ಹಾಡು ಪಾಡು

ಪೆನ್ಸಿಲ್‌ ಮೋಡಿಗಾರ ಮೂರ್ತಿ ಮುಡಿಗುಂಡ

  • ಕಿರಣ್‌ ಗಿರ್ಗಿ

ಬಾಲ್ಯದಿಂದಲೂ ಅಕ್ಷರಗಳ ವಿನ್ಯಾಸಗಳಿಗೆ ಮನಸೋತು ಕೈಗೆ ಸಿಕ್ಕ ದಿನಪತ್ರಿಕೆ, ಪುಸ್ತಕಗಳ ಹಾಳೆಯಲ್ಲಿ ಕಂಡ ಲಿಪಿಗಳ ಶೈಲಿಯನ್ನು ಬರೆಯಲಾರಂಭಿಸಿದ ಹುಡುಗನೊಬ್ಬ ಇದೀಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ಕುಂಚ ಕಲಾವಿದನಾಗಿ ಗುರುತಿಸಿಕೊಂಡಿದ್ದಾನೆ. ಹೌದು, ಪೆನ್ಸಿಲ್ ಸ್ಕೆಚ್ ಮೂಲಕ ಮೋಡಿ ಮಾಡುವ ದೇಸಿ ವ್ಯಕ್ತಿತ್ವದ ನೈಜ ಪ್ರತಿಭೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಮುಡಿಗುಂಡದ ಮೂರ್ತಿರವರು. ಇವರ ತಂದೆ ಜವರಯ್ಯ ಚಿತ್ರ ಬಿಡಿಸುತ್ತಿರಲಿಲ್ಲ; ಆದರೆ, ಗಾರೆ ಕೆಲಸವನ್ನು ವೃತ್ತಿಯಾಗಿಸಿಕೊಂಡಿದ್ದರು. ಗೃಹ ನಿರ್ಮಾಣವೂ ಪ್ರಮುಖವಾದ ಕುಸುರಿ ಕಲೆಯೇ ತಾನೇ? ತಾಯಿ ನಂಜಮ್ಮ ಊರಿನ ಮದುವೆ, ಹಬ್ಬದ ಸಂಭ್ರಮಗಳಲ್ಲಿ ಸೋಬಾನೆ ಪದವನ್ನು ಈಗಲೂ ಹಾಡುತ್ತಾರೆ. ಪೋಷಕರ ಬಳುವಳಿ ಪಡೆದು ಅರಳಿದ ಗಾಯಕ, ಚಿತ್ರ ಕಲಾವಿದ ಮುಡಿಗುಂಡ ಮೂರ್ತಿಯವರು ಗೆರೆ ಮೂಡಿಸುವ ಲೋಕವನ್ನು ತಮ್ಮ ಮೂವರು ಮಕ್ಕಳಿಗೂ ಸ್ವಾಭಾವಿಕವಾಗಿ ಪರಿಚಯಿಸಿದ್ದಾರೆ.

ಕೊಳ್ಳೇಗಾಲದ ಶ್ರೀ ಮಹದೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ಜೆ. ಮೂರ್ತಿ ಅವರಿಂದ ಸಿ.ಬಿ.ಝಡ್. ವಿಷಯಗಳಲ್ಲಿನ ಚಿತ್ರಗಳು ಪ್ರಾಕ್ಟಿಕಲ್ ರೆಕಾರ್ಡ್ ಗಳಲ್ಲಿ ಅರಳುತ್ತ ಜೀವ ತಳೆಯುತ್ತಿದ್ದವು. ಬಿ. ಎಸ್ಸಿ. ಪದವಿ ಪಡೆದ ನಂತರವೂ ಕಲೆಯನ್ನು ಹೊರತುಪಡಿಸಿ ಜೀವನೋಪಾಯಕ್ಕೆ ಬೇರಾವ ಉದ್ಯೋಗವನ್ನೂ ಹುಡುಕಲು ಇವರ ಮನಸ್ಸು ಹಾತೊರೆಯಲಿಲ್ಲ. ಪ್ರತೀ ಕುಂಚ ಕಲಾವಿದರ ಬದುಕೂ ಬಹುಶಃ ಸೈನ್ ಬೋರ್ಡ್ ನಿಂದಲೇ ಪ್ರಾರಂಭವಾಗುವಂತೇ ಮುಡಿಗುಂಡ ಮೂರ್ತಿರವರ ಕಲಾಜಗತ್ತು ಸಹ ಗೋಡೆಗಳಲ್ಲಿ ಅಂಗಡಿಗಳ ಹೆಸರು ಬರೆಯುವುದರಿಂದಲೇ ಶುರುವಾಯಿತು ಎನ್ನಬಹುದು. ಕೊಳ್ಳೇಗಾಲದ ಜೈರಾಜ್ ಅವರನ್ನು ಆದಿಗುರುವಾಗಿ ಸ್ವೀಕರಿಸಿ, ನಾಮಫಲಕಗಳನ್ನು ರಚಿಸತೊಡಗಿದರು. ಚಾಮರಾಜನಗರವಲ್ಲದೇ ನಾಡಿನ ವಿವಿಧೆಡೆ ಸರ್ಕಾರದ ಯೋಜನೆಯಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪೇಂಟಿಂಗ್‌ಗಳನ್ನು ರಚಿಸುತ್ತಾ ಜನಮನ್ನಣೆಗಳಿಸಿದರು. ಜೆ. ಮೂರ್ತಿ ಮುಡಿಗುಂಡ ಅವರು ತಮ್ಮ ಕನಸುಗಳನ್ನು ಹುಟ್ಟೂರಿನಲ್ಲಿ ಸಾಕಾರಗೊಳಿಸಿಕೊಳ್ಳಲು ‘ಜೋಗಿ ರಂಗಜೋಳಿಗೆ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು 2008ರಲ್ಲಿ ಆರಂಭಿಸಿ ಈ ಸಂಸ್ಥೆಯ ಮೂಲಕ ಇದುವರೆಗೆ ನಿರಂತರವಾಗಿ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುತ್ತಾ ಚಿತ್ರಕಲೆ, ನಾಟಕ, ಸಂಗೀತ, ಜನಪದ ನೃತ್ಯ, ಹಳ್ಳಿ ಆಟಗಳನ್ನು ಕಲಿಸುತ್ತಾ ಬಂದಿದ್ದಾರೆ. ‘ಕುಂಚ ಕಾವ್ಯ ಗಾಯನ’ ಕಾರ್ಯಕ್ರಮಗಳನ್ನು ವಿಶ್ವವಿಖ್ಯಾತ ಮೈಸೂರು ದಸರಾ, ಚಾಮರಾಜನಗರ ಜಿಲ್ಲಾ ದಸರಾ ವೇದಿಕೆಗಳಲ್ಲಿ ಪ್ರತೀ ವರ್ಷವೂ ಪ್ರಸ್ತುತಪಡಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಿದ್ದಾರೆ; ಸಮರ್ಥವಾಗಿ ನಿರೂಪಿಸಿದ್ದಾರೆ. ಎದೆಯೊಳಗೆ ಅದಮ್ಯ ಚೇತನವನ್ನಿರಿಸಿಕೊಂಡು ಮೌನಿಯಾಗಿ ಚಿತ್ರಕಲೆ, ನಿರೂಪಣೆ, ಸಂಘಟನೆ, ಗಾಯನ, ಪರಿಸರ ಸಂರಕ್ಷಣೆ, ಕ್ರೀಡಾ ಚಟುವಟಿಕೆಗಳು ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೆಜ್ಜೆಗಳನ್ನಿಡುತ್ತಿರುವ ಜೆ. ಮೂರ್ತಿ ಮುಡಿಗುಂಡ ಅವರು ‘ಜೋಗಿ ರಂಗಜೋಳಿಗೆ ಚಿತ್ರಕಲೆ ಮತ್ತು ಸಂಗೀತ ಶಾಲೆ’ ಯನ್ನು ಸದ್ಯದಲ್ಲೇ ಲೋಕಾರ್ಪಣೆಗೊಳಿಸಲಿದ್ದಾರೆ. ಬದುಕಿನ ಪರಮ ಗುರಿಯಾಗಿ ಕೊಳ್ಳೇಗಾಲದಲ್ಲಿ ‘ಜೋಗಿ ರಂಗಜೋಳಿಗೆ ಮಾನವ ಚಟುವಟಿಕೆ ಕೇಂದ್ರ’ ಎಂಬ ಸಾಂಸ್ಕೃತಿಕ ಮತ್ತು ಸಾಮರಸ್ಯ ಸಂಸ್ಥೆಯ ಸ್ಥಾಪನೆಯೂ ಇವರ ಬಹುದೊಡ್ಡ ಕನಸಾಗಿದೆ.

kirangirgi@gmail.com

lokesh

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

8 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

8 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

8 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

8 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

8 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

8 hours ago