ಆಂದೋಲನ ಪುರವಣಿ

ಯುವ ಡಾಟ್ ಕಾಮ್ | ಏರುತ್ತಿದ್ದ ಜನಸಂಖ್ಯೆಗೆ ‘ಯುವ’ ಅಂಕುಶ

ಜು.೧೧ ವಿಶ್ವ ಜನಸಂಖ್ಯಾ ದಿನ; ಭಾರತದಲ್ಲಿನ ಯಶಸ್ಸಿಗೆ ಯುವ ಸಮೂಹವೇ ಕಾರಣ

ಇಂದು (ಜುಲೈ ೧೧) ವಿಶ್ವ ಜನಸಂಖ್ಯಾ ದಿನ. ಜಾಗತಿಕವಾಗಿ ಹೆಚ್ಚುತ್ತಿದ್ದ ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ೧೯೮೭ರಲ್ಲಿ ಪ್ರಾರಂಭಿಸಿದ ಈ ಜಾಗೃತಿ ದಿನಾಚರಣೆ ಇಂದು ಫಲ ನೀಡಿದೆ. ಯುವ ಸಮೂಹ ಮನಸ್ಸು ಮಾಡಿದರೆ, ಅವರಲ್ಲಿ ಸೂಕ್ತ ರೀತಿಯ ಅರಿವು ಮೂಡಿಸಿದರೆ ಒಳ್ಳೆಯ ಫಲ ಸಿಕ್ಕೇ ಸಿಕ್ಕುತ್ತದೆ ಎನ್ನುವುದಕ್ಕೆ ವಿಶ್ವಸಂಸ್ಥೆಯ ಆಶಯ ಈಡೇರಿರುವುದೇ ಸಾಕ್ಷಿ.

ಚೀನಾ ಬಿಟ್ಟರೆ ವಿಶ್ವದಲ್ಲಿಯೇ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತ. ದೇಶಕ್ಕೆ ಇದು ಕೊಂಚ ಹೊರೆ ಎನ್ನಿಸಿದರೂ ಇದರಲ್ಲಿ ಬಹುಪಾಲು ಯುವ ಸಮೂಹವೇ ಇದೆ ಎನ್ನುವುದು ನಮ್ಮ ಶಕ್ತಿ. ಇದಕ್ಕಾಗಿಯೇ ಭಾರತವನ್ನು ಯುವ ದೇಶ ಎಂದು ಕರೆಯುವುದು. ಜಾಗತಿಕವಾಗಿ ಬಲಿಷ್ಠವಾಗುತ್ತಿರುವ ಭಾರತ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಜೊತೆಗೆ ಭವಿಷ್ಯಕ್ಕೆ ದೇಶ ಹೇಗಿರಬೇಕು ಎನ್ನುವ ಸ್ಪಷ್ಟ ಕಲ್ಪನೆಯನ್ನು ಇಟ್ಟುಕೊಂಡು ಮುಂದೆ ಸಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ಇರುವ ಯುವ ಶಕ್ತಿ ಸರಿಯಾದ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿರುವುದು. ಇದರಲ್ಲಿ ಜನಸಂಖ್ಯಾ ನಿಯಂತ್ರಣವೂ ಒಂದು.

ಭಾರತದ ಅತ್ಯುತ್ತಮ ಸಾಧನೆ

೬೦ರ ದಶಕದಲ್ಲಿ ಶೇ.೪೦ರಷ್ಟಿದ್ದ ದೇಶದ ಜನಸಂಖ್ಯಾ ಬೆಳವಣಿಗೆ ೭೦,೮೦ ರ ದಶಕದ ವರೆಗೂ ಹೆಚ್ಚು ಕಡಿಮೆ ಅದೇ ವೇಗದಲ್ಲಿ ಇತ್ತು. ಜಾಗತಿಕವಾಗಿ ಇದೊಂದು ಸಮಸ್ಯೆಯಾಗಿ ಕಾಡತೊಡಗಿದಾಗ ವಿಶ್ವಸಂಸ್ಥೆ ಜನಸಂಖ್ಯಾ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿತು. ವಿವಿಧ ದೇಶಗಳು ಕಾನೂನುಗಳನ್ನು ರೂಪಿಸಿ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾದವು. ಆಗ ಬಡತನ, ಹಸಿವು, ನಿರುದ್ಯೋಗ, ಅನಾರೋಗ್ಯ ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಹೊದ್ದು ಮಲಗಿದ್ದ ಭಾರತ ತಾನು ಜನಸಂಖ್ಯೆ ನಿಯಂತ್ರಣ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದು ಅರಿತು ಜಾಗೃತಿ ಮೂಡಿಸಲು ಮುಂದಾಯಿತು. ಅದರಲ್ಲಿಯೂ ಮುಖ್ಯವಾಗಿ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡು ಕಾಲೇಜು ಹಂತಗಳಲ್ಲಿಯೇ ವಿದ್ಯಾರ್ಥಿಗಳಿಗೆ ಜನಸಂಖ್ಯೆ ನಿಯಂತ್ರಣದ ಅನಿವಾರ್ಯತೆಯನ್ನು ತಿಳಿಸಿತು. ಇದರ ಪರಿಣಾಮವಾಗಿ ೨೦೦೦ನೇ ಇಸವಿಗೆ ಜನಸಂಖ್ಯೆ ಏರಿಕೆ ಪ್ರಮಾಣ ಶೇ.೨೫ಕ್ಕೆ ಇಳಿಯಿತು. ಮುಂದೆ ೨೦೧೫ರಿಂದೀಚೆಗೆ ಶೇ. ೨೦ಕ್ಕಿಂತಲೂ ಕೆಳಗೆ ಇಳಿದು ೨೦೨೦ ರಲ್ಲಿ ಶೇ.೧೭.೪ ಜನಸಂಖ್ಯೆ ಪ್ರಗತಿ ದಾಖಲಾಗಿದೆ.

ಹಾದಿ ಬೀದಿಗಳಲ್ಲಿ ಜಾಗೃತಿ

ಮನೆಗೊಂದು ಮಗು ಊರಿಗೊಂದು ವನ, ನಾವಿಬ್ಬರು ನಮಗಿಬ್ಬರು, ಆರತಿಗೊಬ್ಬ ಕೀರ್ತಿಗೊಬ್ಬಳು, ಪುಟ್ಟ ಕುಟುಂಬ ಸುಖೀ ಕುಟುಂಬ ಹೀಗೆ ನಾನಾ ಬಗೆಯ ಜಾಗೃತಿ ಸಂದೇಶಗಳನ್ನು ಸರ್ಕಾರ ಹಳ್ಳಿ ಹಳ್ಳಿಗಳಲ್ಲಿಯೂ ಪ್ರಚಾರ ಮಾಡಿತು. ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚು ಮಾಡಿ ಹುಟ್ಟಿದ ಮಕ್ಕಳಲ್ಲಿ ಬಹುಪಾಲು ಮಕ್ಕಳು ಬದುಕುಳಿಯುವಂತೆ ನೋಡಿಕೊಳ್ಳಲಾಯಿತು. ಪೌಷ್ಠಿಕ ಆಹಾರ ವಿತರಣೆ ಮಾಡಿ ಭವಿಷ್ಯದಲ್ಲಿ ಆರೋಗ್ಯವಂತ ಯುವ ಸಮುದಾಯ ಸೃಷ್ಟಿಯಾಗುವಂತೆ ಎಲ್ಲ ಸರ್ಕಾರಗಳೂ ನೋಡಿಕೊಂಡವು ಇದೆಲ್ಲದರ ಪರಿಣಾಮ ದೇಶ ಮಾನವ ಸಂಪನ್ಮೂಲಕ ಕೇಂದ್ರವಾಯಿತು.

ಜನಸಂಖ್ಯಾ ನಿಯಂತ್ರಣ ಯಶಕ್ಕೆ ಕಾರಣ

* ಯುವ ಜನತೆಯಲ್ಲಿ ಅರಿವು

* ಬಾಲ್ಯ ವಿವಾಹ ನಿಷೇಧ

* ಆರೋಗ್ಯ ಕ್ಷೇತ್ರದ ಸುಧಾರಣೆ

* ವಿದ್ಯಾರ್ಥಿ ಮಟ್ಟದಲ್ಲಿಯೇ ಜಾಗೃತಿ

* ರಾಜ್ಯಗಳ ಸಮರ್ಪಕ ಕಾರ್ಯ ನಿರ್ವಹಣೆ

 

andolanait

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

7 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

7 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

9 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

10 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

14 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

14 hours ago