ಹಾಡು ಪಾಡು

ಪೆನ್ಸಿಲ್‌ ಮೋಡಿಗಾರ ಮೂರ್ತಿ ಮುಡಿಗುಂಡ

  • ಕಿರಣ್‌ ಗಿರ್ಗಿ

ಬಾಲ್ಯದಿಂದಲೂ ಅಕ್ಷರಗಳ ವಿನ್ಯಾಸಗಳಿಗೆ ಮನಸೋತು ಕೈಗೆ ಸಿಕ್ಕ ದಿನಪತ್ರಿಕೆ, ಪುಸ್ತಕಗಳ ಹಾಳೆಯಲ್ಲಿ ಕಂಡ ಲಿಪಿಗಳ ಶೈಲಿಯನ್ನು ಬರೆಯಲಾರಂಭಿಸಿದ ಹುಡುಗನೊಬ್ಬ ಇದೀಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ಕುಂಚ ಕಲಾವಿದನಾಗಿ ಗುರುತಿಸಿಕೊಂಡಿದ್ದಾನೆ. ಹೌದು, ಪೆನ್ಸಿಲ್ ಸ್ಕೆಚ್ ಮೂಲಕ ಮೋಡಿ ಮಾಡುವ ದೇಸಿ ವ್ಯಕ್ತಿತ್ವದ ನೈಜ ಪ್ರತಿಭೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಮುಡಿಗುಂಡದ ಮೂರ್ತಿರವರು. ಇವರ ತಂದೆ ಜವರಯ್ಯ ಚಿತ್ರ ಬಿಡಿಸುತ್ತಿರಲಿಲ್ಲ; ಆದರೆ, ಗಾರೆ ಕೆಲಸವನ್ನು ವೃತ್ತಿಯಾಗಿಸಿಕೊಂಡಿದ್ದರು. ಗೃಹ ನಿರ್ಮಾಣವೂ ಪ್ರಮುಖವಾದ ಕುಸುರಿ ಕಲೆಯೇ ತಾನೇ? ತಾಯಿ ನಂಜಮ್ಮ ಊರಿನ ಮದುವೆ, ಹಬ್ಬದ ಸಂಭ್ರಮಗಳಲ್ಲಿ ಸೋಬಾನೆ ಪದವನ್ನು ಈಗಲೂ ಹಾಡುತ್ತಾರೆ. ಪೋಷಕರ ಬಳುವಳಿ ಪಡೆದು ಅರಳಿದ ಗಾಯಕ, ಚಿತ್ರ ಕಲಾವಿದ ಮುಡಿಗುಂಡ ಮೂರ್ತಿಯವರು ಗೆರೆ ಮೂಡಿಸುವ ಲೋಕವನ್ನು ತಮ್ಮ ಮೂವರು ಮಕ್ಕಳಿಗೂ ಸ್ವಾಭಾವಿಕವಾಗಿ ಪರಿಚಯಿಸಿದ್ದಾರೆ.

ಕೊಳ್ಳೇಗಾಲದ ಶ್ರೀ ಮಹದೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ಜೆ. ಮೂರ್ತಿ ಅವರಿಂದ ಸಿ.ಬಿ.ಝಡ್. ವಿಷಯಗಳಲ್ಲಿನ ಚಿತ್ರಗಳು ಪ್ರಾಕ್ಟಿಕಲ್ ರೆಕಾರ್ಡ್ ಗಳಲ್ಲಿ ಅರಳುತ್ತ ಜೀವ ತಳೆಯುತ್ತಿದ್ದವು. ಬಿ. ಎಸ್ಸಿ. ಪದವಿ ಪಡೆದ ನಂತರವೂ ಕಲೆಯನ್ನು ಹೊರತುಪಡಿಸಿ ಜೀವನೋಪಾಯಕ್ಕೆ ಬೇರಾವ ಉದ್ಯೋಗವನ್ನೂ ಹುಡುಕಲು ಇವರ ಮನಸ್ಸು ಹಾತೊರೆಯಲಿಲ್ಲ. ಪ್ರತೀ ಕುಂಚ ಕಲಾವಿದರ ಬದುಕೂ ಬಹುಶಃ ಸೈನ್ ಬೋರ್ಡ್ ನಿಂದಲೇ ಪ್ರಾರಂಭವಾಗುವಂತೇ ಮುಡಿಗುಂಡ ಮೂರ್ತಿರವರ ಕಲಾಜಗತ್ತು ಸಹ ಗೋಡೆಗಳಲ್ಲಿ ಅಂಗಡಿಗಳ ಹೆಸರು ಬರೆಯುವುದರಿಂದಲೇ ಶುರುವಾಯಿತು ಎನ್ನಬಹುದು. ಕೊಳ್ಳೇಗಾಲದ ಜೈರಾಜ್ ಅವರನ್ನು ಆದಿಗುರುವಾಗಿ ಸ್ವೀಕರಿಸಿ, ನಾಮಫಲಕಗಳನ್ನು ರಚಿಸತೊಡಗಿದರು. ಚಾಮರಾಜನಗರವಲ್ಲದೇ ನಾಡಿನ ವಿವಿಧೆಡೆ ಸರ್ಕಾರದ ಯೋಜನೆಯಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪೇಂಟಿಂಗ್‌ಗಳನ್ನು ರಚಿಸುತ್ತಾ ಜನಮನ್ನಣೆಗಳಿಸಿದರು. ಜೆ. ಮೂರ್ತಿ ಮುಡಿಗುಂಡ ಅವರು ತಮ್ಮ ಕನಸುಗಳನ್ನು ಹುಟ್ಟೂರಿನಲ್ಲಿ ಸಾಕಾರಗೊಳಿಸಿಕೊಳ್ಳಲು ‘ಜೋಗಿ ರಂಗಜೋಳಿಗೆ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು 2008ರಲ್ಲಿ ಆರಂಭಿಸಿ ಈ ಸಂಸ್ಥೆಯ ಮೂಲಕ ಇದುವರೆಗೆ ನಿರಂತರವಾಗಿ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುತ್ತಾ ಚಿತ್ರಕಲೆ, ನಾಟಕ, ಸಂಗೀತ, ಜನಪದ ನೃತ್ಯ, ಹಳ್ಳಿ ಆಟಗಳನ್ನು ಕಲಿಸುತ್ತಾ ಬಂದಿದ್ದಾರೆ. ‘ಕುಂಚ ಕಾವ್ಯ ಗಾಯನ’ ಕಾರ್ಯಕ್ರಮಗಳನ್ನು ವಿಶ್ವವಿಖ್ಯಾತ ಮೈಸೂರು ದಸರಾ, ಚಾಮರಾಜನಗರ ಜಿಲ್ಲಾ ದಸರಾ ವೇದಿಕೆಗಳಲ್ಲಿ ಪ್ರತೀ ವರ್ಷವೂ ಪ್ರಸ್ತುತಪಡಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಿದ್ದಾರೆ; ಸಮರ್ಥವಾಗಿ ನಿರೂಪಿಸಿದ್ದಾರೆ. ಎದೆಯೊಳಗೆ ಅದಮ್ಯ ಚೇತನವನ್ನಿರಿಸಿಕೊಂಡು ಮೌನಿಯಾಗಿ ಚಿತ್ರಕಲೆ, ನಿರೂಪಣೆ, ಸಂಘಟನೆ, ಗಾಯನ, ಪರಿಸರ ಸಂರಕ್ಷಣೆ, ಕ್ರೀಡಾ ಚಟುವಟಿಕೆಗಳು ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೆಜ್ಜೆಗಳನ್ನಿಡುತ್ತಿರುವ ಜೆ. ಮೂರ್ತಿ ಮುಡಿಗುಂಡ ಅವರು ‘ಜೋಗಿ ರಂಗಜೋಳಿಗೆ ಚಿತ್ರಕಲೆ ಮತ್ತು ಸಂಗೀತ ಶಾಲೆ’ ಯನ್ನು ಸದ್ಯದಲ್ಲೇ ಲೋಕಾರ್ಪಣೆಗೊಳಿಸಲಿದ್ದಾರೆ. ಬದುಕಿನ ಪರಮ ಗುರಿಯಾಗಿ ಕೊಳ್ಳೇಗಾಲದಲ್ಲಿ ‘ಜೋಗಿ ರಂಗಜೋಳಿಗೆ ಮಾನವ ಚಟುವಟಿಕೆ ಕೇಂದ್ರ’ ಎಂಬ ಸಾಂಸ್ಕೃತಿಕ ಮತ್ತು ಸಾಮರಸ್ಯ ಸಂಸ್ಥೆಯ ಸ್ಥಾಪನೆಯೂ ಇವರ ಬಹುದೊಡ್ಡ ಕನಸಾಗಿದೆ.

kirangirgi@gmail.com

lokesh

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

21 mins ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

29 mins ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

2 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

3 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

7 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

7 hours ago