ಆಂದೋಲನ ಪುರವಣಿ

ಗರಿ ಬಿಚ್ಚಿಕೊಳ್ಳುತ್ತಿದೆ ಮೈಸೂರು

ರಾಮ್‌ಸನ್ಸ್ ದಸರಾ ಬೊಂಬೆ ಪ್ರದರ್ಶನಕ್ಕೆ ಚಾಲನೆ; ವರ್ಷ ಪೂರ್ತಿ ಪ್ರದರ್ಶನ, ಮಾರಾಟ

ದಸರಾ ಹತ್ತಿರವಾಗುತ್ತಿದ್ದಂತೆ ಮೈಸೂರು ಗರಿ ಬಿಚ್ಚಿಕೊಳ್ಳುತ್ತಿದೆ. ಎಲ್ಲ ಬಗೆಯ ಚಟುವಟಿಕೆಗಳು ಆರಂಭವಾಗುತ್ತಿದ್ದು, ಕಲಾ ರಸಿಕರು, ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇದರ ಭಾಗವಾಗಿ ನಜರ್‌ಬಾದ್‌ನ ಆಮ್ರಪಾಲಿ ಮಳಿಗೆಯ ಮೇಲಿರುವ ರಾಮ್‌ಸನ್ಸ್ ಬೊಂಬೆ ಮನೆಯಲ್ಲಿ ದಸರಾ ಬೊಂಬೆ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದ್ದು, ವರ್ಷ ಪೂರ್ತಿ ವೈವಿಧ್ಯಮಯ ಬೊಂಬೆಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಶರನ್ನವರಾತ್ರಿ ಆರಂಭಕ್ಕೆ ೧೮ ದಿನಗಳು ಇರುವಂತೆಯೇ ೧೮ನೇ ವರ್ಷದ ಬೊಂಬೆ ಪ್ರದರ್ಶನಕ್ಕೆ ಗುರುವಾರ ಚಾಲನೆ ಸಿಕ್ಕಿದ್ದು, ಕಲಾ ವೈವಿಧ್ಯವೇ ಇಲ್ಲಿ ಅನಾವರಣಗೊಳ್ಳಲಿದೆ. ಬೊಂಬೆಗಳ ನಗರಿ ಚೆನ್ನಪಟ್ಟಣ, ಕಿನ್ಹಾಳ, ಬೆಂಗಳೂರು, ಪಾಲಿಮಾರುಗಳಲ್ಲಿ ತಯಾರಾದ ಬೊಂಬೆಗಳ ಜೊತೆಗೆ ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ದೇಶಾದ್ಯಂತ ತಯಾರಾದ ಬೊಂಬೆಗಳಿಗೂ ಇಲ್ಲಿ ಸ್ಥಾನ ಇದ್ದು, ೫೦ ರೂ. ನಿಂದ ಆರಂಭವಾಗಿ ಲಕ್ಷ ರೂ. ವರೆಗೂ ಬೆಲೆ ಇರುವ ಬೊಂಬೆಗಳು ಇಲ್ಲಿರಲಿವೆ.

ರಾಮಾಯಣ ದರ್ಶನ

ಈ ಬಾರಿ ೨೪ ಅಂಶಗಳನ್ನು ಆಧರಿಸಿದ ಬೊಂಬೆಗಳ ವಿಶೇಷತೆ ಇದ್ದು, ರಾಮಾಯಣ, ಮಹಾಭಾರತದ ವಿವಿಧ ಘಟ್ಟಗಳ ಕಥೆಗಳನ್ನು ಬೊಂಬೆಗಳ ಮೂಲಕವೇ ಹೇಳಲಾಗಿದೆ. ಪುತ್ರಕಾಮೇಷ್ಠಿ ಯಾಗ, ರಾಮ ಜನನ, ತಾಟಕಾ ಸಂಹಾರ, ಮಾರೀಚ-ಸುಬಾಹು ಪಲಾಯನ, ಅಹಲ್ಯ ಉದ್ಧಾರ, ಸೀತಾ ಸ್ವಯಂವರ, ಭರತನಿಗೆ ಪಾದುಕಾ ಪ್ರದಾನ, ವನವಾಸ, ಸೀತಾ ಅಗ್ನಿ ಪ್ರವೇಶ ಹೀಗೆ ೨೪ ವರ್ಗಗಳಲ್ಲಿ ಸಂಪೂರ್ಣ ರಾಮಾಯಣ ತಿಳಿಸುವ ಗೊಂಬೆಗಳು ಪ್ರಮುಖ ಆಕರ್ಷಣೆಯ ಕೇಂದ್ರವಾಗಿವೆ.

ದಸರಾ ದರ್ಶನ

ಬೊಂಬೆಗಳ ಮೂಲಕವೇ ದಸರಾ ಸಂದರ್ಭದಲ್ಲಿ ಮೈಸೂರಿನ ಅಂದವನ್ನು ಹೆಚ್ಚಿಸುವ ಚೆಂದದ ನೋಟಗಳು, ರಾಜ ಮನೆತನದ ಸೊಬಗು, ಅಂಬಾರಿ ಆನೆ, ಅರಮನೆ ಅಂದ ಹೀಗೆ ಎಲ್ಲ ಬಗೆಯ ನೋಟಗಳನ್ನು ಗೊಂಬೆಗಳ ಮೂಲಕವೇ ಒದಗಿಸಿಕೊಡುವ ಪ್ರಯತ್ನವನ್ನೂ ಇಲ್ಲಿ ಕಾಣಬಹುದಾಗಿದೆ.

ಇದರೊಂದಿಗೆ ಚಾಮುಂಡಿಯ ಉತ್ಸವ ಮೂರ್ತಿ, ಕೇರಳದ ಚಂಡೆಮೇಳ, ನಾಟ್ಯ ಮಯೂರಿ, ವಾದಿ ರಾಜ ತೀರ್ಥರು, ಶಿರಸಿ ಮಾರಿಕಾಂಬಾ, ಗುರುರಾಯ, ಸಾಯಿ ಬಾಬಾ ಅವರ ಜೀವನ ಚರಿತ್ರೆ, ಆನೆ, ಕುದುರೆ, ಸಿಂಹ, ಹುಲಿಗಳ ಬೊಂಬೆಗಳು ಆಕರ್ಷಣೆಯ ಕೇಂದ್ರವಾಗಿವೆ.

ಸೆ. 8ರಂದು ಉದ್ಘಾಟನೆಯಾಗಿರುವ ರಾಮ್‌ಸನ್ಸ್ ಬೊಂಬೆಗಳ ಪ್ರದರ್ಶನವು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯ ವರೆಗೆ ವರ್ಷ ಪೂರ್ತಿ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ರಘು ಧಮೇಂದ್ರ ದೂ. ಸಂ. 9880111625 ಅನ್ನು ಸಂಪರ್ಕಿಸಬಹುದು.

andolana

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

44 mins ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

48 mins ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

51 mins ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

55 mins ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

1 hour ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

1 hour ago