ಹಾಡು ಪಾಡು

ಯಾರೋ ಕಥೆ ಬರಿ ಮಾರಾಯ ಅಂದಿದ್ದರು. ನನಗೆ ಈ ಹುಡುಗ ನೆನಪಾದ

ಮಡಿಕೇರಿ ದಸರಾದ ಹತ್ತು ದಿನಗಳ ಕಾಲ ನಾವೊಂದು ಕ್ಯಾಂಟಿನ್ ಮಾಡಿದ್ದೆವು. ಒಂದು ದಿನ ಗಿರಾಕಿಗಳು ಕಡಿಮೆ ಇದ್ದರಿಂದ ಕ್ಯಾಂಟಿನ್ ಬಾಗಿಲನ್ನು ರಾತ್ರಿ ಒಂದು ಗಂಟೆಗೇ ಮುಚ್ಚಿ, ಮಲಗಲು ಹೊರಡುವ ಸಮಯ. ನೆಲಕ್ಕೆ ಟಾರ್ಪಲ್, ಗೋಣಿಚೀಲ ಹಾಕಿ ನಾನು ಬೆಡ್ ನಿರ್ಮಾಣ ಮಾಡುತ್ತಿದ್ದೆ. ವೇದಿಕೆ ಬಳಿಯೇ ನಮ್ಮ ಕ್ಯಾಂಟಿನ್ ಇದ್ದರಿಂದ ಸಾಂಸ್ಕ ತಿಕ ಕಾರ್ಯಕ್ರಮ ನೋಡಲು ಬಂದಿದ್ದ ಜನರೆಲ್ಲಾ ಹೋಗಿ, ವೇದಿಕೆಯ ಕರಾಳ ಕರ್ಕಶ ಸದ್ದೆಲ್ಲವೂ ಬಂದಾಗಿ ಹೊರೆಗಲ್ಲಾ ಬಿಕೊ ಅನ್ನುತ್ತಿತ್ತು.

ಹೊರಗೆ ಇಣುಕಿ ನೋಡಿದ ನನಗೆ ಬೀದಿ ದೀಪದ ಕೆಳಗೆ ಹುಡುಗನೊಬ್ಬ ಒಂಟಿಯಾಗಿ ನಿಂತಿರುವುದು ಕಂಡಿತು. ಆ ನಡುರಾತ್ರಿ ಒಂಟಿ ಹುಡುಗನ್ನು ನೋಡಿ ನನಗೆ ಆಶ್ಚರ್ಯ. ಪಕ್ಕಕ್ಕೆ ಕರೆದು, ವಿಚಾರಿಸಲು ತೊಡಗಿದೆ. ಜೊತೆಗಿದ್ದ ಹುಡುಗರು ‘ಯಾರಾದರೂ ನಿಂತರೆ ನಮಗೇನಾಣ್ಣ.. ಬನ್ನಿ ಸುಮ್ನೆ ಮಲಗಿಕೊಳ್ಳಿ” ಎಂದು ಉಪದೇಶ ನೀಡಿದರು‘ ನಾನು ಮಾನವೀಯತೆ ಇಲ್ಲದವರು ಎಂದು ಹುಡುಗರನ್ನು ಗದರಿದೆ. ಕಾಲೇಜಿನ ರಜೆಯಲ್ಲಿ ನಮ್ಮೊಡನೆ ಕ್ಯಾಂಟಿನ್ ಕೆಲಸಕ್ಕೆ ಬಂದಿದ್ದ ಹುಡುಗರಿಗೆ ನಿದ್ರೆ ಎಳೆಯುತ್ತಿತ್ತು. ಅವರು ಸುಮ್ಮನೆ ಮಲಗಿದರು.

ಹುಡುಗನನ್ನು ಕ್ಯಾಂಟಿನಿನ ಒಳಗೆ ಕರೆದೆ. ಮುದ್ದಾದ ಹುಡುಗ. ಉಡುಗೆಯಲ್ಲೂ ಶ್ರೀಮಂತ ಮನೆಯ ಹುಡುಗನಂತೆ ಕಾಣುತ್ತಿದ್ದ. ಮನೆಯಲ್ಲಿ ಮುದ್ದಾಗಿ ಬೆಳಸಿದಂತಹಾ ಆರೋಗ್ಯಕರ ದೇಹ ಹುಡುಗನದ್ದು. ನಾವು ಹುಡುಗನನ್ನು ವಿಚಾರಿಸಿ ಉಳಿದಿದ್ದ ಎಗ್ ಫ್ರ್ತ್ಯೈಡ್ ರೈಸ್ ತಿನ್ನಿಸಿ, ಮನೆ ಎಲ್ಲಿ ಎಂದು ಕೇಳಿ ತಿಳಿದೆವು.

ಅವನನ್ನುಜೊತೆಗಿದ್ದ ಗೆಳೆಯ ಕೌಸರ್ ಡ್ರಾಪ್ ಮಾಡಿ ಇಂದು ಮನೆಗೆ ಹೋಗುವುದು, ನಾವು ಟೆಂಟಲ್ಲಿಯೇ ಮಲಗುವುದು ಎಂದು ನಿರ್ಧರಿಸಿದೆವು. ಅದರಂತೆ ಹುಡುಗನ್ನು ಕೌಸರ್ ಮಧ್ಯರಾತ್ರಿ ತನ್ನ ಬೈಕಿನಲ್ಲಿ ಕರೆದುಕೊಂಡು ಹೋದ. ನಮ್ಮ ನಿರ್ಧಾರದ ಕುರಿತು ನಮ್ಮ ಕ್ಯಾಂಟಿನ್ ಹುಡುಗರು ಅಸಮಾಧಾನ ವ್ಯಕ್ತಪಡಿಸಿದರು. ಅವನು ಯಾರೋ? ಏನೋ? ಇಷ್ಟು ರಾತ್ರಿಯಲ್ಲಿ ನೀವು ಅವನನ್ನು ಕೌಸರ್ ಅಣ್ಣನ ಜೊತೆ ಕಳುಹಿಸಿದ್ದು ಸರಿ ಅಲ್ಲ ಎಂದು ನನ್ನ ಮೇಲೆ ಅಸಮಾಧಾನ ಹೊರಹಾಕಿದರು. ಹೋಗಿ ಹದಿನೈದು ನಿಮಿಷ ಕಳೆದರೂ ಕೌಸರ್ ಕರೆ ಮಾಡದ್ದು ನೋಡಿ ನನಗೆ ಭಯ ಶುರುವಾಯಿತು.
ಇದ್ಯಾರೋ ದರೋಡೆ ಕೋರರ ತಂಡದ ಹುಡುಗ ಆಗಿದ್ದು, ಕೌಸರ್ ನನ್ನು ಕರೆದುಕೊಂಡು ಹೋಗಿ ಏನಾದರೂ ಅನಾಹುತ ಮಾಡಿದರೇ ? ಎಂದು ನನಗೆ ತಲೆನೋವು ಶುರುವಾಯಿತು. ಮೊಬೈಲ್ ತೆಗೆದು ಫೋನ್ ಮಾಡಿದೆ. ಆ ಕಡೆಯಿಂದ ಫೋನ್ ತುಂಡಾಯಿತು, ಮತ್ತೇ ಮಾಡಿದೆ. ಫೋನ್ ರಿಸಿವ್ ಆಯಿತಾದರೂ ಅವನು ಮಾತನಾಡುತ್ತಿಲ್ಲ. ಜೋರಾಗಿ ಗಲಾಟೆ ಸದ್ದು ಕೇಳಿ ಬರುತ್ತಿತ್ತು. ನನಗೆ ಆ ನಡುರಾತ್ರಿಯೂ ಚಳಿಯಲ್ಲೂ ಬೆವರು ಕಿತ್ತುಕೊಂಡು ಬರತೊಡಗಿತು.

ಪುನಃ ಆಚೆಯಿಂದ ಹತ್ತು ನಿಮಿಷ ಕಳೆದು ಕರೆಬಂತು. ಆ ಕಡೆಯಿಂದ ಬೇರೆ ಯಾರೋ ಮಾತನಾಡುತ್ತಿದ್ದರು.
‘ಇಷ್ಟೊತ್ತಿಗೆ ಹೀಗೆ ಇಲ್ಲಿಗೆ ಬರುವುದು ಸರಿಯಲ್ಲ. ಇವನನ್ನು ನಾವು ಸುಮ್ಮನೆ ಬಿಡಲ್ಲಾ’ ಎಂಬಿತ್ಯಾದಿ ಮಾತುಗಳು ಕೇಳಿಸುತ್ತಿದ್ದವು.

ಆ ಬಾಲಕ ಇತ್ತೀಚಿಗೆ ಮಡಿಕೇಇಯಲ್ಲಿ ನಡೆದ ಸರಣಿಗಳ್ಳತನದ ಮುಖ್ಯ ಬಾಲ ಆರೋಪಿಯಾಗಿದ್ದ ಹಾಗೂ ಆ ಬಾಲಕನ ಮನೆಯಲ್ಲಿ ಅವನ ತಾಯಿ ಒಂಟಿಯಾಗಿದ್ದಳು. ಅವರ ಮನೆಯ ಬಳಿ ಕೌಸರ್ನನ್ನು ಕಂಡಾಗ ಆ ಏರಿಯಾದ ಹುಡುಗನೊಬ್ಬ ಇಲ್ಲೇನೋ ಅವ್ಯವಹಾರ ನಡೆಯುತ್ತಿದೆ ಎಂದು ತಪ್ಪಾಗಿ ತಿಳಿದಿದ್ದ.  ಇಷ್ಟೆಲ್ಲಾ ನಡೆದು ಕೊನೆಗೆ ಕೌಸರ್ ಮನೆಗೆ ತಲುಪಿದ್ದ. ನಿದ್ರೆ ಹಾಳಾಯಿತು ಎಂದು ಹುಡುಗರು ನನಗೆ ಬೈಯುತ್ತಾ ನಿದ್ರೆ ಹೋಗಿದ್ದರು.

ಈ ಗಲಾಟೆ ನಡುವೆ ಕ್ಯಾಂಟಿನಿನ ಒಳಗೆ ಬೀದಿ ನಾಯೊಂದು ನುಗ್ಗಿ, ನಮ್ಮ ಜೊತೆ ಮಲಗಿತ್ತು. ಅದನ್ನು ಓಡಿಸಲು ನನಗೆ ಧ್ವನಿಹೊರಡುತ್ತಿರಲಿಲ್ಲ. ನಿನ್ನೆ ಯಾರೋ ಕಥೆ ಬರಿ ಮಾರಾಯ ಅಂದಿದ್ದರು. ನನಗೆ ಈ ಹುಡುಗ ನೆನಪಾದ

andolana

Recent Posts

ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ನಿಧನ

ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲ…

50 mins ago

ನೆಹರು ದಾಖಲೆ ಮುರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ…

56 mins ago

ಓದುಗರ ಪತ್ರ: ಗೃಹ ಸಚಿವರೇ ಇತ್ತಲೂ ಗಮನಹರಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಗೃಹಮಂತ್ರಿ ಪ್ರಿಯಾಂಕ್…

2 hours ago

ಓದುಗರ ಪತ್ರ: ಹೀಗೇಕೆ ಭಾವಿಸಬಾರದು?

ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ತಪ್ಪಿದ್ದು ಕರ್ನಾಟಕದ ಜನರಿಗೆ ಮಾಡಿದ ಅವಮಾನ ಎಂದು ಭಾವಿಸಿ ತಪ್ಪು ತಿಳಿಯುವುದಕ್ಕಿಂತ... ಇಳಿ ವಯಸ್ಸಿನಲ್ಲಿರುವ ದೇವೇಗೌಡರು…

2 hours ago

ಓದುಗರ ಪತ್ರ: ಎಲ್ಲ ಇಲಾಖಾ ಪರೀಕ್ಷೆಗಳ ಹೊಣೆಯನ್ನು ಕೆಇಎಗೆ ನೀಡಲಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ೨೦೨೪-೨೦೨೫ ರಲ್ಲಿ ಸುಮಾರು ೨೫ ಕ್ಕೂ ಹೆಚ್ಚು ಪರೀಕ್ಷೆಗಳನ್ನು ಆಯೋಜಿಸಿ ೨೬ ಲಕ್ಷಕ್ಕೂ ಹೆಚ್ಚು…

2 hours ago

ಓದುಗರ ಪತ್ರ: ಬಂಡಿಪಾಳ್ಯದಲ್ಲಿ ಅಗತ್ಯ ಶೌಚಾಲಯಗಳನ್ನು ನಿರ್ಮಿಸಿ

ಮೈಸೂರಿನ ಬಂಡಿಪಾಳ್ಯದ ಎಪಿಎಂಸಿಗೆ ದಿನಸಿ ಸಾಮಾನುಗಳನ್ನು ಖರೀದಿಸಲು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು, ಸಣ್ಣಪ್ರಮಾಣದ ಅಂಗಡಿಗಳನ್ನು ಹೊಂದಿರುವ ವ್ಯಾಪಾರಿಗಳು, ಶುಭಸಮಾರಂಭ…

2 hours ago