ಆಂದೋಲನ ಪುರವಣಿ

ಯೋಗ ಕ್ಷೇಮ | ಹಲ್ಲು ಇಲ್ಲವೇ; ಚಿಂತೆ ಬೇಡ

ಹಲವು ವಿಧಾನಗಳ ಮೂಲಕ ದಂತ ಚಿಕಿತ್ಸೆಗೆ ಇದೆ ಅವಕಾಶ

ಹಲ್ಲುಗಳ ಆರೋಗ್ಯದಲ್ಲಿ ಏರುಪೇರಾದರೆ ಅವರು ಉದುರುವುದು ಮಾಮೂಲು. ಆದರೆ ಅದಕ್ಕೆ ಬದಲಿಯಾಗಿ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಳ್ಳಲು ಇಂದು ಹಲವಾರು ಚಿಕಿತ್ಸಾ ವಿಧಾನಗಳಿವೆ. ಅವುಗಳನ್ನು ಮಾಡಿಸಿಕೊಂಡರೆ ದಂತಪಂಕ್ತಿ ಸುರಕ್ಷಿತ ಮತ್ತು ಹಲ್ಲು ಕಾಣುವಂತೆ ಚೆಂದದ ನಗು ಬೀರಲು ಸಾಧ್ಯ.

ಅನುವಂಶೀಯ ಕಾರಣಗಳು, ಅಪಘಾತ, ಒಸಡು ರೋಗ, ದಂತಕುಳಿ ಅಥವಾ ಹಲ್ಲುಗಳನ್ನು ಸ್ವಚ್ಚವಾಗಿಡದೆ ಇರುವ ಕಾರಣಗಳಿಂದ ಹಲ್ಲು ಕಳೆದುಕೊಳ್ಳಬಹುದು. ಇದು ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡುವುದಲ್ಲದೆ, ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇದಕ್ಕಾಗಿ ಕೃತಕ ದಂತ ಪಂಕ್ತಿ (ಹಲ್ಲುಸೆಟ್), ಡೆಂಟಲ್ ಇಂಪ್ಲಾಂಟ್ಸ್ ಅಥವಾ ಫಿಕ್ಸ್ ಬ್ರಿಡ್ಜ್ ಮುಂತಾದ ಚಿಕಿತ್ಸಾ ವಿಧಾನಗಳಿವೆ.

ಹಲ್ಲು ಕಟ್ಟಿಸದೇ ಇದ್ದರೆ ಆಗುವ ತೊಂದರೆ

* ಹಲ್ಲು ಬಿದ್ದ ಜಾಗಕ್ಕೆ ಪಕ್ಕದ ಹಲ್ಲು ಜರುಗಿ ಹಲ್ಲುಗಳ ಮಧ್ಯೆ ಕಿಂಡಿ ಕಾಣಿಸಿಕೊಳ್ಳುತ್ತದೆ.

* ಹಲ್ಲುಗಳು ಜರುಗುತ್ತಾ ಹೋದಂತೆ ಹಲ್ಲಿನ ಬೇರಿಗೂ ತೊಂದರೆ.

* ದವಡೆಯ ಮೂಳೆಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

* ಉಳಿದ ಹಲ್ಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

* ಆಹಾರವನ್ನು ಅಗಿಯಲು ಕಷ್ಟ, ಜೀರ್ಣಕ್ರಿಯೆ ಮೇಲೆ ಪರಿಣಾಮ.

* ಮುಖದ ರಚನೆಯ ಮೇಲೆ ಪ್ರಭಾವ, ಸ್ನಾಯುಗಳು ಜೋತು ಬೀಳುತ್ತವೆ.

* ಮಾತುಗಳಲ್ಲಿ ತೊದಲು, ಸ್ವಾಭಾವಿಕವಾಗಿ ಮಾತನಾಡಲು ಸಮಸ್ಯೆ

ಹಲ್ಲನ್ನು ಕಟ್ಟಿಸಿಕೊಳ್ಳುವ ವಿವಿಧ ಆಯ್ಕೆಗಳು

* ಡೆಂಟಲ್ ಇಂಪ್ಲಾಂಟ್ಸ್
ಒಂದು ಹಲ್ಲು ಇಲ್ಲದಿರುವಾಗ ಅದನ್ನು ಪುನಃ ಜೋಡಿಸಲು ಡೆಂಟಲ್ ಇಂಪ್ಲಾಂಟ್ ಒಳ್ಳೆಯ ಆ್ಂಕೆು. ಈ ವಿಧಾನದಲ್ಲಿ ಕೃತಕ ದಂತವನ್ನು ಒಸಡಿನಲ್ಲಿ ಶಾಶ್ವತವಾಗಿ ಜೋಡಣೆ ಮಾಡಲಾಗುತ್ತದೆ.

* ಕೃತಕ ದಂತಪಂಕ್ತಿ
ಕೆಲವು ಅಥವಾ ಸಂಪೂರ್ಣ ಹಲ್ಲುಗಳು ಇಲ್ಲದಿರುವಾಗ ಅದಕ್ಕೆ ಅನುಗುಣವಾಗಿ ಕೃತಕ ದಂತ ಪಂಕ್ತಿಗಳನ್ನು ಹಾಕಿಕೊಡಲಾಗುತ್ತದೆ. ಕೃತಕ ದಂತಪಂಕ್ತಿಗಳು ಎರಡು ರೀತಿಯಾಗಿರುತ್ತದೆ.

೧. ಸಂಪೂರ್ಣ ಹಲ್ಲುಗಳ ದಂತಪಂಕ್ತಿಯಲ್ಲಿ ಎಲ್ಲ ಹಲ್ಲುಗಳನ್ನು ಜೋಡಣೆ ಮಾಡುವುದು.

೨. ವಿಭಾಗೀಯ ದಂತ ಪಂಕ್ತಿಯಲ್ಲಿ ಒಂದು ಅಥವಾ ಕೆಲವು ಹಲ್ಲುಗಳನ್ನು ಜೋಡಣೆ.

ಒಂದು ಅಥವಾ ಎರಡು ಹಲ್ಲು ಇಲ್ಲದಿದ್ದಾಗ, ಅಕ್ಕ ಪಕ್ಕದ ಹಲ್ಲುಗಳನ್ನು ಆಧಾರವಾಗಿ ಬಳಸಿ ಡೆಂಟಲ್ ಬ್ರಿಡ್ಜ್ ಅನ್ನು ಮಾಡಬಹುದು. ಅದನ್ನು ಸಾಮಾನ್ಯವಾಗಿ ಕ್ಯಾಪ್ ಅಥವಾ ಕ್ರೌನ್ ಅನ್ನುತ್ತಾರೆ. ಇದನ್ನು ಡೆಂಟಲ್ ಸಿಮೆಂಟ್‌ನಿಂದ ಫಿಕ್ಸ್ ಮಾಡಲಾಗುತ್ತದೆ.

-ಡಾ. ಸಿ.ಪಿ. ಕಾತ್ಯಾಯಿನಿ, ಅಧ್ಯಾಪಕರು, ಹಲ್ಲು ನ್ಯೂನ ಪೂರಣ ಶಾಸ್ತ್ರ ವಿಭಾಗ, ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು

 

andolanait

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

21 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

21 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

21 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

21 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

21 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

22 hours ago