ಫೆ.5 ರಂದು ಭಾನುವಾರ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ‘ರಂಗನಾಯಕಿ’ ಏಕವ್ಯಕ್ತಿ ನಾಟಕ ಪ್ರದರ್ಶನವಿದೆ.
ಬೆಂಗಳೂರಿನ ‘ಕ್ಯಾನ್ಸ್ ರಿವರಿ’ ತಂಡದಿಂದ ಈ ನಾಟಕ ಪ್ರದರ್ಶನವಿದೆ. ರಂಗಕಲಾವಿದೆ ಅಪೂರ್ವ ನಾಗರಾಜ್ ಅವರು ನಾಟಕವನ್ನು ಅಭಿನಯಿಸಲಿದ್ದು, ಅವರೇ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ನಾಟಕ ರಚನೆ ಅನಘಾ ನರಸಿಂಹ ಅವರದು, ವೇದ ವೆಂಕಟೇಶ್ ಹಾಗೂ ರೂಪಕ್ ಕಲ್ಲೂಲ್ಕರ್ ಅವರು ಸಂಗೀತ ನೀಡಿದ್ದಾರೆ. ರಂಗನಾಯಕಿ ತನ್ನ ಯೌವನದ ದಿನಗಳಲ್ಲಿ ಯಶಸ್ಸಿನ ಉತ್ತುಂಗ ಹಾಗೂ ಬೇಡಿಕೆ ಹೊಂದಿದ್ದು, ಮುಪ್ಪು ಆವರಿಸಿದಾಗ ಆಕೆ ಅನುಭವಿಸುವ ಮಾನಸಿಕ ತಲ್ಲಣಗಳನ್ನು ಈ ನಾಟಕ ಅಭಿವ್ಯಕ್ತಪಡಿಸುತ್ತದೆ. ಕೊನೆಗೆ ‘ಇದ್ದದ್ದೇ ಮಾಯೆ, ಇಲ್ಲದ್ದೇ ಬದುಕು’ ಎಂಬ ಭಾವನೆ ಆಕೆಗೆ ಬರುತ್ತದೆ. ಇದನ್ನು ಅಪೂರ್ವ ನಾಗರಾಜ್ ಕಲಾಮಂದಿರದ ಕಿರುರಂಗಮಂದಿರದಲ್ಲಿ ಏಕಾಭಿನಯದ ಮೂಲಕ ಸಾದರಪಡಿಸಲಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ರಂಗಾಸಕ್ತರು ವೀಕ್ಷಿಸಬಹುದು.
ಶಾಸಕ ಜಿ.ಡಿ. ಹರೀಶ್ ಗೌಡರ ಮನವಿಗೆ ಸರ್ಕಾರದ ಸ್ಪಂದನೆ ಬೆಂಗಳೂರು : ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ…
89 ತಾಲ್ಲೂಕುಗಳಲ್ಲಿ ತೀವ್ರ, 12 ತಾಲ್ಲೂಕುಗಳಲ್ಲಿ ತುಸು ಕಡಿಮೆ ಶೇ. 31ರಷ್ಟು ಮಳೆ ಕೊರತೆ ಶೇ.71ರಷ್ಟು ಬೆಳೆಗಳಿಗೆ ಹಾನಿ ಬೆಂಗಳೂರು…
ಮೈಸೂರು : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಗುರುವಾರ ಮೈಸೂರು ನಗರದ ಮಹಿಳಾ ಪೊಲೀಸ್…
ಮೈಸೂರು : ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 10;30ಕ್ಕೆ ಹೆಲಿಕಾಪ್ಟರ್ನಲ್ಲಿ…
ನವದೆಹಲಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಖ್ಯಮಂತ್ರಿ…
ಬೆಂಗಳೂರು : ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ…