ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟ್ರು: ನಮಗೆಲ್ಲಾ ಆದರ್ಶ ನಮ್ಮ ಮಲ್ಲೇಶ್ ಮೇಷ್ಟ್ರು

ರಾಜೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾ, ಚಾಮರಾಜನಗರ

ಅದು ನಮ್ಮ ಪ್ರಾಥಮಿಕ ಶಾಲಾ ದಿನಗಳು ನಾನು 6ನೇ ತರಗತಿ ಓದುತ್ತಿದ್ದ ಸಂದರ್ಭ. ಆಗಷ್ಟೇ ತಮ್ಮ ಟಿಸಿಎಚ್ ಮುಗಿಸಿ ಶಿಕ್ಷಕರ ಹುದ್ದೆಯನ್ನು ಪಡೆದು ನಮ್ಮೂರ ಶಾಲೆಗೆ ಮೊದಲ ಬಾರಿಗೆ ಶಿಕ್ಷಕರಾಗಿ ಬಂದವರೇ ಮಲ್ಲೇಶ್ ಎಂಬ ನಮ್ಮೆಲ್ಲರ ನೆಚ್ಚಿನ ಮೇಷ್ಟ್ರು.

ಮಲ್ಲೇಶ್ ಸರ್ ಆಗಷ್ಟೇ ತರಬೇತಿ ಮುಗಿಸಿ ಬಂದು ಉತ್ಸಾಹದಲ್ಲಿದ್ದರು. ಅವರ ಬೋಧನಾ ಕ್ರಮ, ಶಿಸ್ತು ಬದ್ಧ ಕೆಲಸಗಳು, ಸಮಯ ಪ್ರಜ್ಞೆ, ಆದರ್ಶನೀಯವಾದ ಬದುಕು, ಅವರ ನಡೆ ನುಡಿ ನಮಗೆಲ್ಲ ಅತ್ಯಂತ ಆಕರ್ಷನೀಯವಾಗಿದ್ದವು.

ನಮಗೆ ಸಮಾಜ ವಿಜ್ಞಾನ ವಿಷಯ ಬೋಧಿಸುತ್ತಿದ್ದ ಅವರು ಅಂದಿನ ಕಾಲದಲ್ಲೇ ನಮ್ಮಲ್ಲಿ ಬಸವಣ್ಣ ಅವರ ಸಮ ಸಮಾಜದ ಕನಸನ್ನು ಬಿತ್ತಿದ್ದಂತವರು. ಜೊತೆಗೆ ಸಮಾಜದಲ್ಲಿ ಆದರ್ಶನೀಯವಾಗಿ ಹೇಗೆ ಬದುಕಬೇಕೆಂಬುದನ್ನು ತಿಳಿ ಹೇಳಿದಂತವರು.

ನಮ್ಮೂರಿನ ಸರ್ಕಾರಿ ಶಾಲೆಗೆ ಕೀರ್ತಿತಂದ ಪ್ರಮುಖ ಶಿಕ್ಷಕರಲ್ಲಿ ಇವರೂ ಒಬ್ಬರು. ವಿದ್ಯಾರ್ಥಿಗಳ ಮನದಾಳವನ್ನು ಅರಿತು ಬೋಧಿಸುತ್ತಿದ್ದ ಅಪರೂಪದ ಶಿಕ್ಷರಾಗಿದ್ದ ನಮ್ಮೆಲ್ಲರ ಮೆಚ್ಚಿನ ಈ ಮೇಷ್ಟ್ರು ನಾಟಕ ಪ್ರಿಯರಾಗಿದ್ದರು. ಅದು ನಮಗೆಲ್ಲ ಅಂದಿಗೆ ಸೋಜಿಗ…! ನಾಟಕವೆಂದರೆ ಅವರಿಗೆ ಅಷ್ಟೊಂದು ಅಕ್ಕರೆ. ಅದಕ್ಕೆ ನಿರ್ದಶನವೆಂಬಂತೆ ನಮ್ಮ ಮೇಷ್ಟ್ರು ಅವರ ಊರಿನಲ್ಲಿ ನಡೆಯುತ್ತಿದ್ದ ಸಾಮಾಜಿಕ ನಾಟಕಗಳಲ್ಲಿ ಭಾಗವಹಿಸಿ ಅದ್ಭುತವಾಗಿ ನಟಿಸುತ್ತಾ ಜನರ ಮನ ಗೆದ್ದಿದ್ದರು. ಅದ್ಭುತವಾಗಿ ಅಭಿನಯಿಸುತ್ತಿದ್ದ ಅವರ ಪ್ರತಿಭೆಯನ್ನು ಕಂಡು ನಾವೇ ರೋಮಾಂಚಿತರಾಗಿದ್ದೆವು.

ಇಂತಹ ಸಕಲಕಲಾ ವಲ್ಲಭರಂತಹ ಮಲ್ಲೇಶ್ ಮೇಷ್ಟ್ರನ್ನು ಪಡೆದ ನಾವೇ ಧನ್ಯರು. ನಾವು ಇಂದು ಏನಾದರೂ ಅಷ್ಟೋ ಇಷ್ಟೋ ಆದರ್ಶನೀಯವಾಗಿ ಬದುಕುತ್ತಿದ್ದೇವೆಂದರೆ ಇಂತಹ ಆದರ್ಶನೀಯವಾದ ಗುರುಗಳ ಒಡನಾಟ ಹಾಗೂ ಮಾರ್ಗದರ್ಶನವೇ ಕಾರಣ. ಥ್ಯಾಂಕ್ಯೂ ಡಿಯರ್ ಮಲ್ಲೇಶ್ ಸರ್.

 

andolana

Recent Posts

ಓದುಗರ ಪತ್ರ: ಎಸ್‌ಐಆರ್: ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ

ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್‌ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ…

45 mins ago

ಓದುಗರ ಪತ್ರ: ದಸರಾದಲ್ಲಿ ಕಂಬಳ ಬೇಕೇ?

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಾಡಹಬ್ಬ ದಸರಾ ೧೬೧೦ ರಲ್ಲಿ ಪ್ರಾರಂಭವಾಗಿ, ಇಲ್ಲಿನ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಇತ್ತೀಚಿನ…

51 mins ago

ಉಪನಗರ ಯೋಜನೆ ಖಂಡಿತ ಅಭಿವೃದ್ಧಿಯಲ್ಲ

ಆರ್.ಪಿ.ವೆಂಕಟೇಶಮೂರ್ತಿ ಬೆಂಗಳೂರು ಮತ್ತು ಸುತ್ತಮುತ್ತಲಿನ ದುಃಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆ ಇದೆ, ರಾಜಕೀಯ ನಾಯಕರು ದಯಮಾಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು.…

55 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಗೆದಷ್ಟು ಬಹಿರಂಗ; ರಾಮಮಂದಿರ ಕಾಣಿಕೆ ಲೂಟಿ

ಹಲವು ದಶಕಗಳ ಹೋರಾಟದಿಂದ ಎರಡೂವರೆ ವರ್ಷಗಳ ಹಿಂದೆ ನನಸಾದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀರಾಮ ಮಂದಿರದಗಿರುವ ಭಕ್ತರ ಕಾಣಿಕೆಯ…

1 hour ago

ಎಸ್‌ಐಆರ್: ಮಿಶ್ರ ಪ್ರತಿಕ್ರಿಯೆ

ಕೆ.ಎಸ್.ಚಂದ್ರಶೇಖರ ಮೂರ್ತಿ ‘ಸಂವಿಧಾನಬದ್ಧ ಪ್ರಕ್ರಿಯೆ; ಕಾರ್ಯವಿಧಾನದ ಬಗ್ಗೆ ಅಸಮಾಧಾನ’ ಸಾಹಿತಿಗಳು, ಗಣ್ಯರು, ಮುಖಂಡರ ಅಭಿಪ್ರಾಯ ಮೈಸೂರು: ಭಾರತೀಯ ಚುನಾವಣಾ ಆಯೋಗದ…

1 hour ago