ಹಾಡು ಪಾಡು

ಧಾನ್ಯಗಳ ದೇವತೆ ಕೊಂತಿಗೆ ಹುಚ್ಚೆಳ್ಳು ಅವರೆ ತುಂಬೆ ಹೂ ಪೂಜೆ

 ಡಾ. ಎಂ.ಎ. ರಾಧಾಮಣಿ

“ಒನ್ಕೊಂತಿ ಪೂಜೆ, ಒನ್ನೆಲ್ವ ತಾರ್ಸಿ ಧಾನ್ಯಗಳ ದೇವತೆ ಕೊಂತಿಗೆ ಹುಚ್ಚೆಳ್ಳು ಅವರೆ ತುಂಬೆ ಹೂ ಪೂಜೆ ಇಂಬಿಗೆ ಹೋದಣ್ಣ, ಏನೇನು ತಂದಾನು ಇಂಬಾಳೆ ತಂದಾನು, ಮುಂಬಾಳೆ ತಂದಾನು ಇಷ್ಟೆಲ್ಲನೂ ತಂದೋನೂ ನಮ್ಕೊಂತಿಗೆ ಹೂವೇಕೆ ತರಲಿಲ್ಲವೋ” ಇದು ಕುಂತಿಪೂಜೆಯ ಸಂದರ್ಭದಲ್ಲಿ ಹೆಂಗಸರು ಹಾಡುವ ನಾಂದಿಪದ್ಯ. ‘ಕುಂತಿ’ ಎಂಬುದು ಜನರ ಬಾಯಲ್ಲಿ ‘ಕೊಂತಿ’ಯಾಗಿ ಅದನ್ನು ‘ಕೊಂತಿಪೂಜೆ’ಯೆಂದೇ ಕರೆಯುವರು. ದೀಪಾವಳಿ ಹಬ್ಬದ ನಂತರದಲ್ಲಿ ಆಚರಿಸಲ್ಪಡುವ ಒಂದು ಜನಪದ ಆಚರಣೆ. ಇದು ವಿಶೇಷವಾಗಿ ದಕ್ಷಿಣ ಕರ್ನಾಟಕದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಈಗಲೂ ಕೊಂತಿಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದು ಕೃಷಿ ಸಂಸ್ಕ ತಿಯನ್ನು ಪ್ರತಿಪಾದಿಸುವ ಪೂಜೆ. ಹೆಸರೇ ಸೂಚಿಸುವಂತೆ ಈ ಆಚರಣೆಯಲ್ಲಿ ಪಾಂಡವರ ತಾಯಿಯಾದ ಕುಂತಿಯನ್ನು ಆರಾಧಿಸಲಾಗುವುದು. ಕುಂತಿ ಧಾನ್ಯಗಳ ದೇವತೆ ಎಂಬುದು ಜನಪದರ ನಂಬಿಕೆ. ಹಾಗಾಗಿ ಸುಗ್ಗಿಕಾಲದಲ್ಲಿ ಈ ಆಚರಣೆಯನ್ನು ಮಾಡುವುದು ರೂಢಿ.

ನಾನು ಬಾಲ್ಯದಲ್ಲಿದ್ದಾಗ ನಮ್ಮ ಊರಿನಲ್ಲಿಯೂ ಕೊಂತಿಪೂಜೆ ಮಾಡುತ್ತಿದ್ದರು. ಇದು ರಾತ್ರಿಹೊತ್ತು ಆಚರಿಸುವ ಹಬ್ಬವಾಗಿರುವುದರಿಂದ ನಾನು ನನ್ನ ಅಜ್ಜಿ ಮತ್ತು ಅಮ್ಮನ ಜೊತೆ ಹೋಗಿ ನಿದ್ದೆಗೆಟ್ಟು ಅಲ್ಲಿನ ಹಾಡು ಕಥೆಗಳನ್ನು ಕೇಳಿ ಸಂಭ್ರಮಿಸುತ್ತಿದ್ದೆ. ಈಗಲೂ ಆ ದೃಶ್ಯ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಪೂಜೆ ವೇಳೆಯಲ್ಲಿ ಮಹಾಭಾರತದ ಕುಂತಿಯ ಪ್ರಸಂಗಗಳನ್ನು ಕತೆ ಮತ್ತು ಹಾಡಿನ ಮೂಲಕ ಹೇಳುವುದರಿಂದ ಬಾಲ್ಯದಲ್ಲಿಯೇ ಮಹಾಭಾರತದ ಕತೆ ನಮ್ಮ ಕಿವಿಯ ಮೇಲೆ ಬೀಳುತ್ತಿತ್ತು. ಆ ಕತೆಗಳು ನನ್ನೊಳಗೆ ಕೌತುಕವನ್ನು ಹುಟ್ಟು ಹಾಕುತ್ತಿದ್ದವು. ಆದರೆ ಇಂದಿನ ಮಕ್ಕಳಿಗೆ ಇಂತಹ ಆಚರಣೆಯ ಪರಿಚಯವೇ ಇಲ್ಲದಂತಾಗಿದೆ.

ರಾತ್ರಿ ಮನೆಗೆಲಸ ಮುಗಿಸಿದ ಮೇಲೆ ಹೆಂಗಸರು ಒಂದೆಡೆ ಸೇರಿ ಗೋವಿನ ಸಗಣಿಯಿಂದ ನೆಲ ತಾರಿಸಿ ಸ್ವಚ್ಛಗೊಳಿಸಿದ ಪಡಸಾಲೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ, ನೆಲದಿಂದ ಒಂದು ಮೊಳ ಮೇಲಕ್ಕೆ, ಹಸಿ ಎರೆಮಣ್ಣಿನಿಂದ ಅಥವಾ ಗೋವಿನ ಸಗಣಿಯಿಂದ ಕುದುರೆಗೊರಸಿನ ಆಕೃತಿಯ ಒಂದು ಪ್ರಾಕಾರವನ್ನು ಬಿಡಿಸುತ್ತಾರೆ. ಇದು ಋತುಮತಿಯಾದ ಕೊಂತಿಯನ್ನು ಕೂರಿಸುವ ಗುಡಿಸಲು. ಪೂಜೆಯ ಕೊನೆಯ ದಿನ ಒಳಗಡೆ ಎರೆಮಣ್ಣಿನಿಂದ ಸ್ತ್ರೀ ವಿಗ್ರಹವನ್ನು ಮಾಡಿ ಅದಕ್ಕೆ ಸೀರೆ, ಬಳೆಗಳಿಂದ ಅಲಂಕರಿಸಿ, ಹುಚ್ಚೆಳ್ಳು, ಅವರೆ, ತುಂಬೆ ಮುಂತಾದ ಹೂವುಗಳಿಂದ ಅಲಂಕರಿಸುತ್ತಾರೆ.

ಪೂಜೆಯನ್ನು ಸಲ್ಲಿಸಿದ ಬಳಿಕ ದಾಸೋಹ ನೀಡುತ್ತಾರೆ. ಇದು ಪ್ರತಿವರ್ಷದ ಮೊದಲ ಕಾರ್ತಿಕ ಮಾಸದ ಹುಣ್ಣಿಮೆ ರಾತ್ರಿಗಳಲ್ಲಿ ಹದಿನಾರು ದಿವಸಗಳವರೆಗೆ ನಿರಂತರವಾಗಿ ನಡೆಯುತ್ತದೆ. ‘ನಮ್ಮ ಬದುಕನ್ನುಸಮೃದ್ಧಗೊಳಿಸು’ ಎಂದು ಬೇಡಿಕೊಂಡು ಅವರೆ ಅಥವಾ ಹುರುಳಿ ಹೊಲಗಳಲ್ಲಿ ವಿಸರ್ಜಿಸಲಾಗುತ್ತದೆ. ಕೊಂತಿಪೂಜೆಯಲ್ಲಿ ಎರಡು ಮೂರ್ತಿಗಳನ್ನು ಇಡುವುದು ವಿಶೇಷ. ಇವೆರಡರಲ್ಲಿ ಒಂದು ಕುಂತಿಯನ್ನು ಮತ್ತೊಂದು ಮಾದ್ರಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ

ಆರಾಧನೆಗೆ ಒಳಗಾಗುವುದು ಕುಂತಿಯಾದರೂ, ಅವಳ ಸವತಿಯಾದ ಮಾದ್ರಿಯನ್ನು ಜೊತೆಗಿರಿಸುವುದು ವಿಶೇಷ. ಸವತಿ ಮಾತ್ಸರ್ಯವಿದ್ದರೂ ಕುಂತಿ ಅದನ್ನು ಮೀರಿ ಮಾನವೀಯತೆಯಿಂದ ವರ್ತಿಸುವುದು ಹೆಣ್ಣಿನ ಹೃದಯ ವೈಶಾಲ್ಯತೆಯನ್ನು ಕೂಡಿ ಬದುಕುವ ಗುಣವನ್ನು ಸೂಚಿಸುತ್ತದೆ. ಯಾವುದೇ ಆಚರಣೆಗಳು ಸಡಗರ ಸಂಭ್ರಮದಿಂದ ಕೂಡಿದ್ದರೂ ಅವುಗಳ ಆಂತರ್ಯದಲ್ಲಿ ಇಂತಹ ಜೀವನಮೌಲ್ಯಗಳು ಅಡಗಿರುತ್ತವೆ ಎಂಬುದು ಗಮನಾರ್ಹ ಸಂಗತಿ. ‘ಹೂವಿನಿಂದ ನಾರು ಸ್ವರ್ಗ ಸೇರಿತು’ ಎಂಬಂತೆ ಕುಂತಿಯಿಂದ ಮಾದ್ರಿಯ ಹೆಸರು ಉಳಿಯುವಂತಾಯಿತು.

ಕೊಂತಿ ಆದರ್ಶ ಸತಿ, ಆದರ್ಶ ಮಾತೆ, ಮಿಗಿಲಾಗಿ ಒಳ್ಳೆಯ ಸಂತಾನ ಪಡೆದ ಆದರ್ಶ ಮಹಿಳೆ ಎಂಬುದು ಪುರಾಣ ಕಾಲದಿಂದಲೂ ನಂಬಿಕೊಂಡು ಬರಲಾಗು ತ್ತಿರುವ ಮೌಲ್ಯವಾಗಿದ್ದು, ತಮಗೂ ಅವಳಂತೆಯೇ ಒಳ್ಳೆಯ ಸಂತಾನ, ಸತ್ಕೀರ್ತಿ ಸಿಗಲೆಂಬ ಅಭಿಲಾಷೆಯಿಂದ ಹಳ್ಳಿಯ ಜನ ಕೊಂತಿಯನ್ನು ತಮ್ಮ ಇಷ್ಟದೇವತೆಯೆಂದು ಪರಿಗಣಿಸಿ ಪೂಜಿಸುತ್ತ ಬಂದಿದ್ದಾರೆ. ಮೈನೆರೆದ ಹೆಣ್ಣು ಮಕ್ಕಳಿಗೆ ಗುಡ್ಲು ಕೂರಿಸುವ ಶಾಸ್ತ್ರಕ್ಕೂ ಕೊಂತಿಪೂಜೆಗೂ ಸಂಬಂಧವಿದೆ ಎಂದು ಹೇಳುವುದುಂಟು. ಈ ಪೂಜೆಯ ಮೂಲ ಆಶಯವೇ ಸಂತಾನಾಭಿಲಾಷೆ ಆಗಿದೆ.  ಜಾನಪದ ಹಾಡುಗಳ ಮೂಲಕ ಕುಂತಿಯ ಕಥೆ, ಅವಳ ಬಾಲ್ಯ, ಮದುವೆ ಮತ್ತು ಮಕ್ಕಳ ಕುರಿತಾದ ಜೀವನಗಾಥೆಯನ್ನು ಹೇಳಲಾಗುತ್ತದೆ.

ಪಾಂಡವರೊಂದಿಗೆ ಆ ಮಹಾತಾಯಿ ಕೊಂತಿ ಆ ಕಾಲದಲ್ಲಿ ತಮ್ಮ ಗ್ರಾಮಗಳಲ್ಲೆಲ್ಲ ಅಡ್ಡಾಡಿ ಹೋಗಿದ್ದಾಳೆಎಂಬುದು ಜನಪದರ ನಂಬಿಕೆ. ಆಕೆ ಬಿಟ್ಟು ಹೋದಗುರುತು ಆದರ್ಶಗುಣ, ಧರ್ಮ ಇತ್ಯಾದಿಗಳನ್ನು ನೆನೆಪಿಸಿಕೊಂಡು ಹಾಡುವುದು ಸಂಪ್ರದಾಯ

” ಇದು ಕೃಷಿ ಸಂಸ್ಕ ತಿಯನ್ನು ಪ್ರತಿಪಾದಿಸುವಪೂಜೆ. ಕುಂತಿ ಧಾನ್ಯಗಳ ದೇವತೆ ಎಂಬುದುಜನಪದರ ನಂಬಿಕೆ. ಹಾಗಾಗಿ ಸುಗ್ಗಿಕಾಲದಲ್ಲಿ ಈ ಆಚರಣೆಯನ್ನು ಮಾಡುವುದು ಪದ್ಧತಿ”

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

8 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

9 hours ago

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

1 day ago