಿಸಲು ಸಿದ್ಧತೆ ಮಾಡಿಕೊಳ್ಳುವುದು

೩) ಮತ್ತೆ ಮತ್ತೆ ಮೊಬೈಲ್, ಲ್ಯಾಪ್‌ಟಾಪ್, ಟಿವಿಗಳನ್ನು ವೀಕ್ಷಿಸದಿರುವುದು. ಒಮ್ಮೆಗೆ ೧೦ ರಿಂದ ೧೫ ನಿಮಿಷಗಳ ಕಾಲ ಮಾತ್ರ ನೋಡುವುದು

೪) ಎದುರಿದ್ದವರು ಪೂರ್ಣ ಮಾತು ಮುಗಿಸಿದ ನಂತರವಷ್ಟೇ ಅವರಿಗೆ ಪ್ರತಿಕ್ರಿಯಿಸುವುದನ್ನು ಅಭ್ಯಾಸ ಮಾಡಿಕೊಳ್ಳುವುದು

೫) ಆಹಾರದಂತೆ ಆಲೋಚನೆ ಎಂಬ ಮಾತಿದೆ. ಆದಷ್ಟು ಸಹಜ, ಸರಳ ಆಹಾರ ಸೇವನೆ ಮನಸ್ಸಿನ ಶಾಂತತೆ ಮತ್ತು ಏಕಾಗ್ರತೆಯ ವೃದ್ಧಿಗೆ ಇರುವ ಮತ್ತೊಂದು ಮುಖ್ಯವಾದ ಸಂಗತಿಯಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಾನಸ ಗಂಗೋತ್ರಿ ಕ್ಯಾಂಟೀನ್‌ಗಳಲ್ಲಿ ದರ ಏರಿಕೆಗೆ ಕಡಿವಾಣ ಹಾಕಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಖಾಸಗಿ ಹೋಟೆಲ್‌ಗಳಲ್ಲಿ ಕಾಫಿ,ತಿಂಡಿ, ಹಣ್ಣಿನ ಪಾನೀಯ ದರ ದುಬಾರಿಯಾಗಿದ್ದು, ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಬರುವ…

2 hours ago

ಓದುಗರ ಪತ್ರ: ಶಾಲಾ ಶಿಕ್ಷಕರ ಮಾದರಿ ನಡೆ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಿದೆ. ಗದಗ…

2 hours ago

ಓದುಗರ ಪತ್ರ: ರೇಷ್ಮೆ ನೂಲು ಘಟಕಕ್ಕೆ ಹೊಸ ಯಂತ್ರ ಅಳವಡಿಕೆ ಶ್ಲಾಘನೀಯ

ತಿ. ನರಸೀಪುರ ಪಟ್ಟಣದ ರೇಷ್ಮೆ ನೂಲು ತಯಾರಿಕಾ ಘಟಕಕ್ಕೆ ಹೊಸದಾಗಿ ಎರಡು ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಂಡಿರುವುದು ಘಟಕದ ಅಭಿವೃದ್ಧಿಯ…

2 hours ago

ಓದುಗರ ಪತ್ರ: ಶ್ರೀಕಂಠೇಶ್ವರ ದೇಗುಲದ ಆನೆ ಗೌರಿ ಕರೆತರಲು ನಿರ್ಲಕ್ಷ್ಯವೇಕೆ?

ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದ ಪಟ್ಟದ ಆನೆ ಗೌರಿಯನ್ನು ಕಾಲಿನ ಗಾಯ ಹಾಗೂ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ೨೦೧೭ರಲ್ಲಿ ಬೆಂಗಳೂರಿನ…

2 hours ago

ಲಕ್ಷ್ಮಣರೇಖೆ ಕುವೆಂಪು ಕಾವ್ಯಾಭಿವ್ಯಕ್ತಿಗೆ ಆರ್.ಕೆ.ಲಕ್ಷ್ಮಣ್‌ರ ಕಲಾಸ್ಪರ್ಶ

ಎಚ್.ಎಂ.ನಟರಾಜು ಹಾನವಾಡಿ ಕಾವ್ಯ-ಕಲೆಯ ಅನುಸಂಧಾನದ ದಾಖಲೆಯನ್ನು ಸಂಪಾದಿಸಿ ಗ್ರಂಥರೂಪಕ್ಕಿಳಿದ ಡಾ.ಕೆ.ಸಿ.ಶಿವಾರೆಡ್ಡಿ  ಸಾಹಿತ್ಯ ಮತ್ತು ಚಿತ್ರಕಲೆಯ ನಡುವಿನ ಸಂಬಂಧ ಬುದ್ಧಿ ಭಾವಗಳ…

2 hours ago

ಏಕ ಪರದೆಯ ಚಿತ್ರಮಂದಿರ ಅಸ್ತಿತ್ವ , ಚಿತ್ರಗಳ ಪ್ರದರ್ಶನ, ನಿರ್ಮಾಣ ಮಿತವ್ಯಯ ಇತ್ಯಾದಿ

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾನುವಾರ ವಿಚಾರಸಂಕಿರಣವೊಂದನ್ನು ಹಮ್ಮಿಕೊಂಡಿದೆ. ಕನ್ನಡ ಚಿತ್ರರಂಗದ ಸಮಸ್ಯೆಗಳತ್ತ ಪಕ್ಷಿನೋಟ ಬೀರಬಹುದಾದ…

2 hours ago