ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟ್ರು | ಬದುಕು ಕೊಟ್ಟ ಮೇಷ್ಟ್ರಿಗೆ ಸಾವಿರ ಶರಣು

– ಶಿಲ್ಪ ಎಚ್.ಎಸ್. ಶಿಕ್ಷಕರು

ನನ್ನ ನೆಚ್ಚಿನ ಶಿಕ್ಷಕ ಸಾಲಿನಲ್ಲಿ ಮೊದಲು ನಿಲ್ಲುವವರು ಎಂ.ವಿ. ಮಹಾದೇವಪ್ಪ. ಕನ್ನಡ ಮೇಷ್ಟ್ರು, ನಮ್ಮ ಪ್ರೀತಿಯ ಮೇಷ್ಟ್ರು. ನಾನು ಓದಿದ್ದು ಎಚ್.ಡಿ.ಕೋಟೆಯ ಚಂದ್ರಮೌಳೇಶ್ವರ ಪ್ರೌಢಶಾಲೆಯಲ್ಲಿ. ಖಾಸಗಿ ಶಾಲೆ ಆಗಿದ್ದರೂ ಅಂದಿನ ಕಾಲಕ್ಕೆ ಸೂಕ್ತ ಪೀಠೋಪಕರಣಗಳ ಕೊರತೆ ಇತ್ತು. ಆದರೆ ಅದೆಲ್ಲವನ್ನೂ ಮರೆಸಿ ನಮ್ಮನ್ನು ಪರಿಸರದ ಮಡಿಲಿನಲ್ಲಿ ಕೂರಿಸಿ ಪಾಠ ಮಾಡುತ್ತಿದ್ದರು. ಅಲ್ಲಿಯೇ ನಮಗೆ ಕೊರತೆಗಳನ್ನು ಮರೆತು ಇರುವುದರಲ್ಲಿಯೇ ಚೆಂದದ ಅನುಭವ ಕಟ್ಟಿಕೊಳ್ಳಬೇಕು ಎಂದು ಕಲಿಸಿಕೊಟ್ಟಿದ್ದರು.

ನಾನು ೮ನೇ ತರಗತಿಯಲ್ಲಿದ್ದಾಗ ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕರು ಇರಲಿಲ್ಲ. ಆಗ ಈ ವಿಷಯಗಳನ್ನು ನಮ್ಮ ಮುಖ್ಯ ಶಿಕ್ಷಕರಾದ ಮಹಾದೇವಪ್ಪನವೇ ಬೋಧಿಸುತ್ತಿದ್ದರು. ಅವರ ಬೋಧನೆ ಯಾವ ಪರಿಣತ ಶಿಕ್ಷಕರಿಗೂ ಕಡಿಮೆ ಇರಲಿಲ್ಲ. ನನಗೆ ಬೇರೆ ವಿಷಯಗಳಲ್ಲಿ ಆಸಕ್ತಿ ಕಡಿಮೆಯಾಗಿ ಗಣಿತ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಿತು. ನಂತರ ೯ನೇ ತರಗತಿಗೆ ಬಂದಾಗ ಹೊಸದಾಗಿ ವಿಜ್ಞಾನ ಶಿಕ್ಷಕರು ನೇಮಕವಾದರು. ಅವರೂ ಅತ್ಯುತ್ತಮವಾಗಿ ಪಾಠ ಮಾಡುತ್ತಿದ್ದರು. ಅವರ ಪ್ರಕಾರ ಮೊದಲ ಕಿರು ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸುತ್ತೆವೆಯೋ ಅದಕ್ಕಿಂತ ಹೆಚ್ಚು ಅಂಕಗಳನ್ನು ಮುಂದಿನ ಕಿರು ಪರೀಕ್ಷೆಯಲ್ಲಿ ಪಡೆಯಬೇಕಿತ್ತು. ಆದರೆ ನಾನು ಭೌತಶಾಸ್ತ್ರದಲ್ಲಿ ಮೊದಲು ೨೪ ಅಂಕಗಳಿಸಿ ನಂತರ ೧೮ ಅಂಕ ಗಳಿಸಿದ್ದೆ. ಇದಕ್ಕೆ ಸಿಟ್ಟಾಗಿದ್ದ ವಿಜ್ಞಾನ ಶಿಕ್ಷಕರು ನನಗೆ ಪೆಟ್ಟು ನೀಡಿದ್ದರು. ಇದನ್ನು ಗಮನಿಸಿದ ನಮ್ಮ ಮುಖ್ಯ ಶಿಕ್ಷಕರಾದ ಮಹಾದೇವಪ್ಪನವರು ನನ್ನನ್ನು ಕರೆದು ನಾನು ಮಾಡಿದ ತಪ್ಪಿನ ಬಗ್ಗೆ ತಿಳಿಸಿದರು. ಹೇಗೆ ಪರೀಕ್ಷೆ ಎದುರಿಸಬೇಕು, ಏನು ಮಾಡಬೇಕು ಎಂದು ತಿಳಿಸಿದರು.

ಅಂದಿನಿಂದ ನಾನು ಆಸಕ್ತಿಯಿಂದ ಭೌತಶಾಸ್ತ್ರ ಓದಲು ಶುರುಮಾಡಿದೆ. ೧೦ನೇ ತರಗತಿಯಲ್ಲಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕಗಳಿಸಿ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡೆ. ನಂತರ ವಿಜ್ಞಾನ ವಿಷಯದಲ್ಲಿಯೇ ಬಿಎಸ್ಸಿ ಮಾಡಿ, ಬಿಎಡ್ ಓದಿ ಇಂದು ವಿಜ್ಞಾನ ಶಿಕ್ಷಕಿಯಾಗಿದ್ದೇನೆ.

ಇದಕ್ಕೆಲ್ಲ ನಮ್ಮ ಗುರುಗಳೇ ಕಾರಣ. ಅವರ ಕಲಿಸಿದ ಪಾಠ, ಅವರ ಸರಳ ಮಾತು, ನಡೆ, ಮೃದು ಸ್ವಭಾವ, ನಮ್ಮನ್ನು ತಿದ್ದಿ, ಬುದ್ದಿ ಹೇಳಿದ ಪರಿ ಅನನ್ಯ. ನನ್ನ ಜೀವನ ರೂಪಿಸಿಕೊಳ್ಳಲು ನೆರವಾದ ನನ್ನ ಗುರು ಮಹಾದೇವಪ್ಪನವರಿಗೆ ಅನಂತ ಧನ್ಯವಾದಗಳು.

– ಶಿಲ್ಪ ಎಚ್.ಎಸ್. ಶಿಕ್ಷಕರು

 

andolanait

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

3 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

3 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

4 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

6 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

10 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

10 hours ago