Andolana originals

ಎಸ್‌ಐಆರ್: ಮಿಶ್ರ ಪ್ರತಿಕ್ರಿಯೆ

ಕೆ.ಎಸ್.ಚಂದ್ರಶೇಖರ ಮೂರ್ತಿ

‘ಸಂವಿಧಾನಬದ್ಧ ಪ್ರಕ್ರಿಯೆ; ಕಾರ್ಯವಿಧಾನದ ಬಗ್ಗೆ ಅಸಮಾಧಾನ’ ಸಾಹಿತಿಗಳು, ಗಣ್ಯರು, ಮುಖಂಡರ ಅಭಿಪ್ರಾಯ

ಮೈಸೂರು: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಚಾಲನೆಗೊಂಡಿದೆ. ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳು ವೋಟರ್ ಲಿಸ್ಟ್ ಹಿಡಿದು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

ಇವರ ಸಹಾಯಕರಾಗಿ ಆಯಾಯ ಪಕ್ಷಗಳ ಕಾರ್ಯಕರ್ತರು ಬೂತ್ ಮಟ್ಟದ ಏಜೆಂಟ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಬಗ್ಗೆ ಹಲವರು ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದ ಕೆಲ ಮುಖಂಡರು, ಸಾಹಿತಿಗಳು, ಲೇಖಕರು ಎಸ್‌ಐಆರ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ‘ಆಂದೋಲನ’ದ ಜೊತೆಗೆ ಹಂಚಿಕೊಂಡಿದ್ದಾರೆ.

” ಎಸ್‌ಐಆರ್‌ಗೆ ಪ್ರಕ್ರಿಯೆಗೆ ಸಾರ್ವಜನಿಕರು ಸೂಕ್ತವಾಗಿ ಸ್ಪಂದಿಸಬೇಕು. ನಮ್ಮ ದಾಖಲೆಗಳಲ್ಲಿ ಹೆಸರು ತಪ್ಪಾಗಿದ್ದರೆ ಅಥವಾ ಇನ್ನಿತರ ಯಾವುದೇ ತಪ್ಪುಗಳನ್ನು ಈ ಸಂದರ್ಭದಲ್ಲಿ ಸರಿಪಡಿಸಿಕೊಳ್ಳಬೇಕು. ಇದಕ್ಕೆ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಮುಕ್ತವಾಗಿ ಸ್ಪಂದಿಸಬೇಕು. ಎಸ್‌ಐಆರ್‌ನಿಂದ ನಕಲಿ ಮತದಾರರನ್ನು ಗುರುತಿಸಿ ಮತಪಟ್ಟಿಯಿಂದ ಅವರ ಹೆಸರುಗಳನ್ನು ತೆಗೆದುಹಾಕಬಹುದು. ನಮ್ಮ ಹೆಸರುಗಳನ್ನು ಡಿಲೀಟ್ ಮಾಡುತ್ತಾರೆ ಎಂಬ ಆತಂಕ ಕೆಲವರಲ್ಲಿ ಇದೆ. ಯಾರ ಹೆಸರುಗಳನ್ನುಡಿಲಿಟ್ ಮಾಡುವುದಿಲ್ಲ. ಎಸ್ ಐಆರ್‌ನಿಂದ ನಾವು ಭಾರತೀಯ ಪ್ರಜೆಗಳು ಎಂಬುದನ್ನು ಸಾಕ್ಷೀಕರಿಸುವ ಕಾರ್ಯವಾಗಿದೆ.”

– ಸೈಯದ್ ಇಸಾಕ್, ಸಮಾಜ ಸೇವಕರು, ಸಾರ್ವಜನಿಕ ಗ್ರಂಥಾಲಯ

” ಎಸ್‌ಐಆರ್ ಅನ್ನೋದು ಸಾಂವಿಧಾನಿಕವಾಗಿ ಕಾಲಕಾಲಕ್ಕೆ ಮಾಡಬೇಕಾದ ಕರ್ತವ್ಯಗಳಲ್ಲಿ ಒಂದಾಗಿದೆ. ಈ ಹಿಂದೆ ಎಸ್‌ಐಆರ್ ರೀತಿಯದ್ದು ಆಗಿದೆ. ಆದರೆ ಈ ಬಾರಿ ಮಾತ್ರ ಸಂವಿಧಾನದ ಆಶಯದ ಒಂದು ಮರೆಯಲ್ಲಿ ಗುರಾಣಿಯ ರೀತಿ ಹಿಡಿದುಕೊಂಡು ಅತ್ಯಂತ ಪೂರ್ವಗ್ರಹ ಪೀಡಿತವಾದಂತಹ ಮತದಾರರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡುತ್ತಿದೆ. ಇದರ ಉದ್ದೇಶವೇನೆಂದರೆ ಮುಸ್ಲಿಮರು, ದಲಿತರು ಆದಿವಾಸಿಗಳು… ಇಂತಹ ಸಮುದಾಯದವರು ಹಾಗೂ ಬಿಜೆಪಿ ಆಶಯದ ಮತದಾರರು ಅಲ್ಲದವರನ್ನು ಪಟ್ಟಿಯಿಂದ ಹೊರಗಿಡುವಂತಹ ಒಂದು ಅತ್ಯಂತ ವಿಕೃತವಾದ ಪ್ರಯತ್ನವಾಗಿದೆ.”

-ಕೆ.ಪಿ.ಸುರೇಶ್, ಲೇಖಕರು, ಮೈಸೂರು

” ಮತದಾರರ ಪಟ್ಟಿಯ ವಿಶೇಷ ಸಮಗ್ ಪರಿಷ್ಕರಣೆ ಕಾಲ ಕಾಲಕ್ಕೆ ಮಾಡಬೇಕಾ ಗುತ್ತದೆ. ಇದು ಚುನಾವಣಾ ಆಯೋಗದ ಕರ್ತವ್ಯ. ಎಸ್‌ಐಆರ್ ಎಂಬುದು ಸಂವಿಧಾನ ಮೂಲಭೂತ ಆಶಯಕ್ಕೆ ಪೂರಕವಾಗಿದೆ. ಹಾಗಾಗಿ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ತೆಗೆದು ಹಾಕಬಾರದು. ತಕ್ಷಣಕ್ಕೆ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ಅರ್ಹ ಮತದಾರರಿಗೆ ಮತ್ತೊಂದು ಅವಕಾಶ ಕೊಡಬೇಕು.”

-ಅ.ಮ.ಭಾಸ್ಕರ, ವಕೀಲರು, ಮೈಸೂರು

” ಎಸ್‌ಐಆರ್ ಕುರಿತು ನನ್ನ ಪ್ರಕಾರ ಎರಡು ರೀತಿಯಲ್ಲಿ ಹೇಳಬಹುದು. ಒಂದು ಕಾನೂನಾತ್ಮಕವಾಗಿ, ಇನ್ನೊಂದು ವಾಸ್ತವಿಕ ಪ್ರಾಯೋಗಿಕವಾಗಿ. ಮೊದಲನೆಯದು ಎಸ್‌ಐಆರ್‌ನಿಂದ ಪೌರತ್ವ ಸಾಬೀತು ಮಾಡುವ ಒಂದು ಪ್ರಯತ್ನದಂತೆ ಕಾಣುತ್ತದೆ. ಇದನ್ನು ರಾಷ್ಟ್ರೀಯ ಚುನಾವಣಾ ಆಯೋಗ ಮಾಡುತ್ತಿದೆ. ಆದರೆ ಇದನ್ನು ಕೇವಲ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಮಾತ್ರ ಮಾಡಬಹುದು. ಭಾರತೀಯ ಚುನಾವಣಾ ಆಯೋಗಕ್ಕೆ ಇದರ ಅಧಿಕಾರ ಇಲ್ಲ. ಅವರು ಕುಟುಂಬದ ಮಾಹಿತಿಯಲ್ಲಿ ಜನ್ಮ ದಿನಾಂಕ, ಹುಟ್ಟಿದ ಸ್ಥಳ ಕೇಳುತ್ತಾರೆ ಹಾಗೂ ಜನನ ಪ್ರಮಾಣ ಪತ್ರ… ಹೀಗೆ ಮುಂತಾದ ಡಾಕ್ಯುಮೆಂಟ್ ಕೇಳುತ್ತಾರೆ. ಇದರಿಂದ ಪ್ರಾಯೋಗಿಕ ಸಮಸ್ಯೆ ಕಂಡು ಬರುತ್ತದೆ.”‌

-ಸುಧೀರ್ ಒಂಬತ್ಕೆರೆ, ನಿವೃತ ಮೇಜರ್ ಜನರಲ್, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ : ಸಿ.ಎಂ ಡಿ.ಕೆ.ಶಿವಕುಮಾರ್*

ಬೆಂಗಳೂರು : ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ…

2 hours ago

ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ : ಸಚಿವ ಖಂಡ್ರೆ

ಬೆಂಗಳೂರು : ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅರ್ಜುನ ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ…

4 hours ago

ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ ಡಿ…

5 hours ago

ಕೊಡಗಿನಲ್ಲಿ ಮುಂದುವರೆದ ಕಾಡಾನೆ ಸೆರೆ ಕಾರ್ಯಾಚರಣೆ

ಕೊಡಗು: ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿರುವ…

8 hours ago

ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ 20ನೇ ವರ್ಷದ ಸಂಭ್ರಮ

ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…

9 hours ago

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

12 hours ago