ಆಂದೋಲನ ಪುರವಣಿ

ಯೋಗಕ್ಷೇಮ : ಹಿಮ್ಮಡಿ ನೋವಿದ್ದರೆ ಹೀಗೆ ಮಾಡಿ

ವಯಸ್ಸಾಗುತ್ತಾ ಹೋದಂತೆ ಹಿಮ್ಮಡಿ, ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಫ್ಲಾಂಟರ್ ಫಾಸಿಟಿಸ್ ಎನ್ನುತ್ತಾರೆ. ಬೆಳಿಗ್ಗೆ ಏಳುವಾಗಲೇ ನೋವು, ನಡೆದಾಡುವಾಗ ಏನೋ ಚುಚ್ಚಿದ ರೀತಿಯ ಅನುಭವ, ಮಾಂಸಖಂಡಗಳಲ್ಲಿ ಸೆಳೆತ ಉಂಟಾಗುವುದು ಈ ಸಮಸ್ಯೆಯ ಲಕ್ಷಣಗಳು.

ನೋವು ಕಾಣಿಸಿಕೊಂಡಾಗಿ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಂಡು ತಕ್ಷಣಕ್ಕೆ ನೋವಿನಿಂದ ಪಾರಾಗಬಹುದು. ಆದರೆ ಇದರಿಂದ ದೀರ್ಘಕಾಲೀನ ಪರಿಹಾರ ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕೆಳಗಿನ ಸರಳ ಮಾರ್ಗಗಳನ್ನು ಅನುಸರಿಸಿದರೆ ಹಿಮ್ಮಡಿ, ಪಾದಗಳ ನೋವಿಗೆ ಪರಿಹಾರ ಸಿಗುತ್ತದೆ.

* ಬೆಳಿಗ್ಗೆ ಏಳುವ ಮುನ್ನವೇ ಮಲಗಿದ್ದಲ್ಲೇ ಎರಡೂ ಪಾದಗಳನ್ನು ಒಟ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ-ಹಿಂದಕ್ಕೆ ಆಡಿಸಿ. ಈ ರೀತಿಯಾಗಿ ಕನಿಷ್ಟ ೫೦ ಬಾರಿ ಮಾಡಿರಿ. ಇದರಿಂದ ಇಡೀ ದಿನ ಪಾದಗಳ ನೋವು ಕಾಣಿಸಿಕೊಳ್ಳುವುದಿಲ್ಲ.

* ಟೆನ್ನಿಸ್ ಬಾಲ್ ಅಥವಾ ಅಷ್ಟೇ ಗಾತ್ರದ ಮೆತ್ತನೆಯ ವಸ್ತುವನ್ನು ಕೆಳಗೆ ಇಟ್ಟು ನೋವಿರುವ ಪಾದವನ್ನು ಅದರ ಮೇಲಿಟ್ಟು, ಪಾದವನ್ನು ಹಿಂದೆ ಮುಂದೆ ಆಡಿಸಿರಿ.

* ರಾತ್ರಿ ವೇಳೆ ಬಿಸಿ ನೀರಿಗೆ ಕಲ್ಲುಪ್ಪು ಹಾಕಿ ಚೆನ್ನಾಗಿ ಕರಗಿದ ನಂತರ ಪಾದಗಳನ್ನು ಅದರಲ್ಲಿ ಮುಳುಗಿಸಿ ಅರ್ಧ ಘಂಟೆ ಕುಳಿತುಕೊಳ್ಳಿ. ನೋವು ಕಮ್ಮಿಾಂಗುತ್ತದೆ.

* ಪ್ರತಿ ದಿನ ಅರ್ಧ ಗಂಟೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ನೋವು ನಿಧಾನವಾಗಿ ಕಡಿಮೆಯಾಗುತ್ತದೆ.

* ಮಾರುಕಟ್ಟೆಯಲ್ಲಿ ಎಂಸಿಪಿ ಅಥವಾ ಆರ್ಥೂಪೀಡಿಕ್ ಚಪ್ಪಲಿ/ಶೂಗಳು ಸಿಗುತ್ತವೆ. ಇವುಗಳ ಬಳಕೆಯಿಂದ ನೋವು ಕಡಿಮೆಯಾಗುತ್ತದೆ.

andolanait

Recent Posts

ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಸಾವು

ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

8 hours ago

ಬಸ್-ಲಾರಿ ನಡುವೆ ಡಿಕ್ಕಿ; ಹಲವರಿಗೆ ಗಾಯ

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್…

8 hours ago

ಸಿಡಿಲು ಬಡಿದು ರೈತ ಸಾವು

ಬೆಟ್ಟದಪುರ: ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಎಸ್.ಟಿ.ಆನಂದ್ (೬೦)…

9 hours ago

ಟಾಟಾ ಏಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ: ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ…

9 hours ago

ಒಂದು ವಾರ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ: ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಫ್ರಾನ್ಸ್ ಮತ್ತು ಸ್ಲೊವಾಕಿಯಾಕ್ಕೆ ಒಂದು ವಾರದ ಭೇಟಿಗಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ…

10 hours ago

ಉಡುಪಿ ಶ್ರೀಕೃಷ್ಣಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ…

12 hours ago