ಮಹಿಳೆ ಸಬಲೆ

ಹೋಲಿಕೆ ಎಂಬುದು ನಿಂದನೆ ಆಗದಿರಲಿ

ಪದವೀಧರೆ ಸವಿತ ಅನುಕೂಲಸ್ಥ ಮನೆಯ ಸೊಸೆಯಾಗಿ ಹೋದಾಗ ಆಕೆ ಕೆಲಸಕ್ಕೆ ಹೋಗುವುದು ಬೇಡ ಎನ್ನುವ ನಿರ್ಧಾರ ಅವಳಿಗೂ ಒಪ್ಪಿಗೆಯಾಗಿತ್ತು. ಆದರೆ ಗಂಡ ಪ್ರತೀ ಮಾತಿಗೂ ‘ನೀನೂ ನಿನ್ನ ತಂಗಿ ಅನಿತಾಳ ಹಾಗೆ ಹೊರಗೆ ಹೋಗಿ ದುಡಿದಿದ್ದರೆ ತಿಳೀತಿತ್ತು’; ‘ಅವಳು ನೋಡು ಎಷ್ಟು ಸ್ಮಾರ್ಟ್’ ಎನ್ನುವ ಮಾತುಗಳನ್ನು ಪದೇಪದೆ ಹೇಳುತ್ತಾ ಅವಳನ್ನು, ಅವಳ ಯಾವ ಮಾತನ್ನೂ ಮನೆಯಲ್ಲಿ ಯಾರೂ ಗಣನೆಗೆ ತೆಗೆದುಕೊಳ್ಳದಂತೆ ಮಾಡಿಬಿಟ್ಟಿದ್ದ. ಹೋಲಿಕೆ ಮಾಡುವುದು ಮನುಷ್ಯನ ಸಹಜ ಸ್ವಭಾವ.

ಆದರೆ ಆ ಹೋಲಿಕೆ ಯಾರ ಜೊತೆ, ಯಾವ ಸಂದರ್ಭದಲ್ಲಿ ಮತ್ತು ಉದ್ದೇಶದಿಂದ ಮಾಡಲಾಗುತ್ತದೆ ಎನ್ನುವುದೂ ಮಾನಸಿಕ ಕಿರುಕುಳವೇ, ದೌರ್ಜನ್ಯವೇ ಅಥವಾ ಹಿಂಸೆಯೇ ಎನ್ನುವುದು ನಿರ್ಧಾರ ಆಗುತ್ತದೆ. ಒಮ್ಮೆ ಗಂಡ -ಹೆಂಡತಿ ಟಿವಿ ನೋಡುತ್ತಿದ್ದರು. ಒಂದು ಕಾರ್ಯಕ್ರಮದಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ಅಭಿಷೇಕ್ ಬಚ್ಚನ್ ಅವರು ಬರುತ್ತಿದ್ದರು. ಹೆಂಡತಿ ಶಿಲ್ಪಾಳ ಲೆಹೆಂಗಾ ಎಷ್ಟು ಚೆನ್ನಾಗಿದೆ ಅಲ್ವಾ ಎಂದಳು. ಕೂಡಲೇ ಗಂಡ ನೀನೂ ಶಿಲ್ಪಾ ಶೆಟ್ಟಿ ತರಹ ತೆಳ್ಳಗಾದರೆ ಅದನ್ನು ಕೊಡಿಸುತ್ತೇನೆ ಅಂದ. ತಕ್ಷಣ ಹೆಂಡತಿ ನೀನು ಅಭಿಷೇಕ್ ಬಚ್ಚನ್ ಅಷ್ಟು ಎತ್ತರವಾದರೆ ನಾನು ಶಿಲ್ಪಾ ಶೆಟ್ಟಿ ತರಹ ಆಗ್ತೀನಿ ಅಂದಳು. ಇಂತಹ ನವಿರಾದ ಮಾತುಗಳು ಸಂಬಂಧಗಳಲ್ಲಿ ಪ್ರಫುಲ್ಲತೆಯನ್ನು ಉಳಿಸಿ ಕೊಡುತ್ತವೆ. ಆದರೆ ಹೋಲಿಕೆಯು ಅವಮಾನಕ್ಕೆ, ನಿಂದನೆಗೆ ತಿರುಗದಂತೆ ಎಚ್ಚರಿಕೆ ವಹಿಸುವುದು ಇಬ್ಬರದೂ ಜವಾಬ್ದಾರಿ.

ಇದನ್ನು ಓದಿ: ಮೈಸೂರು | ಆಕಸ್ಮಿವಾಗಿ ಕಟ್ಟಡದಿಂದ ಕೆಳಗೆ ಬಿದ್ದ ವ್ಯಕ್ತಿ ಸಾವು : ಮತ್ತೋರ್ವ ಗಂಭೀರ

ಪತಿ- ಪತ್ನಿ ಸಂಬಂಧ ಬಹಳವೇ ಸೂಕ್ಷ್ಮವಾದದ್ದು. ಯಾರೊಡನೆಯ ಹೋಲಿಕೆ ಮೂಲಕ ತಿಳಿಹೇಳುವ ಪ್ರಯತ್ನ ಮಾಡುವ ಬದಲು ಆಗಬೇಕಾದ್ದನ್ನು ಸಮಂಜಸವಾದ ಮಾತುಗಳಿಂದ ಆಗಿಸಿಕೊಳ್ಳುವ ಸಾಧ್ಯತೆ ಇರುವ ಭಾವಬಂಧ. ಅತ್ತೆ , ಸೊಸೆ ಯನ್ನು ಅವಳ ರೂಪ, ಬಣ್ಣದ ವಿಷಯವಾಗಿ ಮೂದಲಿಸುವುದು, ಅತ್ತಿಗೆ, ನಾದಿನಿಯ ದೈಹಿಕ ನ್ಯೂನತೆಯನ್ನು ಹಿಡಿದು ನಿಂದಿಸುವುದು, ಗಂಡ ಮತ್ತು ಆತನ ಯಾವುದೇ ನಂಟರು ಸೊಸೆಯಾಗಿ ಬಂದವಳನ್ನು ಹಂಗಿಸಿ ಅದರಿಂದ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದರೆ, ಖಿನ್ನತೆಗೆ ಒಳಗಾದರೆ, ಅಂಗವಿಕಲೆಯಾದರೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ೮೫ರ ಪ್ರಕಾರ ಅಂತಹ ನಿಂದನೆ, ಮೂದಲಿಕೆ ಮತ್ತು ಹಂಗಿಸುವಿಕೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ ಮತ್ತು ದಂಡ ಸಹಿತ ಮೂರು ವರ್ಷಗಳ ಕಾಲದ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಸೆಕ್ಷನ್ ೮೬ರಲ್ಲಿ ಹಿಂಸೆಗೆ, ದೌರ್ಜನ್ಯಕ್ಕೆ ಒಂದು ನಿರ್ದಿಷ್ಟವಾದ ವ್ಯಾಖ್ಯಾನವಿದೆ. ಕಿರುಕುಳ ಎನ್ನುವುದು ವ್ಯಕ್ತಿಯ ಆಗಿನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಅದರ ಪ್ರಕಾರ ಅಂತಹ ಒತ್ತಡದಲ್ಲಿ ಮಹಿಳೆಯಿಂದ ಆಸ್ತಿ ಪಡೆಯುವುದು, ಹಣಕಾಸಿನ ಲಾಭ ಪಡೆಯುವುದು ಮಾಡಿದರೆ ಅದೂ ಶಿಕ್ಷಾರ್ಹ ಅಪರಾಧ ಆಗಿರುತ್ತದೆ.

ಸಂಬಂಧಗಳು ಮೇಲೇರುವ ಏಣಿಯಂತಾಗದೆ ಬಲೆಯಂತೆ ಹರಡಿಕೊಳ್ಳುವುದು ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕವಾದ ಅಂಶವಾಗಿದೆ. ಅದಕ್ಕಾಗಿಯೇ ಸಮಂಜಸವಾದ ಭಾಷೆಯಲ್ಲಿ ಸಮಾಧಾನಕರವಾಗಿ ಮಾತನಾಡುವುದು ಮತ್ತು ಎಲ್ಲರಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ ಎನ್ನುವುದನ್ನು ಗಮನಪೂರ್ವಕವಾಗಿ ಅರ್ಥ ಮಾಡಿಕೊಳ್ಳುವುದು ಜರೂರಾಗಿ ಆಗಬೇಕಿದೆ.

(ಲೇಖಕರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)

-ಅಂಜಲಿ ರಾಮಣ್ಣ

ಆಂದೋಲನ ಡೆಸ್ಕ್

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎವ್ಗನ್ ಬಾವ್ಚಾರ್ ಎಂಬ ಕಣ್ಣಿಲ್ಲದ ಫೋಟೋಗ್ರಾಫರ್!

ಪಂಜು ಗಂಗೊಳ್ಳಿ  ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…

3 hours ago

ಓದುಗರ ಪತ್ರ: ಕಳ್ಳಸಾಗಣೆ ಕಪಿಮುಷ್ಟಿಯಲ್ಲಿ ದೇಶದ ಆರ್ಥಿಕತೆ

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…

3 hours ago

ಓದುಗರ ಪತ್ರ: ದ್ವಿಚಕ್ರವಾಹನಗಳಿಗೆ ದರ್ಪಣ(ಕನ್ನಡಿ) ಕಡ್ಡಾಯವಾಗಲಿ

ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…

3 hours ago

ಓದುಗರ ಪತ್ರ: ವಾಹನ ನಿಲುಗಡೆ ನಿಷೇಧಿಸಿ

ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…

3 hours ago

ರಸ್ತೆಗಳು ಅಧ್ವಾನ; ಸವಾರರು ಹೈರಾಣ!

ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…

3 hours ago

ವೈಭವದ ಸುತ್ತೂರು ಜಾತ್ರಾ ಮಹೋತ್ಸವ ಸಂಪನ್ನ

ಕೆ.ಬಿ.ರಮೇಶನಾಯಕ ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಆರುದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ…

3 hours ago