ಹಾಡು ಪಾಡು

ಹುಲಿ ಯಾಕೆ ನೀರು ಕುಡಿಯಲಿಲ್ಲ?

ಕೀರ್ತಿ ಬೈಂದೂರು

ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು

ಬೆಳಗಿನ ಜಾವದ ಹೊತ್ತಿನಲ್ಲಿ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಕಾಡಲ್ಲಿ ಸಫಾರಿ ಹೋಗಿದ್ದೆವು . ‘ಇದೇ ಕೆರೆ ಪಕ್ಕನೇ ನೋಡ್ತಿರಿ. ಹುಲಿ ಬಂದು ನೀರು ಕುಡ್ಕೊಂಡು ಹೋಗತ್ತೆ’ ಅಂತ ಡ್ರೈವರ್‌ ಹೇಳಿದ. ಆಗವರು ಬರಿಯ ಡ್ರೈವರ್‌ ಆಗಿರಲಿಲ್ಲ. ಜಗತ್ತಿನ ಯಾವುದೋ ಅನೂಹ್ಯ ಲೋಕವನ್ನು ತೋರುವ ವಿಸ್ಮಯಕಾರನಾಗಿದ್ದ.

ಕಾದಿದ್ದಕ್ಕೂ ಸಾರ್ಥಕ, ಹುಲಿ ಬಂತು. ಜೀಪಿನಲ್ಲಿದ್ದ ಏಳು ಜನರೂ ಬೆಕ್ಕಸ ಬೆರಗಾಗಿ ಹುಲಿ ಹೇಗೆ ನೀರು ಕುಡಿಯುತ್ತದೆ ಎಂಬುದನ್ನು ನೋಡಲು ಕಾತರರಾಗಿದ್ದರು. ನಾನೂ ಮೊಬೈಲ್ ತೆಗೆದು, ವಿಡಿಯೋ ಮಾಡಿಕೊಳ್ಳತೊಡಗಿದೆ. ಅಚ್ಚರಿ ಎಂದರೆ ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು. ಉಳಿದವರೆಲ್ಲ, ‘ವಾವ್! ಎಷ್ಟು ಚೆನ್ನಾಗಿದೆ. ಹುಲಿ ನೀರು ಕುಡಿದು ಹೊರಡ್ತು’ ಎಂದೆಲ್ಲ ಬಾಯಿ ತೆಗೆಯುತ್ತಿದ್ದರು. ನಾನು ಮಾತ್ರ ಹುಲಿ ನೀರೇ ಕುಡಿದಿಲ್ಲವಲ್ಲಾ ಎಂದು ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದೆ. ಆಮೇಲೆ ಗೊತ್ತಾಗಿದ್ದು ಬೆಳಗಿನ ನಿತ್ಯ ಕರ್ಮಗಳನ್ನೆಲ್ಲ ಪೂರೈಸಿದ್ದ ಹುಲಿ ತನ್ನ ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದರ ಭಾಗವಾಗಿ ತನ್ನ ಹಿಂಭಾಗವನ್ನು ನೀರಿಗೆ ಅದ್ದಿಕೊಂಡಿತ್ತು!

ಕಾಡಿನ ನಡುವೆ ರಾತ್ರಿ ಒಮ್ಮೆ ಗರ್ಜನೆ ಮತ್ತು ಆರ್ತನಾದ ಒಟ್ಟಿಗೇ ಕೇಳಿಸಿತು. ಎದೆ ಝಲ್ ಎಂದ ಅನುಭವ! ಇಲ್ಲೇ ಪಕ್ಕದಲ್ಲೆಲ್ಲೋ ಬೇಟೆ ನಡೆಯಿತೆನ್ನುವ ಭಾವ. ದೈತ್ಯ ಪ್ರಾಣಿಯೊಂದು ಅಸಹಾಯಕ ಪ್ರಾಣಿಯೊಂದನ್ನು ಹಿಡಿದಿರಬಹುದು ಎಂಬುದನ್ನು ಊಹೆ ಮಾಡಿಕೊಂಡು, ಕುಳಿತಿದ್ದವರೆಲ್ಲ ಭಯಭೀತರಾಗಿ ಕೋಣೆಯೊಳಕ್ಕೆ ತೆರಳಿದ್ದೆವು. ನಟ್ಟಿರುಳ ರಾತ್ರಿಯಲ್ಲಿ ಘಟಿಸಿರಬಹುದಾದ ಸನ್ನಿವೇಶವನ್ನು ಕಿವಿಯ ಸಹಾಯದಿಂದ ಮತ್ತೆ ಮರುಕಟ್ಟುತ್ತಾ, ನಿದ್ರೆಗೆ ಜಾರಿದ್ದೆವು.

ಆಂದೋಲನ ಡೆಸ್ಕ್

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

23 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

23 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

23 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

23 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

23 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

23 hours ago