ವಿನುತ ಪುರುಷೋತ್ತಮ್
ಹಳೆಯ ಹಾಡು ಹಾಡು ಮತ್ತೆ
ಇಂದಿಗೆ ಹೊಸತು ನಾಳೆಗೆ ಹಳತು. ಆದರೆ ಅದು ನಿತ್ಯ ನೂತನವಾಗಬೇಕಾದರೆ ಅದರೊಳಗೊಂದು ಶಕ್ತಿ ಇರಬೇಕು, ಸ್ವಾದ ಬೇಕೇ ಬೇಕು.
ಹೀಗೊಂದು ಸ್ವಾದವನ್ನು ಬದುಕಿನ ಹಲವು ಘಟ್ಟಗಳಲ್ಲಿ ಹೀರಿಕೊಂಡಿರುತ್ತೇವೆ. ಆದರೆ ಮತ್ತೆ ಅದೇ ಸ್ವಾದ ಬೇಕು ಎಂದರೆ ಸಿಕ್ಕದು. ಸಿಕ್ಕಿದರೂ ಮೊದಲ ತೀವ್ರತೆ ಇರುವುದೇ ಎಂಬುದಕ್ಕೆ ನಿಖರ ಉತ್ತರ ಕಷ್ಟ.
ಗೆಳೆಯ, ಗೆಳತಿಯ ಕೈ ಹಿಡಿದು ಕಾಡಿನ ನಡುವಲ್ಲಿನ ಬೆಟ್ಟದ ಮೆಟ್ಟಿಲನ್ನು ಏರಿದ್ದ ಮೊದಲ ಫೀಲ್, ತಂದೆಯೊಟ್ಟಿಗೆ ಸುತ್ತಾಡಿದ ಪೇಟೆ ಬೀದಿಯ ನೆನಪು, ತಾಯಿ ಮಾಡಿಸುತ್ತಿದ್ದ ಮಜ್ಜನ, ಅಜ್ಜಿಯ ಬೆಚ್ಚಗಿನ ಪ್ರೀತಿ, ಅಚ್ಚನ ನೆನಪುಗಳೆಲ್ಲವೂ ಈಗಲೂ ಇದ್ದರೂ, ಅವೆಲ್ಲವೂ ಮತ್ತೆ ಪುನರಾವರ್ತನೆಯಾದರೂ ಮೊದ ಮೊದಲು ಸಿಕ್ಕ ಒಟ್ಟಂದ ಮತ್ತೆ ದೊರಕದು. ಅದಕ್ಕಾಗಿಯೇ ಅಲ್ಲವೇ ‘ಮೈ ಆಟೋಗ್ರಾಫ್’ ಚಿತ್ರದ ಸವಿ ಸವಿ ನೆನಪು ಸಾವಿರ ನೆನಪು ಹಾಡು ಅಷ್ಟೊಂದು ಹಿಟ್ ಆಗಿದ್ದು, ಎಲ್ಲರೂ ಗುನುಗಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದು.
ಇದಕ್ಕಾಗಿಯೇ ಮೊದಲ ಅನುಭವಗಳ ಹಿತವಾದ ಸೆಳೆತ ಎಲ್ಲರ ಬಾಳಲ್ಲೂ ಇದ್ದೇ ಇರುತ್ತದೆ. ಅವುಗಳ ಹಂಗಿನಲ್ಲಿಯೇ ಹೊಸ ಸಂತೋಷಗಳನ್ನು ಮನುಷ್ಯ ಹುಡುಕಿ ಹೊರಡುತ್ತಾನೆ. ಇವುಗಳಿಂದಲೇ ಹೊಸ ಜೀವ ಸೆಲೆ ಸದಾ ಹರಿಯುವುದು. ಅದಕ್ಕಾಗಿಯೇ ಕವಿ ಜಿ.ಎಸ್.ಶಿವರುದ್ರಪ್ಪ ‘ಹಳೆಯ ಹಾಡು ಹಾಡು ಮತ್ತೆ ಅದನೇ ಕೇಳಿ ತಣಿಯುವೆ, ಹಳೆಯ ಹಾಡಿನಿಂದ ಹೊಸತು ಜೀವನವ ಕಟ್ಟುವೆ’ ಎಂದಿರುವುದು.
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…
ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್ಎಸ್ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…
ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…
ಹೇಮಂತ್ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…