ಆಂದೋಲನ ಪುರವಣಿ

ಗರಿ ಬಿಚ್ಚಿಕೊಳ್ಳುತ್ತಿದೆ ಮೈಸೂರು

ರಾಮ್‌ಸನ್ಸ್ ದಸರಾ ಬೊಂಬೆ ಪ್ರದರ್ಶನಕ್ಕೆ ಚಾಲನೆ; ವರ್ಷ ಪೂರ್ತಿ ಪ್ರದರ್ಶನ, ಮಾರಾಟ

ದಸರಾ ಹತ್ತಿರವಾಗುತ್ತಿದ್ದಂತೆ ಮೈಸೂರು ಗರಿ ಬಿಚ್ಚಿಕೊಳ್ಳುತ್ತಿದೆ. ಎಲ್ಲ ಬಗೆಯ ಚಟುವಟಿಕೆಗಳು ಆರಂಭವಾಗುತ್ತಿದ್ದು, ಕಲಾ ರಸಿಕರು, ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇದರ ಭಾಗವಾಗಿ ನಜರ್‌ಬಾದ್‌ನ ಆಮ್ರಪಾಲಿ ಮಳಿಗೆಯ ಮೇಲಿರುವ ರಾಮ್‌ಸನ್ಸ್ ಬೊಂಬೆ ಮನೆಯಲ್ಲಿ ದಸರಾ ಬೊಂಬೆ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದ್ದು, ವರ್ಷ ಪೂರ್ತಿ ವೈವಿಧ್ಯಮಯ ಬೊಂಬೆಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಶರನ್ನವರಾತ್ರಿ ಆರಂಭಕ್ಕೆ ೧೮ ದಿನಗಳು ಇರುವಂತೆಯೇ ೧೮ನೇ ವರ್ಷದ ಬೊಂಬೆ ಪ್ರದರ್ಶನಕ್ಕೆ ಗುರುವಾರ ಚಾಲನೆ ಸಿಕ್ಕಿದ್ದು, ಕಲಾ ವೈವಿಧ್ಯವೇ ಇಲ್ಲಿ ಅನಾವರಣಗೊಳ್ಳಲಿದೆ. ಬೊಂಬೆಗಳ ನಗರಿ ಚೆನ್ನಪಟ್ಟಣ, ಕಿನ್ಹಾಳ, ಬೆಂಗಳೂರು, ಪಾಲಿಮಾರುಗಳಲ್ಲಿ ತಯಾರಾದ ಬೊಂಬೆಗಳ ಜೊತೆಗೆ ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ದೇಶಾದ್ಯಂತ ತಯಾರಾದ ಬೊಂಬೆಗಳಿಗೂ ಇಲ್ಲಿ ಸ್ಥಾನ ಇದ್ದು, ೫೦ ರೂ. ನಿಂದ ಆರಂಭವಾಗಿ ಲಕ್ಷ ರೂ. ವರೆಗೂ ಬೆಲೆ ಇರುವ ಬೊಂಬೆಗಳು ಇಲ್ಲಿರಲಿವೆ.

ರಾಮಾಯಣ ದರ್ಶನ

ಈ ಬಾರಿ ೨೪ ಅಂಶಗಳನ್ನು ಆಧರಿಸಿದ ಬೊಂಬೆಗಳ ವಿಶೇಷತೆ ಇದ್ದು, ರಾಮಾಯಣ, ಮಹಾಭಾರತದ ವಿವಿಧ ಘಟ್ಟಗಳ ಕಥೆಗಳನ್ನು ಬೊಂಬೆಗಳ ಮೂಲಕವೇ ಹೇಳಲಾಗಿದೆ. ಪುತ್ರಕಾಮೇಷ್ಠಿ ಯಾಗ, ರಾಮ ಜನನ, ತಾಟಕಾ ಸಂಹಾರ, ಮಾರೀಚ-ಸುಬಾಹು ಪಲಾಯನ, ಅಹಲ್ಯ ಉದ್ಧಾರ, ಸೀತಾ ಸ್ವಯಂವರ, ಭರತನಿಗೆ ಪಾದುಕಾ ಪ್ರದಾನ, ವನವಾಸ, ಸೀತಾ ಅಗ್ನಿ ಪ್ರವೇಶ ಹೀಗೆ ೨೪ ವರ್ಗಗಳಲ್ಲಿ ಸಂಪೂರ್ಣ ರಾಮಾಯಣ ತಿಳಿಸುವ ಗೊಂಬೆಗಳು ಪ್ರಮುಖ ಆಕರ್ಷಣೆಯ ಕೇಂದ್ರವಾಗಿವೆ.

ದಸರಾ ದರ್ಶನ

ಬೊಂಬೆಗಳ ಮೂಲಕವೇ ದಸರಾ ಸಂದರ್ಭದಲ್ಲಿ ಮೈಸೂರಿನ ಅಂದವನ್ನು ಹೆಚ್ಚಿಸುವ ಚೆಂದದ ನೋಟಗಳು, ರಾಜ ಮನೆತನದ ಸೊಬಗು, ಅಂಬಾರಿ ಆನೆ, ಅರಮನೆ ಅಂದ ಹೀಗೆ ಎಲ್ಲ ಬಗೆಯ ನೋಟಗಳನ್ನು ಗೊಂಬೆಗಳ ಮೂಲಕವೇ ಒದಗಿಸಿಕೊಡುವ ಪ್ರಯತ್ನವನ್ನೂ ಇಲ್ಲಿ ಕಾಣಬಹುದಾಗಿದೆ.

ಇದರೊಂದಿಗೆ ಚಾಮುಂಡಿಯ ಉತ್ಸವ ಮೂರ್ತಿ, ಕೇರಳದ ಚಂಡೆಮೇಳ, ನಾಟ್ಯ ಮಯೂರಿ, ವಾದಿ ರಾಜ ತೀರ್ಥರು, ಶಿರಸಿ ಮಾರಿಕಾಂಬಾ, ಗುರುರಾಯ, ಸಾಯಿ ಬಾಬಾ ಅವರ ಜೀವನ ಚರಿತ್ರೆ, ಆನೆ, ಕುದುರೆ, ಸಿಂಹ, ಹುಲಿಗಳ ಬೊಂಬೆಗಳು ಆಕರ್ಷಣೆಯ ಕೇಂದ್ರವಾಗಿವೆ.

ಸೆ. 8ರಂದು ಉದ್ಘಾಟನೆಯಾಗಿರುವ ರಾಮ್‌ಸನ್ಸ್ ಬೊಂಬೆಗಳ ಪ್ರದರ್ಶನವು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯ ವರೆಗೆ ವರ್ಷ ಪೂರ್ತಿ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ರಘು ಧಮೇಂದ್ರ ದೂ. ಸಂ. 9880111625 ಅನ್ನು ಸಂಪರ್ಕಿಸಬಹುದು.

andolana

Recent Posts

ಶಾಲೆ ಶುರುವಾಗಿದೆ; ಮನಸು ಯಾಕೋ ಹೂ ಬಿಟ್ಟಿದೆ…

ವರ್ಷಕ್ಕೊಮ್ಮೆ ಎದುರುಗೊಳ್ಳುವ ಈ ಸುಂದರ ಕಾಲ ಹೊಸತೊಂದು ಯುಗದ ಆರಂಭಕ್ಕೆ ಭಾಷ್ಯ ಬರೆದಂತೆ ಭಾಸವಾಗುತ್ತದೆ. ಮಕ್ಕಳ ಹುಮ್ಮಸ್ಸನ್ನು ನೋಡುವುದೇ ಒಂದು…

20 mins ago

ಭಾನುವಾರದ ಹಾಡುಪಾಡು | ಶಾಲೆಯೆಂಬ ಕಟ್ಟಡಗಳಿಗೆ ಜೀವ ಬರುವ ಹೊತ್ತು…..

ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ. ಸುಧಾ…

28 mins ago

ಭಾನುವಾರದ ಹಾಡುಪಾಡು | ಜೂನ್ ಬಂತು ಎಂದರೆ ಶಿಕ್ಷಕರಿಗೆ ಸುಗ್ಗಿ ಕಾಲ

ವರ್ಷವಿಡೀ ಪಾಠ ಮಾಡಿ ಸುಸ್ತಾದ ಶಿಕ್ಷಕರು ಬೇಸಿಗೆ ರಜಕ್ಕಾಗಿ ಎಷ್ಟೇ ಹಂಬಲಿಸಿದರೂ ಕೂಡ ರಜೆ ಮುಗಿಯುವ ಹೊತ್ತಿಗೆ ಬೇಸರವಾಗಿ ಎಷ್ಟು…

34 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌| ಮೇ 31 ಭಾನುವಾರ

43 mins ago

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ನೇಮಕ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮೊದಲು ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಕರ್ನಾಟಕ ರಾಜ್ಯ ಮಾನವ…

14 hours ago

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ

ಬೆಂಗಳೂರು : ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಆಗಿದ್ದಾರೆ. ಡಿಕೆಶಿ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

16 hours ago