ಆಂದೋಲನ ಪುರವಣಿ

ಕಲ್ಪವೃಕ್ಷವ ನಂಬಿದ ಕಾಯಕ ಲಾಭದಾಯಕ

ತೆಂಗು ಮೌಲ್ಯವರ್ಧನೆ ಮಾಡಿ ಕೋಕೋ ಕೇವ್ ಎಂಬ ನವೀನ ಕಿರು ಉದ್ಯಮ ಸ್ಥಾಪನೆ

ತೆಂಗು ಬಹುಉಪಯೋಗಿ. ಇದರಿಂದ ತಯಾರಾಗುವ ಪ್ರತಿಯೊಂದು ಪದಾರ್ಥಗಳೂ ನಿತ್ಯ ಬದುಕಿಗೆ ಅತ್ಯವಶ್ಯಕ. ಇಂತಿಪ್ಪ ಕಲ್ಪವೃಕ್ಷದಿಂದ ಸಾಕಷ್ಟು ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಅವುಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಂಡರೆ ಖಂಡಿತ ಲಾಭದಾಯಕ ಎನ್ನುವುದಕ್ಕೆ ಮೈಸೂರಿನಲ್ಲಿ ‘ಕೋಕೋ ಕೇವ್’ ಒಳ್ಳೆಯ ಉದಾಹರಣೆ.

ಮೈಸೂರಿನ ರಮಾನುಜ ರಸ್ತೆಯಲ್ಲಿ ಅಡ್ಡಾಡಿದರೆ ‘ಕೋಕೋ ಕೇವ್’ ಎನ್ನುವ ಹಸಿರಾದ ಮಳಿಗೆ ಕಾಣಸಿಕ್ಕುತ್ತದೆ. ೯ ತಿಂಗಳ ಹಿಂದಷ್ಟೇ ಶುರುವಾದ ಈ ನವೀನ ಮಳಿಗೆ ಈಗ ಹೆಚ್ಚು ಮಂದಿಯನ್ನು ಆಕರ್ಷಿಸಿ ಮುನ್ನಡೆಯುತ್ತಿದೆ. ಇದಕ್ಕೆ ಮುಖ್ಯವಾದ ಕಾರಣ ಎಳನೀರು ಮತ್ತು ಅದರ ಉಪ ಉತ್ಪನ್ನಗಳು. ಇದನ್ನು ಮುನ್ನಡೆಸುತ್ತಿರುವುದು ದಿನೇಶ್ ಮತ್ತು ಕುಟುಂಬ.

ಎಳನೀರಿನಿಂದ ಏಳು ಬಗೆಯ ತಿನಿಸು

ಬೇಸಿಗೆ ಹೊಸ್ತಿಲಲ್ಲಿ ನಿಂತಿರುವ ಈ ಸಮಯದಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ಅದೇ ರೀತಿ ಕೋಕೋ ಕೇವ್‌ನಲ್ಲಿ ಎಳನೀರಿನಿಂದಲೇ ತಯಾರಿಸಿದ ಐಸ್‌ಕ್ರೀಮ್, ಎಳನೀರು ಕ್ರಶ್, ಎಳನೀರು ಕೂಲರ್, ಸ್ಕೂಪ್, ಕೋನ್, ಫುಡ್ಡಿಂಗ್‌ಗಳು ಎಲ್ಲರ ಮೆಚ್ಚುಗೆ ಗಳಿಸಿವೆ. ಆ ಮೂಲಕ ಹೊಸದಾಗಿ ಆರಂಭವಾದ ಉದ್ದಿಮೆ ಭರವಸೆ ಮೂಡಿಸಿದೆ.

ಕುಟುಂಬದ ನಿರ್ವಹಣೆ

ದಿನೇಶ್ ಅವರು ಹೆಂಡತಿ ಮಕ್ಕಳು, ಇಬ್ಬರು ಕೆಲಸದ ಆಳುಗಳನ್ನು ಒಟ್ಟಾಗಿಸಿಕೊಂಡು ಎಳನೀರಿನಿಂದ ಏಳು ಬಗೆಯ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರು ಮಾಡುತ್ತಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಯಂತ್ರೋಪಕರಣಗಳನ್ನು ತರಿಸಿಕೊಂಡಿರುವ ಇವರು ಸ್ಥಳೀಯವಾಗಿ ದಿನವೂ ಎಳನೀರು ತರಿಸಿಕೊಂಡು ಐಸ್‌ಕ್ರೀಮ್, ಎಳನೀರು ಕ್ರಶ್, ಎಳನೀರು ಕೂಲರ್, ಸ್ಕೂಪ್, ಕೋನ್, ಫುಡ್ಡಿಂಗ್‌ಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಒಳ್ಳೆಯ ರುಚಿ ಮತ್ತು ಕೈಗೆಟಕುವ ಬೆಲೆ ನಿಗದಿ ಮಾಡಿರುವುದರಿಂದ ಕೋಕೋ ಕೇನ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕುತ್ತಿದೆ.

ಕೊರೋನಾ ವೇಳೆಯಲ್ಲಿ ಹುಟ್ಟಿದ ಆಲೋಚನೆ

ಹಲವಾರು ಮಂದಿಯ ಉದ್ಯೋಗ ನಷ್ಟಕ್ಕೆ ಕೊರೋನಾ ಕಾರಣ. ಹಾಗೆಯೇ ಕೆಲವಾರು ಮಂದಿ ಹೊಸ ಉದ್ದಿಮೆ, ಹೊಸ ಸಾಹಸದತ್ತ ಮುಖ ಮಾಡಲು ಇದೇ ಕೊರೋನಾ ಕಾರಣ. ಇಂಜಿನಿಯರಿಂಗ್ ಮಾಡಿದ್ದ ಮಗ ಕೊರೋನಾ ವೇಳೆಯಲ್ಲಿ ಮನೆಯಲ್ಲಿಯೇ ಬಂಧಿಯಾದಾಗ ಏನಾದರೂ ಹೊಸದಾಗಿ ಮಾಡಬೇಕು ಎಂದು ದಿನೇಶ್ ಅವರ ಕುಟುಂಬ ನಿರ್ಧರಿಸುತ್ತದೆ. ಆಗ ವಿವಿಧ ಆಲೋಚನೆಗಳು ಸುಳಿದು ಹೋಗುತ್ತವೆ. ಪರಿವರ್ತ ಹಣ್ಣುಗಳನ್ನು ಬಳಸಿಕೊಂಡು ನೈಸರ್ಗಿಕವಾಗಿ ಐಸ್‌ಕ್ರೀಮ್ ತಯಾರು ಮಾಡಬೇಕು ಎಂದು ಮೊದಲಿಗೆ ಅಂದುಕೊಳ್ಳುತ್ತಾರೆ. ಆದರೆ ಮುಂದೆ ದಾರಿ ಬದಲಾಗಿ ಒಂದೇ ವಸ್ತುವನ್ನು ಗುರಿಯಾಗಿಸಿಕೊಂಡು ಅದರಿಂದಲೇ ಬೇರೆ ಬೇರೆ ರೀತಿಯ ಉತ್ಪನ್ನಗಳನ್ನು ತಯಾರು ಮಾಡಬೇಕು ಎಂದುಕೊಂಡು ಎಳನೀರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಮನೆಯೇ ಮಳಿಗೆಯಾಯ್ತು

ಎಳನೀರನ್ನು ಕೇಂದ್ರವಾಗಿಟ್ಟುಕೊಂಡು ಉದ್ದಿಮೆ ಶುರುಮಾಡಿದ ಮೇಲೆ ಸೂಕ್ತ ಸ್ಥಳದ ಹುಡುಕಾಟ ನಡೆಯಿತು. ಬೇರೆ ಕಡೆಗಳಲ್ಲಿ ಬಾಡಿಗೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ರಮಾನುಜ ರಸ್ತೆಯಲ್ಲಿ ಇರುವ ಮನೆಯ ಒಂದು ಭಾಗವನ್ನೇ ಮಳಿಗೆಯನ್ನಾಗಿ ಪರಿವರ್ತಿಸಲಾಯಿತು. ಆಗ ನಮ್ಮ ಮನಸ್ಸಿನಲ್ಲಿ ಇದ್ದದ್ದು ಒಳ್ಳೆಯ ಸೇವೆ, ಗುಣಮಟ್ಟದ ತಿನಿಸುಗಳನ್ನು ನೀಡಿದರೆ ಗೆಲುವು ಸಿಗುತ್ತದೆ ಎನ್ನುವುದು. ಈಗ ನಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತಿದೆ. ಮುಂದೆ ಬೇಸಿಗೆ ಬರುವುದರಿಂದ ಮತ್ತಷ್ಟು ಬೆಳವಣಿಗೆ ಆಗಬಹುದು ಎನ್ನುವ ಅಂದಾಜಿದೆ ಎನ್ನುವುದು ದಿನೇಶ್ ಅವರ ವಿಶ್ವಾಸ.

ಈಗ ಆರೋಗ್ಯ ಚೆನ್ನಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ನಾವು ಎಳನೀರಿನ ಮೌಲ್ಯವರ್ಧನೆ ಮಾಡಿದ್ದೇವೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು, ಎಲ್ಲ ವಯೋಮಾನದವರೂ ನಮ್ಮಲ್ಲಿಗೆ ಬರುತ್ತಿದ್ದಾರೆ. ಒಳ್ಳೆಯ ಗುಣಮಟ್ಟ ಮತ್ತು ಕಡಿಮೆ ದರ ಇರುವುದರಿಂದ ಉದ್ಯಮ ಚೆನ್ನಾಗಿ ನಡೆಯುತ್ತಿದೆ. – ದಿನೇಶ್, ಮಾಲೀಕರು, ಕೋಕೋ ಕೇವ್

andolana

Recent Posts

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

7 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

9 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

12 hours ago

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

16 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

20 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

20 hours ago