Andolana originals

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ

ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ

ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ ಎಚ್.ಆರ್.ಮೂರ್ತಿರವರು ಬೆಳೆದಿರುವ ಬರೋಬ್ಬರಿ ೧ ಕೆಜಿ ೫೨೦ ಗ್ರಾಂ ತೂಕ ಹೊಂದಿರುವ ಅಮೆರಿಕ ಮೂಲದ ‘ರೀಡ್’ ತಳಿಯ ಬಟರ್ ಫ್ರೂಟ್ (ಅವಕಾಡೊ) ಹಣ್ಣು ಎಲ್ಲರ ಗಮನ ಸೆಳೆಯುತ್ತಿದೆ.

ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಸಾವಯವ ಕೃಷಿಕ ಎಚ್.ಆರ್.ಮೂರ್ತಿ ಅವರ ತೋಟದಲ್ಲಿ ಬೆಳೆದಿರುವ, ಕರ್ನಾಟಕದ ಮಟ್ಟಿಗೆ ಅತ್ಯಂತ ಹೆಚ್ಚು ತೂಕ ಹೊಂದಿರುವ ಬಟರ್ಫ್ರೂಟ್ ಇದಾಗಿದೆ. ಬಟರ್ಫ್ರೂಟ್ಟ್ ಹೆಚ್ಚಿನ ಎಣ್ಣೆ ಅಂಶ, ನೈಜ ಬಟರ್ ರುಚಿ ಹಾಗೂ ನಟ್ಟಿ ಫ್ಲವರ್ ಹೊಂದಿದ್ದು, ಸಂಪೂರ್ಣವಾಗಿ ಶೇ.೧೦೦ ಸಾವಯವ ಪದ್ಧತಿಯಲ್ಲಿ, ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ಬೆಳೆದಿ ರುವುದು ವಿಶೇಷ.

ಪ್ರಸ್ತುತ ವಿಶ್ವ ಮಟ್ಟದಲ್ಲಿ ಅಮೆರಿಕದಲ್ಲಿ ಬೆಳೆದ ೨ ಕೆಜಿ ೫೪೦ ಗ್ರಾಂ ತೂಕದ ಬಟರ್ ಫ್ರೂಟ್ ಗಿನ್ನಿಸ್ ದಾಖಲೆ ಹೊಂದಿದೆ. ಆದರೆ ಅದು ‘ರೀಡ್’ ತಳಿಯದ್ದಲ್ಲ. ಭಾರತದಲ್ಲಿ ಸಾಮಾನ್ಯವಾಗಿ ೬೦೦ ರಿಂದ ೮೦೦ ಗ್ರಾಂ ತೂಕದ ಹಣ್ಣುಗಳೇ ಹೆಚ್ಚಿನ ತೂಕದ್ದು ಎಂದು ಪರಿಗಣಿಸಲಾಗಿದೆ.

ಕ್ಯಾತನಹಳ್ಳಿಯಲ್ಲಿ ಜಮೀನು ಖರೀದಿಸಿ ಸಾವಯವ ಕೃಷಿ ಮಾಡುತ್ತಿರುವ ಎಚ್.ಆರ್.ಮೂರ್ತಿ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ವೃತ್ತಿಯಿಂದ ಹೋಟೆಲ್ ಉದ್ಯಮಿಯಾಗಿದ್ದು, ಮೈಸೂರು ನಗರದ ಹುಣಸೂರು ರಸ್ತೆಯಲ್ಲಿ ಗ್ರಾಂಡ್ ಪಾಸ್ ಹೋಟೆಲ್ ಅನ್ನೂ ನಡೆಸುತ್ತಿದ್ದಾರೆ. ಕೃಷಿ ಅವರ ಕುಟುಂಬದ ಪರಂಪರೆಯಾಗಿದ್ದು, ಅದನ್ನು ಆಧುನಿಕ ಸಾವಯವ ತಂತ್ರಜ್ಞಾನದೊಂದಿಗೆ ಮುಂದುವರಿಸಿದ್ದಾರೆ. ತೋಟದಲ್ಲಿ ಒಂದೇ ಒಂದು ಹಂತದಲ್ಲಿಯೂ ರಾಸಾಯನಿಕ ಗೊಬ್ಬರ ಬಳಸದೆ, ದನದ ಗೊಬ್ಬರ, ಜೀವಾಮೃತ, ತರಗೆಲೆಯಿಂದ ತಯಾರಿಸಿದ ಸಾವಯವ ಗೊಬ್ಬರ ಹಾಗೂ ನೈಸರ್ಗಿಕ ಪೋಷಕಾಂಶಗಳ ಮೂಲಕವೇ ವೈವಿಧ್ಯಮಯ ಹಣ್ಣಿನ ಹಾಗೂ ಇತರ ಬೆಳೆಗಳನ್ನು ಬೆಳೆಸಲಾಗಿದೆ. ಅವುಗಳಲ್ಲಿ ರೀಡ್ ತಳಿಯ ಬಟರ್ ಫ್ರೂಟ್ಟ್‌ನ ೮ ಮರಗಳು, ಇತರೆ ತಳಿಯ ೩೦೦ ಮರಗಳು, ಡ್ರಾಗನ್ ಫ್ರೂಟ್ ೩,೬೦೦ ಗಿಡಗಳು, ಸಪೋಟ ೩೦೦ ಮರಗಳು, ಕೇಸರ್ ಹಾಗೂ ಮಲ್ಲಿಕಾ ತಳಿಯ ಮಾವು ೪೦೦ ಮರಗಳು, ತೆಂಗು ೭೦೦, ಅಡಕೆ ೫,೫೦೦, ಮೆಣಸು ೧,೫೦೦ ಗಿಡಗಳು, ಪಯಾನಿ ೧,೨೦೦ ಗಿಡಗಳು ಅಲ್ಲದೆ, ಬಾಳೆ, ಲಿಂಬೆ, ಹಲಸು ಸೇರಿದಂತೆ ವಿವಿಧ ಹಣ್ಣಿನ ಬೆಳೆಗಳನ್ನು ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆಸಲಾಗಿದೆ.

ದಾಖಲೆ ತೂಕದ ಬಟರ್ ಫ್ರೂಟ್ ಬೆಳೆಯುವ ಮೂಲಕ ಎಚ್.ಆರ್. ಮೂರ್ತಿ ಅವರು ಸಾವಯವ ಕೃಷಿ ಯಲ್ಲಿಯೂ ಉತ್ತಮ ಗುಣಮಟ್ಟದ ಹಾಗೂ ಹಾಗೂ ಹೆಚ್ಚಿನ ತೂಕದ ಹಣ್ಣುಗಳನ್ನು ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

” ಸಾವಯವ ಕೃಷಿ ಪದ್ಧತಿ, ಮುಂದಾಲೋಚನೆಯಿಂದ ಪರ್ಯಾಯ ತೋಟದ ಬೆಳೆಗಳು ಮತ್ತು ಹಣ್ಣಿನ ಬೆಳೆಗಳನ್ನು ಬೆಳೆದರೆ ರೈತ ಏನನ್ನಾದರೂ ಸಾಧಿಸಬಹುದು ಹಾಗೂ ಆರ್ಥಿಕವಾಗಿ ಮೇಲೆ ಬರಬಹುದು. ಇದಕ್ಕೆ ತಾಳ್ಮೆ ಮತ್ತು ಬುದ್ಧಿವಂತಿಕೆ ಮುಖ್ಯ. ವಿದೇಶದ ಹಣ್ಣಿನ ಬೆಳೆಗಳನ್ನು ಅವರಿಗೆ ಸರಿಸಮನಾಗಿ ನಾವೂ ಬೆಳೆಯಬಹುದು ಎಂಬುದನ್ನು ನಮ್ಮ ಮಣ್ಣಿನಲ್ಲಿ ಬೆಳೆದು ತೋರಿಸಿದ್ದೇನೆ.”

-ಎಚ್.ಆರ್.ಮೂರ್ತಿ, ಸಾವಯವ ಕೃಷಿಕ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

17 mins ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

19 mins ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

21 mins ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

23 mins ago

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

13 hours ago